ETV Bharat / business

ಪಿಎಂಸಿ ಬ್ಯಾಂಕ್ ಹಗರಣ: ಬ್ಯಾಂಕ್​ನ ಮೂವರು ಮಾಜಿ ನಿರ್ದೇಶಕರಿಗೆ ಬಾಂಬೆ ಹೈಕೋರ್ಟ್ ಜಾಮೀನು - ಪಿಎಂಸಿ ಬ್ಯಾಂಕ್ ಅಧಿಕಾರಿಗಳ ಜಾಮೀನು

ನಿರ್ದೇಶಕರಾಗಿದ್ದ ಮುಕ್ತಿ ಬವಿಸಿ, ತೃಪ್ತಿ ಸುಹಾಸ್ ಬೇನ್ ಮತ್ತು ರಂಜೀತ್ ತಾರಾ ಸಿಂಗ್ ನಂದ್ರಾಜೋಗ್ ಅವರಿಗೆ ಬಾಂಬೆ ಹೈಕೋರ್ಟ್​ ಜಾಮೀನು ನೀಡಿದೆ. ಈ ವೇಳೆ ನ್ಯಾಯಾಲಯವು ಅವರ ಪಾಸ್​ಪೋರ್ಟ್​ಗಳನ್ನು ಸಲ್ಲಿಸುವಂತೆ ಹೇಳಿದೆ.

PMC Bank scam
PMC Bank scam
author img

By

Published : May 5, 2021, 10:41 PM IST

ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್​ (ಪಿಎಂಸಿ) ಹಗರಣ ಆರೋಪದಲ್ಲಿ 2019ರ ಡಿಸೆಂಬರ್​ನಲ್ಲಿ ಬಂಧಿತರಾಗಿದ್ದ ಬ್ಯಾಂಕ್​ನ ಮೂವರು ಮಾಜಿ ನಿರ್ದೇಶಕರಿಗೆ ಬಾಂಬೆ ಹೈಕೋರ್ಟ್​ ಜಾಮೀನು ಕರುಣಿಸಿದೆ.

ನಿರ್ದೇಶಕರಾಗಿದ್ದ ಮುಕ್ತಿ ಬವಿಸಿ, ತೃಪ್ತಿ ಸುಹಾಸ್ ಬೇನ್ ಮತ್ತು ರಂಜೀತ್ ತಾರಾ ಸಿಂಗ್ ನಂದ್ರಾಜೋಗ್ ಅವರಿಗೆ ಜಾಮೀನು ನೀಡಿದೆ. ನ್ಯಾಯಾಲಯವು ಅವರ ಪಾಸ್​ಪೋರ್ಟ್​ಗಳನ್ನು ಸಲ್ಲಿಸುವಂತೆ ಹೇಳಿದೆ.

2020ರ ಮೇ ತಿಂಗಳಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ ನಂತರ ಈ ಮೂವರು ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.

ಹಗರಣದ ಪ್ರಮುಖ ಆರೋಪಿಗಳಲ್ಲಿ ಈ ಮೂವರು ಸೇರಿದ್ದಾರೆ. ಬವಿಸಿ 2011ರಿಂದ ಪಿಎಂಸಿ ಬ್ಯಾಂಕಿನ ಸಾಲ ಮತ್ತು ಮುಂಗಡ ಸಮಿತಿಯ ನಿರ್ದೇಶಕ ಮತ್ತು ಸದಸ್ಯರಾಗಿದ್ದರು. ಬೇನ್ 2010ರಿಂದ 2015ರ ನಡುವೆ ಸಾಲ ಮರುಪಡೆಯುವಿಕೆ ಸಮಿತಿಯ ಸದಸ್ಯರಾಗಿದ್ದರು. 2015 ರಿಂದ ಸಾಲ ಮತ್ತು ಮುಂಗಡ ಉಸ್ತುವಾರಿ ವಹಿಸಿಕೊಂಡಿದ್ದರು. ನಿರ್ದೇಶಕರಲ್ಲದೇ, ನಂದ್ರಾಜಾಗ್ ಬ್ಯಾಂಕಿನ ಚೇತರಿಕೆ ಸಮಿತಿಯ ಸದಸ್ಯರಾಗಿದ್ದರು. ಸುಮಾರು 13 ವರ್ಷಗಳ ಕಾಲ ಇದ್ದರು.

ಹಗರಣದ ನಂತರ ಗ್ರಾಹಕರು ವಾಪಸಾತಿ ಸೇರಿದಂತೆ ವಂಚನೆ ಪೀಡಿತ ಬಹು - ರಾಜ್ಯ ನಗರ ಸಹಕಾರಿ ಬ್ಯಾಂಕ್‌ಗೆ ಆರ್‌ಬಿಐ 2019ರ ಸೆಪ್ಟಂಬರ್‌ನಲ್ಲಿ ನಿರ್ಬಂಧ ಹೇರಿತ್ತು. ಪಿಎಂಸಿ ಬ್ಯಾಂಕ್ ಹೌಸಿಂಗ್ ಡೆವಲಪ್‌ಮೆಂಟ್ ಅಂಡ್​ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್​ಗೆ (ಎಚ್‌ಡಿಐಎಲ್) ನೀಡಿದ ಸಾಲಗಳಲ್ಲಿ ಅಕ್ರಮಗಳನ್ನು ಕೇಂದ್ರ ಬ್ಯಾಂಕ್​ ಪತ್ತೆ ಹಚ್ಚಿತ್ತು.

ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್​ (ಪಿಎಂಸಿ) ಹಗರಣ ಆರೋಪದಲ್ಲಿ 2019ರ ಡಿಸೆಂಬರ್​ನಲ್ಲಿ ಬಂಧಿತರಾಗಿದ್ದ ಬ್ಯಾಂಕ್​ನ ಮೂವರು ಮಾಜಿ ನಿರ್ದೇಶಕರಿಗೆ ಬಾಂಬೆ ಹೈಕೋರ್ಟ್​ ಜಾಮೀನು ಕರುಣಿಸಿದೆ.

ನಿರ್ದೇಶಕರಾಗಿದ್ದ ಮುಕ್ತಿ ಬವಿಸಿ, ತೃಪ್ತಿ ಸುಹಾಸ್ ಬೇನ್ ಮತ್ತು ರಂಜೀತ್ ತಾರಾ ಸಿಂಗ್ ನಂದ್ರಾಜೋಗ್ ಅವರಿಗೆ ಜಾಮೀನು ನೀಡಿದೆ. ನ್ಯಾಯಾಲಯವು ಅವರ ಪಾಸ್​ಪೋರ್ಟ್​ಗಳನ್ನು ಸಲ್ಲಿಸುವಂತೆ ಹೇಳಿದೆ.

2020ರ ಮೇ ತಿಂಗಳಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ ನಂತರ ಈ ಮೂವರು ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.

ಹಗರಣದ ಪ್ರಮುಖ ಆರೋಪಿಗಳಲ್ಲಿ ಈ ಮೂವರು ಸೇರಿದ್ದಾರೆ. ಬವಿಸಿ 2011ರಿಂದ ಪಿಎಂಸಿ ಬ್ಯಾಂಕಿನ ಸಾಲ ಮತ್ತು ಮುಂಗಡ ಸಮಿತಿಯ ನಿರ್ದೇಶಕ ಮತ್ತು ಸದಸ್ಯರಾಗಿದ್ದರು. ಬೇನ್ 2010ರಿಂದ 2015ರ ನಡುವೆ ಸಾಲ ಮರುಪಡೆಯುವಿಕೆ ಸಮಿತಿಯ ಸದಸ್ಯರಾಗಿದ್ದರು. 2015 ರಿಂದ ಸಾಲ ಮತ್ತು ಮುಂಗಡ ಉಸ್ತುವಾರಿ ವಹಿಸಿಕೊಂಡಿದ್ದರು. ನಿರ್ದೇಶಕರಲ್ಲದೇ, ನಂದ್ರಾಜಾಗ್ ಬ್ಯಾಂಕಿನ ಚೇತರಿಕೆ ಸಮಿತಿಯ ಸದಸ್ಯರಾಗಿದ್ದರು. ಸುಮಾರು 13 ವರ್ಷಗಳ ಕಾಲ ಇದ್ದರು.

ಹಗರಣದ ನಂತರ ಗ್ರಾಹಕರು ವಾಪಸಾತಿ ಸೇರಿದಂತೆ ವಂಚನೆ ಪೀಡಿತ ಬಹು - ರಾಜ್ಯ ನಗರ ಸಹಕಾರಿ ಬ್ಯಾಂಕ್‌ಗೆ ಆರ್‌ಬಿಐ 2019ರ ಸೆಪ್ಟಂಬರ್‌ನಲ್ಲಿ ನಿರ್ಬಂಧ ಹೇರಿತ್ತು. ಪಿಎಂಸಿ ಬ್ಯಾಂಕ್ ಹೌಸಿಂಗ್ ಡೆವಲಪ್‌ಮೆಂಟ್ ಅಂಡ್​ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್​ಗೆ (ಎಚ್‌ಡಿಐಎಲ್) ನೀಡಿದ ಸಾಲಗಳಲ್ಲಿ ಅಕ್ರಮಗಳನ್ನು ಕೇಂದ್ರ ಬ್ಯಾಂಕ್​ ಪತ್ತೆ ಹಚ್ಚಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.