ETV Bharat / business

ಬಾಕಿ ಹಣ ಕೊಡಿ ಇಲ್ಲ ಪರಿಣಾಮ ಎದುರಿಸಿ: ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ಚಾಟಿ

author img

By

Published : Feb 14, 2020, 8:28 PM IST

1.47 ಲಕ್ಷ ಕೋಟಿ ರೂ.ನಷ್ಟು ಹೊಂದಾಣಿಕೆಯ ಒಟ್ಟು ಆದಾಯವನ್ನು (ಎಜಿಆರ್) ದೂರಸಂಪರ್ಕ ಇಲಾಖೆಗೆ ಪಾವತಿಸಬೇಕಿತ್ತು. ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾರಣ ಅವರ ವಿರುದ್ಧ ತಿರಸ್ಕಾರದ ಕ್ರಮಗಳನ್ನು ಏಕೆ ತೆಗೆದುಕೊಳ್ಳಬಾರದು. ಈ ಬಗ್ಗೆ ವಿವರಣೆ ನೀಡುವಂತೆ ಟೆಲಿಕಾಂ ಮತ್ತು ಇತರ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

AGR
ಎಜಿಆರ್​

ನವದೆಹಲಿ: ಸರ್ಕಾರದ ಬಾಕಿ ಹಣವನ್ನು ಪಾವತಿಸದ ಕಾರಣಕ್ಕಾಗಿ ಸುಪ್ರೀಂಕೋರ್ಟ್ ಟೆಲಿಕಾಂ ಸೇವೆ ನೀಡುತ್ತಿರುವ ಕಂಪನಿಗಳಿಗೆ ಎಚ್ಚರಿಕೆಯ ಕರೆಗಂಟೆ ಬಾರಿಸಿದೆ. 2020ರ ಮಾರ್ಚ್ 17ರೊಳಗೆ ಬಾಕಿ ಹಣ ಪಾವತಿಸದಿದ್ದರೆ ತಿರಸ್ಕಾರದ ವಿಚಾರಣೆಯ ಬೆದರಿಕೆ ಹಾಕಿದೆ.

ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಸೇರಿದಂತೆ ಇತರೆ ಟಿಲಿಕಾಂ ಕಂಪನಿಗಳಿಗೆ ಜನವರಿ 23ರೊಳಗೆ ₹ 1.47 ಲಕ್ಷ ಸುಂಕ ಮತ್ತು ಬಡ್ಡಿ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಟೆಲಿಕಾಂ ಕಂಪನಿಗಳು ಕಳೆದ ತಿಂಗಳು ಈ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು.

1.47 ಲಕ್ಷ ಕೋಟಿ ರೂ.ಯಷ್ಟು ಹೊಂದಾಣಿಕೆಯ ಒಟ್ಟು ಆದಾಯವನ್ನು (ಎಜಿಆರ್) ದೂರಸಂಪರ್ಕ ಇಲಾಖೆಗೆ ಪಾವತಿಸಬೇಕಿತ್ತು. ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾರಣ ಅವರ ವಿರುದ್ಧ ತಿರಸ್ಕಾರದ ಕ್ರಮಗಳನ್ನು ಏಕೆ ತೆಗೆದುಕೊಳ್ಳಬಾರದು? ಈ ಬಗ್ಗೆ ವಿವರಣೆ ನೀಡುವಂತೆ ಟೆಲಿಕಾಂ ಮತ್ತು ಇತರ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಕೋರ್ಟ್​ ಆದೇಶವನ್ನು ಪಾಲಿಸದಿರುವ ಬಗ್ಗೆ ಗಂಭೀರವಾಗಿ ತೆಗೆದುಕೊಂಡ ನ್ಯಾಯಮೂರ್ತಿ ಅರುಣ್ ಮಿಶ್ರಾ, ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಎಂ.ಆರ್.ಶಾ ಅವರಿದ್ದ ನ್ಯಾಯಪೀಠವು ಎಜಿಆರ್ ವಿಷಯದಲ್ಲಿ ತನ್ನ ತೀರ್ಪಿನ ಪರಿಣಾಮವನ್ನು ತಡೆಹಿಡಿದು ಡಿಒಟಿಯ ಅಧಿಕಾರಿ ಜಾರಿಗೊಳಿಸಿದ ಆದೇಶದ ಬಗ್ಗೆ ಕಳವಳ ವ್ಯಕ್ತಪಡಿಸಿತು.

ಭಾರ್ತಿ ಏರ್‌ಟೆಲ್, ವೊಡಾಫೋನ್, ಎಂಟಿಎನ್‌ಎಲ್, ಬಿಎಸ್‌ಎನ್‌ಎಲ್, ರಿಲಾಯನ್ಸ್ ಕಮ್ಯುನಿಕೇಷನ್ಸ್, ಟಾಟಾ ಟೆಲಿಕಮ್ಯುನಿಕೇಷನ್ ಮತ್ತು ಇತರ ವ್ಯವಸ್ಥಾಪಕ ನಿರ್ದೇಶಕರನ್ನು ಮಾರ್ಚ್ 17ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರ್ಟ್ ಆದೇಶಿಸಿದೆ.

ಟೆಲಿಕಾಂ ಕಂಪನಿಗಳ ವಿರುದ್ಧ ದಬ್ಬಾಳಿಕೆಯ ಕ್ರಮ ಕೈಗೊಳ್ಳದಂತೆ ಪೀಠ​ ನೀಡಿದ ಆದೇಶವನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಉನ್ನತ ನ್ಯಾಯಾಲಯ ಕೇಂದ್ರಕ್ಕೆ ನಿರ್ದೇಶನ ನೀಡಿದೆ. 'ಟೆಲಿಕಾಂ ಕಂಪೆನಿಗಳು ಒಂದು ಪೈಸೆಯೂ ಸಹ ಪಾವತಿಸಿಲ್ಲ. ಸರ್ಕಾರಿ ಅಧಿಕಾರಿಯ ಆದೇಶದಲ್ಲಿ ಉಳಿಯಲು ಬಯಸುತ್ತಾರೆ. ಒಂದು ಗಂಟೆಯೊಳಗೆ ಆ ಆದೇಶ ಹಿಂತೆಗೆದುಕೊಳ್ಳದಿದ್ದರೆ ಈ ಅಧಿಕಾರಿ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ' ಎಂದು ನ್ಯಾಯಾಲಯ ಎಚ್ಚರಿಸಿದೆ.

ಈ ಅಸಂಬದ್ಧತೆ ಯಾರು ರಚಿಸುತ್ತಿದ್ದಾರೆಂದು ನಮಗೆ ತಿಳಿದಿಲ್ಲ. ದೇಶದಲ್ಲಿ ಯಾವುದೇ ಕಾನೂನು ಉಳಿದಿಲ್ಲವೇ? ಈ ದೇಶದಲ್ಲಿ ವಾಸಿಸದೆ ದೇಶವನ್ನು ಬಿಟ್ಟು ಹೋಗುವುದು ಉತ್ತಮ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಟಾರ್ನಿ ಜನರಲ್ ಮತ್ತು ಇತರ ಸಾಂವಿಧಾನಿಕ ಅಧಿಕಾರಿಗಳಿಗೆ ಟಿಲಿಕಾಂಗಳು ಮತ್ತು ಇತರರ ಹಣವನ್ನು ಪಾವತಿಸಲು ಒತ್ತಾಯಿಸಬಾರದು. ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಪತ್ರ ಬರೆಯುತ್ತಾರೆ ಎಂದು ನ್ಯಾಯಪೀಠದ ನ್ಯಾಯಮೂರ್ತಿಯೊಬ್ಬರು ಹೇಳಿದ್ದಾರೆ.

ಜನವರಿ 16ರಂದು ನ್ಯಾಯಮೂರ್ತಿ ಮಿಶ್ರಾ ನೇತೃತ್ವದ ನ್ಯಾಯಪೀಠವು ಟೆಲಿಕಾಂಗಳ ಪರಿಶೀಲನಾ ಅರ್ಜಿಗಳನ್ನು ಜನವರಿ 23ರೊಳಗೆ 1.47 ಲಕ್ಷ ಕೋಟಿ ರೂ. ಶಾಸನಬದ್ಧ ಬಾಕಿ ಪಾವತಿಸುವಂತೆ ಕೋರಿದ್ದು ತಿರಸ್ಕರಿಸಿದೆ.

ನವದೆಹಲಿ: ಸರ್ಕಾರದ ಬಾಕಿ ಹಣವನ್ನು ಪಾವತಿಸದ ಕಾರಣಕ್ಕಾಗಿ ಸುಪ್ರೀಂಕೋರ್ಟ್ ಟೆಲಿಕಾಂ ಸೇವೆ ನೀಡುತ್ತಿರುವ ಕಂಪನಿಗಳಿಗೆ ಎಚ್ಚರಿಕೆಯ ಕರೆಗಂಟೆ ಬಾರಿಸಿದೆ. 2020ರ ಮಾರ್ಚ್ 17ರೊಳಗೆ ಬಾಕಿ ಹಣ ಪಾವತಿಸದಿದ್ದರೆ ತಿರಸ್ಕಾರದ ವಿಚಾರಣೆಯ ಬೆದರಿಕೆ ಹಾಕಿದೆ.

ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಸೇರಿದಂತೆ ಇತರೆ ಟಿಲಿಕಾಂ ಕಂಪನಿಗಳಿಗೆ ಜನವರಿ 23ರೊಳಗೆ ₹ 1.47 ಲಕ್ಷ ಸುಂಕ ಮತ್ತು ಬಡ್ಡಿ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಟೆಲಿಕಾಂ ಕಂಪನಿಗಳು ಕಳೆದ ತಿಂಗಳು ಈ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು.

1.47 ಲಕ್ಷ ಕೋಟಿ ರೂ.ಯಷ್ಟು ಹೊಂದಾಣಿಕೆಯ ಒಟ್ಟು ಆದಾಯವನ್ನು (ಎಜಿಆರ್) ದೂರಸಂಪರ್ಕ ಇಲಾಖೆಗೆ ಪಾವತಿಸಬೇಕಿತ್ತು. ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾರಣ ಅವರ ವಿರುದ್ಧ ತಿರಸ್ಕಾರದ ಕ್ರಮಗಳನ್ನು ಏಕೆ ತೆಗೆದುಕೊಳ್ಳಬಾರದು? ಈ ಬಗ್ಗೆ ವಿವರಣೆ ನೀಡುವಂತೆ ಟೆಲಿಕಾಂ ಮತ್ತು ಇತರ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಕೋರ್ಟ್​ ಆದೇಶವನ್ನು ಪಾಲಿಸದಿರುವ ಬಗ್ಗೆ ಗಂಭೀರವಾಗಿ ತೆಗೆದುಕೊಂಡ ನ್ಯಾಯಮೂರ್ತಿ ಅರುಣ್ ಮಿಶ್ರಾ, ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಎಂ.ಆರ್.ಶಾ ಅವರಿದ್ದ ನ್ಯಾಯಪೀಠವು ಎಜಿಆರ್ ವಿಷಯದಲ್ಲಿ ತನ್ನ ತೀರ್ಪಿನ ಪರಿಣಾಮವನ್ನು ತಡೆಹಿಡಿದು ಡಿಒಟಿಯ ಅಧಿಕಾರಿ ಜಾರಿಗೊಳಿಸಿದ ಆದೇಶದ ಬಗ್ಗೆ ಕಳವಳ ವ್ಯಕ್ತಪಡಿಸಿತು.

ಭಾರ್ತಿ ಏರ್‌ಟೆಲ್, ವೊಡಾಫೋನ್, ಎಂಟಿಎನ್‌ಎಲ್, ಬಿಎಸ್‌ಎನ್‌ಎಲ್, ರಿಲಾಯನ್ಸ್ ಕಮ್ಯುನಿಕೇಷನ್ಸ್, ಟಾಟಾ ಟೆಲಿಕಮ್ಯುನಿಕೇಷನ್ ಮತ್ತು ಇತರ ವ್ಯವಸ್ಥಾಪಕ ನಿರ್ದೇಶಕರನ್ನು ಮಾರ್ಚ್ 17ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರ್ಟ್ ಆದೇಶಿಸಿದೆ.

ಟೆಲಿಕಾಂ ಕಂಪನಿಗಳ ವಿರುದ್ಧ ದಬ್ಬಾಳಿಕೆಯ ಕ್ರಮ ಕೈಗೊಳ್ಳದಂತೆ ಪೀಠ​ ನೀಡಿದ ಆದೇಶವನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಉನ್ನತ ನ್ಯಾಯಾಲಯ ಕೇಂದ್ರಕ್ಕೆ ನಿರ್ದೇಶನ ನೀಡಿದೆ. 'ಟೆಲಿಕಾಂ ಕಂಪೆನಿಗಳು ಒಂದು ಪೈಸೆಯೂ ಸಹ ಪಾವತಿಸಿಲ್ಲ. ಸರ್ಕಾರಿ ಅಧಿಕಾರಿಯ ಆದೇಶದಲ್ಲಿ ಉಳಿಯಲು ಬಯಸುತ್ತಾರೆ. ಒಂದು ಗಂಟೆಯೊಳಗೆ ಆ ಆದೇಶ ಹಿಂತೆಗೆದುಕೊಳ್ಳದಿದ್ದರೆ ಈ ಅಧಿಕಾರಿ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ' ಎಂದು ನ್ಯಾಯಾಲಯ ಎಚ್ಚರಿಸಿದೆ.

ಈ ಅಸಂಬದ್ಧತೆ ಯಾರು ರಚಿಸುತ್ತಿದ್ದಾರೆಂದು ನಮಗೆ ತಿಳಿದಿಲ್ಲ. ದೇಶದಲ್ಲಿ ಯಾವುದೇ ಕಾನೂನು ಉಳಿದಿಲ್ಲವೇ? ಈ ದೇಶದಲ್ಲಿ ವಾಸಿಸದೆ ದೇಶವನ್ನು ಬಿಟ್ಟು ಹೋಗುವುದು ಉತ್ತಮ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಟಾರ್ನಿ ಜನರಲ್ ಮತ್ತು ಇತರ ಸಾಂವಿಧಾನಿಕ ಅಧಿಕಾರಿಗಳಿಗೆ ಟಿಲಿಕಾಂಗಳು ಮತ್ತು ಇತರರ ಹಣವನ್ನು ಪಾವತಿಸಲು ಒತ್ತಾಯಿಸಬಾರದು. ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಪತ್ರ ಬರೆಯುತ್ತಾರೆ ಎಂದು ನ್ಯಾಯಪೀಠದ ನ್ಯಾಯಮೂರ್ತಿಯೊಬ್ಬರು ಹೇಳಿದ್ದಾರೆ.

ಜನವರಿ 16ರಂದು ನ್ಯಾಯಮೂರ್ತಿ ಮಿಶ್ರಾ ನೇತೃತ್ವದ ನ್ಯಾಯಪೀಠವು ಟೆಲಿಕಾಂಗಳ ಪರಿಶೀಲನಾ ಅರ್ಜಿಗಳನ್ನು ಜನವರಿ 23ರೊಳಗೆ 1.47 ಲಕ್ಷ ಕೋಟಿ ರೂ. ಶಾಸನಬದ್ಧ ಬಾಕಿ ಪಾವತಿಸುವಂತೆ ಕೋರಿದ್ದು ತಿರಸ್ಕರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.