ETV Bharat / business

ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್​ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ: ಕೈ ವಿರುದ್ಧ ಮೋದಿ ವಾಗ್ದಾಳಿ - ಅಸ್ಸೊಂನಲ್ಲಿ ಪಿಎಂ ಮೋದಿ

ಕೆಲವೇ ತಿಂಗಳಲ್ಲಿ ಅಸ್ಸೊಂನಲ್ಲಿ ಚುನಾವಣೆ ನಡೆಯಲಿದ್ದು, ಇದರ ಮೇಲೆ ದೃಷ್ಟಿನೆಟ್ಟ ಕೇಂದ್ರ ಬಿಜೆಪಿ ಸರ್ಕಾರ ಹಲವು ಯೋಜನೆಗಳನ್ನು ಸಾಲು-ಸಾಲಾಗಿ ಘೋಷಿಸುತ್ತಿದೆ. ಇಂದು ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

Modi
Modi
author img

By

Published : Feb 22, 2021, 5:23 PM IST

ಧೇಮಾಜಿ: ಮುಂಬರುವ ಚುನಾವಣೆಗೆ ಅಸ್ಸೊಂನತ್ತ ದೃಷ್ಟಿ ಹರಿಸಿರುವ ಬಿಜೆಪಿ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್​ ಗುರಿಯಾಗಿಸಿಕೊಂಡು, ಸ್ವಾತಂತ್ರ್ಯದ ನಂತರ ದೇಶವನ್ನು ಆಳಿದ ಕಾಂಗ್ರೆಸ್ ದಶಕಗಳ ಕಾಲ ರಾಜ್ಯ ಮತ್ತು ಈಶಾನ್ಯ ಭಾರತವನ್ನು ನಿರ್ಲಕ್ಷ್ಯ ತೋರಿದೆ ಎಂದು ಟೀಕಿಸಿದರು.

3,222 ಕೋಟಿ ರೂ. ಮೌಲ್ಯದ ಪೆಟ್ರೋಲಿಯಂ ವಲಯದ ಮೂರು ಪ್ರಮುಖ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಮೋದಿ, ಒಂದು ತಿಂಗಳಲ್ಲಿ ಅಸ್ಸೊಂಗೆ ಮೂರನೇ ಬಾರಿ ಭೇಟಿ ನೀಡಿದ್ದು, ಕಳೆದ ಕೆಲವು ವರ್ಷಗಳಿಂದ ಸರ್ಬಾನಂದ ಸೋನೊವಾಲ್ ಮತ್ತು ಕೇಂದ್ರದ ನೇತೃತ್ವದ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು.

ಇದನ್ನೂ ಓದಿ: ಮತ್ತೊಂದು ಸುತ್ತಿನ ಕೊರೊನಾ ಲಾಕ್​ಡೌನ್​ಗೆ ಬೆದರಿದ ಗೂಳಿ: 1145 ಅಂಕ ಕುಸಿದ ಸೆನ್ಸೆಕ್ಸ್​

ಸ್ವಾತಂತ್ರ್ಯದ ನಂತರ ದಶಕಗಳ ಕಾಲ ಆಳಿದವರು ಡಿಸ್ಪೂರ್ ದೆಹಲಿಯಿಂದ ತುಂಬಾ ದೂರದಲ್ಲಿದ್ದಾರೆ ಎಂದು ನಂಬಿದ್ದರು. ದಿಲ್ಲಿ ಅಬ್ ದೂರ್ ನಹಿ, ಆಪ್​ಕೆ ದರ್ವಾಜೆ ಪರ್ ಹೈ' (ದೆಹಲಿ ಈಗ ದೂರದಲ್ಲಿಲ್ಲ, ಅದು ನಿಮ್ಮ ಮನೆ ಬಾಗಿಲ ಬಳಿ ನಿಂತಿದೆ' ಎಂದು ಬೃಹತ್ ಸಮಾವೇಶ ಉದ್ದೇಶಿಸಿ ಹೇಳಿದರು.

ಹಿಂದಿನ ಸರ್ಕಾರಗಳು ಮಲತಾಯಿ ಧೋರಣೆ ತಳಿದು ಸಂಪರ್ಕ, ಆರೋಗ್ಯ, ಶಿಕ್ಷಣ ಮತ್ತು ಉದ್ಯಮವನ್ನು ನಿರ್ಲಕ್ಷಿಸಿವೆ ಎಂದು ಆರೋಪಿಸಿದರು.

ನಾನು ಈ ಮೊದಲು ರಾಜ್ಯದ ಉತ್ತರ ದಂಡೆಯಲ್ಲಿರುವ ಗೊಗಾಮುಕ್‌ಗೆ ಬಂದಿದ್ದೇನೆ. ಅಸ್ಸೊಂ ಮತ್ತು ಈಶಾನ್ಯವು ದೇಶದ ಹೊಸ ಬೆಳವಣಿಗೆಯ ಎಂಜಿನ್ ಆಗಲಿದೆ. ಈಗ ಈ ನಂಬಿಕೆಯು ಫಲ ನೀಡುತ್ತದೆ ಎಂದರು.

ಧೇಮಾಜಿ: ಮುಂಬರುವ ಚುನಾವಣೆಗೆ ಅಸ್ಸೊಂನತ್ತ ದೃಷ್ಟಿ ಹರಿಸಿರುವ ಬಿಜೆಪಿ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್​ ಗುರಿಯಾಗಿಸಿಕೊಂಡು, ಸ್ವಾತಂತ್ರ್ಯದ ನಂತರ ದೇಶವನ್ನು ಆಳಿದ ಕಾಂಗ್ರೆಸ್ ದಶಕಗಳ ಕಾಲ ರಾಜ್ಯ ಮತ್ತು ಈಶಾನ್ಯ ಭಾರತವನ್ನು ನಿರ್ಲಕ್ಷ್ಯ ತೋರಿದೆ ಎಂದು ಟೀಕಿಸಿದರು.

3,222 ಕೋಟಿ ರೂ. ಮೌಲ್ಯದ ಪೆಟ್ರೋಲಿಯಂ ವಲಯದ ಮೂರು ಪ್ರಮುಖ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಮೋದಿ, ಒಂದು ತಿಂಗಳಲ್ಲಿ ಅಸ್ಸೊಂಗೆ ಮೂರನೇ ಬಾರಿ ಭೇಟಿ ನೀಡಿದ್ದು, ಕಳೆದ ಕೆಲವು ವರ್ಷಗಳಿಂದ ಸರ್ಬಾನಂದ ಸೋನೊವಾಲ್ ಮತ್ತು ಕೇಂದ್ರದ ನೇತೃತ್ವದ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು.

ಇದನ್ನೂ ಓದಿ: ಮತ್ತೊಂದು ಸುತ್ತಿನ ಕೊರೊನಾ ಲಾಕ್​ಡೌನ್​ಗೆ ಬೆದರಿದ ಗೂಳಿ: 1145 ಅಂಕ ಕುಸಿದ ಸೆನ್ಸೆಕ್ಸ್​

ಸ್ವಾತಂತ್ರ್ಯದ ನಂತರ ದಶಕಗಳ ಕಾಲ ಆಳಿದವರು ಡಿಸ್ಪೂರ್ ದೆಹಲಿಯಿಂದ ತುಂಬಾ ದೂರದಲ್ಲಿದ್ದಾರೆ ಎಂದು ನಂಬಿದ್ದರು. ದಿಲ್ಲಿ ಅಬ್ ದೂರ್ ನಹಿ, ಆಪ್​ಕೆ ದರ್ವಾಜೆ ಪರ್ ಹೈ' (ದೆಹಲಿ ಈಗ ದೂರದಲ್ಲಿಲ್ಲ, ಅದು ನಿಮ್ಮ ಮನೆ ಬಾಗಿಲ ಬಳಿ ನಿಂತಿದೆ' ಎಂದು ಬೃಹತ್ ಸಮಾವೇಶ ಉದ್ದೇಶಿಸಿ ಹೇಳಿದರು.

ಹಿಂದಿನ ಸರ್ಕಾರಗಳು ಮಲತಾಯಿ ಧೋರಣೆ ತಳಿದು ಸಂಪರ್ಕ, ಆರೋಗ್ಯ, ಶಿಕ್ಷಣ ಮತ್ತು ಉದ್ಯಮವನ್ನು ನಿರ್ಲಕ್ಷಿಸಿವೆ ಎಂದು ಆರೋಪಿಸಿದರು.

ನಾನು ಈ ಮೊದಲು ರಾಜ್ಯದ ಉತ್ತರ ದಂಡೆಯಲ್ಲಿರುವ ಗೊಗಾಮುಕ್‌ಗೆ ಬಂದಿದ್ದೇನೆ. ಅಸ್ಸೊಂ ಮತ್ತು ಈಶಾನ್ಯವು ದೇಶದ ಹೊಸ ಬೆಳವಣಿಗೆಯ ಎಂಜಿನ್ ಆಗಲಿದೆ. ಈಗ ಈ ನಂಬಿಕೆಯು ಫಲ ನೀಡುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.