ETV Bharat / business

ಚಾರ್​ಧಾಮ್ ದೇವಸ್ಥಾನಂ ಮಂಡಳಿಗೆ ಕೊರೊನಾ ಸಂಕಷ್ಟ: 5 ಕೋಟಿ ರೂ. ದೇಣಿಗೆ ಕೊಟ್ಟ ಅಂಬಾನಿ ಕುಟುಂಬ

author img

By

Published : Oct 7, 2020, 9:10 PM IST

ತನ್ನ ಉದ್ಯೋಗಿಗಳಿಗೆ ಸಂಬಳ ನೀಡಲು ಮಂಡಳಿಗೆ ಸಹಾಯ ಹಸ್ತ ನೀಡುವಂತೆ ಸಿಂಗ್ ಅವರು ಅಂಬಾನಿ ಕುಟುಂಬಸ್ಥರಿಗೆ ಮನವಿ ಮಾಡಿದ್ದರು. ಅವರ ಮನವಿಗೆ ತಕ್ಷಣವೇ ಸ್ಪಂದಿಸಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ 5 ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ.

Ambani family
ಅಂಬಾನಿ ಕುಟುಂಬ

ಡೆಹ್ರಾಡೂನ್: ಕೋವಿಡ್​ -19 ಲಾಕ್‌ಡೌನ್ ಮಧ್ಯೆ ಅನುಭವಿಸಿದ ಆರ್ಥಿಕ ನಷ್ಟವನ್ನು ಎದುರಿಸಲು ಅಂಬಾನಿ ಕುಟುಂಬವು ಉತ್ತರಾಖಂಡ್​ನ ಚಾರ್​ಧಾಮ್​ ದೇವಸ್ಥಾನಂ ಮಂಡಳಿಗೆ ಐದು ಕೋಟಿ ರೂ. ದೇಣಿಗೆ ನೀಡಿದೆ.

ಮಂಡಳಿಯ ಹೆಚ್ಚುವರಿ ಸಿಇಒ ಬಿ ಡಿ ಸಿಂಗ್ ಅವರ ಕೋರಿಕೆಯ ಮೇರೆಗೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಈ ದೇಣಿಗೆ ನೀಡಿದ್ದಾರೆ ಎಂದು ಮಂಡಳಿಯ ಮಾಧ್ಯಮ ಘಟಕ ತಿಳಿಸಿದೆ.

ತನ್ನ ಉದ್ಯೋಗಿಗಳಿಗೆ ಸಂಬಳ ನೀಡಲು ಮಂಡಳಿಗೆ ಸಹಾಯ ಹಸ್ತ ನೀಡುವಂತೆ ಸಿಂಗ್ ಅವರು ಅಂಬಾನಿ ಕುಟುಂಬಸ್ಥರಿಗೆ ಮನವಿ ಮಾಡಿದ್ದರು. ಅವರ ಮನವಿಗೆ ತಕ್ಷಣವೇ ಸ್ಪಂದಿಸಿ ದೇಣಿಗೆ ಕೊಟ್ಟಿದ್ದಾರೆ.

ಚಾರ್​ಧಾಮ್ ಎಂದರೆ ನಾಲ್ಕು ಹಿಂದೂ ಧಾರ್ಮಿಕ ಸ್ಥಳಗಳಾಗಿವೆ. ಬದರೀನಾಥ, ಕೇದಾರನಾಥ, ಯಮನೋತ್ರಿ, ಗಂಗೋತ್ರಿ ದೇವಸ್ಥಾನಗಳಿಗೆ ಚಾರ್​ಧಾಮ್ ಎಂದು ವ್ಯವಹಾರಿಕವಾಗಿ ಕರೆಯಲಾಗುತ್ತದೆ.

ಡೆಹ್ರಾಡೂನ್: ಕೋವಿಡ್​ -19 ಲಾಕ್‌ಡೌನ್ ಮಧ್ಯೆ ಅನುಭವಿಸಿದ ಆರ್ಥಿಕ ನಷ್ಟವನ್ನು ಎದುರಿಸಲು ಅಂಬಾನಿ ಕುಟುಂಬವು ಉತ್ತರಾಖಂಡ್​ನ ಚಾರ್​ಧಾಮ್​ ದೇವಸ್ಥಾನಂ ಮಂಡಳಿಗೆ ಐದು ಕೋಟಿ ರೂ. ದೇಣಿಗೆ ನೀಡಿದೆ.

ಮಂಡಳಿಯ ಹೆಚ್ಚುವರಿ ಸಿಇಒ ಬಿ ಡಿ ಸಿಂಗ್ ಅವರ ಕೋರಿಕೆಯ ಮೇರೆಗೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಈ ದೇಣಿಗೆ ನೀಡಿದ್ದಾರೆ ಎಂದು ಮಂಡಳಿಯ ಮಾಧ್ಯಮ ಘಟಕ ತಿಳಿಸಿದೆ.

ತನ್ನ ಉದ್ಯೋಗಿಗಳಿಗೆ ಸಂಬಳ ನೀಡಲು ಮಂಡಳಿಗೆ ಸಹಾಯ ಹಸ್ತ ನೀಡುವಂತೆ ಸಿಂಗ್ ಅವರು ಅಂಬಾನಿ ಕುಟುಂಬಸ್ಥರಿಗೆ ಮನವಿ ಮಾಡಿದ್ದರು. ಅವರ ಮನವಿಗೆ ತಕ್ಷಣವೇ ಸ್ಪಂದಿಸಿ ದೇಣಿಗೆ ಕೊಟ್ಟಿದ್ದಾರೆ.

ಚಾರ್​ಧಾಮ್ ಎಂದರೆ ನಾಲ್ಕು ಹಿಂದೂ ಧಾರ್ಮಿಕ ಸ್ಥಳಗಳಾಗಿವೆ. ಬದರೀನಾಥ, ಕೇದಾರನಾಥ, ಯಮನೋತ್ರಿ, ಗಂಗೋತ್ರಿ ದೇವಸ್ಥಾನಗಳಿಗೆ ಚಾರ್​ಧಾಮ್ ಎಂದು ವ್ಯವಹಾರಿಕವಾಗಿ ಕರೆಯಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.