ETV Bharat / business

ಸಿಸಿಡಿ ಸಂಸ್ಥಾಪಕ ಸಿದ್ಧಾರ್ಥ್​ ಸಾವು.. ಖಾಸಗಿ ಹೂಡಿಕೆದಾರರು, ಐಟಿ ಇಲಾಖೆಗೆ ಕ್ಲೀನ್‌ಚಿಟ್​

ಪಿಇ ಹೂಡಿಕೆದಾರರು ಹಾಗೂ ಸಾಲದಾತರು ನೀಡುವ ಇಂತಹ ರಿಮೈಂಡರ್​ಗಳು ಮತ್ತು ಪಾಲೋ ಅಪ್​ಗಳು ಉದ್ಯಮದಲ್ಲಿ ವಿಶೇಷವೇನಲ್ಲ. ಪಿಇ ಹೂಡಿಕೆದಾರರು ಅಂಗೀಕೃತ ಕಾನೂನು ಮತ್ತು ವ್ಯವಹಾರ ಮಾನದಂಡಗಳ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದಾರೆಂದು ನಾವು ನಂಬುತ್ತೇವೆ ಎಂದು ವರದಿ ಹೇಳಿದೆ..

author img

By

Published : Jul 25, 2020, 3:17 PM IST

Siddhartha
ಸಿದ್ಧಾರ್ಥ್​

ನವದೆಹಲಿ : ಕೆಫೆ ಕಾಫಿ ಡೇ ಸಂಸ್ಥಾಪಕ ವಿ ಜಿ ಸಿದ್ಧಾರ್ಥ ಅವರ ಸಾವನ್ನಪ್ಪಿ ಒಂದು ವರ್ಷದ ಬಳಿಕ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ (ಸಿಡಿಇಎಲ್) ನೇಮಕ ಮಾಡಿದ ತನಿಖಾ ಸಮಿತಿಯು ಖಾಸಗಿ ಷೇರು ಹೂಡಿಕೆದಾರರಿಗೆ ಮತ್ತು ಸಾವಿಗೂ ಮುನ್ನ ಕೊನೆಯ ಪತ್ರದಲ್ಲಿ ಹೆಸರಿಸಲಾದ ಆದಾಯ ತೆರಿಗೆ ಇಲಾಖೆಗೆ ವರ್ಚುವಲ್ ಕ್ಲೀನ್ ಚಿಟ್ ನೀಡಿದೆ.

ಖಾಸಗಿ ಷೇರು (ಪಿಇ) ಹೂಡಿಕೆದಾರರು ಮತ್ತು ಇತರ ಸಾಲದಾತರಿಂದ ನಿರಂತರ ರಿಮೈಂಡರ್​ನಿಂದಾಗಿ ಸಿದ್ಧಾರ್ಥ್​ ಆತ್ಮಹತ್ಯೆಯಂತಹಾ ಕೃತ್ಯಕ್ಕೆ ಮುಂದಾಗಿರಬಹುದು ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪಿಇ ಹೂಡಿಕೆದಾರರು ಹಾಗೂ ಸಾಲದಾತರು ನೀಡುವ ಇಂತಹ ರಿಮೈಂಡರ್​ಗಳು ಮತ್ತು ಫಾಲೋಅಪ್​ಗಳು ಉದ್ಯಮದಲ್ಲಿ ವಿಶೇಷವೇನಲ್ಲ. ಪಿಇ ಹೂಡಿಕೆದಾರರು ಅಂಗೀಕೃತ ಕಾನೂನು ಮತ್ತು ವ್ಯವಹಾರ ಮಾನದಂಡಗಳ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದಾರೆಂದು ನಾವು ನಂಬುತ್ತೇವೆ ಎಂದು ವರದಿ ಹೇಳಿದೆ.

ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಅಜಾಗರೂಕ ಕಿರುಕುಳವನ್ನು ತೋರಿಸಲು ತನಿಖಾಧಿಕಾರಿಗಳಿಗೆ ಯಾವುದೇ ಸಾಕ್ಷ್ಯಗಳನ್ನು ಒದಗಿಸಲಾಗಿಲ್ಲ ಎಂದಿದೆ. ಐಟಿ ಇಲಾಖೆಯಿಂದ ಮೈಂಡ್‌ಟ್ರೀ ಷೇರುಗಳ ಸೇರ್ಪಡೆಯಿಂದ ಉದ್ಭವಿಸಬಹುದಾದ ಗಂಭೀರ ದ್ರವ್ಯತೆ ಬಿಕ್ಕಟ್ಟನ್ನು ಹಣಕಾಸು ದಾಖಲೆಗಳು ಸೂಚಿಸುತ್ತವೆ ಎಂದು ಅದು ಹೇಳಿದೆ. ಸಿದ್ಧಾರ್ಥ್​ ಖಾಸಗಿ ಸಂಸ್ಥೆಯಾದ ಮ್ಯಾಸೆಲ್ 2,693 ಕೋಟಿ ರೂ.ಗಳನ್ನು ಕಾಫಿ ಡೇ ಎಂಟರ್‌ಪ್ರೈಸಸ್‌ಗೆ ನೀಡಬೇಕಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಕೆಫೆ ಕಾಫಿ ಡೇ ಸಂಸ್ಥಾಪಕರು ವರ್ಷ ಜುಲೈ 31ರಂದು ನೇತ್ರಾವತಿ ನದಿಗೆ ಹಾರಿದ್ದರು. ಒಂದು ದಿನದ ನಂತರ ಸ್ಥಳೀಯ ಮೀನುಗಾರರ ನೆರವಿನಿಂದ ಮೃತ ದೇಹ ಹೊರತೆಗೆಯಲಾಗಿತ್ತು.

ನವದೆಹಲಿ : ಕೆಫೆ ಕಾಫಿ ಡೇ ಸಂಸ್ಥಾಪಕ ವಿ ಜಿ ಸಿದ್ಧಾರ್ಥ ಅವರ ಸಾವನ್ನಪ್ಪಿ ಒಂದು ವರ್ಷದ ಬಳಿಕ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ (ಸಿಡಿಇಎಲ್) ನೇಮಕ ಮಾಡಿದ ತನಿಖಾ ಸಮಿತಿಯು ಖಾಸಗಿ ಷೇರು ಹೂಡಿಕೆದಾರರಿಗೆ ಮತ್ತು ಸಾವಿಗೂ ಮುನ್ನ ಕೊನೆಯ ಪತ್ರದಲ್ಲಿ ಹೆಸರಿಸಲಾದ ಆದಾಯ ತೆರಿಗೆ ಇಲಾಖೆಗೆ ವರ್ಚುವಲ್ ಕ್ಲೀನ್ ಚಿಟ್ ನೀಡಿದೆ.

ಖಾಸಗಿ ಷೇರು (ಪಿಇ) ಹೂಡಿಕೆದಾರರು ಮತ್ತು ಇತರ ಸಾಲದಾತರಿಂದ ನಿರಂತರ ರಿಮೈಂಡರ್​ನಿಂದಾಗಿ ಸಿದ್ಧಾರ್ಥ್​ ಆತ್ಮಹತ್ಯೆಯಂತಹಾ ಕೃತ್ಯಕ್ಕೆ ಮುಂದಾಗಿರಬಹುದು ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪಿಇ ಹೂಡಿಕೆದಾರರು ಹಾಗೂ ಸಾಲದಾತರು ನೀಡುವ ಇಂತಹ ರಿಮೈಂಡರ್​ಗಳು ಮತ್ತು ಫಾಲೋಅಪ್​ಗಳು ಉದ್ಯಮದಲ್ಲಿ ವಿಶೇಷವೇನಲ್ಲ. ಪಿಇ ಹೂಡಿಕೆದಾರರು ಅಂಗೀಕೃತ ಕಾನೂನು ಮತ್ತು ವ್ಯವಹಾರ ಮಾನದಂಡಗಳ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದಾರೆಂದು ನಾವು ನಂಬುತ್ತೇವೆ ಎಂದು ವರದಿ ಹೇಳಿದೆ.

ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಅಜಾಗರೂಕ ಕಿರುಕುಳವನ್ನು ತೋರಿಸಲು ತನಿಖಾಧಿಕಾರಿಗಳಿಗೆ ಯಾವುದೇ ಸಾಕ್ಷ್ಯಗಳನ್ನು ಒದಗಿಸಲಾಗಿಲ್ಲ ಎಂದಿದೆ. ಐಟಿ ಇಲಾಖೆಯಿಂದ ಮೈಂಡ್‌ಟ್ರೀ ಷೇರುಗಳ ಸೇರ್ಪಡೆಯಿಂದ ಉದ್ಭವಿಸಬಹುದಾದ ಗಂಭೀರ ದ್ರವ್ಯತೆ ಬಿಕ್ಕಟ್ಟನ್ನು ಹಣಕಾಸು ದಾಖಲೆಗಳು ಸೂಚಿಸುತ್ತವೆ ಎಂದು ಅದು ಹೇಳಿದೆ. ಸಿದ್ಧಾರ್ಥ್​ ಖಾಸಗಿ ಸಂಸ್ಥೆಯಾದ ಮ್ಯಾಸೆಲ್ 2,693 ಕೋಟಿ ರೂ.ಗಳನ್ನು ಕಾಫಿ ಡೇ ಎಂಟರ್‌ಪ್ರೈಸಸ್‌ಗೆ ನೀಡಬೇಕಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಕೆಫೆ ಕಾಫಿ ಡೇ ಸಂಸ್ಥಾಪಕರು ವರ್ಷ ಜುಲೈ 31ರಂದು ನೇತ್ರಾವತಿ ನದಿಗೆ ಹಾರಿದ್ದರು. ಒಂದು ದಿನದ ನಂತರ ಸ್ಥಳೀಯ ಮೀನುಗಾರರ ನೆರವಿನಿಂದ ಮೃತ ದೇಹ ಹೊರತೆಗೆಯಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.