ಚಿಕ್ಕೋಡಿ: ಹೊಲದಲ್ಲಿ ಕಬ್ಬಿನ ಬೆಳೆಯ ಮಧ್ಯೆ ಗಾಂಜಾ ಸಸಿಗಳನ್ನು ಬೆಳೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಕರೆಪ್ಪ ಸಿದ್ದಪ್ಪ ನಾಯಕ ಬಂಧಿತ ಆರೋಪಿ.
ಆರೋಪಿಯು ಕಬ್ಬಿನ ಬೆಳೆಯ ಮಧ್ಯೆ ಬೆಳೆದ 15 ಗಾಂಜಾ ಗಿಡಗಳು, ಎರಡು ಬ್ಯಾಗ್ ಎಲೆ, ಕಾಯಿ, ಬೀಜ ಸೇರಿದಂತೆ 59.5 ಸಾವಿರ ರೂ. ಮೌಲ್ಯದ 39 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಹುಕ್ಕೇರಿ ಪೊಲೀಸ್ ಠಾಣೆ ಪಿಎಸ್ಐ ಶಿವಾನಂದ ಗುಡಗನಟ್ಟಿ ನೇತೃತ್ವದಲ್ಲಿ ಜಿಲ್ಲಾ ಕ್ರೈಂ ವಿಭಾಗದ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.