ETV Bharat / business

ಹಣಕಾಸಿನ ತಕರಾರು ಇತ್ಯರ್ಥಕ್ಕೆ 'ಒಂದು ರಾಷ್ಟ್ರ ಒಂದು ತನಿಖಾಧಿಕಾರಿ' ಸ್ಕೀಮ್​: ಆರ್​​ಬಿಐ ಗವರ್ನರ್

author img

By

Published : Feb 5, 2021, 2:14 PM IST

ಪ್ರಸ್ತುತ ಬ್ಯಾಂಕ್​ಗಳಿಗೆ ಮೂರು ಪ್ರತ್ಯೇಕ ಒಂಬುಡ್ಸ್​ಮನ್​ಗಳಿವೆ. ಬ್ಯಾಂಕಿಂಗ್​, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಮತ್ತು ಬ್ಯಾಂಕೇತರ ಪ್ರಿಪೇಯ್ಡ್ ಪಾವತಿ ನೀಡುವವರು (ಪಿಪಿಐ). ಇವುಗಳನ್ನು ದೇಶಾದ್ಯಂತ ಇರುವ 22 ಒಂಬುಡ್ಸ್​ಮನ್ ಕಚೇರಿಗಳಿಂದ ಆರ್‌ಬಿಐ ನಿರ್ವಹಿಸುತ್ತದೆ.

ombudsman
ombudsman

ಮುಂಬೈ: ಗ್ರಾಹಕರ ಕುಂದು ಕೊರತೆಗಳ ಪರಿಹಾರವಾಗಿ ಈಗಿರುವ ಮೂರು ಯೋಜನೆಗಳನ್ನು 'ಒಂದು ರಾಷ್ಟ್ರ ಒಂದು ಓಂಬುಡ್ಸ್​​ಮನ್' ಅಡಿ ಸಂಯೋಜಿಸುವುದಾಗಿ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಬ್ಯಾಂಕಿಂಗ್, ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ಡಿಜಿಟಲ್ ವಹಿವಾಟುಗಳಲ್ಲಿ ಗ್ರಾಹಕರ ಕುಂದು ಕೊರತೆ ಪರಿಹಾರಕ್ಕಾಗಿ ಪ್ರತ್ಯೇಕವಾದ ಒಂಬುಡ್ಸ್​​ಮನ್ ಯೋಜನೆಗಳಿವೆ.

ಪ್ರಸ್ತುತ ಬ್ಯಾಂಕ್​ಗಳಿಗೆ ಮೂರು ಪ್ರತ್ಯೇಕ ಒಂಬುಡ್ಸ್​ಮನ್​ಗಳಿವೆ. ಬ್ಯಾಂಕಿಂಗ್​, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಮತ್ತು ಬ್ಯಾಂಕೇತರ ಪ್ರಿಪೇಯ್ಡ್ ಪಾವತಿ ನೀಡುವವರು (ಪಿಪಿಐ). ಇವುಗಳನ್ನು ದೇಶಾದ್ಯಂತ ಇರುವ 22 ಒಂಬುಡ್ಸ್​ಮನ್ ಕಚೇರಿಗಳಿಂದ ಆರ್‌ಬಿಐ ನಿರ್ವಹಿಸುತ್ತದೆ.

ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನದ ನಿಯಂತ್ರಿತ ಘಟಕಗಳ ಗ್ರಾಹಕರಿಗೆ ಸರಳ ಮತ್ತು ಹೆಚ್ಚು ಸ್ಪಂದಿಸುವಂತೆ ಮಾಡಲು, ಮೂರು ಒಂಬುಡ್ಸ್​ಮನ್ ಯೋಜನೆಗಳ ಏಕೀಕರಣ ಮತ್ತು ಕುಂದುಕೊರತೆ ಪರಿಹಾರಕ್ಕಾಗಿ 'ಒನ್ ನೇಷನ್ ಒನ್ ಒಂಬುಡ್ಸ್​​ಮನ್' (ಒಂದು ರಾಷ್ಟ್ರ ಒಂದು ತನಿಖೆ) ವಿಧಾನ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಆರ್​​ಬಿಐ ಗವರ್ನರ್​ ಶಕ್ತಿಕಾಂತ ದಾಸ್ ಹೇಳಿದರು.

ಬ್ಯಾಂಕ್​ಗಳು, ಎನ್‌ಬಿಎಫ್‌ಸಿಗಳು ಮತ್ತು ಪ್ರಿಪೇಯ್ಡ್ ಪಾವತಿ ಉಪಕರಣಗಳ ಬ್ಯಾಂಕೇತರ ಗ್ರಾಹಕರು ತಮ್ಮ ದೂರುಗಳನ್ನು ಸಮಗ್ರ ಯೋಜನೆಯಡಿ ನೋಂದಾಯಿಸಲು ಅನುವು ಮಾಡಿಕೊಡುವ ಮೂಲಕ ಕುಂದು ಕೊರತೆಗಳನ್ನು ಪರಿಹರಿಸುವ ಪ್ರಕ್ರಿಯೆ ಸುಲಭಗೊಳಿಸಲು ಈ ಕ್ರಮವು ಉದ್ದೇಶಿಸಿದೆ ಎಂದು ಹೇಳಿದರು.

ಇದನ್ನೂ ಓದಿ: ಸತತ ನಾಲ್ಕನೇ ಬಾರಿಯೂ RBI ಬ್ಯಾಂಕ್​ ಬಡ್ಡಿದರ ಸ್ಥಿರ: ಕಾರಣವೇನು ಗೊತ್ತೇ?

2021ರ ಜೂನ್​ನಲ್ಲಿ ಇ - ಇಂಟಿಗ್ರೇಟೆಡ್ ಒಂಬುಡ್ಸ್​​ಮನ್ ಯೋಜನೆ ರೂಪಿಸಲು ಆರ್‌ಬಿಐ ಗುರಿ ಹೊಂದಿದೆ. ಹಣಕಾಸು ಗ್ರಾಹಕ ಸಂರಕ್ಷಣೆಯು ನ್ಯಾಯವ್ಯಾಪ್ತಿಯಲ್ಲಿ ಗಮನಾರ್ಹ ನೀತಿ ಆದ್ಯತೆ ಪಡೆದುಕೊಂಡಿದೆ. ಆರ್‌ಬಿಐ ಕೂಡ ಅದೇ ರೀತಿಯ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ದಾಸ್ ತಿಳಿಸಿದರು.

ಗ್ರಾಹಕ ಸಂರಕ್ಷಣೆ ಕುರಿತ ಜಾಗತಿಕ ಉಪಕ್ರಮಗಳಿಗೆ ಅನುಗುಣವಾಗಿ ನಿಯಂತ್ರಿತ ಘಟಕಗಳ ಕುಂದುಕೊರತೆ ಪರಿಹಾರ ಕಾರ್ಯವಿಧಾನ ಬಲಪಡಿಸಲು ಆರ್‌ಬಿಐ ವಿವಿಧ ಕ್ರಮಗಳ ಮೊರೆಹೋಗಿದೆ ಎಂದರು.

ಗ್ರಾಹಕರ ದೂರುಗಳ ಪರ್ಯಾಯ ವಿವಾದ ಇತ್ಯಾರ್ಥಕ್ಕಾಗಿ ಆರ್‌ಬಿಐ ದೂರು ನಿರ್ವಹಣಾ ವ್ಯವಸ್ಥೆ (ಸಿಎಂಎಸ್) ಪೋರ್ಟಲ್​ನಲ್ಲಿ ಕಲ್ಪಿಸಲಾಗುತ್ತದೆ.

ಮುಂಬೈ: ಗ್ರಾಹಕರ ಕುಂದು ಕೊರತೆಗಳ ಪರಿಹಾರವಾಗಿ ಈಗಿರುವ ಮೂರು ಯೋಜನೆಗಳನ್ನು 'ಒಂದು ರಾಷ್ಟ್ರ ಒಂದು ಓಂಬುಡ್ಸ್​​ಮನ್' ಅಡಿ ಸಂಯೋಜಿಸುವುದಾಗಿ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಬ್ಯಾಂಕಿಂಗ್, ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ಡಿಜಿಟಲ್ ವಹಿವಾಟುಗಳಲ್ಲಿ ಗ್ರಾಹಕರ ಕುಂದು ಕೊರತೆ ಪರಿಹಾರಕ್ಕಾಗಿ ಪ್ರತ್ಯೇಕವಾದ ಒಂಬುಡ್ಸ್​​ಮನ್ ಯೋಜನೆಗಳಿವೆ.

ಪ್ರಸ್ತುತ ಬ್ಯಾಂಕ್​ಗಳಿಗೆ ಮೂರು ಪ್ರತ್ಯೇಕ ಒಂಬುಡ್ಸ್​ಮನ್​ಗಳಿವೆ. ಬ್ಯಾಂಕಿಂಗ್​, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಮತ್ತು ಬ್ಯಾಂಕೇತರ ಪ್ರಿಪೇಯ್ಡ್ ಪಾವತಿ ನೀಡುವವರು (ಪಿಪಿಐ). ಇವುಗಳನ್ನು ದೇಶಾದ್ಯಂತ ಇರುವ 22 ಒಂಬುಡ್ಸ್​ಮನ್ ಕಚೇರಿಗಳಿಂದ ಆರ್‌ಬಿಐ ನಿರ್ವಹಿಸುತ್ತದೆ.

ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನದ ನಿಯಂತ್ರಿತ ಘಟಕಗಳ ಗ್ರಾಹಕರಿಗೆ ಸರಳ ಮತ್ತು ಹೆಚ್ಚು ಸ್ಪಂದಿಸುವಂತೆ ಮಾಡಲು, ಮೂರು ಒಂಬುಡ್ಸ್​ಮನ್ ಯೋಜನೆಗಳ ಏಕೀಕರಣ ಮತ್ತು ಕುಂದುಕೊರತೆ ಪರಿಹಾರಕ್ಕಾಗಿ 'ಒನ್ ನೇಷನ್ ಒನ್ ಒಂಬುಡ್ಸ್​​ಮನ್' (ಒಂದು ರಾಷ್ಟ್ರ ಒಂದು ತನಿಖೆ) ವಿಧಾನ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಆರ್​​ಬಿಐ ಗವರ್ನರ್​ ಶಕ್ತಿಕಾಂತ ದಾಸ್ ಹೇಳಿದರು.

ಬ್ಯಾಂಕ್​ಗಳು, ಎನ್‌ಬಿಎಫ್‌ಸಿಗಳು ಮತ್ತು ಪ್ರಿಪೇಯ್ಡ್ ಪಾವತಿ ಉಪಕರಣಗಳ ಬ್ಯಾಂಕೇತರ ಗ್ರಾಹಕರು ತಮ್ಮ ದೂರುಗಳನ್ನು ಸಮಗ್ರ ಯೋಜನೆಯಡಿ ನೋಂದಾಯಿಸಲು ಅನುವು ಮಾಡಿಕೊಡುವ ಮೂಲಕ ಕುಂದು ಕೊರತೆಗಳನ್ನು ಪರಿಹರಿಸುವ ಪ್ರಕ್ರಿಯೆ ಸುಲಭಗೊಳಿಸಲು ಈ ಕ್ರಮವು ಉದ್ದೇಶಿಸಿದೆ ಎಂದು ಹೇಳಿದರು.

ಇದನ್ನೂ ಓದಿ: ಸತತ ನಾಲ್ಕನೇ ಬಾರಿಯೂ RBI ಬ್ಯಾಂಕ್​ ಬಡ್ಡಿದರ ಸ್ಥಿರ: ಕಾರಣವೇನು ಗೊತ್ತೇ?

2021ರ ಜೂನ್​ನಲ್ಲಿ ಇ - ಇಂಟಿಗ್ರೇಟೆಡ್ ಒಂಬುಡ್ಸ್​​ಮನ್ ಯೋಜನೆ ರೂಪಿಸಲು ಆರ್‌ಬಿಐ ಗುರಿ ಹೊಂದಿದೆ. ಹಣಕಾಸು ಗ್ರಾಹಕ ಸಂರಕ್ಷಣೆಯು ನ್ಯಾಯವ್ಯಾಪ್ತಿಯಲ್ಲಿ ಗಮನಾರ್ಹ ನೀತಿ ಆದ್ಯತೆ ಪಡೆದುಕೊಂಡಿದೆ. ಆರ್‌ಬಿಐ ಕೂಡ ಅದೇ ರೀತಿಯ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ದಾಸ್ ತಿಳಿಸಿದರು.

ಗ್ರಾಹಕ ಸಂರಕ್ಷಣೆ ಕುರಿತ ಜಾಗತಿಕ ಉಪಕ್ರಮಗಳಿಗೆ ಅನುಗುಣವಾಗಿ ನಿಯಂತ್ರಿತ ಘಟಕಗಳ ಕುಂದುಕೊರತೆ ಪರಿಹಾರ ಕಾರ್ಯವಿಧಾನ ಬಲಪಡಿಸಲು ಆರ್‌ಬಿಐ ವಿವಿಧ ಕ್ರಮಗಳ ಮೊರೆಹೋಗಿದೆ ಎಂದರು.

ಗ್ರಾಹಕರ ದೂರುಗಳ ಪರ್ಯಾಯ ವಿವಾದ ಇತ್ಯಾರ್ಥಕ್ಕಾಗಿ ಆರ್‌ಬಿಐ ದೂರು ನಿರ್ವಹಣಾ ವ್ಯವಸ್ಥೆ (ಸಿಎಂಎಸ್) ಪೋರ್ಟಲ್​ನಲ್ಲಿ ಕಲ್ಪಿಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.