ETV Bharat / city

ಗಾಯರಾಣ ಜಮೀನಿನಲ್ಲಿರುವ ಮನೆಗಳ ತೆರವಿಗೆ ಆದೇಶ.. ಕಂಕಣವಾಡಿ ಗ್ರಾಮಸ್ಥರ ಪ್ರತಿಭಟನೆ - kankanawadi villagers protest

ಗಾಯರಾಣ ಜಮೀನಿನಲ್ಲಿರುವ ಮನೆಗಳ ತೆರವಿಗೆ ಸರ್ಕಾರ ಆದೇಶ ನೀಡಿದ್ದು, ಸರ್ಕಾರದ ಈ ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣ ನಿವಾಸಿಗಳು ಪ್ರತಿಭಟನೆ ನಡೆಸಿದರು.

kankanawadi villagers protest against state governament
ಗೈರಾಣು ಜಮೀನಿನಲ್ಲಿರುವ ಮನೆಗಳ ತೆರವಿಗೆ ಸರ್ಕಾರದ ಆದೇಶ..ಕಂಕನವಾಡಿ ಗ್ರಾಮಸ್ಥರಿಂದ ಪ್ರತಿಭಟನೆ
author img

By

Published : Jun 27, 2020, 9:17 PM IST

ಚಿಕ್ಕೋಡಿ (ಬೆಳಗಾವಿ): ಗಾಯರಾಣ ಜಮೀನಿನಲ್ಲಿರುವ ಮನೆಗಳ ತೆರವಿಗೆ ಸರ್ಕಾರ ಆದೇಶ ನೀಡಿದೆ. ಈ ಆದೇಶ ಖಂಡಿಸಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣ ನಿವಾಸಿಗಳು ಸ್ವಯಂ ಪ್ರೇರಿತ ಬಂದ್ ಮಾಡಿ, ಪ್ರತಿಭಟನೆ ನಡೆಸಿದರು.

ಗೈರಾಣು ಜಮೀನಿನಲ್ಲಿರುವ ಮನೆಗಳ ತೆರವಿಗೆ ಸರ್ಕಾರದ ಆದೇಶ..ಕಂಕನವಾಡಿ ಗ್ರಾಮಸ್ಥರಿಂದ ಪ್ರತಿಭಟನೆ

ಕಳೆದ 40 ವರ್ಷಗಳಿಂದ ಕಂಕಣವಾಡಿ ಗ್ರಾಮದ ಗಾಯರಾಣ ಜಮೀನಿನಲ್ಲಿ ವಾಸವಿದ್ದ 2,000 ಕುಟುಂಬಗಳಿಗೆ ಸರ್ಕಾರನೇ ಮೂಲಭೂತ ಸೌಕರ್ಯಗಳನ್ನು ನೀಡಿ, ಆಶ್ರಯ‌ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿ‌ ಕೊಟ್ಟಿತ್ತು. ಆದರೆ, ಇದೀಗ ಏಕಾಏಕಿ ಗಾಯರಾಣ ಜಮೀನನ್ನು ಖಾಲಿ ಮಾಡುವಂತೆ ಆದೇಶ ಹೊರಡಿಸಿದೆ.

ಹೀಗಾಗಿ ಕಂಕಣವಾಡಿ ಪಟ್ಟಣದ ಶೇ.75ರಷ್ಟು ಕುಟುಂಬಗಳು ಬೀದಿಗೆ ಬರುವ ಸ್ಥಿತಿಯಲ್ಲಿದ್ದು, ಸರ್ಕಾರದ ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಚಿಕ್ಕೋಡಿ (ಬೆಳಗಾವಿ): ಗಾಯರಾಣ ಜಮೀನಿನಲ್ಲಿರುವ ಮನೆಗಳ ತೆರವಿಗೆ ಸರ್ಕಾರ ಆದೇಶ ನೀಡಿದೆ. ಈ ಆದೇಶ ಖಂಡಿಸಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣ ನಿವಾಸಿಗಳು ಸ್ವಯಂ ಪ್ರೇರಿತ ಬಂದ್ ಮಾಡಿ, ಪ್ರತಿಭಟನೆ ನಡೆಸಿದರು.

ಗೈರಾಣು ಜಮೀನಿನಲ್ಲಿರುವ ಮನೆಗಳ ತೆರವಿಗೆ ಸರ್ಕಾರದ ಆದೇಶ..ಕಂಕನವಾಡಿ ಗ್ರಾಮಸ್ಥರಿಂದ ಪ್ರತಿಭಟನೆ

ಕಳೆದ 40 ವರ್ಷಗಳಿಂದ ಕಂಕಣವಾಡಿ ಗ್ರಾಮದ ಗಾಯರಾಣ ಜಮೀನಿನಲ್ಲಿ ವಾಸವಿದ್ದ 2,000 ಕುಟುಂಬಗಳಿಗೆ ಸರ್ಕಾರನೇ ಮೂಲಭೂತ ಸೌಕರ್ಯಗಳನ್ನು ನೀಡಿ, ಆಶ್ರಯ‌ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿ‌ ಕೊಟ್ಟಿತ್ತು. ಆದರೆ, ಇದೀಗ ಏಕಾಏಕಿ ಗಾಯರಾಣ ಜಮೀನನ್ನು ಖಾಲಿ ಮಾಡುವಂತೆ ಆದೇಶ ಹೊರಡಿಸಿದೆ.

ಹೀಗಾಗಿ ಕಂಕಣವಾಡಿ ಪಟ್ಟಣದ ಶೇ.75ರಷ್ಟು ಕುಟುಂಬಗಳು ಬೀದಿಗೆ ಬರುವ ಸ್ಥಿತಿಯಲ್ಲಿದ್ದು, ಸರ್ಕಾರದ ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.