ETV Bharat / business

ವಿವಾದ್​ ಸೆ ವಿಶ್ವಾಸ್​: ತೆರಿಗೆ ಪಾವತಿ ಘೋಷಣೆ ಗಡುವು ಮತ್ತೆ 3 ತಿಂಗಳು ಮುಂದೂಡಿಕೆ!

ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚುವರಿ ಮೊತ್ತ ಪಾವತಿಸದೆ, ಘೋಷಣೆಯ ಕೊನೆಯ ದಿನಾಂಕವನ್ನು ಮಾರ್ಚ್ 31ರಿಂದ ಜೂನ್ ಅಂತ್ಯದವರೆಗೆ ಸರ್ಕಾರ ವಿಸ್ತರಿಸಿತು. ದಿನಾಂಕವನ್ನು ಮತ್ತೆ ಡಿಸೆಂಬರ್ ಅಂತ್ಯಕ್ಕೆ ವಿಸ್ತರಿಸಲಾಯಿತು. ಅದನ್ನು ಈಗ ಮೂರು ತಿಂಗಳವರೆಗೆ 2021ರ ಮಾರ್ಚ್ 31ಕ್ಕೆ ವಿಸ್ತರಿಸಲಾಗಿದೆ.

author img

By

Published : Oct 28, 2020, 4:01 PM IST

Vivad Se Vishwas
ವಿವಾದ್​ ಸೆ ವಿಶ್ವಾಸ್

ನವದೆಹಲಿ: ಮುಂದಿನ ವರ್ಷ ಡಿಸೆಂಬರ್‌ನಿಂದ ಮಾರ್ಚ್ ಅಂತ್ಯದವರೆಗೆ ಹೆಚ್ಚುವರಿ ಮೊತ್ತವನ್ನು ಮೂರು ತಿಂಗಳು ಪಾವತಿಸದೆ 'ವಿವಾದ್​​ ಸೆ ವಿಶ್ವಾಸ್​' ನೇರ ತೆರಿಗೆ ವ್ಯಾಜ್ಯ ಪರಿಹಾರ ಯೋಜನೆಯಡಿ ಪಾವತಿಗೆ ಹಣಕಾಸು ಸಚಿವಾಲಯ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.

ನೇರ ತೆರಿಗೆ ವಿವಾದದ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ 'ವಿವಾದ್ ಸೆ ವಿಶ್ವಾಸ್​ ಮಸೂದೆ-2020' ಅನ್ನು ಜಾರಿಗೆ ತರಲಾಯಿತು.

ಈ ಯೋಜನೆಯಡಿ ಡಿಸೆಂಬರ್ 31 ಅನ್ನು ಘೋಷಿತ ಕೊನೆಯ ದಿನಾಂಕ ಎಂದು ಸರ್ಕಾರ ಸೂಚಿಸಿದೆ. ತೆರಿಗೆ ಪಾವತಿದಾರನು ಈ ಗಡುವಿನ ತನಕ ತೆರಿಗೆದಾರರು ತಮ್ಮ ಪಾವತಿಯನ್ನು ಘೋಷಣೆ ಮಾಡಬೇಕಾಗಿರುತ್ತದೆ. ಈ ಘೋಷಣೆಗೆ ಸಂಬಂಧಿಸಿದಂತೆ ಹೆಚ್ಚುವರಿ ಮೊತ್ತವಿಲ್ಲದೆ ತೆರಿಗೆದಾರನಿಗೆ 2020ರ ಮಾರ್ಚ್ 31ರವರೆಗೆ ಸಮಯ ನೀಡಲಾಗಿದೆ.

ವಿವಿಧ ವೇದಿಕೆಗಳಲ್ಲಿ ತೆರಿಗೆ ವಿವಾದಗಳ ದಾವೆ ಮತ್ತು ಬಾಕಿ ವಿಚಾರಣೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವರ್ಷದ ಬಜೆಟ್‌ನಲ್ಲಿ ಮಾರ್ಚ್ 31ರಂದು ಘೋಷಣೆ ಮಾಡುವ ಕೊನೆಯ ದಿನಾಂಕವೆಂದು ಘೋಷಿಸಿದ್ದರು.

ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚುವರಿ ಮೊತ್ತ ಪಾವತಿಸದೆ, ರಿಟರ್ನ್ಸ್ಸ್​ನ ಕೊನೆಯ ದಿನಾಂಕವನ್ನು ಮಾರ್ಚ್ 31ರಿಂದ ಜೂನ್ ಅಂತ್ಯದವರೆಗೆ ಸರ್ಕಾರ ವಿಸ್ತರಿಸಿತು. ದಿನಾಂಕವನ್ನು ಮತ್ತೆ ಡಿಸೆಂಬರ್ ಅಂತ್ಯಕ್ಕೆ ವಿಸ್ತರಿಸಲಾಯಿತು. ಅದನ್ನು ಈಗ ಮೂರು ತಿಂಗಳವರೆಗೆ 2021ರ ಮಾರ್ಚ್ 31ವರೆಗೆ ವಿಸ್ತರಿಸಲಾಗಿದೆ.

ನವದೆಹಲಿ: ಮುಂದಿನ ವರ್ಷ ಡಿಸೆಂಬರ್‌ನಿಂದ ಮಾರ್ಚ್ ಅಂತ್ಯದವರೆಗೆ ಹೆಚ್ಚುವರಿ ಮೊತ್ತವನ್ನು ಮೂರು ತಿಂಗಳು ಪಾವತಿಸದೆ 'ವಿವಾದ್​​ ಸೆ ವಿಶ್ವಾಸ್​' ನೇರ ತೆರಿಗೆ ವ್ಯಾಜ್ಯ ಪರಿಹಾರ ಯೋಜನೆಯಡಿ ಪಾವತಿಗೆ ಹಣಕಾಸು ಸಚಿವಾಲಯ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.

ನೇರ ತೆರಿಗೆ ವಿವಾದದ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ 'ವಿವಾದ್ ಸೆ ವಿಶ್ವಾಸ್​ ಮಸೂದೆ-2020' ಅನ್ನು ಜಾರಿಗೆ ತರಲಾಯಿತು.

ಈ ಯೋಜನೆಯಡಿ ಡಿಸೆಂಬರ್ 31 ಅನ್ನು ಘೋಷಿತ ಕೊನೆಯ ದಿನಾಂಕ ಎಂದು ಸರ್ಕಾರ ಸೂಚಿಸಿದೆ. ತೆರಿಗೆ ಪಾವತಿದಾರನು ಈ ಗಡುವಿನ ತನಕ ತೆರಿಗೆದಾರರು ತಮ್ಮ ಪಾವತಿಯನ್ನು ಘೋಷಣೆ ಮಾಡಬೇಕಾಗಿರುತ್ತದೆ. ಈ ಘೋಷಣೆಗೆ ಸಂಬಂಧಿಸಿದಂತೆ ಹೆಚ್ಚುವರಿ ಮೊತ್ತವಿಲ್ಲದೆ ತೆರಿಗೆದಾರನಿಗೆ 2020ರ ಮಾರ್ಚ್ 31ರವರೆಗೆ ಸಮಯ ನೀಡಲಾಗಿದೆ.

ವಿವಿಧ ವೇದಿಕೆಗಳಲ್ಲಿ ತೆರಿಗೆ ವಿವಾದಗಳ ದಾವೆ ಮತ್ತು ಬಾಕಿ ವಿಚಾರಣೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವರ್ಷದ ಬಜೆಟ್‌ನಲ್ಲಿ ಮಾರ್ಚ್ 31ರಂದು ಘೋಷಣೆ ಮಾಡುವ ಕೊನೆಯ ದಿನಾಂಕವೆಂದು ಘೋಷಿಸಿದ್ದರು.

ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚುವರಿ ಮೊತ್ತ ಪಾವತಿಸದೆ, ರಿಟರ್ನ್ಸ್ಸ್​ನ ಕೊನೆಯ ದಿನಾಂಕವನ್ನು ಮಾರ್ಚ್ 31ರಿಂದ ಜೂನ್ ಅಂತ್ಯದವರೆಗೆ ಸರ್ಕಾರ ವಿಸ್ತರಿಸಿತು. ದಿನಾಂಕವನ್ನು ಮತ್ತೆ ಡಿಸೆಂಬರ್ ಅಂತ್ಯಕ್ಕೆ ವಿಸ್ತರಿಸಲಾಯಿತು. ಅದನ್ನು ಈಗ ಮೂರು ತಿಂಗಳವರೆಗೆ 2021ರ ಮಾರ್ಚ್ 31ವರೆಗೆ ವಿಸ್ತರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.