ETV Bharat / business

ಟೆಲಿಕಾಂ ಎಜಿಆರ್​ನ ₹ 4 ಲಕ್ಷ ಕೋಟಿಯಲ್ಲಿ ಶೇ 96% ಹಿಂಪಡೆಯಲು ಕೇಂದ್ರ ನಿರ್ಧಾರ

author img

By

Published : Jun 18, 2020, 4:41 PM IST

ಎಜಿಆರ್ ಆಧಾರದ ಮೇಲೆ ತಮ್ಮ ಬಾಕಿ ಹಣ ಪಾವತಿಗೆ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ಸೇರಿದಂತೆ ಖಾಸಗಿ ಟೆಲಿಕಾಂ ಕಂಪನಿಗಳು ಸಲ್ಲಿಸಿದ್ದ ಅಫಿಡವಿಟ್‌ಗಳಿಗೆ ಸ್ಪಂದಿಸಲು ಡಿಒಟಿ ನ್ಯಾಯಪೀಠದಿಂದ ಸಮಯ ಕೋರಿದೆ.

Supreme Court
ಸುಪ್ರೀಂಕೋರ್ಟ್​

ನವದೆಹಲಿ: ಖಾಸಗಿ ದೂರಸಂಪರ್ಕ ಕಂಪನಿಗಳಿಂದ ಬಾಕಿ ಇರುವ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಶುಲ್ಕ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಡಿಕೆ ಇಡಲಾಗಿದ್ದ 4 ಲಕ್ಷ ಕೋಟಿ ರೂ.ಯಲ್ಲಿ ಶೇ 96ರಷ್ಟು ವಾಪಸ್​ ಪಡೆಯಲು ದೂರಸಂಪರ್ಕ ಇಲಾಖೆ ನಿರ್ಧರಿಸಿದೆ ಎಂದು ಕೇಂದ್ರ ಗುರುವಾರ ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದೆ.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್ ಅಬ್ದುಲ್ ನಜೀರ್ ಮತ್ತು ಎಂ ಆರ್ ಷಾ ಅವರಿದ್ದ ನ್ಯಾಯಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿದ್ದು, ಪಿಎಸ್‌ಯುಗಳ ವಿರುದ್ಧ ಎಜಿಆರ್ ಸಂಬಂಧಿತ ಬಾಕಿ ಬೇಡಿಕೆ ಹೆಚ್ಚಿಸಲು ಕಾರಣ ವಿವರಿಸುವ ಮೂಲಕ ಡಿಒಟಿ ಅಫಿಡವಿಟ್ ಸಲ್ಲಿಸಿದೆ.

ಎಜಿಆರ್ ಆಧಾರದ ಮೇಲೆ ತಮ್ಮ ಬಾಕಿ ಹಣ ಪಾವತಿಗೆ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ಸೇರಿದಂತೆ ಖಾಸಗಿ ಟೆಲಿಕಾಂ ಕಂಪನಿಗಳು ಸಲ್ಲಿಸಿದ ಅಫಿಡವಿಟ್‌ಗಳಿಗೆ ಸ್ಪಂದಿಸಲು ಡಿಒಟಿ ನ್ಯಾಯಪೀಠದಿಂದ ಸಮಯ ಕೋರಿದೆ.

ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆ ನಡೆಸಿದ ನ್ಯಾಯಪೀಠ, ಟೆಲಿಕಾಂ ಕಂಪನಿಗಳಿಗೆ ಹಣಕಾಸು ಹೇಳಿಕೆಗಳನ್ನು ಸಲ್ಲಿಸಲು ಸೂಚಿಸಿ ಮುಂದಿನ ವಿಚಾರಣೆಯನ್ನು ಜುಲೈ ಮೂರನೇ ವಾರಕ್ಕೆ ಮುಂದೂಡಿತು.

ವಿಚಾರಣೆಯ ಸಮಯದಲ್ಲಿ ನ್ಯಾಯಪೀಠವು ಭದ್ರತೆ ಮತ್ತು ಖಾತರಿಗೆ ಏನು ಕೊಡುತ್ತೀರಾ ಎಂದು ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ಕೇಳಿತು.

ವೊಡಾಫೋನ್ ಐಡಿಯಾ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಈಗಾಗಲೇ 7,000 ಕೋಟಿ ರೂ. ಡಿಒಟಿಗೆ ಪಾವತಿಸಿದೆ. ಪ್ರಸ್ತುತ ಅನಿಶ್ಚಿತ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಬ್ಯಾಂಕ್ ಗ್ಯಾರಂಟಿ ನೀಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದರು.

ಕೋವಿಡ್​ -19 ಸಾಂಕ್ರಾಮಿಕ ಸಮಯದಲ್ಲಿ ಟೆಲಿಕಾಂ ಹಣ ಗಳಿಸುವ ವಲಯವಾಗಿದೆ. ಈ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರಕ್ಕೆ ಅಗತ್ಯವಿರುವ ಕಾರಣ, ಅವರು ಸ್ವಲ್ಪ ಹಣವನ್ನು ಠೇವಣಿ ಇಡಬೇಕೆಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ನವದೆಹಲಿ: ಖಾಸಗಿ ದೂರಸಂಪರ್ಕ ಕಂಪನಿಗಳಿಂದ ಬಾಕಿ ಇರುವ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಶುಲ್ಕ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಡಿಕೆ ಇಡಲಾಗಿದ್ದ 4 ಲಕ್ಷ ಕೋಟಿ ರೂ.ಯಲ್ಲಿ ಶೇ 96ರಷ್ಟು ವಾಪಸ್​ ಪಡೆಯಲು ದೂರಸಂಪರ್ಕ ಇಲಾಖೆ ನಿರ್ಧರಿಸಿದೆ ಎಂದು ಕೇಂದ್ರ ಗುರುವಾರ ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದೆ.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್ ಅಬ್ದುಲ್ ನಜೀರ್ ಮತ್ತು ಎಂ ಆರ್ ಷಾ ಅವರಿದ್ದ ನ್ಯಾಯಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿದ್ದು, ಪಿಎಸ್‌ಯುಗಳ ವಿರುದ್ಧ ಎಜಿಆರ್ ಸಂಬಂಧಿತ ಬಾಕಿ ಬೇಡಿಕೆ ಹೆಚ್ಚಿಸಲು ಕಾರಣ ವಿವರಿಸುವ ಮೂಲಕ ಡಿಒಟಿ ಅಫಿಡವಿಟ್ ಸಲ್ಲಿಸಿದೆ.

ಎಜಿಆರ್ ಆಧಾರದ ಮೇಲೆ ತಮ್ಮ ಬಾಕಿ ಹಣ ಪಾವತಿಗೆ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ಸೇರಿದಂತೆ ಖಾಸಗಿ ಟೆಲಿಕಾಂ ಕಂಪನಿಗಳು ಸಲ್ಲಿಸಿದ ಅಫಿಡವಿಟ್‌ಗಳಿಗೆ ಸ್ಪಂದಿಸಲು ಡಿಒಟಿ ನ್ಯಾಯಪೀಠದಿಂದ ಸಮಯ ಕೋರಿದೆ.

ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆ ನಡೆಸಿದ ನ್ಯಾಯಪೀಠ, ಟೆಲಿಕಾಂ ಕಂಪನಿಗಳಿಗೆ ಹಣಕಾಸು ಹೇಳಿಕೆಗಳನ್ನು ಸಲ್ಲಿಸಲು ಸೂಚಿಸಿ ಮುಂದಿನ ವಿಚಾರಣೆಯನ್ನು ಜುಲೈ ಮೂರನೇ ವಾರಕ್ಕೆ ಮುಂದೂಡಿತು.

ವಿಚಾರಣೆಯ ಸಮಯದಲ್ಲಿ ನ್ಯಾಯಪೀಠವು ಭದ್ರತೆ ಮತ್ತು ಖಾತರಿಗೆ ಏನು ಕೊಡುತ್ತೀರಾ ಎಂದು ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ಕೇಳಿತು.

ವೊಡಾಫೋನ್ ಐಡಿಯಾ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಈಗಾಗಲೇ 7,000 ಕೋಟಿ ರೂ. ಡಿಒಟಿಗೆ ಪಾವತಿಸಿದೆ. ಪ್ರಸ್ತುತ ಅನಿಶ್ಚಿತ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಬ್ಯಾಂಕ್ ಗ್ಯಾರಂಟಿ ನೀಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದರು.

ಕೋವಿಡ್​ -19 ಸಾಂಕ್ರಾಮಿಕ ಸಮಯದಲ್ಲಿ ಟೆಲಿಕಾಂ ಹಣ ಗಳಿಸುವ ವಲಯವಾಗಿದೆ. ಈ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರಕ್ಕೆ ಅಗತ್ಯವಿರುವ ಕಾರಣ, ಅವರು ಸ್ವಲ್ಪ ಹಣವನ್ನು ಠೇವಣಿ ಇಡಬೇಕೆಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.