ETV Bharat / city

ಹುಕ್ಕೇರಿ ಉಪ ಖಜಾನೆ ಕಚೇರಿಗೆ ರಾಜ್ಯ ಹಣಕಾಸು ಇಲಾಖೆ ಆಯುಕ್ತ ದಿಢೀರ್​ ಭೇಟಿ, ಪರಿಶೀಲನೆ - ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರದ ಮಿನಿ ವಿಧಾನಸೌಧ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರದ ಮಿನಿ ವಿಧಾನಸೌಧದ ಉಪ ಖಜಾನೆ ಕಚೇರಿಗೆ ಡಿ.ಎಸ್ ರವೀಂದ್ರನ್​ ದಿಢೀರ್​ ಭೇಟಿ ನೀಡಿದರು. ಈ ವೇಳೆ ಕಚೇರಿ ಕೆಲಸಕ್ಕೆ ಬಂದ ವಯೋವೃದ್ದರನ್ನು ವಿಚಾರಿಸಿ ಅವರ ಸಮಸ್ಯೆಗಳನ್ನು ಆಲಿಸಿ, ಕೂಡಲೇ ಅವರ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹುಕ್ಕೇರಿ ಉಪ ಖಜಾನೆ ಕಚೇರಿಗೆ ಡಿ.ಎಸ್ ರವೀಂದ್ರನ್​ ಧಿಡೀರ್​ ಭೇಟಿ
author img

By

Published : Sep 18, 2019, 6:09 PM IST

ಚಿಕ್ಕೋಡಿ : ಉಪ ಖಜಾನೆ ಕಚೇರಿಗೆ ರಾಜ್ಯ ಹಣಕಾಸು ಇಲಾಖೆ ಆಯುಕ್ತ ಡಾ. ಡಿ.ಎಸ್ ರವೀಂದ್ರನ್​ ಅನಿರೀಕ್ಷಿತವಾಗಿ ಭೇಟಿ ನೀಡಿ, ಕಚೇರಿ ಕಡತಗಳನ್ನು ಪರಿಶೀಲಿಸಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು.

ಹುಕ್ಕೇರಿ ಉಪ ಖಜಾನೆ ಕಚೇರಿಗೆ ಡಿ.ಎಸ್ ರವೀಂದ್ರನ್​ ಧಿಡೀರ್​ ಭೇಟಿ

ಕಚೇರಿಯ ಅವ್ಯವಸ್ಥೆಯಿಂದ ಸೊಳ್ಳೆಗಳ ಕಾಟ ಆಯುಕ್ತರಿಗೆ ಬಿಸಿ ಮುಟ್ಟಿಸಿತು. ಕೂಡಲೇ ಅಧಿಕಾರಿಗಳು ಸೋಳ್ಳೆ ಬತ್ತಿ ಹಚ್ಚಿ ಸೊಳ್ಳೆಗಳ ಓಡಿಸಲು ಪ್ರಯತ್ನಿಸಿದರು. ಹಾಗು ಕಚೇರಿ ಆವರಣದ ಅಸ್ವಚ್ಚತೆ ಮತ್ತು ಶಿಥಿಲಗೊಂಡ ಗೋಡೆಗಳನ್ನು ದುರಸ್ತಿ ಮಾಡಲು ಕ್ರಮ ಜರುಗಿಸಬೇಕೆಂದು ಜಿಲ್ಲಾ ಖಜಾನೆ ಅಧಿಕಾರಿ ಸುರೇಶ್​ ಹಲ್ಯಾಳ ಅವರಿಗೆ ತಿಳಿಸಿದರು.

ಪಿಂಚಣಿದಾರರ ಆಧಾರ್ ಕಾರ್ಡ್​ ಮತ್ತು ಬ್ಯಾಂಕ್​ ಖಾತೆ ಪಡೆದು ತಕ್ಷಣ ಅಪ್ಲೋಡ್​ ಮಾಡಬೇಕು. ಯಾರು ಪಿಂಚಣಿ ಹಣಕ್ಕಾಗಿ ಖಜಾನೆಗೆ ಬರಬಾರದು, ನೇರವಾಗಿ ಪ್ರತಿ ತಿಂಗಳು ಅವರ ಖಾತೆಗಳಿಗೆ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು .ಸರ್ಕಾರದ ನಿಯಮಾನುಸಾರ K 2 ಮಾದರಿಯಲ್ಲಿ ಹಣ ಸಂದಾಯವಾಗಬೇಕು ಎಂದು ತಾಲೂಕು​ ಟ್ರೇಜರಿ ಅಧಿಕಾರಿ ಪಿ.ಎಲ್ ಮುಸೇನ್ನ ಅವರಿಗೆ ಸೂಚಿಸಿದರು.

ಚಿಕ್ಕೋಡಿ : ಉಪ ಖಜಾನೆ ಕಚೇರಿಗೆ ರಾಜ್ಯ ಹಣಕಾಸು ಇಲಾಖೆ ಆಯುಕ್ತ ಡಾ. ಡಿ.ಎಸ್ ರವೀಂದ್ರನ್​ ಅನಿರೀಕ್ಷಿತವಾಗಿ ಭೇಟಿ ನೀಡಿ, ಕಚೇರಿ ಕಡತಗಳನ್ನು ಪರಿಶೀಲಿಸಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು.

ಹುಕ್ಕೇರಿ ಉಪ ಖಜಾನೆ ಕಚೇರಿಗೆ ಡಿ.ಎಸ್ ರವೀಂದ್ರನ್​ ಧಿಡೀರ್​ ಭೇಟಿ

ಕಚೇರಿಯ ಅವ್ಯವಸ್ಥೆಯಿಂದ ಸೊಳ್ಳೆಗಳ ಕಾಟ ಆಯುಕ್ತರಿಗೆ ಬಿಸಿ ಮುಟ್ಟಿಸಿತು. ಕೂಡಲೇ ಅಧಿಕಾರಿಗಳು ಸೋಳ್ಳೆ ಬತ್ತಿ ಹಚ್ಚಿ ಸೊಳ್ಳೆಗಳ ಓಡಿಸಲು ಪ್ರಯತ್ನಿಸಿದರು. ಹಾಗು ಕಚೇರಿ ಆವರಣದ ಅಸ್ವಚ್ಚತೆ ಮತ್ತು ಶಿಥಿಲಗೊಂಡ ಗೋಡೆಗಳನ್ನು ದುರಸ್ತಿ ಮಾಡಲು ಕ್ರಮ ಜರುಗಿಸಬೇಕೆಂದು ಜಿಲ್ಲಾ ಖಜಾನೆ ಅಧಿಕಾರಿ ಸುರೇಶ್​ ಹಲ್ಯಾಳ ಅವರಿಗೆ ತಿಳಿಸಿದರು.

ಪಿಂಚಣಿದಾರರ ಆಧಾರ್ ಕಾರ್ಡ್​ ಮತ್ತು ಬ್ಯಾಂಕ್​ ಖಾತೆ ಪಡೆದು ತಕ್ಷಣ ಅಪ್ಲೋಡ್​ ಮಾಡಬೇಕು. ಯಾರು ಪಿಂಚಣಿ ಹಣಕ್ಕಾಗಿ ಖಜಾನೆಗೆ ಬರಬಾರದು, ನೇರವಾಗಿ ಪ್ರತಿ ತಿಂಗಳು ಅವರ ಖಾತೆಗಳಿಗೆ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು .ಸರ್ಕಾರದ ನಿಯಮಾನುಸಾರ K 2 ಮಾದರಿಯಲ್ಲಿ ಹಣ ಸಂದಾಯವಾಗಬೇಕು ಎಂದು ತಾಲೂಕು​ ಟ್ರೇಜರಿ ಅಧಿಕಾರಿ ಪಿ.ಎಲ್ ಮುಸೇನ್ನ ಅವರಿಗೆ ಸೂಚಿಸಿದರು.

Intro:ಹುಕ್ಕೇರಿ ಉಪ ಖಜಾನೆಗೆ ರಾಜ್ಯ ಹಣಕಾಸು ಇಲಾಖೆ ಆಯುಕ್ತ ಧಿಡೀರ ಭೇಟಿ
Body:
ಚಿಕ್ಕೋಡಿ :

ಉಪ ಖಜಾನೆ ಕಚೇರಿಗೆ ರಾಜ್ಯ ಹಣಕಾಸು ಇಲಾಖೆ ಆಯುಕ್ತ ಡಾ. ಡಿ ಎಸ್ ರವೀಂದ್ರನ ಅನಿರೀಕ್ಷಿತವಾಗಿ ಭೇಟಿ ನೀಡಿ ಕಚೇರಿ ಕಡತಗಳನ್ನು ಪರಿಶೀಲಿಸಿ ಸಾರ್ವಜನಿಕರೊಂದಿಗೆ ಸಮಾಲೋಚನೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರದ ಮಿನಿ ವಿಧಾನಸೌಧದಲ್ಲಿ ನಡೆದಿದೆ.

ಕಚೇರಿ ಕೆಲಸಕ್ಕೆ ಬಂದ ವಯೋವೃದ್ದರನ್ನು ವಿಚಾರಿಸಿ ಅವರ ಸಮಸ್ಯೆಗಳನ್ನು ಆಲಿಸಿ ಕೂಡಲೇ ಅವರ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಕಛೇರಿಯ ಅವ್ಯವಸ್ಥೆಯಿಂದ ಸೊಳ್ಳೆಗಳ ಕಾಟ ಆಯುಕ್ತರಿಗೆ ಬಿಸಿ ಮುಟ್ಟಿಸಿತು, ಕೂಡಲೇ ಅಧಿಕಾರಿಗಳು ಸೋಳ್ಳೆ ಬತ್ತಿ ಹಚ್ಚಿ ಸೊಳ್ಳೆ ಓಡಿಸಲು ಪ್ರಯತ್ನಿಸಿದರು. ಕಛೇರಿ ಆವರಣ ಅಸ್ವಚ್ಚತೆ ಮತ್ತು ಶಿಥಿಲಗೊಂಡ ಗೋಡೆಗಳನ್ನು ದುರಸ್ತಿ ಮಾಡಲು ಕ್ರಮ ಜರುಗಿಸಬೇಕೆಂದು ಜಿಲ್ಲಾ ಖಜಾನೆ ಅಧಿಕಾರಿ ಸುರೇಶ ಹಲ್ಯಾಳ ಅವರಿಗೆ ಹೇಳಿದರು.

ಪಿಂಚಣಿದಾರರ ಆಧಾರ ಕಾರ್ಡ ಮತ್ತು ಬ್ಯಾಂಕ ಖಾತೆ ಪಡೆದು ಅಪ್ಲೊಡ ಮಾಡಬೇಕು ಯಾರು ಪಿಂಚಣಿ ಹಣಕ್ಕಾಗಿ ಖಜಾನೆಗೆ ಬರಬಾರದು ನೇರವಾಗಿ ಪ್ರತಿ ತಿಂಗಳು ಅವರ ಖಾತೆಗಳಿಗೆ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು ಸರ್ಕಾರದ ನಿಯಮಾನುಸಾರ K 2 ಮಾದರಿಯಲ್ಲಿ ಹಣ ಸಂದಾಯವಾಗ ಬೇಕು ಎಂದು ತಾಲೂಕಾ ಟ್ರೇಜರಿ ಅಧಿಕಾರಿ ಪಿ ಎಲ್ ಮುಸೇನ್ನವರಿಗೆ ಸೂಚಿಸಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.