ETV Bharat / city

ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ: ಅಶೋಕ್​​ ಪೂಜಾರಿ

ಜೋಳಿಗೆ ಹಾಕಿಕೊಂಡು ಮತಯಾಚಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಧಿಕೃತ ಮಾಹಿತಿ ಬಂದಿಲ್ಲ ಎಂದು ಗೋಕಾಕ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಹೇಳಿದರು.

author img

By

Published : Nov 28, 2019, 4:59 PM IST

Model code of conduct
ಅಶೋಕ್ ಪೂಜಾರಿ

ಗೋಕಾಕ್​​​​​​: ಚುನಾವಣಾ ಆಯೋಗದಿಂದ ನನಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಗೋಕಾಕ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಹೇಳಿದರು.

ಜೋಳಿಗೆ ಹಾಕಿಕೊಂಡು ಮತಯಾಚಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಧಿಕೃತ ಮಾಹಿತಿ ಬಂದಿಲ್ಲ ಎಂದಿದ್ದಾರೆ.

ಉಪ್ಪಾರಹಟ್ಟಿ ಗ್ರಾಮದಲ್ಲಿ ಮತಯಾಚಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ನಾಗರಿಕರಾಗಿ ಕಾನೂನು ಪಾಲಿಸುವುದು ನಮ್ಮ ಕರ್ತವ್ಯ. ನನ್ನ ವಿರುದ್ಧ ಕೇಸ್ ದಾಖಲಾಗಿದ್ರೆ ಏನು ಮಾಡಬೇಕೆಂದು ವಿಚಾರಿಸುವೆ. ನಾನು ಜಂಗಮನಾಗಿ ಹುಟ್ಟಿರುವುದು. ಜೋಳಿಗೆ ನಮ್ಮ ಜನ್ಮಸಿದ್ಧ ಹಕ್ಕು. ಕಾನೂನಾತ್ಮಕವಾಗಿ ನಾನಿದನ್ನು ವಿಮರ್ಶೆ ಮಾಡುವುದಿಲ್ಲ ಎಂದು ಹೇಳಿದರು.

ಅಶೋಕ್ ಪೂಜಾರಿ, ಜೆಡಿಎಸ್​ ಅಭ್ಯರ್ಥಿ

ಧಾರ್ಮಿಕವಾಗಿ ಜೋಳಿಗೆ ಹಾಕಿಕೊಂಡು ಭಿಕ್ಷಾಟನೆ ಮಾಡಿ ದಾಸೋಹ ಕಾರ್ಯ ಮಾಡುತ್ತಾ ಬಂದಿದ್ದೇವೆ. ಮತದಾನ ಅಂದ್ರೆ ಮತವನ್ನು ದಾನ ಮಾಡೋದು. ಜೋಳಿಗೆಯಲ್ಲಿ ಕಾಣಿಕೆ ಹಾಕಿದ್ರೂ ದಾನ, ಮತ ಹಾಕುವುದೂ ದಾನವೇ ಆಗಿದೆ ಎಂದರು.

ನನ್ನ ದೃಷ್ಟಿಯಲ್ಲಿ ದುಡ್ಡು ಕೊಟ್ಟು ಮತ ಪಡೆದರೆ ಮಾತ್ರ ದೊಡ್ಡ ಅಪರಾಧ. ಅದು ನಮ್ಮ ಗೋಕಾಕ್ ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಅದನ್ನು ಪ್ರಶ್ನಿಸುವ ಕಾನೂನಿನ ಶಕ್ತಿ ಬೇಕಾಗಿದೆ. ಅದನ್ನು ಬಿಟ್ಟು ಜೋಳಿಗೆ ಹಾಕಿ ಮತ ಕೇಳಿದ್ರೆ ಕೇಸ್ ಹಾಕೋದು ದೊಡ್ಡ ಸಾಹಸ ಅಲ್ಲ ಎಂದರು.

ಗೋಕಾಕ್​​​​​​: ಚುನಾವಣಾ ಆಯೋಗದಿಂದ ನನಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಗೋಕಾಕ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಹೇಳಿದರು.

ಜೋಳಿಗೆ ಹಾಕಿಕೊಂಡು ಮತಯಾಚಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಧಿಕೃತ ಮಾಹಿತಿ ಬಂದಿಲ್ಲ ಎಂದಿದ್ದಾರೆ.

ಉಪ್ಪಾರಹಟ್ಟಿ ಗ್ರಾಮದಲ್ಲಿ ಮತಯಾಚಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ನಾಗರಿಕರಾಗಿ ಕಾನೂನು ಪಾಲಿಸುವುದು ನಮ್ಮ ಕರ್ತವ್ಯ. ನನ್ನ ವಿರುದ್ಧ ಕೇಸ್ ದಾಖಲಾಗಿದ್ರೆ ಏನು ಮಾಡಬೇಕೆಂದು ವಿಚಾರಿಸುವೆ. ನಾನು ಜಂಗಮನಾಗಿ ಹುಟ್ಟಿರುವುದು. ಜೋಳಿಗೆ ನಮ್ಮ ಜನ್ಮಸಿದ್ಧ ಹಕ್ಕು. ಕಾನೂನಾತ್ಮಕವಾಗಿ ನಾನಿದನ್ನು ವಿಮರ್ಶೆ ಮಾಡುವುದಿಲ್ಲ ಎಂದು ಹೇಳಿದರು.

ಅಶೋಕ್ ಪೂಜಾರಿ, ಜೆಡಿಎಸ್​ ಅಭ್ಯರ್ಥಿ

ಧಾರ್ಮಿಕವಾಗಿ ಜೋಳಿಗೆ ಹಾಕಿಕೊಂಡು ಭಿಕ್ಷಾಟನೆ ಮಾಡಿ ದಾಸೋಹ ಕಾರ್ಯ ಮಾಡುತ್ತಾ ಬಂದಿದ್ದೇವೆ. ಮತದಾನ ಅಂದ್ರೆ ಮತವನ್ನು ದಾನ ಮಾಡೋದು. ಜೋಳಿಗೆಯಲ್ಲಿ ಕಾಣಿಕೆ ಹಾಕಿದ್ರೂ ದಾನ, ಮತ ಹಾಕುವುದೂ ದಾನವೇ ಆಗಿದೆ ಎಂದರು.

ನನ್ನ ದೃಷ್ಟಿಯಲ್ಲಿ ದುಡ್ಡು ಕೊಟ್ಟು ಮತ ಪಡೆದರೆ ಮಾತ್ರ ದೊಡ್ಡ ಅಪರಾಧ. ಅದು ನಮ್ಮ ಗೋಕಾಕ್ ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಅದನ್ನು ಪ್ರಶ್ನಿಸುವ ಕಾನೂನಿನ ಶಕ್ತಿ ಬೇಕಾಗಿದೆ. ಅದನ್ನು ಬಿಟ್ಟು ಜೋಳಿಗೆ ಹಾಕಿ ಮತ ಕೇಳಿದ್ರೆ ಕೇಸ್ ಹಾಕೋದು ದೊಡ್ಡ ಸಾಹಸ ಅಲ್ಲ ಎಂದರು.

Intro:ನೀತಿ ಸಂಹಿತೆ ಉಲ್ಲಂಘನೆ ಅಧಿಕೃತ ಮಾಹಿತಿ ಬಂದಿಲ್ಲ: ಅಶೋಕ್ ಪೂಜಾರಿ Body:ಗೋಕಾಕ: ಜೋಳಿಗೆ ಹಾಕಿ ಅಶೋಕ್ ಪೂಜಾರಿ ಮತಯಾಚನೆ ಹಿನ್ನೆಲೆ ನೀತಿ ಸಂಹಿತೆ ಉಲ್ಲಂಘನೆ ದೂರು ವಿಚಾರ ಮಾತನಾಡಿದ ಅವರು ನನಗೆ ಅಧಿಕೃತ ಮಾಹಿತಿ ಬಂದಿಲ್ಲ ಎಂದ ಗೋಕಾಕ್ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಹೇಳಿದರು.

ಉಪ್ಪಾರಹಟ್ಟಿ ಗ್ರಾಮದಲ್ಲಿ ಅಶೋಕ್ ಪೂಜಾರಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿ ನಾವು ಈ ದೇಶದ ನಾಗರಿಕರು, ಕಾನೂನು ಪಾಲನೆ ನಮ್ಮ ಕರ್ತವ್ಯ. ನನ್ನ ವಿರುದ್ಧ ಕೇಸ್ ದಾಖಲಾಗಿದ್ರೆ ಏನು ಮಾಡಬೇಕೆಂದು ವಿಚಾರ ಮಾಡುವೆ. ನಾನು ಜಂಗಮನಾಗಿ ಹುಟ್ಟಿದ್ದು ಜೋಳಿಗೆ ನಮ್ಮ ಜನ್ಮಸಿದ್ಧ ಹಕ್ಕು. ಕಾನೂನಾತ್ಮಕವಾಗಿ ನಾನಿದನ್ನು ವಿಮರ್ಶೆ ಮಾಡುವುದಿಲ್ಲ.

ಧಾರ್ಮಿಕವಾಗಿ ನಾವು ಜೋಳಿಗೆ ಹಾಕಿಕೊಂಡು ಭಿಕ್ಷಾಟನೆ ಮಾಡಿ ದಾಸೋಹ ಕಾರ್ಯ ಮಾಡುತ್ತಾ ಬಂದಿದ್ದೇವೆ. ಮತದಾನ ಅಂದ್ರೆ ಮತವನ್ನು ದಾನ ಮಾಡೋದು. ಜೋಳಿಗೆಯಲ್ಲಿ ಕಾಣಿಕೆ ಹಾಕಿದ್ರೂ ದಾನ, ಮತ ಹಾಕುವೂದು ದಾನವೇ ಆಗಿದೆ. ಭಾವನಾತ್ಮಕ ವಿಷಯ ಎನ್ನುವ ಬಗ್ಗೆ ಪ್ರಶ್ನೆಯೇ ಇಲ್ಲ. ಮತ ಹಾಕುವವರೆಲ್ಲ ವೀರಶೈವರಲ್ಲ, ಎಲ್ಲ ಧರ್ಮದವರು ಮತ ಹಾಕುತ್ತಾರೆ.

ನನ್ನ ದೃಷ್ಟಿಯಲ್ಲಿ ದುಡ್ಡು ಕೊಟ್ಟು ಮತ ಪಡೆದ್ರೆ ದೊಡ್ಡ ಅಪರಾಧ. ಅದು ನಮ್ಮ ಗೋಕಾಕ್ ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದು, ಅದನ್ನು ಪ್ರಶ್ನಿಸುವಂತಹ ಕಾನೂನಿನ ಶಕ್ತಿ ಬೇಕಾಗಿದೆ. ಹೊರತು ಜೋಳಿಗೆ ಕೇಳಿ ಮತ ಕೇಳಿದ್ರೆ ಕೇಸ್ ಹಾಕೋದು ದೊಡ್ಡ ಕೆಲಸ ಅಲ್ಲ. ಅಕಸ್ಮಾತ್ ಕೇಸ್ ದಾಖಲಾಗಿದ್ರೆ ಕಾನೂನು ರೀತಿ ನಡೆದುಕೊಳ್ಳುವೆ ಎಂದರು.

ಗೋಕಾಕ್‌ನಲ್ಲಿ ಚುನಾವಣೆ ವೇಳೆ ಅವ್ಯಾಹತವಾಗಿ ಹಣ ಹಂಚಿಕೆ ಆಗುತ್ತದೆ ಎಂದು ಹೇಳಿದ ಅವರು ಹಿಂದಿನ ಮೂರು ಚುನಾವಣೆಯಲ್ಲಿ ದೂರು ಕೊಟ್ಟರೂ ಪ್ರತಿಫಲ ಸಿಕ್ಕಿಲ್ಲ. ಹತಾಶರಾಗಿ ನಾವು ಸುಮ್ಮನೇ ಕುಳಿತಿದ್ದೇವೆ ಎಂದ ಅಶೋಕ್ ಪೂಜಾರಿ ಹೇಳಿದರು.

kn_gkk_01_28_ashokpujeri_byte_kac10009Conclusion:ಗೋಕಾಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.