ETV Bharat / business

'ಆತ್ಮನಿರ್ಭರ' ಅಂದ್ರೆ ಏನು ಅಂತ ಅರ್ಥವಾಗಿಲ್ಲ; RBI ಮಾಜಿ ಗವರ್ನರ್

author img

By

Published : Mar 26, 2021, 12:31 PM IST

ಮುಂದಿನ ದಶಕದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ಭಾರತಕ್ಕೆ ಸರಕುಗಳನ್ನು ತಲುಪಿಸಲಿದೆಯೇ ಎಂದು ಡಿ. ಸುಬ್ಬರಾವ್ ಅವರನ್ನು ಕೇಳಿದಾಗ, ಈ ಅಭಿಯಾನದ ಮೂಲಕ ಸರ್ಕಾರವು ಏನನ್ನು ಸಾಧಿಸಲು ಬಯಸುತ್ತದೆ ಎಂಬುದರ ಮೇಲೆ ಅದು ಅವಲಂಬಿತವಾಗಿದೆ. ಅದು (ಆತ್ಮನಿರ್ಭರ) ಸ್ವಯಂಪೂರ್ಣತೆ ಎಂದಾದರೆ, ಅದು ದೊಡ್ಡದಲ್ಲ. ಇದರರ್ಥ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸ, ಅದು ಹೌದು ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಹೇಳಿದ್ದಾರೆ.

Subba Rao
Subba Rao

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಕೇಂದ್ರ ಸರ್ಕಾರ ಪ್ರಾರಂಭಿಸಿದ ಆತ್ಮನಿರ್ಭರ ಭಾರತ ಅಭಿಯಾನವು ಪರಿಕಲ್ಪನಾ ಸ್ಪಷ್ಟತೆಯನ್ನೇ ಹೊಂದಿಲ್ಲ ಎಂದು ಆರ್‌ಬಿಐ ಮಾಜಿ ಗವರ್ನರ್ ಡಿ. ಸುಬ್ಬರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೈಮ್ಸ್ ನೆಟ್‌ವರ್ಕ್ ಇಂಡಿಯಾ ಎಕನಾಮಿಕ್ ಕಾನ್​ಕ್ಲೇವ್ ಉದ್ದೇಶಿಸಿ ಮಾತನಾಡಿದ ಸುಬ್ಬರಾವ್, 'ನಾವು ಇನ್ನೂ ಆತ್ಮನಿರ್ಭರ ಏನೆಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇದು ಹಣಕಾಸಿನ ಉತ್ತೇಜನ, ಸುಧಾರಣೆಯ ಉದ್ದೇಶಗಳು ಮತ್ತು ನೀತಿ ಘೋಷಣೆಗಳ ಸಂಯೋಜನೆಯಾಗಿದೆ ಎಂದರು.

ಮುಂದಿನ ದಶಕದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ಭಾರತಕ್ಕೆ ಸರಕುಗಳನ್ನು ತಲುಪಿಸಲಿದೆಯೇ ಎಂದು ಕೇಳಿದಾಗ, ಈ ಅಭಿಯಾನದ ಮೂಲಕ ಸರ್ಕಾರವು ಏನನ್ನು ಸಾಧಿಸಲು ಬಯಸುತ್ತದೆ ಎಂಬುದರ ಮೇಲೆ ಅದು ಅವಲಂಬಿತವಾಗಿದೆ. ಅದು (ಆತ್ಮನಿರ್ಭರ) ಸ್ವಯಂಪೂರ್ಣತೆ ಎಂದಾದರೆ, ಅದು ದೊಡ್ಡದಲ್ಲ. ಇದರರ್ಥ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸ, ಅದು ಹೌದು ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಹೇಳಿದ್ದಾರೆ.

ತಮ್ಮ ಹೇಳಿಕೆಯನ್ನು ಮತ್ತಷ್ಟು ವಿವರಿಸಿದ ಸುಬ್ಬರಾವ್, ನಾವು ಸ್ವಾವಲಂಬನೆ ಅಥವಾ ಆಮದು ಪರ್ಯಾಯ ಮಾದರಿಗಳಿಗೆ ಹಿಂತಿರುಗಲು ಬಯಸುತ್ತಿಲ್ಲ. ನಾವು ನೋಡಬೇಕಾದದ್ದು ನಮ್ಮ ಸ್ವಾವಲಂಬನೆ ಮತ್ತು ಆತ್ಮ ವಿಶ್ವಾಸವನ್ನು. ಭಾರತವು ಬೆಳವಣಿಗೆ ಸಾಧಿಸಲಿದೆ ಮತ್ತು ಆರ್ಥಿಕ ಎಂಜಿನ್​ ಆಗುವಂತಹ ಆತ್ಮವಿಶ್ವಾಸ ಹೊಂದುವುದು ಒಳ್ಳೆಯದು ಎಂದರು.

ಅಧಿಕೃತ ಅಂಕಿಅಂಶಗಳ ಪ್ರಕಾರ, ಇದುವರೆಗೆ ಕೋವಿಡ್ -19 ಪರಿಹಾರ ಮತ್ತು ಹಣಕಾಸಿನ ಉತ್ತೇಜನ ಕ್ರಮಗಳಿಗಾಗಿ ಸುಮಾರು 30 ಲಕ್ಷ ಕೋಟಿ ರೂ. ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ಹಂಚಿಕೆ ಮಾಡಲಾಗಿದೆ.

ಭಾರತ ರಫ್ತುವಿನತ್ತ ಗಮನ ಹರಿಸಬೇಕು

ರಫ್ತುಗಳ ಸುಧಾರಣೆಯ ಅಗತ್ಯವನ್ನು ಒತ್ತಿಹೇಳಿದ ಸುಬ್ಬರಾವ್, ಯಾವುದೇ ಉದಯೋನ್ಮುಖ ಆರ್ಥಿಕತೆಯು ರಫ್ತು ಇಲ್ಲದೆ ಶೇ 7ರಷ್ಟು ಬೆಳವಣಿಗೆ ಹೊಂದಿಲ್ಲ. ಭಾರತವು ಶೇ 9ರಷ್ಟು ಬೆಳವಣಿಗೆಯನ್ನು ಹೊಂದಲು ಮತ್ತು ಆತ್ಮನಿರ್ಭರ ಭಾರತ ಅನ್ನು ತಲುಪಿಸಲು ನಾವು ನಮ್ಮ ರಫ್ತುಗಳನ್ನು ಹೆಚ್ಚಿಸಬೇಕಾಗಿದೆ. 2005 ರಿಂದ 2008ರ ನಡುವಿನ ಭಾರತದ ಬೆಳವಣಿಗೆಯ ಕಥೆಯು ರಫ್ತಿನ ಹಿನ್ನೆಲೆಯಲ್ಲಿ ಬಂದಿದೆ ಎಂದರು.

ಇದನ್ನೂ ಓದಿ: ಚೇತರಿಕೆಯ ಹಾದಿಯಲ್ಲಿ ಭಾರತದ ಆರ್ಥಿಕತೆ: ಆದರೂ ಸಮಸ್ಯೆ ಇದೆ ಎಂದ ಐಎಂಎಫ್​

ಭಾರತದ ರಫ್ತು ಸಾಮರ್ಥ್ಯದ ಮೇಲೆ ರಕ್ಷಣಾತ್ಮಕವಾದದ ದುಷ್ಪರಿಣಾಮದ ವಾತಾವರಣ ತೆಗೆದುಹಾಕಬೇಕಿದೆ. ಈ ಸವಾಲುಗಳ ಹೊರತಾಗಿಯೂ ಭಾರತವು ಭಾರಿ ಬೆಳವಣಿಗೆಯ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.

ಸಾಂಕ್ರಾಮಿಕ ರೋಗದಿಂದಾಗಿ ಟ್ರಂಪ್ ಸುಂಕದ ಕಾರಣಕ್ಕೂ ಸಾಕಷ್ಟು ರಫ್ತು ನಿರಾಶಾವಾದವಿದೆ. ಜಾಗತಿಕ ರಫ್ತು ಮಾರುಕಟ್ಟೆ 80 ಟ್ರಿಲಿಯನ್ ಡಾಲರ್ ಎಂದು ನೀವು ನೆನಪಿಟ್ಟುಕೊಳ್ಳಬೇಕು. ಆದರೆ, ಭಾರತದ ಪಾಲು ಅದರಲ್ಲಿ ಕೇವಲ ಶೇ 1.8ರಷ್ಟು ಮಾತ್ರವಿದೆ. ಆದ್ದರಿಂದ ರಫ್ತು ಮಾರುಕಟ್ಟೆ ಕುಗ್ಗುತ್ತಿರುವಾಗ, ಅದು ಯಾಕೆ ಕುಗ್ಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೂ ದೇಶೀಯ ಮಾರುಕಟ್ಟೆಗೆ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಗೂ ಉತ್ಪಾದಿಸಲು ಭಾರತಕ್ಕೆ ಇನ್ನೂ ತುಲನಾತ್ಮಕ ಪ್ರಯೋಜನವಿದೆ ಎಂದು ನಾನು ನಂಬುತ್ತೇನೆ ಎಂದು ಸುಬ್ಬರಾವ್​ ವಿಶ್ಲೇಷಿಸಿದರು.

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಕೇಂದ್ರ ಸರ್ಕಾರ ಪ್ರಾರಂಭಿಸಿದ ಆತ್ಮನಿರ್ಭರ ಭಾರತ ಅಭಿಯಾನವು ಪರಿಕಲ್ಪನಾ ಸ್ಪಷ್ಟತೆಯನ್ನೇ ಹೊಂದಿಲ್ಲ ಎಂದು ಆರ್‌ಬಿಐ ಮಾಜಿ ಗವರ್ನರ್ ಡಿ. ಸುಬ್ಬರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೈಮ್ಸ್ ನೆಟ್‌ವರ್ಕ್ ಇಂಡಿಯಾ ಎಕನಾಮಿಕ್ ಕಾನ್​ಕ್ಲೇವ್ ಉದ್ದೇಶಿಸಿ ಮಾತನಾಡಿದ ಸುಬ್ಬರಾವ್, 'ನಾವು ಇನ್ನೂ ಆತ್ಮನಿರ್ಭರ ಏನೆಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇದು ಹಣಕಾಸಿನ ಉತ್ತೇಜನ, ಸುಧಾರಣೆಯ ಉದ್ದೇಶಗಳು ಮತ್ತು ನೀತಿ ಘೋಷಣೆಗಳ ಸಂಯೋಜನೆಯಾಗಿದೆ ಎಂದರು.

ಮುಂದಿನ ದಶಕದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ಭಾರತಕ್ಕೆ ಸರಕುಗಳನ್ನು ತಲುಪಿಸಲಿದೆಯೇ ಎಂದು ಕೇಳಿದಾಗ, ಈ ಅಭಿಯಾನದ ಮೂಲಕ ಸರ್ಕಾರವು ಏನನ್ನು ಸಾಧಿಸಲು ಬಯಸುತ್ತದೆ ಎಂಬುದರ ಮೇಲೆ ಅದು ಅವಲಂಬಿತವಾಗಿದೆ. ಅದು (ಆತ್ಮನಿರ್ಭರ) ಸ್ವಯಂಪೂರ್ಣತೆ ಎಂದಾದರೆ, ಅದು ದೊಡ್ಡದಲ್ಲ. ಇದರರ್ಥ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸ, ಅದು ಹೌದು ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಹೇಳಿದ್ದಾರೆ.

ತಮ್ಮ ಹೇಳಿಕೆಯನ್ನು ಮತ್ತಷ್ಟು ವಿವರಿಸಿದ ಸುಬ್ಬರಾವ್, ನಾವು ಸ್ವಾವಲಂಬನೆ ಅಥವಾ ಆಮದು ಪರ್ಯಾಯ ಮಾದರಿಗಳಿಗೆ ಹಿಂತಿರುಗಲು ಬಯಸುತ್ತಿಲ್ಲ. ನಾವು ನೋಡಬೇಕಾದದ್ದು ನಮ್ಮ ಸ್ವಾವಲಂಬನೆ ಮತ್ತು ಆತ್ಮ ವಿಶ್ವಾಸವನ್ನು. ಭಾರತವು ಬೆಳವಣಿಗೆ ಸಾಧಿಸಲಿದೆ ಮತ್ತು ಆರ್ಥಿಕ ಎಂಜಿನ್​ ಆಗುವಂತಹ ಆತ್ಮವಿಶ್ವಾಸ ಹೊಂದುವುದು ಒಳ್ಳೆಯದು ಎಂದರು.

ಅಧಿಕೃತ ಅಂಕಿಅಂಶಗಳ ಪ್ರಕಾರ, ಇದುವರೆಗೆ ಕೋವಿಡ್ -19 ಪರಿಹಾರ ಮತ್ತು ಹಣಕಾಸಿನ ಉತ್ತೇಜನ ಕ್ರಮಗಳಿಗಾಗಿ ಸುಮಾರು 30 ಲಕ್ಷ ಕೋಟಿ ರೂ. ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ಹಂಚಿಕೆ ಮಾಡಲಾಗಿದೆ.

ಭಾರತ ರಫ್ತುವಿನತ್ತ ಗಮನ ಹರಿಸಬೇಕು

ರಫ್ತುಗಳ ಸುಧಾರಣೆಯ ಅಗತ್ಯವನ್ನು ಒತ್ತಿಹೇಳಿದ ಸುಬ್ಬರಾವ್, ಯಾವುದೇ ಉದಯೋನ್ಮುಖ ಆರ್ಥಿಕತೆಯು ರಫ್ತು ಇಲ್ಲದೆ ಶೇ 7ರಷ್ಟು ಬೆಳವಣಿಗೆ ಹೊಂದಿಲ್ಲ. ಭಾರತವು ಶೇ 9ರಷ್ಟು ಬೆಳವಣಿಗೆಯನ್ನು ಹೊಂದಲು ಮತ್ತು ಆತ್ಮನಿರ್ಭರ ಭಾರತ ಅನ್ನು ತಲುಪಿಸಲು ನಾವು ನಮ್ಮ ರಫ್ತುಗಳನ್ನು ಹೆಚ್ಚಿಸಬೇಕಾಗಿದೆ. 2005 ರಿಂದ 2008ರ ನಡುವಿನ ಭಾರತದ ಬೆಳವಣಿಗೆಯ ಕಥೆಯು ರಫ್ತಿನ ಹಿನ್ನೆಲೆಯಲ್ಲಿ ಬಂದಿದೆ ಎಂದರು.

ಇದನ್ನೂ ಓದಿ: ಚೇತರಿಕೆಯ ಹಾದಿಯಲ್ಲಿ ಭಾರತದ ಆರ್ಥಿಕತೆ: ಆದರೂ ಸಮಸ್ಯೆ ಇದೆ ಎಂದ ಐಎಂಎಫ್​

ಭಾರತದ ರಫ್ತು ಸಾಮರ್ಥ್ಯದ ಮೇಲೆ ರಕ್ಷಣಾತ್ಮಕವಾದದ ದುಷ್ಪರಿಣಾಮದ ವಾತಾವರಣ ತೆಗೆದುಹಾಕಬೇಕಿದೆ. ಈ ಸವಾಲುಗಳ ಹೊರತಾಗಿಯೂ ಭಾರತವು ಭಾರಿ ಬೆಳವಣಿಗೆಯ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.

ಸಾಂಕ್ರಾಮಿಕ ರೋಗದಿಂದಾಗಿ ಟ್ರಂಪ್ ಸುಂಕದ ಕಾರಣಕ್ಕೂ ಸಾಕಷ್ಟು ರಫ್ತು ನಿರಾಶಾವಾದವಿದೆ. ಜಾಗತಿಕ ರಫ್ತು ಮಾರುಕಟ್ಟೆ 80 ಟ್ರಿಲಿಯನ್ ಡಾಲರ್ ಎಂದು ನೀವು ನೆನಪಿಟ್ಟುಕೊಳ್ಳಬೇಕು. ಆದರೆ, ಭಾರತದ ಪಾಲು ಅದರಲ್ಲಿ ಕೇವಲ ಶೇ 1.8ರಷ್ಟು ಮಾತ್ರವಿದೆ. ಆದ್ದರಿಂದ ರಫ್ತು ಮಾರುಕಟ್ಟೆ ಕುಗ್ಗುತ್ತಿರುವಾಗ, ಅದು ಯಾಕೆ ಕುಗ್ಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೂ ದೇಶೀಯ ಮಾರುಕಟ್ಟೆಗೆ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಗೂ ಉತ್ಪಾದಿಸಲು ಭಾರತಕ್ಕೆ ಇನ್ನೂ ತುಲನಾತ್ಮಕ ಪ್ರಯೋಜನವಿದೆ ಎಂದು ನಾನು ನಂಬುತ್ತೇನೆ ಎಂದು ಸುಬ್ಬರಾವ್​ ವಿಶ್ಲೇಷಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.