ETV Bharat / city

ಹರಿದ ಚಪ್ಪಲಿ ಹಾಕಿಕೊಂಡೇ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್​​​​​ ಅಭ್ಯರ್ಥಿ ರಾಜು ಕಾಗೆ

ಅಥಣಿ-ಕಾಗವಾಡ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಗವಾಡ ಮಾಜಿ ಶಾಸಕ, ಕೈ ಅಭ್ಯರ್ಥಿ ರಾಜು ಕಾಗೆ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ಗೋಕಾಕ್​ ಕ್ಷೇತ್ರದಲ್ಲಿ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ‌ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

author img

By

Published : Nov 18, 2019, 12:17 PM IST

ಕಾಂಗ್ರೆಸ್​ ಅಭ್ಯರ್ಥಿ ರಾಜು ಕಾಗೆ

ಚಿಕ್ಕೋಡಿ: ಇಂದು ಅಥಣಿ ಪಟ್ಟಣದ ಸಿದ್ದೇಶ್ವರ ದೇವಸ್ಥಾನಕ್ಕೆ ಸಹೋದರನೊಂದಿಗೆ ತೆರಳಿ ಪೂಜೆ ಸಲ್ಲಿಸಿ ಬಳಿಕ ಕಾಗವಾಡದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಕಾಗೆಯವರು ನಾಮಪತ್ರ ಸಲ್ಲಿಸಿದರು.

ರಾಜು ಕಾಗೆ ಮತ್ತು ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ‌ ನಾಮಪತ್ರ ಸಲ್ಲಿಕೆ

ಅಥಣಿ-ಕಾಗವಾಡ ಉಪ ಚುನಾವಣೆ ಹಿನ್ನಲೆಯಲ್ಲಿ ಕಾಗವಾಡ ಮಾಜಿ ಶಾಸಕ, ಕೈ ಅಭ್ಯರ್ಥಿ ರಾಜು ಕಾಗೆ ಮತ್ತು ಎಂ.ಬಿ.ಪಾಟೀಲ್ ಜೊತೆಗೂಡಿ ಚುನಾವಣಾ ಅಧಿಕಾರಿ ಕಚೇರಿಗೆ ತೆರಳಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ರಾಜು ಕಾಗೆ ಅವರು ಕಾಲಿನಲ್ಲಿ ಚಪ್ಪಲಿ ಹರಿದರೂ ಸಹಿತ ಆ ಚಪ್ಪಲಿಗಳನ್ನು ಹಾಕಿಕೊಂಡೇ ನಾಮಪತ್ರ ಸಲ್ಲಿಸಲು ಹೊರಟರು.

ರಮೇಶ್​ ಜಾರಕಿಹೊಳಿ‌ ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ:

ಗೋಕಾಕ್​ ಕ್ಷೇತ್ರದ ಉಪ ಚುನಾವಣೆಯಲ್ಲಿ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ‌ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್​ ಅಂಗಡಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌, ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ‌, ಕೊತ್ವಾಲಗೌಡ ಮತ್ತಿತರರು ರಮೇಶ ಜಾರಕಿಹೊಳಿ‌ಗೆ ಸಾಥ್ ನೀಡಿದರು.

ಇನ್ನು ರಮೇಶ ಜಾರಕಿಹೊಳಿ‌ ನಗರದಲ್ಲಿ ಇಂದು ಮೆರವಣಿಗೆ ನಡಸಲಿದ್ದಾರೆ. ತೆರೆದ ವಾಹನದಲ್ಲಿ ನಡೆಯುವ ಈ ಮೆರವಣಿಗೆಯಲ್ಲಿ ಸಚಿವ ಸುರೇಶ್​ ಅಂಗಡಿ, ಬಾಲಚಂದ್ರ ಜಾರಕಿಹೊಳಿ‌ ಪಾಲ್ಗೊಳ್ಳಲಿದ್ದಾರೆ. ನಗರದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಸಾಗಲಿದೆ. ಅಂದಾಜು 20 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.

ಚಿಕ್ಕೋಡಿ: ಇಂದು ಅಥಣಿ ಪಟ್ಟಣದ ಸಿದ್ದೇಶ್ವರ ದೇವಸ್ಥಾನಕ್ಕೆ ಸಹೋದರನೊಂದಿಗೆ ತೆರಳಿ ಪೂಜೆ ಸಲ್ಲಿಸಿ ಬಳಿಕ ಕಾಗವಾಡದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಕಾಗೆಯವರು ನಾಮಪತ್ರ ಸಲ್ಲಿಸಿದರು.

ರಾಜು ಕಾಗೆ ಮತ್ತು ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ‌ ನಾಮಪತ್ರ ಸಲ್ಲಿಕೆ

ಅಥಣಿ-ಕಾಗವಾಡ ಉಪ ಚುನಾವಣೆ ಹಿನ್ನಲೆಯಲ್ಲಿ ಕಾಗವಾಡ ಮಾಜಿ ಶಾಸಕ, ಕೈ ಅಭ್ಯರ್ಥಿ ರಾಜು ಕಾಗೆ ಮತ್ತು ಎಂ.ಬಿ.ಪಾಟೀಲ್ ಜೊತೆಗೂಡಿ ಚುನಾವಣಾ ಅಧಿಕಾರಿ ಕಚೇರಿಗೆ ತೆರಳಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ರಾಜು ಕಾಗೆ ಅವರು ಕಾಲಿನಲ್ಲಿ ಚಪ್ಪಲಿ ಹರಿದರೂ ಸಹಿತ ಆ ಚಪ್ಪಲಿಗಳನ್ನು ಹಾಕಿಕೊಂಡೇ ನಾಮಪತ್ರ ಸಲ್ಲಿಸಲು ಹೊರಟರು.

ರಮೇಶ್​ ಜಾರಕಿಹೊಳಿ‌ ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ:

ಗೋಕಾಕ್​ ಕ್ಷೇತ್ರದ ಉಪ ಚುನಾವಣೆಯಲ್ಲಿ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ‌ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್​ ಅಂಗಡಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌, ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ‌, ಕೊತ್ವಾಲಗೌಡ ಮತ್ತಿತರರು ರಮೇಶ ಜಾರಕಿಹೊಳಿ‌ಗೆ ಸಾಥ್ ನೀಡಿದರು.

ಇನ್ನು ರಮೇಶ ಜಾರಕಿಹೊಳಿ‌ ನಗರದಲ್ಲಿ ಇಂದು ಮೆರವಣಿಗೆ ನಡಸಲಿದ್ದಾರೆ. ತೆರೆದ ವಾಹನದಲ್ಲಿ ನಡೆಯುವ ಈ ಮೆರವಣಿಗೆಯಲ್ಲಿ ಸಚಿವ ಸುರೇಶ್​ ಅಂಗಡಿ, ಬಾಲಚಂದ್ರ ಜಾರಕಿಹೊಳಿ‌ ಪಾಲ್ಗೊಳ್ಳಲಿದ್ದಾರೆ. ನಗರದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಸಾಗಲಿದೆ. ಅಂದಾಜು 20 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.

Intro:ಹರಿದಚಪ್ಪಲಿ ತೊಟ್ಟುಕೊಂಡೇ ನಾಮಪತ್ರ ಸಲ್ಲಿಸಿದ ಕಾಗವಾಡ ಕಾಂಗ್ರೆಸ ಅಭ್ಯುರ್ಥಿ ರಾಜು ಕಾಗೆBody:

ಚಿಕ್ಕೋಡಿ:

ಅಥಣಿ ಪಟ್ಟಣದಲ್ಲಿ ಸಹೋದರನೊಂದಿಗೆ ತೆರಳಿ ರಾಜು ಕಾಗೆ ನಾಮಪತ್ರ ಸಲ್ಲಿಕೆ ಮಾಡಿದ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ

ಅಥಣಿ ಪಟ್ಟಣದ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಳಿಕ ನಾಮಪತ್ರ ಸಲ್ಲಿಸಿದ ರಾಜು ಕಾಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ರಾಜು ಕಾಗೆ ಅವರು ಕಾಲಲ್ಲಿ ಚಪ್ಪಲಿ ಹರಿದರು ಸಹಿತ ಆ ಚಪ್ಪಲಿಗಳನ್ನು ಹಾಕಿಕೊಂಡು ನಾಮಪತ್ರ ಸಲ್ಲಿಸಿದ ರಾಜು ಕಾಗೆ.

ಅಥಣಿ ಕಾಗವಾಡ ಉಪಚುನಾವಣೆ ಹಿನ್ನಲೆಯಲ್ಲಿ ಕಾಗವಾಡ ಮಾಜಿ ಶಾಸಕ ಕೈ ಅಭ್ಯರ್ಥಿ ರಾಜು ಕಾಗೆ, ಮತ್ತು ಎಂಬಿ ಪಾಟೀಲ್ ಜೋತೆಗುಡಿ ತಹಶೀಲ್ದಾರ್ ಕಚೇರಿ ಚುನಾವಣೆ ಅಧಿಕಾರಿ ಕಚೇರಿ ಗೆ ತೆರಳಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.