ETV Bharat / city

ಗಡಿಯಲ್ಲಿ ಉದ್ಧಟತನ ಮುಂದುವರಿಸಿದ ಶಿವಸೇನೆ: ಶಿವಾಜಿ ಪ್ರತಿಮೆ ಹೆಸರಲ್ಲಿ ರಾಜ್ಯಕ್ಕೆ ಪ್ರವೇಶ ಯತ್ನ

ಶಿವಾಜಿ ಮೂರ್ತಿ ತೆರವು ವಿಚಾರವಾಗಿ ಸುಖಾಸುಮ್ಮನೆ ಜಗಳಕ್ಕೆ ಮುಂದಾಗಿರುವ ಶಿವಸೇನೆ ಸದ್ಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಕರ್ನಾಟಕ ಪ್ರವೇಶಿಸಲು ಮುಂದಾದ ಶಿವಸೇನಾ ಕಾರ್ಯಕರ್ತರನ್ನು ರಾಜ್ಯ ಪೊಲೀಸರು ತಡೆ ಹಿಡಿದಿದ್ದಾರೆ.

author img

By

Published : Aug 25, 2020, 4:38 PM IST

Shivasene protest in Chikkodi Kavalakatte village
ಶೀವಸೇನೆ ಪ್ರತಿಭಟನೆ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ತೆರವು ವಿಚಾರವಾಗಿ ಶಿವಸೇನೆ ಮತ್ತೆ ಕ್ಯಾತೆ ತೆಗೆದು ಪ್ರತಿಭಟನೆಗೆ ಮುಂದಾಗಿದೆ. ಅಲ್ಲದೆ, ಕರ್ನಾಟಕ ಗಡಿ ಪ್ರವೇಶಕ್ಕೆ ಶಿವಸೇನೆಯ ಕಾರ್ಯಕರ್ತರು ಯತ್ನಿಸಿದ್ದಾರೆ.

ಮಣಗುತ್ತಿ ಗ್ರಾಮದಲ್ಲಿ ಶಿವಾಜಿ 5 ಮೂರ್ತಿ ಪ್ರತಿಷ್ಠಾಪಿಸುವ ವಿಚಾರವಾಗಿ ಶಿವಸೇನೆ ಮುಖಂಡ ವಿಜಯ್ ಶಾಮರಾವ್ ದೇವನೆ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಮಹಾರಾಷ್ಟ್ರದ ಗಡಿ ಭಾಗ ಕವಳಿಕಟ್ಟಿ ಗ್ರಾಮದಲ್ಲಿ ಪ್ರತಿಭಟನೆ ಮಾಡುತ್ತಿರುವ ಶಿವಸೇಸೆಯ ಸುಮಾರು 80 ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಮತ್ತೆ ಉದ್ಧಟತನ ಮುಂದುವರೆಸಿದ ಶೀವಸೇನೆ

ಇದನ್ನು ಓದಿ-ಶಿವಾಜಿ ಪುತ್ಥಳಿ ಸ್ಥಳಾಂತರ: ಶಿವಸೇನೆ ಮಾತು ಕೇಳಿ ಮರಾಠಿಗರಿಂದ ಪ್ರತಿಭಟನೆ

ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಎಷ್ಟೇ ಹೇಳಿದರೂ ಸಹ ಬುದ್ಧಿ ಕಲಿಯದ ಶಿವಸೇನೆ, ಸದ್ಯ ಮಣಗುತ್ತಿ ಗ್ರಾಮಸ್ಥರು ಸುಮ್ಮನಿದ್ದರೂ ಸಹ ಕಾಲ್ಕೆರೆದು ಜಗಳಕ್ಕೆ ಬರುತ್ತಿದೆ. ಸದ್ಯ ಕರ್ನಾಟಕ ಪ್ರವೇಶಿಸದಂತೆ ಶಿವಸೇನೆ ಕಾರ್ಯಕರ್ತರಿಗೆ ರಾಜ್ಯ ಪೊಲೀಸರಿಂದ ತಡೆ ಹಿಡಿದಿದ್ದಾರೆ.

ಇದನ್ನು ಓದಿ-ಕೊನೆಗೊಂಡ ಮಣಗುತ್ತಿ ಶಿವಾಜಿ ಪ್ರತಿಮೆ ಪ್ರಕರಣ: ಮರು ಪ್ರತಿಷ್ಠಾಪನೆಗೆ ನಿರ್ಧಾರ...

ಘಟನೆ ಹಿನ್ನೆಲೆ

ಸುಮಾರು 15 ದಿನಗಳ ಹಿಂದೆ ಮಣಗುತ್ತಿ ಗ್ರಾಮಸ್ಥರು ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆದ್ರೆ ಆ ಜಾಗ 3 ಮೂರು ಗ್ರಾಮಗಳಿಗೆ ಸೇರಿದ್ದಾಗಿತ್ತು. ಇದರಿಂದಾಗಿ ವಿವಿಧ ಸಂಘಟನೆ ಮತ್ತು ಧರ್ಮದವರು ವಿರೋಧ ವ್ಯಕ್ತಪಡಿದ್ದರು. ನಂತರ ಸಭೆ ನಡೆಸಿ ಐದು ಮೂರ್ತಿಗಳನ್ನು ಪ್ರತಿಷ್ಠಾಪನೆ ತೀರ್ಮಾನ ಮಾಡಿದ್ದರು. ಆದ್ರೆ 15 ದಿನಗಳಾದರೂ ಮೂರ್ತಿ ಪ್ರತಿಷ್ಠಾಪನೆಯಾಗಿಲ್ಲ ಅಂತ ಸದ್ಯ ಶಿವಸೇನೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿದೆ.

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ತೆರವು ವಿಚಾರವಾಗಿ ಶಿವಸೇನೆ ಮತ್ತೆ ಕ್ಯಾತೆ ತೆಗೆದು ಪ್ರತಿಭಟನೆಗೆ ಮುಂದಾಗಿದೆ. ಅಲ್ಲದೆ, ಕರ್ನಾಟಕ ಗಡಿ ಪ್ರವೇಶಕ್ಕೆ ಶಿವಸೇನೆಯ ಕಾರ್ಯಕರ್ತರು ಯತ್ನಿಸಿದ್ದಾರೆ.

ಮಣಗುತ್ತಿ ಗ್ರಾಮದಲ್ಲಿ ಶಿವಾಜಿ 5 ಮೂರ್ತಿ ಪ್ರತಿಷ್ಠಾಪಿಸುವ ವಿಚಾರವಾಗಿ ಶಿವಸೇನೆ ಮುಖಂಡ ವಿಜಯ್ ಶಾಮರಾವ್ ದೇವನೆ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಮಹಾರಾಷ್ಟ್ರದ ಗಡಿ ಭಾಗ ಕವಳಿಕಟ್ಟಿ ಗ್ರಾಮದಲ್ಲಿ ಪ್ರತಿಭಟನೆ ಮಾಡುತ್ತಿರುವ ಶಿವಸೇಸೆಯ ಸುಮಾರು 80 ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಮತ್ತೆ ಉದ್ಧಟತನ ಮುಂದುವರೆಸಿದ ಶೀವಸೇನೆ

ಇದನ್ನು ಓದಿ-ಶಿವಾಜಿ ಪುತ್ಥಳಿ ಸ್ಥಳಾಂತರ: ಶಿವಸೇನೆ ಮಾತು ಕೇಳಿ ಮರಾಠಿಗರಿಂದ ಪ್ರತಿಭಟನೆ

ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಎಷ್ಟೇ ಹೇಳಿದರೂ ಸಹ ಬುದ್ಧಿ ಕಲಿಯದ ಶಿವಸೇನೆ, ಸದ್ಯ ಮಣಗುತ್ತಿ ಗ್ರಾಮಸ್ಥರು ಸುಮ್ಮನಿದ್ದರೂ ಸಹ ಕಾಲ್ಕೆರೆದು ಜಗಳಕ್ಕೆ ಬರುತ್ತಿದೆ. ಸದ್ಯ ಕರ್ನಾಟಕ ಪ್ರವೇಶಿಸದಂತೆ ಶಿವಸೇನೆ ಕಾರ್ಯಕರ್ತರಿಗೆ ರಾಜ್ಯ ಪೊಲೀಸರಿಂದ ತಡೆ ಹಿಡಿದಿದ್ದಾರೆ.

ಇದನ್ನು ಓದಿ-ಕೊನೆಗೊಂಡ ಮಣಗುತ್ತಿ ಶಿವಾಜಿ ಪ್ರತಿಮೆ ಪ್ರಕರಣ: ಮರು ಪ್ರತಿಷ್ಠಾಪನೆಗೆ ನಿರ್ಧಾರ...

ಘಟನೆ ಹಿನ್ನೆಲೆ

ಸುಮಾರು 15 ದಿನಗಳ ಹಿಂದೆ ಮಣಗುತ್ತಿ ಗ್ರಾಮಸ್ಥರು ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆದ್ರೆ ಆ ಜಾಗ 3 ಮೂರು ಗ್ರಾಮಗಳಿಗೆ ಸೇರಿದ್ದಾಗಿತ್ತು. ಇದರಿಂದಾಗಿ ವಿವಿಧ ಸಂಘಟನೆ ಮತ್ತು ಧರ್ಮದವರು ವಿರೋಧ ವ್ಯಕ್ತಪಡಿದ್ದರು. ನಂತರ ಸಭೆ ನಡೆಸಿ ಐದು ಮೂರ್ತಿಗಳನ್ನು ಪ್ರತಿಷ್ಠಾಪನೆ ತೀರ್ಮಾನ ಮಾಡಿದ್ದರು. ಆದ್ರೆ 15 ದಿನಗಳಾದರೂ ಮೂರ್ತಿ ಪ್ರತಿಷ್ಠಾಪನೆಯಾಗಿಲ್ಲ ಅಂತ ಸದ್ಯ ಶಿವಸೇನೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.