ETV Bharat / business

ಇನ್ನು ಮುಂದೆ ಜೆಟ್​ನ ಒಂದೂ ವಿಮಾನ ಹಾರಾಟ ನಿಲ್ಲಲ್ಲ: ಪ್ರದೀಪ್​ ಸಿಂಗ್​​​​ ಭರವಸೆ

author img

By

Published : Mar 26, 2019, 9:21 PM IST

ಇಂದು ಸಂಜೆ ನಾಗರಿಕ ವಿಮಾನಯಾನದ ನಿರ್ದೇಶಕ ಬಿ.ಎಸ್​. ಭುಲ್ಲಾರ್​, ಎಸ್​ಬಿಐ ಮುಖ್ಯಸ್ಥ ರಜ್ನಿಶ್ ಕುಮಾರ್ ಸೇರಿದಂತೆ ಇತರರು ಖರೋಲ್ ಕರೆದಿದ್ದ ಸಭೆಯಲ್ಲಿ ಭಾಗವಹಿಸಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರದೀಪ್ ಸಿಂಗ್​ ಖರೋಲಾ

ನವದೆಹಲಿ: ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಜೆಟ್ ಏರ್‌ವೇಸ್ ಸಂಸ್ಥೆಗೆ ಸಂಸ್ಥಾಪಕ ಅಧ್ಯಕ್ಷ ನರೇಶ್ ಗೋಯಲ್ ರಾಜೀನಾಮೆ ಸಲ್ಲಿಸಿದ ಮರುದಿನ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್​ ಖರೋಲಾ ವಿವಿಧ ಅಧಿಕಾರಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ.

ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ಅವರು ಸೋಮವಾರ ಸಂಸ್ಥೆಯೊಂದಿಗೆ ಸಭೆ ನಡೆಸಿ ವಿಮಾನಯಾನ ಸಂಸ್ಥೆಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದರು.

'ಇನ್ನು ಮುಂದೆ ಜೆಟ್​ನ ಯಾವುದೇ ವಿಮಾನ ಹಾರಾಟ ಸೇವೆಯಿಂದೆ ಹಿಂದೆ ಸರಿಯುವುದಿಲ್ಲ ಎಂಬ ಭರವಸೆಯನ್ನು ಸಂಸ್ಥೆ ನೀಡಿದೆ. ಇಂದು 35 ವಿಮಾನಗಳು ಸೇವೆಯಲ್ಲಿದ್ದು, ಮುಂದಿನ ಒಂದು ತಿಂಗಳ ಕಾಲ ಡಿಜಿಸಿಎಯನ್ನು ಅನುಸರಿಸಿ ವೇಳಾ ಪಟ್ಟಿಗೆ ಅನುಮೋದನೆ ನೀಡಲಿದ್ದಾರೆ' ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.

  • Pradeep Singh Kharola, Secretary, Ministry of Civil Aviation: They (Jet Airways) have assured us that no more jets will be grounded, today 35 planes are flying, they will approach the DGCA for the next one month to get the schedule approved for the 35 planes. pic.twitter.com/agTIXoDkd9

    — ANI (@ANI) March 26, 2019 " class="align-text-top noRightClick twitterSection" data=" ">

25 ವರ್ಷಗಳ ಹಿಂದೆ ಆರಂಭವಾದ ಜೆಟ್​ ಏರ್​ವೇಸ್ ಸಂಸ್ಥೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದೆ. ಬಂಡವಾಳ ಹೆಚ್ಚಿಸಿಕೊಳ್ಳಲು ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದೆ. ಸಂಸ್ಥೆಯು ಏಪ್ರಿಲ್ ಅಂತ್ಯದ ವೇಳೆಗೆ 14 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಗಳ ಹಾರಾಟವನ್ನು ರದ್ದುಪಡಿಸುವುದಾಗಿ ಪ್ರಕಟಿಸಿತ್ತು. ಇದಲ್ಲದೆ, ಬಾಡಿಗೆ ಮತ್ತು ಗುತ್ತಿಗೆ ಹಣವನ್ನು ಪಾವತಿಸದೆ ನಿಂತಿರುವ 54 ವಿಮಾನಗಳು ಸೇರಿದಂತೆ ಸಂಸ್ಥೆಯ ಒಟ್ಟು 80 ವಿಮಾನಗಳ ಹಾರಾಟ ಸ್ಥಗಿತಗೊಂಡತಾಗಿದೆ. ಸಂಸ್ಥೆಯ ಪುನರುಜ್ಜೀವನಕ್ಕೆ ಅಂದಾಜು 10 ಸಾವಿರ ಕೋಟಿ ರೂ. ನೆರವಿನ ಅಗತ್ಯವಿದೆ ಎಂದು ಉದ್ಯಮ ತಜ್ಞರು ಅಂದಾಜಿಸಿದ್ದಾರೆ.

ನವದೆಹಲಿ: ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಜೆಟ್ ಏರ್‌ವೇಸ್ ಸಂಸ್ಥೆಗೆ ಸಂಸ್ಥಾಪಕ ಅಧ್ಯಕ್ಷ ನರೇಶ್ ಗೋಯಲ್ ರಾಜೀನಾಮೆ ಸಲ್ಲಿಸಿದ ಮರುದಿನ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್​ ಖರೋಲಾ ವಿವಿಧ ಅಧಿಕಾರಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ.

ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ಅವರು ಸೋಮವಾರ ಸಂಸ್ಥೆಯೊಂದಿಗೆ ಸಭೆ ನಡೆಸಿ ವಿಮಾನಯಾನ ಸಂಸ್ಥೆಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದರು.

'ಇನ್ನು ಮುಂದೆ ಜೆಟ್​ನ ಯಾವುದೇ ವಿಮಾನ ಹಾರಾಟ ಸೇವೆಯಿಂದೆ ಹಿಂದೆ ಸರಿಯುವುದಿಲ್ಲ ಎಂಬ ಭರವಸೆಯನ್ನು ಸಂಸ್ಥೆ ನೀಡಿದೆ. ಇಂದು 35 ವಿಮಾನಗಳು ಸೇವೆಯಲ್ಲಿದ್ದು, ಮುಂದಿನ ಒಂದು ತಿಂಗಳ ಕಾಲ ಡಿಜಿಸಿಎಯನ್ನು ಅನುಸರಿಸಿ ವೇಳಾ ಪಟ್ಟಿಗೆ ಅನುಮೋದನೆ ನೀಡಲಿದ್ದಾರೆ' ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.

  • Pradeep Singh Kharola, Secretary, Ministry of Civil Aviation: They (Jet Airways) have assured us that no more jets will be grounded, today 35 planes are flying, they will approach the DGCA for the next one month to get the schedule approved for the 35 planes. pic.twitter.com/agTIXoDkd9

    — ANI (@ANI) March 26, 2019 " class="align-text-top noRightClick twitterSection" data=" ">

25 ವರ್ಷಗಳ ಹಿಂದೆ ಆರಂಭವಾದ ಜೆಟ್​ ಏರ್​ವೇಸ್ ಸಂಸ್ಥೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದೆ. ಬಂಡವಾಳ ಹೆಚ್ಚಿಸಿಕೊಳ್ಳಲು ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದೆ. ಸಂಸ್ಥೆಯು ಏಪ್ರಿಲ್ ಅಂತ್ಯದ ವೇಳೆಗೆ 14 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಗಳ ಹಾರಾಟವನ್ನು ರದ್ದುಪಡಿಸುವುದಾಗಿ ಪ್ರಕಟಿಸಿತ್ತು. ಇದಲ್ಲದೆ, ಬಾಡಿಗೆ ಮತ್ತು ಗುತ್ತಿಗೆ ಹಣವನ್ನು ಪಾವತಿಸದೆ ನಿಂತಿರುವ 54 ವಿಮಾನಗಳು ಸೇರಿದಂತೆ ಸಂಸ್ಥೆಯ ಒಟ್ಟು 80 ವಿಮಾನಗಳ ಹಾರಾಟ ಸ್ಥಗಿತಗೊಂಡತಾಗಿದೆ. ಸಂಸ್ಥೆಯ ಪುನರುಜ್ಜೀವನಕ್ಕೆ ಅಂದಾಜು 10 ಸಾವಿರ ಕೋಟಿ ರೂ. ನೆರವಿನ ಅಗತ್ಯವಿದೆ ಎಂದು ಉದ್ಯಮ ತಜ್ಞರು ಅಂದಾಜಿಸಿದ್ದಾರೆ.

Intro:Body:

ಇನ್ನೂ ಮುಂದೆ ಜೆಟ್​ನ ಒಂದೂ ವಿಮಾನ ಹಾರಾಟ ನಿಲ್ಲಲ್ಲ: ಪ್ರದೀಪ್ ಸಿಂಗ್ ಭರವಸೆ



ನವದೆಹಲಿ: ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಜೆಟ್ ಏರ್‌ವೇಸ್ ಸಂಸ್ಥೆಗೆ ಸಂಸ್ಥಾಪಕ ಅಧ್ಯಕ್ಷ ನರೇಶ್ ಗೋಯಲ್ ರಾಜೀನಾಮೆ ಸಲ್ಲಿಸಿದ ಮರುದಿನ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್​ ಖರೋಲಾ ಅವರು ವಿವಿಧ ಅಧಿಕಾರಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ.



ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ಅವರು ಸೋಮವಾರ ಸಂಸ್ಥೆಯೊಂದಿಗೆ ಸಭೆ ನಡೆಸಿ ವಿಮಾನಯಾನ ಸಂಸ್ಥೆಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದರು.



ಇಂದು ಸಂಜೆ ನಾಗರಿಕ ವಿಮಾನಯಾನದ ನಿರ್ದೇಶಕ ಬಿ.ಎಸ್​. ಭುಲ್ಲಾರ್​, ಎಸ್​ಬಿಐ ಮುಖ್ಯಸ್ಥ ರಜ್ನಿಶ್ ಕುಮಾರ್ ಸೇರಿದಂತೆ ಇತರರು ಖರೋಲ್ ಕರೆದಿದ್ದ ಸಭೆಯಲ್ಲಿ ಭಾಗವಹಿಸಿ ಹಲವು ವಿಷಯಗಳು ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.



'ಇನ್ನು ಮುಂದೆ ಜೆಟ್​ನ ಯಾವುದೇ ವಿಮಾನ ಹಾರಾಟ ಸೇವೆಯಿಂದೆ ಹಿಂದೆ ಸರಿಯುವುದಿಲ್ಲ ಎಂಬ ಭರವಸೆಯನ್ನು ಸಂಸ್ಥೆ ನೀಡಿದೆ. ಇಂದು 35 ವಿಮಾನಗಳು ಸೇವೆಯಲ್ಲಿದ್ದು, ಮುಂದಿನ ಒಂದು ತಿಂಗಳ ಕಾಲ ಡಿಜಿಸಿಎಯನ್ನು ಅನುಸರಿಸಿ ವೇಳಾ ಪಟ್ಟಿಗೆ ಅನುಮೋದನೆ ನೀಡಲಿದ್ದಾರೆ' ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.



25 ವರ್ಷಗಳ ಹಿಂದೆ ಆರಂಭವಾದ ಜೆಟ್​ ಏರ್​ವೇಸ್ ಸಂಸ್ಥೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದೆ. ಬಂಡವಾಳ ಹೆಚ್ಚಿಸಿಕೊಳ್ಳಲು ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದೆ. ಸಂಸ್ಥೆಯು ಏಪ್ರಿಲ್ ಅಂತ್ಯದ ವೇಳೆಗೆ 14 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಗಳ ಹಾರಾಟವನ್ನು ರದ್ದುಪಡಿಸುವುದಾಗಿ ಪ್ರಕಟಿಸಿತ್ತು. ಇದಲ್ಲದೆ, ಬಾಡಿಗೆ ಮತ್ತು ಗುತ್ತಿಗೆ ಹಣವನ್ನು ಪಾವತಿಸದೆ ನಿಂತಿರುವ 54 ವಿಮಾನಗಳು ಸೇರಿದಂತೆ ಸಂಸ್ಥೆಯ ಒಟ್ಟು 80 ವಿಮಾನಗಳು ಹಾರಾಟ ಸ್ಥಗಿತಗೊಂಡತಾಗಿದೆ. ಸಂಸ್ಥೆಯ ಪುನರುಜ್ಜೀವನಕ್ಕೆ ಅಂದಾಜು 10 ಸಾವಿರ ಕೋಟಿ ರೂ. ನೆರವಿನ ಅಗತ್ಯವಿದೆ ಎಂದು ಉದ್ಯಮ ತಜ್ಞರು ಅಂದಾಜಿಸಿದ್ದಾರೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.