ETV Bharat / city

ಮನೆಯಲ್ಲೇ ಬಸವ ಜಯಂತಿ ಆಚರಿಸಿ: ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮನವಿ - Celebrate Basava Jayanti at home

ಲಾಕ್​ಡೌನ್​​ ವಿಧಿಸಿರುವ ಕಾರಣ ಮನೆಯಲ್ಲೇ ಬಸವ ಜಯಂತಿ ಆಚರಿಸಲು ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಭಕ್ತರಲ್ಲಿ ಮನವಿ‌ ಮಾಡಿದ್ದಾರೆ.

Panchama Shivalingeshwara Swamiji
ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ
author img

By

Published : Apr 25, 2020, 1:16 PM IST

ಚಿಕ್ಕೋಡಿ: ಕೊರೊನಾ ವೈರಸ್​​​ನಿಂದ ದೇಶವೇ ಲಾಕ್​​​ಡೌನ್ ಆಗಿದ್ದು, ಈ ಹಿನ್ನೆಲೆಯಲ್ಲಿ ‌ಬಸವ ಜಯಂತಿಯನ್ನು ಮನೆಯಲ್ಲೇ ಆಚರಿಸಿ ಎಂದು ನಿಡಸೋಸಿ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಭಕ್ತರಲ್ಲಿ ಮನವಿ‌ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಮಠದಲ್ಲಿ ಮಾತನಾಡಿದ ಅವರು, ಕೊರೊನಾ ವಿರುದ್ಧ ಹೋರಾಡಲು ಲಾಕ್​​ಡೌನ್‌ ಹೇರಲಾಗಿದೆ. ಹೀಗಾಗಿ ಯಾರೂ ಮನೆಯಿಂದ ಹೊರ ಬರಬಾರದು. ವೀರಶೈವ ಲಿಂಗಾಯತರು ಮನೆಯಲ್ಲೇ ಇದ್ದು, ಬಸವಜಯಂತಿ ಆಚರಿಸಬೇಕು ಎಂದರು.

ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ

ಬೆಳಗಾವಿ ಈಗಾಗಲೇ ರೆಡ್ ಜೋನ್​​​ನಲ್ಲಿದೆ. ಸರ್ಕಾರದ ಆದೇಶದ ಪ್ರಕಾರ ಯಾವುದೇ ದೇವಸ್ಥಾನಗಳಲ್ಲಿ‌, ಮಠಗಳಲ್ಲಿ ಬಸವ ಜಯಂತಿ ಹಾಗೂ ಸಭೆ ಸೇರಿದಂತೆ ಮಠದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದರು.

ಚಿಕ್ಕೋಡಿ: ಕೊರೊನಾ ವೈರಸ್​​​ನಿಂದ ದೇಶವೇ ಲಾಕ್​​​ಡೌನ್ ಆಗಿದ್ದು, ಈ ಹಿನ್ನೆಲೆಯಲ್ಲಿ ‌ಬಸವ ಜಯಂತಿಯನ್ನು ಮನೆಯಲ್ಲೇ ಆಚರಿಸಿ ಎಂದು ನಿಡಸೋಸಿ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಭಕ್ತರಲ್ಲಿ ಮನವಿ‌ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಮಠದಲ್ಲಿ ಮಾತನಾಡಿದ ಅವರು, ಕೊರೊನಾ ವಿರುದ್ಧ ಹೋರಾಡಲು ಲಾಕ್​​ಡೌನ್‌ ಹೇರಲಾಗಿದೆ. ಹೀಗಾಗಿ ಯಾರೂ ಮನೆಯಿಂದ ಹೊರ ಬರಬಾರದು. ವೀರಶೈವ ಲಿಂಗಾಯತರು ಮನೆಯಲ್ಲೇ ಇದ್ದು, ಬಸವಜಯಂತಿ ಆಚರಿಸಬೇಕು ಎಂದರು.

ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ

ಬೆಳಗಾವಿ ಈಗಾಗಲೇ ರೆಡ್ ಜೋನ್​​​ನಲ್ಲಿದೆ. ಸರ್ಕಾರದ ಆದೇಶದ ಪ್ರಕಾರ ಯಾವುದೇ ದೇವಸ್ಥಾನಗಳಲ್ಲಿ‌, ಮಠಗಳಲ್ಲಿ ಬಸವ ಜಯಂತಿ ಹಾಗೂ ಸಭೆ ಸೇರಿದಂತೆ ಮಠದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.