ETV Bharat / business

6 ವರ್ಷದಲ್ಲಿ ದೆಹಲಿಗರ ಆದಾಯ ಸಿಂಗಾಪುರದ ಸರಿಸಮಾನಕ್ಕೆ ತರುತ್ತೇವೆ: ಬಜೆಟ್​ನಲ್ಲಿ ಆಪ್​​ ಅಭಯ

author img

By

Published : Mar 9, 2021, 1:45 PM IST

ಉದ್ದೇಶಿತ ಬಜೆಟ್ ವೆಚ್ಚಕ್ಕೆ ಹಣ ಒದಗಿಸಲು ಸರ್ಕಾರ 43,000 ಕೋಟಿ ರೂ. ಅನ್ನು 2020-21ರ ಬಜೆಟ್‌ನಲ್ಲಿ 44,100 ಕೋಟಿ ರೂ. ತೆರಿಗೆ ಆದಾಯವಾಗಿ ಸಂಗ್ರಹಿಸಲು ಸರ್ಕಾರ ಪ್ರಸ್ತಾಪಿಸಿತ್ತು. ಸಾಂಕ್ರಾಮಿಕ ರೋಗದಿಂದಾಗಿ ಸಂಗ್ರಹವು ಗುರಿಗಿಂತ ಕೆಳಗಿದೆ ಎಂದು ನಿರೀಕ್ಷಿಸಲಾಗಿದೆ.

Delhi budget
Delhi budget

ನವದೆಹಲಿ: 2047ರ ವೇಳೆಗೆ ದೆಹಲಿಗರ ತಲಾ ಆದಾಯವನ್ನು ಸಿಂಗಾಪುರದ ತಲಾ ಆದಾಯಕ್ಕೆ ಸಮನಾಗಿ ಮಾಡುವ ಗುರಿ ಹೊಂದಿದ್ದೇವೆ. ಈ ಗುರಿಯನ್ನು ಯಶಸ್ವಿಯಾಗಿ ಸಾಧಿಸಲು ಆದಾಯದಲ್ಲಿ ಶೇ 16ರಷ್ಟು ಬೆಳವಣಿಗೆ ಅಗತ್ಯವಾಗಿದೆ. ಇದು ಕಷ್ಟಕರವಾಗಿರುತ್ತದೆ. ಆದರೆ, ಅದನ್ನು ಯಶಸ್ವಿಯಾಗಿಸಲು ನಾವು ಕೆಲಸ ಮಾಡುತ್ತೇವೆ ದೆಹಲಿ ಡೆಪ್ಯುಟಿ ಸಿಎಂ ಹಾಗೂ ಹಣಕಾಸು ಸಚಿವ ಸಿಎಂ ಮನೀಷಾ ಸಿಸೋಡಿಯಾ ಹೇಳಿದ್ದಾರೆ.

ಸಿಸೋಡಿಯಾ ಅವರು 2020-21ರ ಆರ್ಥಿಕ ವರ್ಷದ ವಾರ್ಷಿಕ ಬಜೆಟ್ ಅನ್ನು ಮಂಗಳವಾರ 69,000 ಕೋಟಿ ರೂ. ಬಜೆಟ್ ಮಂಡಿಸಿದರು. ಇದು ಇಲ್ಲಿಯವರೆಗಿನ ಗರಿಷ್ಠ ಮೊತ್ತದ ಆಯವ್ಯಯವಾಗಿದೆ. ದೇಶಪ್ರೇಮದ ಆಧಾರದ ಮೇಲೆ ದೆಹಲಿ ಸರ್ಕಾರವು ಬಿ.ಆರ್.ಅಂಬೇಡ್ಕರ್ ಅವರ ಲೈವ್ ಕಾರ್ಯಕ್ರಮಗಳಿಗೆ ₹ 10 ಕೋಟಿ ವಿನಿಯೋಗಿಸಲಿದ್ದು, 75 ವಾರಗಳ ಕಾಲ ‘ದೇಶಭಕ್ತಿ’ ಕಾರ್ಯಕ್ರಮ ಆಚರಿಸಲಾಗುವುದು. ಭಗತ್ ಸಿಂಗ್ ಅವರ ಜೀವನದ ಕಾರ್ಯಕ್ರಮಗಳಿಗಾಗಿ ₹ 10 ಕೋಟಿ ಹಂಚಿಕೆ ಮಾಡಲಾಗುವುದು ಎಂದರು.

ಇದನ್ನೂ ಓದಿ: ಜಿಎಸ್​ಟಿ ನಷ್ಟ ಪರಿಹಾರ: ಕೇಂದ್ರದ 1.06 ಲಕ್ಷ ಕೋಟಿ ರೂ.ಯಲ್ಲಿ ರಾಜ್ಯಕ್ಕೆ ಸಿಕ್ಕಿದೆಷ್ಟು?

ಕೋವಿಡ್ -19 ಲಸಿಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ದೆಹಲಿಯವರಿಗೆ ಉಚಿತವಾಗಿ ಮುಂದುವರಿಯುತ್ತದೆ. ವ್ಯಾಕ್ಸಿನೇಷನ್ ಡ್ರೈವ್‌ಗೆ ಸಿಸೋಡಿಯಾ 50 ಕೋಟಿ ರೂ. ಮೀಸಲಿಟ್ಟಿದ್ದು, ದೆಹಲಿಯು ದಿನಕ್ಕೆ 45,000 ಜನರಿಗೆ ಲಸಿಕೆ ಹಾಕುವ ಸಾಮರ್ಥ್ಯವಿದೆ. ಇದನ್ನು ಶೀಘ್ರದಲ್ಲೇ 60,000 ಜನರಿಗೆ ಹೆಚ್ಚಿಸಲಾಗುವುದು ಎಂದು ಹೇಳಿದರು.

ಪ್ರಮುಖ ಪ್ರಮುಖಾಂಶಗಳು

2047ರ ವೇಳೆಗೆ ದೆಹಲಿಯ ಆದಾಯವನ್ನು ಸಿಂಗಾಪುರ ಮಟ್ಟಕ್ಕೆ ಸಮನಾಗಿ ಮಾಡಲು ಸರ್ಕಾರ ಉದ್ದೇಶಿಸಿದೆ

ದೆಹಲಿ ಸರ್ಕಾರವು ಮೊದಲ ‘ಸೈನಿಕ್ ಶಾಲೆಗಳನ್ನು’ ದೆಹಲಿಯಲ್ಲಿ ತೆರೆಯಲಿದೆ

ಈ ವರ್ಷ ಶಾಲೆಗಳಲ್ಲಿ ದೇಶಭಕ್ತಿ ಪಠ್ಯಕ್ರಮವು ಪ್ರಾರಂಭವಾಗಲಿದ್ದು, ಅದರ ಅಡಿ ನಿತ್ಯ ಒಂದು ಅವಧಿಯನ್ನು ದೇಶಭಕ್ತಿಗೆ ಮೀಸಲು

ಕಲೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸರ್ಕಾರ ₹ 521 ಕೋಟಿ ನಿಗದಿ

ದೆಹಲಿಯ ಪಾರಂಪರಿಕ ಪ್ರಚಾರಕ್ಕಾಗಿ ಎರಡು ಹೊಸ ಯೋಜನೆಗಳ ಪ್ರಾರಂಭ

ಸಾಂಕ್ರಾಮಿಕ ರೋಗದ ಮಧ್ಯೆ ಎಎಪಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ 9,934 ಕೋಟಿ ರೂ. ಮೀಸಲು

ನವದೆಹಲಿ: 2047ರ ವೇಳೆಗೆ ದೆಹಲಿಗರ ತಲಾ ಆದಾಯವನ್ನು ಸಿಂಗಾಪುರದ ತಲಾ ಆದಾಯಕ್ಕೆ ಸಮನಾಗಿ ಮಾಡುವ ಗುರಿ ಹೊಂದಿದ್ದೇವೆ. ಈ ಗುರಿಯನ್ನು ಯಶಸ್ವಿಯಾಗಿ ಸಾಧಿಸಲು ಆದಾಯದಲ್ಲಿ ಶೇ 16ರಷ್ಟು ಬೆಳವಣಿಗೆ ಅಗತ್ಯವಾಗಿದೆ. ಇದು ಕಷ್ಟಕರವಾಗಿರುತ್ತದೆ. ಆದರೆ, ಅದನ್ನು ಯಶಸ್ವಿಯಾಗಿಸಲು ನಾವು ಕೆಲಸ ಮಾಡುತ್ತೇವೆ ದೆಹಲಿ ಡೆಪ್ಯುಟಿ ಸಿಎಂ ಹಾಗೂ ಹಣಕಾಸು ಸಚಿವ ಸಿಎಂ ಮನೀಷಾ ಸಿಸೋಡಿಯಾ ಹೇಳಿದ್ದಾರೆ.

ಸಿಸೋಡಿಯಾ ಅವರು 2020-21ರ ಆರ್ಥಿಕ ವರ್ಷದ ವಾರ್ಷಿಕ ಬಜೆಟ್ ಅನ್ನು ಮಂಗಳವಾರ 69,000 ಕೋಟಿ ರೂ. ಬಜೆಟ್ ಮಂಡಿಸಿದರು. ಇದು ಇಲ್ಲಿಯವರೆಗಿನ ಗರಿಷ್ಠ ಮೊತ್ತದ ಆಯವ್ಯಯವಾಗಿದೆ. ದೇಶಪ್ರೇಮದ ಆಧಾರದ ಮೇಲೆ ದೆಹಲಿ ಸರ್ಕಾರವು ಬಿ.ಆರ್.ಅಂಬೇಡ್ಕರ್ ಅವರ ಲೈವ್ ಕಾರ್ಯಕ್ರಮಗಳಿಗೆ ₹ 10 ಕೋಟಿ ವಿನಿಯೋಗಿಸಲಿದ್ದು, 75 ವಾರಗಳ ಕಾಲ ‘ದೇಶಭಕ್ತಿ’ ಕಾರ್ಯಕ್ರಮ ಆಚರಿಸಲಾಗುವುದು. ಭಗತ್ ಸಿಂಗ್ ಅವರ ಜೀವನದ ಕಾರ್ಯಕ್ರಮಗಳಿಗಾಗಿ ₹ 10 ಕೋಟಿ ಹಂಚಿಕೆ ಮಾಡಲಾಗುವುದು ಎಂದರು.

ಇದನ್ನೂ ಓದಿ: ಜಿಎಸ್​ಟಿ ನಷ್ಟ ಪರಿಹಾರ: ಕೇಂದ್ರದ 1.06 ಲಕ್ಷ ಕೋಟಿ ರೂ.ಯಲ್ಲಿ ರಾಜ್ಯಕ್ಕೆ ಸಿಕ್ಕಿದೆಷ್ಟು?

ಕೋವಿಡ್ -19 ಲಸಿಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ದೆಹಲಿಯವರಿಗೆ ಉಚಿತವಾಗಿ ಮುಂದುವರಿಯುತ್ತದೆ. ವ್ಯಾಕ್ಸಿನೇಷನ್ ಡ್ರೈವ್‌ಗೆ ಸಿಸೋಡಿಯಾ 50 ಕೋಟಿ ರೂ. ಮೀಸಲಿಟ್ಟಿದ್ದು, ದೆಹಲಿಯು ದಿನಕ್ಕೆ 45,000 ಜನರಿಗೆ ಲಸಿಕೆ ಹಾಕುವ ಸಾಮರ್ಥ್ಯವಿದೆ. ಇದನ್ನು ಶೀಘ್ರದಲ್ಲೇ 60,000 ಜನರಿಗೆ ಹೆಚ್ಚಿಸಲಾಗುವುದು ಎಂದು ಹೇಳಿದರು.

ಪ್ರಮುಖ ಪ್ರಮುಖಾಂಶಗಳು

2047ರ ವೇಳೆಗೆ ದೆಹಲಿಯ ಆದಾಯವನ್ನು ಸಿಂಗಾಪುರ ಮಟ್ಟಕ್ಕೆ ಸಮನಾಗಿ ಮಾಡಲು ಸರ್ಕಾರ ಉದ್ದೇಶಿಸಿದೆ

ದೆಹಲಿ ಸರ್ಕಾರವು ಮೊದಲ ‘ಸೈನಿಕ್ ಶಾಲೆಗಳನ್ನು’ ದೆಹಲಿಯಲ್ಲಿ ತೆರೆಯಲಿದೆ

ಈ ವರ್ಷ ಶಾಲೆಗಳಲ್ಲಿ ದೇಶಭಕ್ತಿ ಪಠ್ಯಕ್ರಮವು ಪ್ರಾರಂಭವಾಗಲಿದ್ದು, ಅದರ ಅಡಿ ನಿತ್ಯ ಒಂದು ಅವಧಿಯನ್ನು ದೇಶಭಕ್ತಿಗೆ ಮೀಸಲು

ಕಲೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸರ್ಕಾರ ₹ 521 ಕೋಟಿ ನಿಗದಿ

ದೆಹಲಿಯ ಪಾರಂಪರಿಕ ಪ್ರಚಾರಕ್ಕಾಗಿ ಎರಡು ಹೊಸ ಯೋಜನೆಗಳ ಪ್ರಾರಂಭ

ಸಾಂಕ್ರಾಮಿಕ ರೋಗದ ಮಧ್ಯೆ ಎಎಪಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ 9,934 ಕೋಟಿ ರೂ. ಮೀಸಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.