ETV Bharat / city

ಅನರ್ಹರ ಗೆಲ್ಲಿಸಿಕೊಡಿ... ಅಥಣಿ, ಕಾಗವಾಡ, ಗೋಕಾಕ್​ದಲ್ಲಿ ಸಿಎಂ ಭರ್ಜರಿ ಪ್ರಚಾರ - ಅಥಣಿ ಬಿಜೆಪಿ ಸಮಾವೇಶ

ಉಪಚುನಾವಣೆಯಲ್ಲಿ ಅನರ್ಹರನ್ನು ಗೆಲ್ಲಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಯಡಿಯೂರಪ್ಪ ಚುನಾವನಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದು, ಅಥಣಿಯಿಂದ ಪ್ರಚಾರ ಆರಂಭಿಸಿದ್ದಾರೆ. ಇಂದು ಅಥಣಿ, ಕಾಗವಾಡ, ಗೋಕಾಕ್​ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ ಸಿಎಂ ಅನರ್ಹ ಶಾಸಕರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಬಿಜೆಪಿಯ ಈಶ್ವರಪ್ಪ, ಜಗದೀಶ್​ ಶೆಟ್ಟರ್​, ಲಕ್ಷ್ಮಣ್​ ಸವದಿ ಸೇರಿದಂತೆ ಅನೇಕ ನಾಯಕರು ಸಿಎಂಗೆ ಸಾಥ್​ ನೀಡಿದರು.

ಅಥಣಿಯಲ್ಲಿ ಬಿಜೆಪಿ ಸಮಾವೇಶ
author img

By

Published : Nov 23, 2019, 8:29 PM IST

ಬೆಳಗಾವಿ: ಅಥಣಿಯಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್​, ಇಡೀ ರಾಜ್ಯ ಅಥಣಿಯನ್ನು ನೋಡುತ್ತಿದೆ. ಅಥಣಿಯಿಂದ ಯಡಿಯೂರಪ್ಪ ದಂಡಯಾತ್ರೆ ಆರಂಭವಾಗಿದೆ. ಇಲ್ಲಿಂದ ದಂಡಯಾತ್ರೆ ಆರಂಭವಾಗಿರುವುದರಿಂದ ಇಲ್ಲಿ ಕುಮಟಳ್ಳಿಯವರನ್ನು 25 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಈ ದಂಡಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದರು.

ಅಥಣಿಯಲ್ಲಿ ಬಿಜೆಪಿ ಸಮಾವೇಶ

ಈ ಭಾಗದ ಅಭಿವೃದ್ಧಿಗೆ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ಕೊಟ್ಟವರು ಲಕ್ಷ್ಮಣ್ ಸವದಿಯವರು, ಈ ಹಿಂದೆ ಇಲ್ಲಿನ ಕೆಲ ಭಾಗದ ಜನ ನಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಇಲ್ಲಿ ಅಭಿವೃದ್ಧಿಯಾಗಿಲ್ಲ ಎನ್ನುತ್ತಿದ್ದರು. ಆದರೆ ಈಗ ಮಹಾರಾಷ್ಟ್ರದ ಕೆಲ ಗ್ರಾಮಗಳ ಜನ ಅಭಿವೃದ್ಧಿಗಾಗಿ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎನ್ನುತ್ತಿದ್ದಾರೆ ಇದು ಇಲ್ಲಿ ಲಕ್ಷ್ಮಣ್ ಸವದಿಯವರು ನಡೆಸಿದ ಅಭಿವೃದ್ಧಿಯ ಫಲ. ನಿಜವಾದ ಬದಲಾವಣೆ ಎಂದರೆ ಇದು ಎಂದರು.

ಅಥಣಿಯಲ್ಲಿ ಪ್ರಚಾರ ನಡೆಸಿ ಕಾಗವಾಡಕ್ಕೆ ಆಗಮಿಸಿದ ಯಡಿಯೂರಪ್ಪ, ಇಲ್ಲಿಯೂ ಶ್ರೀಮಂತ್​ ಪಾಟೀಲ್​ ಪರ ಪ್ರಚಾರ ನಡೆಸಿದರು. ಶ್ರೀಮಂತ್​ ಪಾಟೀಲ್​ ಸೇರಿದಂತೆ ಅನರ್ಹ ಶಾಸಕರೆಲ್ಲರೂ ರಾಜೀನಾಮೆ ನೀಡದಿದ್ದರೆ ಇವತ್ತು ನಿಮ್ಮ ಯಡಿಯೂರಪ್ಪ ಸಿಎಂ ಆಗುತ್ತಿರಲಿಲ್ಲ. ಇಲ್ಲಿ ಶ್ರೀಮಂತ್​ ಪಾಟೀಲ್​ರನ್ನು ಗೆಲ್ಲಿಸಿ ಕೊಡಿ, ಇಲ್ಲಿ ಶ್ರೀಮಂತ್​ ಪಾಟೀಲ್ ಹಾಗೂ ಅಥಣಿಯಲ್ಲಿ ಮಹೇಶ್​ ಕುಮಟಳ್ಳಿಯವರನ್ನು ಸಚಿವರನ್ನಾಗಿ ಮಾಡುತ್ತೇನೆ ಎಂದರು.

ನಂತರ ಗೋಕಾಕ್​ಗೆ ಆಗಮಿಸಿದ ಯಡಿಯೂರಪ್ಪ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ರಮೇಶ್​ ಜಾರಕಿಹೊಳಿ ಪರ ಪ್ರಚಾರ ನಡೆಸಿದರು. ರಮೇಶ ಜಾರಕಿಹೊಳಿ‌ ಅವರ ಗಟ್ಟಿ ನಿರ್ಧಾರದಿಂದ ನಾನು ಸಿಎಂ ಆಗಿದ್ದೇನೆ. ಗೋಕಾಕ ‌ನಗರದ ಲಿಂಗಾಯತ ಮತದಾರರು ಯಾವುದೇ ವ್ಯಾಮೋಹಕ್ಕೆ ಒಳಗಾಗಬಾರದು. ಯಡಿಯೂರಪ್ಪ ಸಿಎಂ ಆಗಲು, ಶೆಟ್ಟರ್, ಜೊಲ್ಲೆ ಸಚಿವರಾಗಲು ರಮೇಶ ಕಾರಣ. ರಮೇಶ 17 ಜನ ಶಾಸಕರನ್ನು ಕರೆತರದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ. ಹೀಗಾಗಿ ರಮೇಶ್​ ಜಾರಕಿಹೊಳಿ ಗೆದ್ದರಷ್ಟೇ ನನಗೆ ಸಮಾಧಾನ. ಈ ಚುನಾವಣೆಯಲ್ಲಿ ಜಾರಕಿಹೊಳಿ ಅವರನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ಸಿಎಂ ಮನವಿ ಮಾಡಿದರು.

ಬೆಳಗಾವಿ: ಅಥಣಿಯಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್​, ಇಡೀ ರಾಜ್ಯ ಅಥಣಿಯನ್ನು ನೋಡುತ್ತಿದೆ. ಅಥಣಿಯಿಂದ ಯಡಿಯೂರಪ್ಪ ದಂಡಯಾತ್ರೆ ಆರಂಭವಾಗಿದೆ. ಇಲ್ಲಿಂದ ದಂಡಯಾತ್ರೆ ಆರಂಭವಾಗಿರುವುದರಿಂದ ಇಲ್ಲಿ ಕುಮಟಳ್ಳಿಯವರನ್ನು 25 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಈ ದಂಡಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದರು.

ಅಥಣಿಯಲ್ಲಿ ಬಿಜೆಪಿ ಸಮಾವೇಶ

ಈ ಭಾಗದ ಅಭಿವೃದ್ಧಿಗೆ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ಕೊಟ್ಟವರು ಲಕ್ಷ್ಮಣ್ ಸವದಿಯವರು, ಈ ಹಿಂದೆ ಇಲ್ಲಿನ ಕೆಲ ಭಾಗದ ಜನ ನಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಇಲ್ಲಿ ಅಭಿವೃದ್ಧಿಯಾಗಿಲ್ಲ ಎನ್ನುತ್ತಿದ್ದರು. ಆದರೆ ಈಗ ಮಹಾರಾಷ್ಟ್ರದ ಕೆಲ ಗ್ರಾಮಗಳ ಜನ ಅಭಿವೃದ್ಧಿಗಾಗಿ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎನ್ನುತ್ತಿದ್ದಾರೆ ಇದು ಇಲ್ಲಿ ಲಕ್ಷ್ಮಣ್ ಸವದಿಯವರು ನಡೆಸಿದ ಅಭಿವೃದ್ಧಿಯ ಫಲ. ನಿಜವಾದ ಬದಲಾವಣೆ ಎಂದರೆ ಇದು ಎಂದರು.

ಅಥಣಿಯಲ್ಲಿ ಪ್ರಚಾರ ನಡೆಸಿ ಕಾಗವಾಡಕ್ಕೆ ಆಗಮಿಸಿದ ಯಡಿಯೂರಪ್ಪ, ಇಲ್ಲಿಯೂ ಶ್ರೀಮಂತ್​ ಪಾಟೀಲ್​ ಪರ ಪ್ರಚಾರ ನಡೆಸಿದರು. ಶ್ರೀಮಂತ್​ ಪಾಟೀಲ್​ ಸೇರಿದಂತೆ ಅನರ್ಹ ಶಾಸಕರೆಲ್ಲರೂ ರಾಜೀನಾಮೆ ನೀಡದಿದ್ದರೆ ಇವತ್ತು ನಿಮ್ಮ ಯಡಿಯೂರಪ್ಪ ಸಿಎಂ ಆಗುತ್ತಿರಲಿಲ್ಲ. ಇಲ್ಲಿ ಶ್ರೀಮಂತ್​ ಪಾಟೀಲ್​ರನ್ನು ಗೆಲ್ಲಿಸಿ ಕೊಡಿ, ಇಲ್ಲಿ ಶ್ರೀಮಂತ್​ ಪಾಟೀಲ್ ಹಾಗೂ ಅಥಣಿಯಲ್ಲಿ ಮಹೇಶ್​ ಕುಮಟಳ್ಳಿಯವರನ್ನು ಸಚಿವರನ್ನಾಗಿ ಮಾಡುತ್ತೇನೆ ಎಂದರು.

ನಂತರ ಗೋಕಾಕ್​ಗೆ ಆಗಮಿಸಿದ ಯಡಿಯೂರಪ್ಪ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ರಮೇಶ್​ ಜಾರಕಿಹೊಳಿ ಪರ ಪ್ರಚಾರ ನಡೆಸಿದರು. ರಮೇಶ ಜಾರಕಿಹೊಳಿ‌ ಅವರ ಗಟ್ಟಿ ನಿರ್ಧಾರದಿಂದ ನಾನು ಸಿಎಂ ಆಗಿದ್ದೇನೆ. ಗೋಕಾಕ ‌ನಗರದ ಲಿಂಗಾಯತ ಮತದಾರರು ಯಾವುದೇ ವ್ಯಾಮೋಹಕ್ಕೆ ಒಳಗಾಗಬಾರದು. ಯಡಿಯೂರಪ್ಪ ಸಿಎಂ ಆಗಲು, ಶೆಟ್ಟರ್, ಜೊಲ್ಲೆ ಸಚಿವರಾಗಲು ರಮೇಶ ಕಾರಣ. ರಮೇಶ 17 ಜನ ಶಾಸಕರನ್ನು ಕರೆತರದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ. ಹೀಗಾಗಿ ರಮೇಶ್​ ಜಾರಕಿಹೊಳಿ ಗೆದ್ದರಷ್ಟೇ ನನಗೆ ಸಮಾಧಾನ. ಈ ಚುನಾವಣೆಯಲ್ಲಿ ಜಾರಕಿಹೊಳಿ ಅವರನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ಸಿಎಂ ಮನವಿ ಮಾಡಿದರು.

Intro:ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಪರ ಪ್ರಚಾರ ಮಾಡಿದ ಸಿಎಂBody:

ಚಿಕ್ಕೋಡಿ :

ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಪರ ಯಡಿಯೂರಪ್ಪ ಪ್ರಚಾರ ನಡೆಸಿದ್ರು ಕಾಗವಾಡ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಮಹಾಪೂರವನ್ನೆ ಹರಿಸಿದ್ದಾರೆ ಶ್ರೀಮಂತ ಪಾಟೀಲ್ ಗೆಲ್ಲಿಸಿದ್ರೆ ಮಂತ್ರಿ ಮಾಡುವುದಾಗಿಯು ಘೋಷಣೆ ಮಾಡಿದ ಸಿಎಂ ಯಡಿಯೂರಪ್ಪ ಅಲ್ಲದೆ
ಬಸವೇಶ್ವರ ಎತ್ ನೀರಾವರಿ ಕುಂಬಕರ್ಣ ರೀತಿಯಲ್ಲಿ ನಡಿತಾ ಇದೆ ಚುನಾವಣೆ ಆದಮೇಲೆ ನಾನೆ ಬಂದು ಆ ಗುತ್ತಿಗೆದಾರನನ್ನ ತೆಗೆಸು ಕಾಮಗಾರಿಯನ್ನ ಶಿಗ್ರ ಪುರ್ಣ ಮಾಡಿ ಕೊಡುತ್ತೇನೆ

ಚುನಾವಣೆ ಆದ ಮೇಲೆ ಮಹಾರಾಷ್ಟ್ರ ಮುಖ್ಯ ಮಂತ್ರಿಯನ್ನ ನಾನೆ ಭೇಟಿಮಾಡಿ ನಾಲ್ಕು ಟಿಎಂಸಿ ನೀರಿಗಾಗಿ ನಾನೆ ಅಗ್ರಿಮೆಂಟ್ ಮಾಡಿ ಕೊಡುತ್ತೇನೆ ಚುನಾವಣೆ ಫಲಿತಾಂಶ ಬಂದ ಮಾರನೆ ದಿನ ದಿಂದ ರಾಜೀನಾಮೆ ನೀಡಿ ಬಂದ ಎಲ್ಲಾ ಶಾಸಕರ ಕ್ಷೇತ್ರದ. ಶಾಸಕರು ಗೌರವದಿಂದ ತಲೆ ಎತ್ತಿ ನಡಿಯಬೇಕು ಅಂತ ಕೆಲಸ ಮಾಡುತ್ತೇನೆ ಎಂದು ಭರವಸೆಗಳ ಮಹಾಪೂರವನ್ನೇ ಹರಿಸಿದ್ರು ಇನ್ನು ಇದೆ ವೇದಿಕೆಯಲ್ಲಿ ರಾಜು ಕಾಗೆಗೂ ಟಾಂಕ ಕೊಟ್ರು ಹೆಸರು ಹೇಳದೆ ಯಾವುದಾದರು ಒಂದು ಓಟು ವೀರಶೈವದ ಆಕಡೆ ಈಕಡೆ ಹೋದ್ರೆ ಅದು ಎಷ್ಟರಮಟ್ಟಿಗೆ ಸರಿ, ಪಕ್ಷ ವಿರೋಧಿಗಳನ್ನ ಪಕ್ಷ ದ್ರೋಹಿಗಳಿಗೆ ನಂಬಿಕೆ ದ್ರೋಹ ವಿಶ್ವಾಸದ್ರೋದವರಿಗೆ ಪಾಠವನ್ನ ಕಲಿಸಿ ಎಂದು ಹರಿ ಹಾಯ್ದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.