ETV Bharat / city

ಗಣಿ ಜಿಲ್ಲೆಯಾದ್ಯಂತ 3000 ಹೆಕ್ಟೇರ್​​​​ ಬೆಳೆ ಹಾನಿ... ಅಂದಾಜು 4.3 ಕೋಟಿ ರೂ. ನಷ್ಟ!

author img

By

Published : Sep 27, 2019, 5:04 AM IST

ಕಳೆದ ಕೆಲ ದಿನಗಳಿಂದ ಗಣಿ ಜಿಲ್ಲಾದ್ಯಂತ ಸುರಿದ ಮಹಾಮಳೆಗೆ ಗಣಿ ಜಿಲ್ಲೆ ಬಳ್ಳಾರಿಯಾದ್ಯಂತ ಅಪಾರ ಪ್ರಮಾಣದ ಹಾನಿಯಾಗಿದೆ. ಅಂದಾಜು ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 4.30 ಕೋಟಿ ರೂ. ಬೆಳೆ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.

ಬಳ್ಳಾರಿ ಜಿಲ್ಲಾಧಿಕಾರಿ ಎಸ್​ ಎಸ್​ ನಕುಲ್​

ಬಳ್ಳಾರಿ: ಕಳೆದ ನಾಲ್ಕೈದು ದಿನಗಳಿಂದ ಗಣಿ ಜಿಲ್ಲಾದ್ಯಂತ ಸುರಿದ ಮಹಾಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಅಂದಾಜು ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.

ಜಿಲ್ಲೆಯಲ್ಲಿ ಸರಿಸುಮಾರು 277 ಮನೆಗಳು ಹಾನಿಯಾಗಿವೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 11 ಪ್ರಾಣಿಗಳು ಜೀವ ಕಳೆದುಕೊಂಡಿವೆ. ಅಂದಾಜು 4.30 ಕೋಟಿ ರೂ. ನಷ್ಟ ಈವರೆಗೆ ಸಂಭವಿಸಿರಬಹುದು ಎಂದು ಜಿಲ್ಲಾಡಳಿತ ಅಂದಾಜು ಪಟ್ಟಿ ತಯಾರಿಸಿದೆ.

ಬಳ್ಳಾರಿ ತಾಲೂಕಿನಲ್ಲಿ 39 ಮನೆಗಳಿಗೆ ಹಾನಿಯಾಗಿದ್ದು, 3.9 ಲಕ್ಷ ರೂ. ನಷ್ಟ ಉಂಟಾಗಿದೆ. 826.31 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 111.50 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆ ನೀರಿನಲ್ಲಿ ಮುಳುಗಡೆಯಾಗಿ ಹೋಗಿದೆ. ನೀರು ನಿಂತಿರುವುದರಿಂದ ಜಂಟಿ ಸಮೀಕ್ಷೆ ಮಾಡೋದು ಬಾಕಿಯಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಬಳ್ಳಾರಿ: ಕಳೆದ ನಾಲ್ಕೈದು ದಿನಗಳಿಂದ ಗಣಿ ಜಿಲ್ಲಾದ್ಯಂತ ಸುರಿದ ಮಹಾಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಅಂದಾಜು ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.

ಜಿಲ್ಲೆಯಲ್ಲಿ ಸರಿಸುಮಾರು 277 ಮನೆಗಳು ಹಾನಿಯಾಗಿವೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 11 ಪ್ರಾಣಿಗಳು ಜೀವ ಕಳೆದುಕೊಂಡಿವೆ. ಅಂದಾಜು 4.30 ಕೋಟಿ ರೂ. ನಷ್ಟ ಈವರೆಗೆ ಸಂಭವಿಸಿರಬಹುದು ಎಂದು ಜಿಲ್ಲಾಡಳಿತ ಅಂದಾಜು ಪಟ್ಟಿ ತಯಾರಿಸಿದೆ.

ಬಳ್ಳಾರಿ ತಾಲೂಕಿನಲ್ಲಿ 39 ಮನೆಗಳಿಗೆ ಹಾನಿಯಾಗಿದ್ದು, 3.9 ಲಕ್ಷ ರೂ. ನಷ್ಟ ಉಂಟಾಗಿದೆ. 826.31 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 111.50 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆ ನೀರಿನಲ್ಲಿ ಮುಳುಗಡೆಯಾಗಿ ಹೋಗಿದೆ. ನೀರು ನಿಂತಿರುವುದರಿಂದ ಜಂಟಿ ಸಮೀಕ್ಷೆ ಮಾಡೋದು ಬಾಕಿಯಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Intro:ಗಣಿ ಜಿಲ್ಲಾದ್ಯಂತ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಷ್ಟ;
ಅಂದಾಜು 4.3 ಕೋಟಿ ರೂ.ಗಳ ಹಾನಿ..!
ಬಳ್ಳಾರಿ: ಕಳೆದ ನಾಲ್ಕೈದು ದಿನಗಳಿಂದ ಗಣಿ ಜಿಲ್ಲಾದ್ಯಂತ ಸುರಿದ ಮಹಾಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಅಂದಾಜು
ಮೂರುಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಷ್ಟ ಉಂಟಾಗಿರಬಹು ದೆಂದು ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ ಸರಿಸುಮಾರು 277 ಮನೆಗಳು ಹಾನಿಯಾಗಿವೆ.
11 ಪ್ರಾಣಿಗಳು ಜೀವ ಕಳೆದುಕೊಂಡಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿ ದ್ದಾನೆ. ಅಂದಾಜು 4.30 ಕೋಟಿ ರೂ.ಗಳ ನಷ್ಟ ಈವರೆಗೆ ಸಂಭವಿ ಸಿರಬಹುದೆಂದು ಎಂದು ಜಿಲ್ಲಾಡಳಿತ ಅಂದಾಜು ಪಟ್ಟಿಯನ್ನು ತಯಾರಿಸಿದೆ. 
ಬಳ್ಳಾರಿ ತಾಲೂಕಿನಲ್ಲಿ 39 ಮನೆಗಳಿಗೆ ಹಾನಿಯಾಗಿದ್ದು 3.9 ಲಕ್ಷ ರೂ.ನಷ್ಟ ಉಂಟಾಗಿದೆ. 826.31 ಹೆಕ್ಟೇರ್ ಬೆಳೆ ಹಾನಿಯಾಗಿದೆ ಮತ್ತು 111.50ಲ ಕ್ಷ ರೂ.ಗಳ ಹಾನಿಯಾಗಿದೆ ಎಂದು ಅಂದಾಜಿಸ ಲಾಗಿದ್ದು, ಭತ್ತ, ಹತ್ತಿ ಮೆಣಸಿನಕಾಯಿ ಬೆಳೆ ನೀರಿನಲ್ಲಿ ಮುಳುಗಡೆ ಯಾಗಿದೆ. ನೀರು ನಿಂತಿರುವುದರಿಂದ ಜಂಟಿ ಸಮೀಕ್ಷೆ ಮಾಡೋದು ಬಾಕಿಯಿದೆ.
ಇಡೀ ಜಿಲ್ಲೆಗೆ ಓಲೈಕೆ ಮಾಡಿದ್ರೆ ಸಿರುಗುಪ್ಪದಲ್ಲಿ ಅತಿಹೆಚ್ಚು
ಹಾನಿ ಸಂಭವಿಸಿದೆ. ಸಿರುಗುಪ್ಪ ತಾಲೂಕಿನಲ್ಲಿ 92 ಮನೆಗಳಿಗೆ ಹಾನಿಯಾಗಿದ್ದು 9.2 ಲಕ್ಷ ರೂ. ನಷ್ಟವಾಗಿದೆ. 1640 ಹೆಕ್ಟೇರ್ ಬೆಳೆಹಾನಿಯಾಗಿದ್ದು 221.40ಲಕ್ಷ ರೂ.ಹಾನಿಯಾಗಿದೆ. ನೀರು ನಿಂತಿರುವುದರಿಂದ ಜಂಟಿ ಸಮೀಕ್ಷೆ ಬಾಕಿಯಿದೆ.
ಕುರುಗೋಡು ತಾಲೂಕಿನಲ್ಲಿ 63 ಮನೆಗಳು ಹಾನಿಯಾಗಿದ್ದು 10.90 ಲಕ್ಷ ರೂ. ಅಂದಾಜು ಹಾನಿಯಾಗಿದೆ. 503.64 ಹೆಕ್ಟೇರ್ ಬೆಳೆಹಾನಿಯಾಗಿದ್ದು 68ಲಕ್ಷ ರೂ.ಗಳ ನಷ್ಟವುಂಟಾಗಿದೆ. ಮೆಣಸಿ ನಕಾಯಿ, ಭತ್ತ, ಹತ್ತಿ ಮಳೆ ನೀರಿನಲ್ಲಿ ಮುಳುಗಡೆಯಾಗಿದ್ದು, ನೀರು ನಿಂತಿರುವ ಹಿನ್ನೆಲೆ ಜಂಟಿ ಸಮೀಕ್ಷೆಕಾರ್ಯ ಬಾಕಿಯಿದೆ.
ಸಂಡೂರು ತಾಲೂಕಿನಲ್ಲಿ 10 ಕುರಿಗಳು ಸಿಡಿಲಿಗೆ ಮೃತಪಟ್ಟಿವೆ. 14 ಮನೆಗಳು ಹಾನಿಯಾಗಿದ್ದು, 1.4ಲಕ್ಷ ರೂ. ನಷ್ಟವಾಗಿದೆ.
Body:ಹೊಸಪೇಟೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. 2 ಮನೆಗಳಿಗೆ ಹಾನಿಯಾಗಿದ್ದು 20 ಸಾವಿರ ರೂ.ನಷ್ಟವುಂಟಾಗಿದೆ. ಕಂಪ್ಲಿ ತಾಲೂಕಿನಲ್ಲಿ 16 ಮನೆಗಳಿಗೆ ಹಾನಿಯಾಗಿದ್ದು 1.6ಲಕ್ಷ ರೂ.ನಷ್ಟ. ಹಗರಿಬೊಮ್ಮನಹಳ್ಳಿಯಲ್ಲಿ 12 ಮನೆಗಳಿಗೆ ಹಾನಿ ಯಾಗಿದ್ದು 1.2ಲಕ್ಷ ರೂ.ನಷ್ಟವುಂಟಾಗಿದೆ.
ಕೂಡ್ಲಿಗಿ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ಗೋಡೆ ಕುಸಿದಿದ್ದು, ಆ ವೇಳೆ ಅಲ್ಲಿಯೇ ಇದ್ದ ಎಮ್ಮೆಯೊಂದು ಸಾವನ್ನಪ್ಪಿದೆ. 18 ಮನೆಗಳಿಗೆ ಹಾನಿಯಾಗಿದ್ದು, 1.8ಲಕ್ಷ ರೂ. ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.
ಹಡಗಲಿ ಮತ್ತು ಹರಪನಹಳ್ಳಿ ತಾಲೂಕುಗಳಲ್ಲಿ 12 ಮತ್ತು 9 ಮನೆಗಳು ಸೇರಿದಂತೆ ಒಟ್ಟು 21 ಮನೆಗಳಿಗೆ ಹಾನಿಯಾಗಿದ್ದು 2.10 ಲಕ್ಷ ರೂ.ನಷ್ಟವುಂಟಾಗಿದೆ.
ಕುರುಗೋಡು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಮಾರುತಿ ಕ್ಯಾಂಪ್-ಸಿದ್ದಮ್ಮನಹಳ್ಳಿ ಸೇತುವೆ, ಬಾದನಹಟ್ಟಿಯಿಂದ ಸಿದ್ದಮ್ಮನಹಳ್ಳಿ ಸೇತುವೆ, ದಮ್ಮೂರು-ಕೊರ್ಲಗುಂದಿ ಸೇತುವೆ, ದಮ್ಮೂರು-ಹಂದಿಹಾಳು ಸೇತುವೆ, ಕ್ಯಾದಿಗಿಹಾಳ್ ಸೇತುವೆಗಳು ಮಳೆಯಿಂದ ಹಾನಿಯಾಗಿವೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_HEAVY_RAIN_3THOUSAND_HECTOR_DROUGHT_LOSES_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.