ETV Bharat / business

ಭಾರತದ ಜಿಡಿಪಿ ಮೈನಸ್​ಗೆ ಇಳಿದು ಮತ್ತೆ ಶೇ 3.5ಕ್ಕೆ ಏರಬಹುದು: ಆರ್​ಬಿಐ ಮಾಜಿ ಗವರ್ನರ್

author img

By

Published : Apr 15, 2020, 7:08 PM IST

ಕೆಲವರು ಬೆಳವಣಿಗೆಯ ದರವು ಶೇ 2ರಷ್ಟು ಇರಬಹುದು ಎಂದು ಅಂದಾಜಿಸಿದ್ದಾರೆ. ಆದರೆ, ಬಹುಶಃ ಇದು ಒಟ್ಟಾರೆಯಾಗಿ ವಾರ್ಷಿಕ ಶೇ 3.5ಕ್ಕೆ ಹತ್ತಿರವಾಗಬಹುದು ಎಂದು ನಾನು ಭಾವಿಸುತ್ತೇನೆ. ಆದರೆ, ಈ ವೈರಸ್ ಎಷ್ಟು ಸಮಯದವರೆಗೆ ಮುಂದುವರಿಯುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ ಎಂದು ಆರ್‌ಬಿಐ ಮಾಜಿ ಗವರ್ನರ್ ಸಿ ರಂಗರಾಜನ್ ವಿಶ್ಲೇಷಿಸಿದ್ದಾರೆ.

Former RBI governor C Rangarajan
ಆರ್‌ಬಿಐ ಮಾಜಿ ಗವರ್ನರ್ ಸಿ ರಂಗರಾಜನ್

ಹೈದರಾಬಾದ್: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಿತ್ತೀಯ ಬೆಳವಣಿಗೆಯ ದರ ಋಣಾತ್ಮಕವಾಗಿ ಇಳಿಯಬಹುದು ಎಂದು ಆರ್‌ಬಿಐ ಮಾಜಿ ಗವರ್ನರ್ ಸಿ ರಂಗರಾಜನ್ ಅಂದಾಜಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್ ವಿಸ್ತರಣೆಯಲ್ಲಿ ವಲಸೆ ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರ ವೇತನ ಸಮಸ್ಯೆಗಳನ್ನು ಪರಿಹಾರದ ಯೋಜನೆಗಳನ್ನು ಒಳಗೊಂಡಿರಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ನಕಾರಾತ್ಮಕ ಬೆಳವಣಿಗೆ ಕಂಡುಬಂದರೂ ಮುಂದಿನ ಮೂರು ತ್ರೈಮಾಸಿಕಗಳಲ್ಲಿ ಪರಿಸ್ಥಿತಿ ಚೇತರಿಸಿಕೊಂಡರೆ ಬೆಳವಣಿಗೆಯ ದರವು ಶೇ 3.5ರ ಸಮೀಪಕ್ಕೆ ಬರಬಹುದು ಎಂದು ರಂಗರಾಜನ್ ಅಂದಾಜಿಸಿದ್ದಾರೆ.

ಅತ್ಯಂತ ಮುಖ್ಯವಾಗಿ ನಾವು ಗಮನಿಸಬೇಕಾದ ವಿಷಯವೆಂದರೆ, ಲಾಕ್‌ಡೌನ್‌ನ ಕಷ್ಟಗಳನ್ನು ದುರ್ಬಲ ವರ್ಗದವರು ತೀವ್ರವಾಗಿ ಭರಿಸುತ್ತಿದ್ದಾರೆ. ಕಾರ್ಖಾನೆಗಳು ಬಾಗಿಲು ಹಾಕಿಕೊಂಡಿವೆ. ವಲಸೆ ಕಾರ್ಮಿಕರು ಸೇರಿದಂತೆ ದೈನಂದಿನ ಕೂಲಿ ಮಾಡುವವರ ಮೇಲೆ ಅದು ತೀವ್ರ ಪರಿಣಾಮ ಬೀರಿದೆ ಎಂದರು.

ಲಾಕ್​ಡೌನ್​ ಸಂಪೂರ್ಣವಾಗಿ ಅವಶ್ಯಕವಾಗಿದ್ದರೇ ಉದ್ಯೋಗದಿಂದ ಹೊರನೂಕಲ್ಪಟ್ಟ ಜನರಿಗೆ ಏನಾದರೂ ಮಾಡಬೇಕಿದೆ. ಲಾಕ್​ಡೌನ್ ಪ್ರಕಟಣೆಯಲ್ಲಿ ಜನರನ್ನು ಏನು ಮತ್ತು ಹೇಗೆ ನೋಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಸ್ಪಷ್ಟವಾದ ಪ್ರಕಟಣೆಗಳು ಇರಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಇಂದಿನ ವಿಶ್ರಾಂತಿ ಮಾನದಂಡಗಳಲ್ಲಿ ವಲಸೆ ಕಾರ್ಮಿಕ ಮತ್ತು ಇತರರಿಗೆ ಹೇಗೆ ಸಹಾಯ ಮಾಡಲಾಗುವುದು ಎಂಬುದರ ಕುರಿತು ಕೆಲವು ಪ್ರಕಟಣೆಗಳು ಇರಬಹುದು. ಇದು ಅಗತ್ಯವಾಗಿದೆ ಎಂದು ರಂಗರಾಜನ್​ ಅವರು ಪಿಟಿಐಗೆ ತಿಳಿಸಿದ್ದಾರೆ.

ಲಾಕ್​ಡೌನ್ ಆರ್ಥಿಕ ಚಟುವಟಿಕೆಯನ್ನು ನಿಲ್ಲುವಂತೆ ಮಾಡಿದೆ. ಬಹುಶಃ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಸಹ ಋಣಾತ್ಮಕವಾಗಿರಬಹುದು. ಮುಂದಿನ ಮೂರು ತ್ರೈಮಾಸಿಕಗಳಲ್ಲಿ ಬೆಳವಣಿಗೆ ಚೇತರಿಸಿಕೊಳ್ಳಬಹುದು ಎಂಬ ಭರವಸೆಯನ್ನು ಮಾಜಿ ಗವರ್ನರ್​ ವ್ಯಕ್ತಪಡಿಸಿದ್ದಾರೆ.

ಕೆಲವು ಜನರು ಬೆಳವಣಿಗೆಯ ದರವು ಶೇ 2ರಷ್ಟು ಇರಬಹುದು ಎಂದು ಅಂದಾಜಿಸಿದ್ದಾರೆ. ಆದರೆ, ಬಹುಶಃ ಇದು ಒಟ್ಟಾರೆಯಾಗಿ ವಾರ್ಷಿಕ ಶೇ 3.5ಕ್ಕೆ ಹತ್ತಿರವಾಗಬಹುದು ಎಂದು ನಾನು ಭಾವಿಸುತ್ತೇನೆ. ಆದರೆ, ಈ ವೈರಸ್ ಎಷ್ಟು ಸಮಯದವರೆಗೆ ಮುಂದುವರಿಯುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ ಎಂದು ವಿವರಿಸಿದರು.

ಹೈದರಾಬಾದ್: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಿತ್ತೀಯ ಬೆಳವಣಿಗೆಯ ದರ ಋಣಾತ್ಮಕವಾಗಿ ಇಳಿಯಬಹುದು ಎಂದು ಆರ್‌ಬಿಐ ಮಾಜಿ ಗವರ್ನರ್ ಸಿ ರಂಗರಾಜನ್ ಅಂದಾಜಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್ ವಿಸ್ತರಣೆಯಲ್ಲಿ ವಲಸೆ ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರ ವೇತನ ಸಮಸ್ಯೆಗಳನ್ನು ಪರಿಹಾರದ ಯೋಜನೆಗಳನ್ನು ಒಳಗೊಂಡಿರಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ನಕಾರಾತ್ಮಕ ಬೆಳವಣಿಗೆ ಕಂಡುಬಂದರೂ ಮುಂದಿನ ಮೂರು ತ್ರೈಮಾಸಿಕಗಳಲ್ಲಿ ಪರಿಸ್ಥಿತಿ ಚೇತರಿಸಿಕೊಂಡರೆ ಬೆಳವಣಿಗೆಯ ದರವು ಶೇ 3.5ರ ಸಮೀಪಕ್ಕೆ ಬರಬಹುದು ಎಂದು ರಂಗರಾಜನ್ ಅಂದಾಜಿಸಿದ್ದಾರೆ.

ಅತ್ಯಂತ ಮುಖ್ಯವಾಗಿ ನಾವು ಗಮನಿಸಬೇಕಾದ ವಿಷಯವೆಂದರೆ, ಲಾಕ್‌ಡೌನ್‌ನ ಕಷ್ಟಗಳನ್ನು ದುರ್ಬಲ ವರ್ಗದವರು ತೀವ್ರವಾಗಿ ಭರಿಸುತ್ತಿದ್ದಾರೆ. ಕಾರ್ಖಾನೆಗಳು ಬಾಗಿಲು ಹಾಕಿಕೊಂಡಿವೆ. ವಲಸೆ ಕಾರ್ಮಿಕರು ಸೇರಿದಂತೆ ದೈನಂದಿನ ಕೂಲಿ ಮಾಡುವವರ ಮೇಲೆ ಅದು ತೀವ್ರ ಪರಿಣಾಮ ಬೀರಿದೆ ಎಂದರು.

ಲಾಕ್​ಡೌನ್​ ಸಂಪೂರ್ಣವಾಗಿ ಅವಶ್ಯಕವಾಗಿದ್ದರೇ ಉದ್ಯೋಗದಿಂದ ಹೊರನೂಕಲ್ಪಟ್ಟ ಜನರಿಗೆ ಏನಾದರೂ ಮಾಡಬೇಕಿದೆ. ಲಾಕ್​ಡೌನ್ ಪ್ರಕಟಣೆಯಲ್ಲಿ ಜನರನ್ನು ಏನು ಮತ್ತು ಹೇಗೆ ನೋಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಸ್ಪಷ್ಟವಾದ ಪ್ರಕಟಣೆಗಳು ಇರಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಇಂದಿನ ವಿಶ್ರಾಂತಿ ಮಾನದಂಡಗಳಲ್ಲಿ ವಲಸೆ ಕಾರ್ಮಿಕ ಮತ್ತು ಇತರರಿಗೆ ಹೇಗೆ ಸಹಾಯ ಮಾಡಲಾಗುವುದು ಎಂಬುದರ ಕುರಿತು ಕೆಲವು ಪ್ರಕಟಣೆಗಳು ಇರಬಹುದು. ಇದು ಅಗತ್ಯವಾಗಿದೆ ಎಂದು ರಂಗರಾಜನ್​ ಅವರು ಪಿಟಿಐಗೆ ತಿಳಿಸಿದ್ದಾರೆ.

ಲಾಕ್​ಡೌನ್ ಆರ್ಥಿಕ ಚಟುವಟಿಕೆಯನ್ನು ನಿಲ್ಲುವಂತೆ ಮಾಡಿದೆ. ಬಹುಶಃ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಸಹ ಋಣಾತ್ಮಕವಾಗಿರಬಹುದು. ಮುಂದಿನ ಮೂರು ತ್ರೈಮಾಸಿಕಗಳಲ್ಲಿ ಬೆಳವಣಿಗೆ ಚೇತರಿಸಿಕೊಳ್ಳಬಹುದು ಎಂಬ ಭರವಸೆಯನ್ನು ಮಾಜಿ ಗವರ್ನರ್​ ವ್ಯಕ್ತಪಡಿಸಿದ್ದಾರೆ.

ಕೆಲವು ಜನರು ಬೆಳವಣಿಗೆಯ ದರವು ಶೇ 2ರಷ್ಟು ಇರಬಹುದು ಎಂದು ಅಂದಾಜಿಸಿದ್ದಾರೆ. ಆದರೆ, ಬಹುಶಃ ಇದು ಒಟ್ಟಾರೆಯಾಗಿ ವಾರ್ಷಿಕ ಶೇ 3.5ಕ್ಕೆ ಹತ್ತಿರವಾಗಬಹುದು ಎಂದು ನಾನು ಭಾವಿಸುತ್ತೇನೆ. ಆದರೆ, ಈ ವೈರಸ್ ಎಷ್ಟು ಸಮಯದವರೆಗೆ ಮುಂದುವರಿಯುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ ಎಂದು ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.