ETV Bharat / business

ಕರ್ನಾಟಕದ ರಾಗಿ ಬೆಳೆಗೆ ಜಾಗತಿಕ ಬ್ರ್ಯಾಂಡಿಂಗ್​: ನಿರ್ಮಲಾ ಸೀತಾರಾಮನ್​ ಪ್ರತಿಜ್ಞೆ

ಕೃಷಿ ಉತ್ಪನ್ನಗಳ ಸಾಗಣೆಗೆ 10,00 ಕೋಟಿ ರೂ. ಮೀಸಲು. ಕರ್ನಾಟಕದ ರಾಗಿ, ತಮಿಳುನಾಡಿನ ಅರಶಿಣ, ಕಾಶ್ಮೀರದ ಕೇಸರಿ ಸೇರಿದಂತೆ ಎಲ್ಲ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಣೆ. ಕೃಷಿ ಉತ್ಪನ್ನಗಳ ಬ್ರ್ಯಾಂಡಿಂಗ್ ಜೊತೆಗೆ ಮಾರ್ಕೆಟಿಂಗ್ ಸಹ ಮಾಡುತ್ತೇವೆ. ಕರ್ನಾಟಕದಲ್ಲಿ ವ್ಯಾಪಕವಾಗಿ ಬೆಳೆಯುವ ರಾಗಿ ಬೆಳೆಗೆ ಜಾಗತಿಕ ಬ್ರ್ಯಾಂಡಿಂಗ್ ಆಗಿ ರೂಪುಗೊಳಿಸುತ್ತೇವೆ ಎಂದು ಹೇಳಿದರು.

author img

By

Published : May 15, 2020, 4:30 PM IST

Updated : May 15, 2020, 5:55 PM IST

Nirmala Sitharaman
ರಾಗಿ ಬೆಳೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ 4 ಗಂಟೆಗೆ 2ನೇ ಹಂತದ ಆರ್ಥಿಕ ಪ್ಯಾಕೇಜ್​ ಹಂಚಿಕೆಯ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಕೊರೊನಾ ವೈರಸ್ ಮತ್ತು ಲಾಕ್​ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಎಂಎಸ್​ಎಂಇ, ತೆರಿಗೆದಾರರು, ರಿಯಲ್​ ಎಸ್ಟೇಟ್​, ವೇತನದಾರರು, ರೈತರು, ವಲಸೆ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ನಿನ್ನೆ ನಿರ್ಮಲಾ ಸೀತಾರಾಮನ್ ಪರಿಹಾರ ಪ್ಯಾಕೇಜ್‌ ಅನ್ನು ಪ್ರಕಟಿಸಿದ್ದರು. ಇಂದು ಕೂಡ ಹಲವು ಪ್ರಮುಖ ಯೋಜನೆಗಳನ್ನು, ಅನುದಾನಗಳನ್ನು ಪ್ರಕಟಿಸಿದ್ದಾರೆ.

ಆಪರೇಷನ್ ಗ್ರೀನ್ ಹೆಚ್ಚುವರಿ 500 ಕೋಟಿ ರೂ. ಮೀಸಲಿಡಲಾಗಿದೆ. ಸರಬರಾಜು ಸರಪಳಿಗಳು ಅಸ್ತವ್ಯಸ್ತಗೊಂಡಿದ್ದು, ರೈತರಿಗೆ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಟೊಮೇಟೊ, ಈರುಳ್ಳಿ ಮತ್ತು ಆಲೂಗಡ್ಡೆ, ಎಲ್ಲ ಹಣ್ಣು ಮತ್ತು ತರಕಾರಿಗಳಿಗೆ ಆಪರೇಷನ್ ಗ್ರೀನ್ ವಿಸ್ತರಿಸಲಾಗುವುದು. ಮಾರುಕಟ್ಟೆಗಳಿಗೆ ಸಾಗಿಸಲು ಶೇ 50ರಷ್ಟು ಸಬ್ಸಿಡಿ. ಶೇಖರಣೆಗೆ ಶೇ 50ರಷ್ಟು ಸಹಾಯಧನ ನೀಡಲಾಗುವುದು ಎಂದರು.

ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು. ಕಾಲು ಮತ್ತು ಬಾಯಿ ಕಾಯಿಲೆಗಾಗಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ 13,343 ಕೋಟಿ ರೂ. ಮೀಸಲು. ಜಾನುವಾರು, ಎಮ್ಮೆ, ಕುರಿ, ಮೇಕೆ ಮತ್ತು ಹಂದಿ ಜನಸಂಖ್ಯೆಗೆ ಶೇ 100 ರಷ್ಟು ವ್ಯಾಕ್ಸಿನೇಷನ್ ನೀಡಲು 53 ಕೋಟಿ ರೂ. ನೀಡಲಾಗುವುದು. ಇಲ್ಲಿಯವರೆಗೆ 1.5 ಕೋಟಿ ಹಸು ಮತ್ತು ಎಮ್ಮೆಗಳನ್ನು ಟ್ಯಾಗ್ ಮಾಡಲಾಗಿದೆ ಎಂದರು.

15,000 ಕೋಟಿ ರೂ. ಮೌಲ್ಯದ ಪಶುಸಂಗೋಪನಾ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಲಾಗುವುದು. ಡೈರಿ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಜಾನುವಾರು ಆಹಾರ ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಯನ್ನು ಬೆಂಬಲಿಸುವ ಗುರಿ ಇರಿಸಿಕೊಳ್ಳಲಾಗಿದೆ. ಸ್ಥಾಪಿತ ಉತ್ಪನ್ನಗಳ ರಫ್ತುಗಾಗಿ ಸಸ್ಯಗಳನ್ನು ಸ್ಥಾಪಿಸಲು ಪ್ರೋತ್ಸಾಹ ಧನ ನೀಡಲಾಗುವುದು ಎಂದರು.

ಆಯುರ್ವೇದ ಉತ್ಪನ್ನಗಳ ಸಾಗಣೆಗೆ ಹಣ ಮೀಸಲು. ಕೃಷಿ ಉತ್ಪನ್ನಗಳ ಸಾಗಾಟಕ್ಕೆ 1,000 ಕೋಟಿ ರೂ. ಮೀಸಲು. ಕರ್ನಾಟಕದ ರಾಗಿ, ತಮಿಳುನಾಡಿನ ಅರಶಿಣ, ಕಾಶ್ಮೀರದ ಕೇಸರಿ ಸೇರಿದಂತೆ ಎಲ್ಲ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಣೆ. ಕೃಷಿ ಉತ್ಪನ್ನಗಳ ಬ್ರ್ಯಾಂಡಿಂಗ್ ಜೊತೆಗೆ ಮಾರ್ಕೆಟಿಂಗ್ ಸಹ ಮಾಡುತ್ತೇವೆ. ಕರ್ನಾಟಕದಲ್ಲಿ ವ್ಯಾಪಕವಾಗಿ ಬೆಳೆಯುವ ರಾಗಿ ಬೆಳೆಗೆ ಜಾಗತಿಕ ಬ್ರ್ಯಾಂಡಿಂಗ್ ಆಗಿ ರೂಪುಗೊಳಿಸುತ್ತೇವೆ ಎಂದು ಹೇಳಿದರು.

ಮೀನುಗಾರರಿಗೆ ಹೊಸ ಬೋಟ್ ಖರೀದಿಗೆ ನೆರವು. ಮತ್ಸ್ಯ ಸಂಪತ್ತ ಯೋಜನೆಗೆ 20,000 ಕೋಟಿ ರೂ. ಮೀಸಲು. ಸಣ್ಣ ಆಹಾರ ಉದ್ಯಮಕ್ಕೆ 10,000 ಕೋಟಿ ರೂ. ನೀಡಲಾಗುವುದು. ಮೀನುಗಾರಿಕೆ ಮೌಲ್ಯ ಸರಪಳಿಯಲ್ಲಿನ ನಿರ್ಣಾಯಕ ಅಂತರ ತುಂಬಬೇಕು. ಸಮುದ್ರ ಮೀನುಗಾರಿಕೆಯ ಸಮಗ್ರ, ಸುಸ್ಥಿರ, ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ಪ್ರಧಾನ್ ಮಂತ್ರಿ ಮತ್ಸ್ಯ ಸಂಪದ ಯೋಜನೆ ಆರಂಭಿಸಲಿದೆ. ಸಾಗರ, ಒಳನಾಡು ಮೀನುಗಾರಿಕೆ ಮತ್ತು ಜಲಚರ ಸಾಕಣೆ ಚಟುವಟಿಕೆಗಳಿಗೆ 11,000 ಕೋಟಿ ರೂ., ಮೂಲಸೌಕರ್ಯ ಅಭಿವೃದ್ಧಿಗೆ 9,000 ಕೋಟಿ ರೂ., 5 ವರ್ಷಗಳಲ್ಲಿ 70 ಲಕ್ಷ ಟನ್ ಹೆಚ್ಚುವರಿ ಮೀನು ಉತ್ಪಾದನೆಗೆ ಕಾರಣವಾಗಲಿದೆ. 55 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ.

ದೇಶದ ಬಹುತೇಕ ಜನರು ಬೇಸಾಯವನ್ನು ಅವಲಂಬಿಸಿದ್ದಾರೆ. ಏನೇ ಸಂಕಷ್ಟ ಇದ್ದರೂ ಕೃಷಿ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಿವೆ. ಜಾಗತಿಕ ಹಾಲು, ಹತ್ತಿ, ಬೇಳೆ ಉತ್ಪಾದನೆಯಲ್ಲಿ ನಾವೇ ಪ್ರಥಮ ಸ್ಥಾನದಲ್ಲಿದ್ದೇವೆ. ಬಹುತೇಕ ಎಲ್ಲ ರಾಜ್ಯಗಳಲ್ಲಿ ಹಿಂಗಾರು ಬೆಳೆ ಕಟಾವು ಮುಗಿದಿದೆ ಎಂದರು.

ಕೃಷಿಗೆ ಸಂಬಂಧಿಸಿದ 11 ಅಂಶಗಳನ್ನು ಇಂದು ಮಾಡುತ್ತಿದ್ದೇನೆ. ಕೃಷಿಯಲ್ಲಿ ಆಡಳಿತಾತ್ಮಕ ಸುಧಾರಣೆ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದರು.

2 ತಿಂಗಳಲ್ಲಿ ಬೆಂಬಲ ಬೆಲೆಯಲ್ಲಿ 74,300 ಕೋಟಿ ರೂ.ನಷ್ಟು ಕೃಷಿ ಉತ್ಪನ್ನಗಳ ಖರೀದಿ. 500 ಲಕ್ಷ ಲೀಟರ್ ಹಾಲನ್ನು ಹೈನುಗಾರರಿಂದ ಖರೀದಿ. ಕಿಸಾನ್ ಸಮ್ಮಾನ್​ ಯೋಜನೆಯಲ್ಲಿ ರೈತರಿಗೆ 18,700 ಕೋಟಿ ರೂ. ವರ್ಗಾವಣೆ. ಕೃಷಿ ಮೂಲ ಸೌಕರ್ಯಕ್ಕೆ 1 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಪ್ರಚೋದಕ ಪ್ಯಾಕೇಜ್​​ಗಳು ಹಣಕಾಸಿನ ಕೊರತೆಯ ಮೇಲೆ ಶೇ 0.6ರಷ್ಟು ಅಥವಾ 1.29 ಲಕ್ಷ ಕೋಟಿ ರೂ. ಋಣಾತ್ಮಕ ಪರಿಣಾಮ ಬೀರುತ್ತವೆ ಎಂದು ಎಸ್‌ಬಿಐ ವರದಿ ತಿಳಿಸಿದೆ.

ಕೋವಿಡ್-19ನಿಂದ ಉಂಟಾದ ಸಂಕಷ್ಟಕ್ಕೆ ಪರಿಹಾರವಾಗಿ ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ 4 ಗಂಟೆಗೆ 2ನೇ ಹಂತದ ಆರ್ಥಿಕ ಪ್ಯಾಕೇಜ್​ ಹಂಚಿಕೆಯ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಕೊರೊನಾ ವೈರಸ್ ಮತ್ತು ಲಾಕ್​ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಎಂಎಸ್​ಎಂಇ, ತೆರಿಗೆದಾರರು, ರಿಯಲ್​ ಎಸ್ಟೇಟ್​, ವೇತನದಾರರು, ರೈತರು, ವಲಸೆ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ನಿನ್ನೆ ನಿರ್ಮಲಾ ಸೀತಾರಾಮನ್ ಪರಿಹಾರ ಪ್ಯಾಕೇಜ್‌ ಅನ್ನು ಪ್ರಕಟಿಸಿದ್ದರು. ಇಂದು ಕೂಡ ಹಲವು ಪ್ರಮುಖ ಯೋಜನೆಗಳನ್ನು, ಅನುದಾನಗಳನ್ನು ಪ್ರಕಟಿಸಿದ್ದಾರೆ.

ಆಪರೇಷನ್ ಗ್ರೀನ್ ಹೆಚ್ಚುವರಿ 500 ಕೋಟಿ ರೂ. ಮೀಸಲಿಡಲಾಗಿದೆ. ಸರಬರಾಜು ಸರಪಳಿಗಳು ಅಸ್ತವ್ಯಸ್ತಗೊಂಡಿದ್ದು, ರೈತರಿಗೆ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಟೊಮೇಟೊ, ಈರುಳ್ಳಿ ಮತ್ತು ಆಲೂಗಡ್ಡೆ, ಎಲ್ಲ ಹಣ್ಣು ಮತ್ತು ತರಕಾರಿಗಳಿಗೆ ಆಪರೇಷನ್ ಗ್ರೀನ್ ವಿಸ್ತರಿಸಲಾಗುವುದು. ಮಾರುಕಟ್ಟೆಗಳಿಗೆ ಸಾಗಿಸಲು ಶೇ 50ರಷ್ಟು ಸಬ್ಸಿಡಿ. ಶೇಖರಣೆಗೆ ಶೇ 50ರಷ್ಟು ಸಹಾಯಧನ ನೀಡಲಾಗುವುದು ಎಂದರು.

ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು. ಕಾಲು ಮತ್ತು ಬಾಯಿ ಕಾಯಿಲೆಗಾಗಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ 13,343 ಕೋಟಿ ರೂ. ಮೀಸಲು. ಜಾನುವಾರು, ಎಮ್ಮೆ, ಕುರಿ, ಮೇಕೆ ಮತ್ತು ಹಂದಿ ಜನಸಂಖ್ಯೆಗೆ ಶೇ 100 ರಷ್ಟು ವ್ಯಾಕ್ಸಿನೇಷನ್ ನೀಡಲು 53 ಕೋಟಿ ರೂ. ನೀಡಲಾಗುವುದು. ಇಲ್ಲಿಯವರೆಗೆ 1.5 ಕೋಟಿ ಹಸು ಮತ್ತು ಎಮ್ಮೆಗಳನ್ನು ಟ್ಯಾಗ್ ಮಾಡಲಾಗಿದೆ ಎಂದರು.

15,000 ಕೋಟಿ ರೂ. ಮೌಲ್ಯದ ಪಶುಸಂಗೋಪನಾ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಲಾಗುವುದು. ಡೈರಿ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಜಾನುವಾರು ಆಹಾರ ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಯನ್ನು ಬೆಂಬಲಿಸುವ ಗುರಿ ಇರಿಸಿಕೊಳ್ಳಲಾಗಿದೆ. ಸ್ಥಾಪಿತ ಉತ್ಪನ್ನಗಳ ರಫ್ತುಗಾಗಿ ಸಸ್ಯಗಳನ್ನು ಸ್ಥಾಪಿಸಲು ಪ್ರೋತ್ಸಾಹ ಧನ ನೀಡಲಾಗುವುದು ಎಂದರು.

ಆಯುರ್ವೇದ ಉತ್ಪನ್ನಗಳ ಸಾಗಣೆಗೆ ಹಣ ಮೀಸಲು. ಕೃಷಿ ಉತ್ಪನ್ನಗಳ ಸಾಗಾಟಕ್ಕೆ 1,000 ಕೋಟಿ ರೂ. ಮೀಸಲು. ಕರ್ನಾಟಕದ ರಾಗಿ, ತಮಿಳುನಾಡಿನ ಅರಶಿಣ, ಕಾಶ್ಮೀರದ ಕೇಸರಿ ಸೇರಿದಂತೆ ಎಲ್ಲ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಣೆ. ಕೃಷಿ ಉತ್ಪನ್ನಗಳ ಬ್ರ್ಯಾಂಡಿಂಗ್ ಜೊತೆಗೆ ಮಾರ್ಕೆಟಿಂಗ್ ಸಹ ಮಾಡುತ್ತೇವೆ. ಕರ್ನಾಟಕದಲ್ಲಿ ವ್ಯಾಪಕವಾಗಿ ಬೆಳೆಯುವ ರಾಗಿ ಬೆಳೆಗೆ ಜಾಗತಿಕ ಬ್ರ್ಯಾಂಡಿಂಗ್ ಆಗಿ ರೂಪುಗೊಳಿಸುತ್ತೇವೆ ಎಂದು ಹೇಳಿದರು.

ಮೀನುಗಾರರಿಗೆ ಹೊಸ ಬೋಟ್ ಖರೀದಿಗೆ ನೆರವು. ಮತ್ಸ್ಯ ಸಂಪತ್ತ ಯೋಜನೆಗೆ 20,000 ಕೋಟಿ ರೂ. ಮೀಸಲು. ಸಣ್ಣ ಆಹಾರ ಉದ್ಯಮಕ್ಕೆ 10,000 ಕೋಟಿ ರೂ. ನೀಡಲಾಗುವುದು. ಮೀನುಗಾರಿಕೆ ಮೌಲ್ಯ ಸರಪಳಿಯಲ್ಲಿನ ನಿರ್ಣಾಯಕ ಅಂತರ ತುಂಬಬೇಕು. ಸಮುದ್ರ ಮೀನುಗಾರಿಕೆಯ ಸಮಗ್ರ, ಸುಸ್ಥಿರ, ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ಪ್ರಧಾನ್ ಮಂತ್ರಿ ಮತ್ಸ್ಯ ಸಂಪದ ಯೋಜನೆ ಆರಂಭಿಸಲಿದೆ. ಸಾಗರ, ಒಳನಾಡು ಮೀನುಗಾರಿಕೆ ಮತ್ತು ಜಲಚರ ಸಾಕಣೆ ಚಟುವಟಿಕೆಗಳಿಗೆ 11,000 ಕೋಟಿ ರೂ., ಮೂಲಸೌಕರ್ಯ ಅಭಿವೃದ್ಧಿಗೆ 9,000 ಕೋಟಿ ರೂ., 5 ವರ್ಷಗಳಲ್ಲಿ 70 ಲಕ್ಷ ಟನ್ ಹೆಚ್ಚುವರಿ ಮೀನು ಉತ್ಪಾದನೆಗೆ ಕಾರಣವಾಗಲಿದೆ. 55 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ.

ದೇಶದ ಬಹುತೇಕ ಜನರು ಬೇಸಾಯವನ್ನು ಅವಲಂಬಿಸಿದ್ದಾರೆ. ಏನೇ ಸಂಕಷ್ಟ ಇದ್ದರೂ ಕೃಷಿ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಿವೆ. ಜಾಗತಿಕ ಹಾಲು, ಹತ್ತಿ, ಬೇಳೆ ಉತ್ಪಾದನೆಯಲ್ಲಿ ನಾವೇ ಪ್ರಥಮ ಸ್ಥಾನದಲ್ಲಿದ್ದೇವೆ. ಬಹುತೇಕ ಎಲ್ಲ ರಾಜ್ಯಗಳಲ್ಲಿ ಹಿಂಗಾರು ಬೆಳೆ ಕಟಾವು ಮುಗಿದಿದೆ ಎಂದರು.

ಕೃಷಿಗೆ ಸಂಬಂಧಿಸಿದ 11 ಅಂಶಗಳನ್ನು ಇಂದು ಮಾಡುತ್ತಿದ್ದೇನೆ. ಕೃಷಿಯಲ್ಲಿ ಆಡಳಿತಾತ್ಮಕ ಸುಧಾರಣೆ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದರು.

2 ತಿಂಗಳಲ್ಲಿ ಬೆಂಬಲ ಬೆಲೆಯಲ್ಲಿ 74,300 ಕೋಟಿ ರೂ.ನಷ್ಟು ಕೃಷಿ ಉತ್ಪನ್ನಗಳ ಖರೀದಿ. 500 ಲಕ್ಷ ಲೀಟರ್ ಹಾಲನ್ನು ಹೈನುಗಾರರಿಂದ ಖರೀದಿ. ಕಿಸಾನ್ ಸಮ್ಮಾನ್​ ಯೋಜನೆಯಲ್ಲಿ ರೈತರಿಗೆ 18,700 ಕೋಟಿ ರೂ. ವರ್ಗಾವಣೆ. ಕೃಷಿ ಮೂಲ ಸೌಕರ್ಯಕ್ಕೆ 1 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಪ್ರಚೋದಕ ಪ್ಯಾಕೇಜ್​​ಗಳು ಹಣಕಾಸಿನ ಕೊರತೆಯ ಮೇಲೆ ಶೇ 0.6ರಷ್ಟು ಅಥವಾ 1.29 ಲಕ್ಷ ಕೋಟಿ ರೂ. ಋಣಾತ್ಮಕ ಪರಿಣಾಮ ಬೀರುತ್ತವೆ ಎಂದು ಎಸ್‌ಬಿಐ ವರದಿ ತಿಳಿಸಿದೆ.

ಕೋವಿಡ್-19ನಿಂದ ಉಂಟಾದ ಸಂಕಷ್ಟಕ್ಕೆ ಪರಿಹಾರವಾಗಿ ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು.

Last Updated : May 15, 2020, 5:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.