ETV Bharat / business

ಶುಭ ಸೂಚನೆ: ಮುಂದಿನ ದಿನಗಳಲ್ಲಿ ಖಾದ್ಯ ತೈಲಗಳ ಬೆಲೆ ಮತ್ತಷ್ಟು ಕುಸಿತ ಸಾಧ್ಯತೆ.. ಕೇಂದ್ರ ಆಹಾರ ಸಚಿವಾಲಯ

author img

By

Published : Oct 3, 2022, 10:45 PM IST

ಆರ್‌ಬಿಡಿ ಪಾಮೊಲಿನ್ 1 ಲೀಟರ್ ಪ್ಯಾಕ್‌ನ ಅಖಿಲ ಭಾರತ ಸರಾಸರಿ ದೇಶೀಯ ಚಿಲ್ಲರೆ ಮಾರಾಟವು 138 ರಿಂದ ರೂ. 121ಕ್ಕೆ ಇಳಿಕೆ ಆಗಿದೆ. ಕೇಂದ್ರ ಸರ್ಕಾರವು ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕಡಿಮೆಗೊಳಿಸಿದ ಪರಿಣಾಮವಾಗಿ ತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಡಿತಗೊಳಿಸಲಾದ ಸುಂಕದ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ಏಕರೂಪವಾಗಿ ವರ್ಗಾಯಿಸುವುದನ್ನು ಖಚಿತಪಡಿಸಿಕೊಳ್ಳಲು ಉದ್ಯಮವನ್ನು ಸರ್ಕಾರ ಕೇಳಿಕೊಂಡಿದೆ ಎಂದು ತಿಳಿದು ಬಂದಿದೆ

Essential commodities prices under control
ಶುಭ ಸೂಚನೆ: ಮುಂದಿನ ದಿನಗಳಲ್ಲಿ ಖಾದ್ಯ ತೈಲಗಳ ಬೆಲೆ ಮತ್ತಷ್ಟು ಕುಸಿತ ಸಾಧ್ಯತೆ.

ನವದೆಹಲಿ: ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಸೆಪ್ಟೆಂಬರ್‌ನಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ವಿಶೇಷವಾಗಿ ಅದರಲ್ಲೂ ಖಾದ್ಯ ತೈಲಗಳ ಬೆಲೆ ಇಳಿಕೆಯಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. ದೇಶೀಯ ಲಭ್ಯತೆ ಹೆಚ್ಚಿಸಲು ಮತ್ತು ಅಗತ್ಯ ಆಹಾರ ವಸ್ತುಗಳ ಬೆಲೆಗಳನ್ನು ಸ್ಥಿರಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಇದು ಸಾಧ್ಯವಾಗಿದೆ ಎಂದು ಇಲಾಖೆ ತಿಳಿಸಿದೆ.

ಈ ಹಿಂದಿನ ಬೆಲೆಗಳನ್ನು ಗಮನಿಸಿದಾಗ ಅಂದರೆ ಆಗಸ್ಟ್‌ನಿಂದ ಡಿಸೆಂಬರ್‌ವರೆಗಿನ ಹಬ್ಬದ ಋತುಗಳ ಹಿಂದಿನ ಅವಧಿಯಲ್ಲಿ ಖಾದ್ಯ ತೈಲಗಳ ಬೆಲೆಗಳಲ್ಲಿ ಹೆಚ್ಚಳವಾಗಿರುವುದ ಅಂಕಿ- ಅಂಶಗಳಿಂದ ಗೊತ್ತಾಗುತ್ತದೆ. 2020 ರಲ್ಲಿ, ಖಾದ್ಯ ತೈಲಗಳ ಬೆಲೆಯಲ್ಲಿ ಶೇ 7-12ರಷ್ಟು ಹೆಚ್ಚಾಗಿತ್ತು. 2019 ರಲ್ಲಿ ಅದು ಶೇ 3-8ರ ವ್ಯಾಪ್ತಿಯಲ್ಲಿತ್ತು. ಆದಾಗ್ಯೂ ಪ್ರಸಕ್ತ ವರ್ಷದಲ್ಲಿ ಆಗಸ್ಟ್ 2022 ರಲ್ಲಿ ದೇಶೀಯ ಬೆಲೆಗಳು ಶೇ 2-9 ರಷ್ಟು ಕುಸಿತ ಕಂಡಿವೆ.

ಕಳೆದ ಎರಡು ತಿಂಗಳುಗಳಲ್ಲಿ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ 1 ಲೀಟರ್ ಪ್ಯಾಕ್‌ನ ಅಖಿಲ ಭಾರತ ಸರಾಸರಿ ದೇಶೀಯ ಚಿಲ್ಲರೆ ಮಾರಾಟವು ರೂ. 168 ರಿಂದ ರೂ. 187 ಆಸುಪಾಸಿನಲ್ಲಿದೆ. ಇನ್ನು ಸಂಸ್ಕರಿಸಿದ ಸೋಯಾಬೀನ್ 1 ಲೀಟರ್ ಪ್ಯಾಕ್‌ಗೆ ರೂ. 158 ರಿಂದ ರೂ. 150 ಕ್ಕೆ ಮಾರಾಟವಾಗುತ್ತಿದೆ.

ಆರ್‌ಬಿಡಿ ಪಾಮೊಲಿನ್ 1 ಲೀಟರ್ ಪ್ಯಾಕ್‌ನ ಅಖಿಲ ಭಾರತ ಸರಾಸರಿ ದೇಶೀಯ ಚಿಲ್ಲರೆ ಮಾರಾಟವು 138 ರಿಂದ ರೂ. 121ಕ್ಕೆ ಇಳಿಕೆ ಆಗಿದೆ. ಕೇಂದ್ರ ಸರ್ಕಾರವು ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕಡಿಮೆಗೊಳಿಸಿದ ಪರಿಣಾಮವಾಗಿ ತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಡಿತಗೊಳಿಸಲಾದ ಸುಂಕದ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ಏಕರೂಪವಾಗಿ ವರ್ಗಾಯಿಸುವುದನ್ನು ಖಚಿತಪಡಿಸಿಕೊಳ್ಳಲು ಉದ್ಯಮವನ್ನು ಸರ್ಕಾರ ಕೇಳಿಕೊಂಡಿದೆ ಎಂದು ತಿಳಿದು ಬಂದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ: ಕಳೆದ ಎರಡು ತಿಂಗಳುಗಳಲ್ಲಿ ವಿವಿಧ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಪ್ರತಿ ಟನ್‌ಗೆ USD 400-500 ರಷ್ಟು ಕುಸಿದಿವೆ. ಇದು ಚಿಲ್ಲರೆ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಮುಂಬರುವ ದಿನಗಳಲ್ಲಿ ಚಿಲ್ಲರೆ ಬೆಲೆಗಳು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಪ್ರಪಂಚದಾದ್ಯಂತದ ಹವಾಮಾನ ವೈಪರೀತ್ಯಗಳು ಸೇರಿದಂತೆ ಭೌಗೋಳಿಕ - ರಾಜಕೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ ಸರ್ಕಾರವು ಎಲ್ಲ ಪ್ರಮುಖ ಸರಕುಗಳ ಬೆಲೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯ (DoCA) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ:ಮನೆ ಸಾಲ, ಶಿಕ್ಷಣ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ: ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಸೆಪ್ಟೆಂಬರ್‌ನಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ವಿಶೇಷವಾಗಿ ಅದರಲ್ಲೂ ಖಾದ್ಯ ತೈಲಗಳ ಬೆಲೆ ಇಳಿಕೆಯಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. ದೇಶೀಯ ಲಭ್ಯತೆ ಹೆಚ್ಚಿಸಲು ಮತ್ತು ಅಗತ್ಯ ಆಹಾರ ವಸ್ತುಗಳ ಬೆಲೆಗಳನ್ನು ಸ್ಥಿರಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಇದು ಸಾಧ್ಯವಾಗಿದೆ ಎಂದು ಇಲಾಖೆ ತಿಳಿಸಿದೆ.

ಈ ಹಿಂದಿನ ಬೆಲೆಗಳನ್ನು ಗಮನಿಸಿದಾಗ ಅಂದರೆ ಆಗಸ್ಟ್‌ನಿಂದ ಡಿಸೆಂಬರ್‌ವರೆಗಿನ ಹಬ್ಬದ ಋತುಗಳ ಹಿಂದಿನ ಅವಧಿಯಲ್ಲಿ ಖಾದ್ಯ ತೈಲಗಳ ಬೆಲೆಗಳಲ್ಲಿ ಹೆಚ್ಚಳವಾಗಿರುವುದ ಅಂಕಿ- ಅಂಶಗಳಿಂದ ಗೊತ್ತಾಗುತ್ತದೆ. 2020 ರಲ್ಲಿ, ಖಾದ್ಯ ತೈಲಗಳ ಬೆಲೆಯಲ್ಲಿ ಶೇ 7-12ರಷ್ಟು ಹೆಚ್ಚಾಗಿತ್ತು. 2019 ರಲ್ಲಿ ಅದು ಶೇ 3-8ರ ವ್ಯಾಪ್ತಿಯಲ್ಲಿತ್ತು. ಆದಾಗ್ಯೂ ಪ್ರಸಕ್ತ ವರ್ಷದಲ್ಲಿ ಆಗಸ್ಟ್ 2022 ರಲ್ಲಿ ದೇಶೀಯ ಬೆಲೆಗಳು ಶೇ 2-9 ರಷ್ಟು ಕುಸಿತ ಕಂಡಿವೆ.

ಕಳೆದ ಎರಡು ತಿಂಗಳುಗಳಲ್ಲಿ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ 1 ಲೀಟರ್ ಪ್ಯಾಕ್‌ನ ಅಖಿಲ ಭಾರತ ಸರಾಸರಿ ದೇಶೀಯ ಚಿಲ್ಲರೆ ಮಾರಾಟವು ರೂ. 168 ರಿಂದ ರೂ. 187 ಆಸುಪಾಸಿನಲ್ಲಿದೆ. ಇನ್ನು ಸಂಸ್ಕರಿಸಿದ ಸೋಯಾಬೀನ್ 1 ಲೀಟರ್ ಪ್ಯಾಕ್‌ಗೆ ರೂ. 158 ರಿಂದ ರೂ. 150 ಕ್ಕೆ ಮಾರಾಟವಾಗುತ್ತಿದೆ.

ಆರ್‌ಬಿಡಿ ಪಾಮೊಲಿನ್ 1 ಲೀಟರ್ ಪ್ಯಾಕ್‌ನ ಅಖಿಲ ಭಾರತ ಸರಾಸರಿ ದೇಶೀಯ ಚಿಲ್ಲರೆ ಮಾರಾಟವು 138 ರಿಂದ ರೂ. 121ಕ್ಕೆ ಇಳಿಕೆ ಆಗಿದೆ. ಕೇಂದ್ರ ಸರ್ಕಾರವು ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕಡಿಮೆಗೊಳಿಸಿದ ಪರಿಣಾಮವಾಗಿ ತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಡಿತಗೊಳಿಸಲಾದ ಸುಂಕದ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ಏಕರೂಪವಾಗಿ ವರ್ಗಾಯಿಸುವುದನ್ನು ಖಚಿತಪಡಿಸಿಕೊಳ್ಳಲು ಉದ್ಯಮವನ್ನು ಸರ್ಕಾರ ಕೇಳಿಕೊಂಡಿದೆ ಎಂದು ತಿಳಿದು ಬಂದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ: ಕಳೆದ ಎರಡು ತಿಂಗಳುಗಳಲ್ಲಿ ವಿವಿಧ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಪ್ರತಿ ಟನ್‌ಗೆ USD 400-500 ರಷ್ಟು ಕುಸಿದಿವೆ. ಇದು ಚಿಲ್ಲರೆ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಮುಂಬರುವ ದಿನಗಳಲ್ಲಿ ಚಿಲ್ಲರೆ ಬೆಲೆಗಳು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಪ್ರಪಂಚದಾದ್ಯಂತದ ಹವಾಮಾನ ವೈಪರೀತ್ಯಗಳು ಸೇರಿದಂತೆ ಭೌಗೋಳಿಕ - ರಾಜಕೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ ಸರ್ಕಾರವು ಎಲ್ಲ ಪ್ರಮುಖ ಸರಕುಗಳ ಬೆಲೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯ (DoCA) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ:ಮನೆ ಸಾಲ, ಶಿಕ್ಷಣ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.