ETV Bharat / business

ಹಿಂದುತ್ವಕ್ಕೆ ತಲೆ ಬಾಗಿದ 'ಕೈ' ಸರ್ಕಾರ: ಗೋ ರಕ್ಷಣೆಗೆ ₹ 132 ಕೋಟಿ

author img

By

Published : Jul 11, 2019, 7:40 PM IST

ಕಳೆದ ಏಳು ತಿಂಗಳಿಂದ ಕಮಲ್​ನಾಥ್ ನೈತೃತ್ವದ​ ಸರ್ಕಾರ ಆಡಳಿತ ನಡೆಸುತ್ತಿದ್ದು, ವಿಧಾನಸಭಾ ಚುನಾವಣೆಗೂ ಮುನ್ನ ತಳೆದಿದ್ದ ಮೃದು ಹಿಂದುತ್ವದ ಧೋರಣೆಯನ್ನು ಬಜೆಟ್​ನಲ್ಲಿಯೂ ಮುಂದುವರಿಸಿಕೊಂಡು ಹೋಗಿದೆ. ಗೋವುಗಳ ಸಂರಕ್ಷಣೆಗೆ ₹ 132 ಕೋಟಿ ಮೀಸಲಿಟ್ಟಿದ್ದು, ಗೋಶಾಲೆ ನಿರ್ವಹಣೆ ಭತ್ಯೆಯನ್ನು  ₹ 4 ರಿಂದ ₹ 20ಕ್ಕೆ ಏರಿಕೆ ಮಾಡಿದ್ದಾರೆ. ಜೊತೆಗೆ ರಾಜ್ಯ ವಕ್ಫಾ ಮಂಡಳಿ ಹಾಗೂ ಹಜ್​ ಸಮಿತಿಯ ಅನುದಾನ ಹೆಚ್ಚಿಸಿ ಸಮತೋಲನದ ನಡೆ ಅನುಸರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಭೋಪಾಲ್​: ಮಧ್ಯಪ್ರದೇಶದ ಸಿಎಂ ಕಮಲ್‌ನಾಥ್‌ ನೇತೃತ್ವದ ಸರ್ಕಾರದ ಹಣಕಾಸು ಸಚಿವ ತರುಣ್ ಭಾನೋಟ್​ ಅವರು 2019-20ನೇ ಸಾಲಿನ ₹ 2.33 ಲಕ್ಷ ಕೋಟಿಯ ರಾಜ್ಯ ಬಜೆಟ್​ ಮಂಡಿಸಿದ್ದಾರೆ.

ಕಳೆದ ಏಳು ತಿಂಗಳಿಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದು, ವಿಧಾನಸಭಾ ಚುನಾವಣೆಗೂ ಮುನ್ನ ತಳೆದಿದ್ದ ಮೃದು ಹಿಂದುತ್ವದ ಧೋರಣೆಯನ್ನು ಬಜೆಟ್​ನಲ್ಲಿಯೂ ಮುಂದುವರಿಸಿದೆ. ಗೋವುಗಳ ಸಂರಕ್ಷಣೆಗೆ ₹ 132 ಕೋಟಿ ಮೀಸಲಿಟ್ಟಿದ್ದು, ಗೋಶಾಲೆ ನಿರ್ವಹಣೆ ಭತ್ಯೆಯನ್ನು ₹ 4 ರಿಂದ ₹ 20ಕ್ಕೆ ಏರಿಕೆ ಮಾಡಿದ್ದಾರೆ. ಇದರ ಜೊತೆಗೆ ರಾಜ್ಯ ವಕ್ಫ್ ಮಂಡಳಿ ಹಾಗೂ ಹಜ್​ ಸಮಿತಿಯ ಅನುದಾನ ಹೆಚ್ಚಿಸಿ ಸರ್ಕಾರ ಸಮತೋಲನದ ನಡೆ ಅನುಸರಿಸಿದೆ.

ಗೋವುಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂಬ ಈ ಹಿಂದಿನ ಭರವಸೆಯನ್ನೇ ಪುನರುಚ್ಚರಿಸಿ, ಬಜೆಟ್​ನಲ್ಲಿ 1,000 ಗೋ ಶಾಲೆಗಳ ಆಶ್ರಯಕ್ಕೆ ₹ 132 ಕೋಟಿ ತೆಗೆದಿರಿಸಿದ್ದಾರೆ. ರಾಜ್ಯ ನಿಧಿ ಬೆಂಬಲಿತ ಒಮ್ಮುಖ ಮಾದರಿ, ವಾಣಿಜ್ಯ ಉದ್ದೇಶಗಳ ಕಾರ್ಪೊರೇಟ್ ಹಾಗೂ ದೇವಾಲಯ ಮತ್ತು ಅವುಗಳಿಗೆ ಸಂಬಂಧಿಸಿದ ಭೂಮಿ ಒಳಗೊಂಡಂತೆ ಈ ಮೂರು ಮಾದರಿಯಲ್ಲಿ ಗೋಶಾಲೆ ನಿರ್ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸರ್ಕಾರದಡಿ ನೋಂದಾಯಿತ ದೇವಾಲಯಗಳಲ್ಲಿ ಕೆಲಸ ಮಾಡುವ ಪುರೋಹಿತರ ಗೌರವ ಧನವನ್ನು ಮೂರು ಪಟ್ಟು ಹೆಚ್ಚಿಸಲು ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ.

ಶ್ರೀರಾಮ​ ಮಾರ್ಗ ಹಾದಿಯನ್ನು ಅಭಿವೃದ್ಧಿಪಡಿಸಲು ಬಜೆಟ್​ನಲ್ಲಿ ಆದ್ಯತೆ ನೀಡಲಾಗಿದೆ. ಮಧ್ಯಪ್ರದೇಶದ ಕಾಡುಗಳಲ್ಲಿ ಶ್ರೀರಾಮ ವನವಾಸ ಸಾಗಿದ ಪೌರಾಣಿಕ ಮಾರ್ಗಗಳನ್ನು ಪತ್ತೆಹಚ್ಚಿ ಅವುಗಳನ್ನು ಅಭಿವೃದ್ಧಿಪಡಿಸುವುದು ತನ್ನ ಚುನಾವಣೆಯ ಪ್ರಣಾಳಿಕೆ ಆಗಿತ್ತು.

ಭೋಪಾಲ್​: ಮಧ್ಯಪ್ರದೇಶದ ಸಿಎಂ ಕಮಲ್‌ನಾಥ್‌ ನೇತೃತ್ವದ ಸರ್ಕಾರದ ಹಣಕಾಸು ಸಚಿವ ತರುಣ್ ಭಾನೋಟ್​ ಅವರು 2019-20ನೇ ಸಾಲಿನ ₹ 2.33 ಲಕ್ಷ ಕೋಟಿಯ ರಾಜ್ಯ ಬಜೆಟ್​ ಮಂಡಿಸಿದ್ದಾರೆ.

ಕಳೆದ ಏಳು ತಿಂಗಳಿಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದು, ವಿಧಾನಸಭಾ ಚುನಾವಣೆಗೂ ಮುನ್ನ ತಳೆದಿದ್ದ ಮೃದು ಹಿಂದುತ್ವದ ಧೋರಣೆಯನ್ನು ಬಜೆಟ್​ನಲ್ಲಿಯೂ ಮುಂದುವರಿಸಿದೆ. ಗೋವುಗಳ ಸಂರಕ್ಷಣೆಗೆ ₹ 132 ಕೋಟಿ ಮೀಸಲಿಟ್ಟಿದ್ದು, ಗೋಶಾಲೆ ನಿರ್ವಹಣೆ ಭತ್ಯೆಯನ್ನು ₹ 4 ರಿಂದ ₹ 20ಕ್ಕೆ ಏರಿಕೆ ಮಾಡಿದ್ದಾರೆ. ಇದರ ಜೊತೆಗೆ ರಾಜ್ಯ ವಕ್ಫ್ ಮಂಡಳಿ ಹಾಗೂ ಹಜ್​ ಸಮಿತಿಯ ಅನುದಾನ ಹೆಚ್ಚಿಸಿ ಸರ್ಕಾರ ಸಮತೋಲನದ ನಡೆ ಅನುಸರಿಸಿದೆ.

ಗೋವುಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂಬ ಈ ಹಿಂದಿನ ಭರವಸೆಯನ್ನೇ ಪುನರುಚ್ಚರಿಸಿ, ಬಜೆಟ್​ನಲ್ಲಿ 1,000 ಗೋ ಶಾಲೆಗಳ ಆಶ್ರಯಕ್ಕೆ ₹ 132 ಕೋಟಿ ತೆಗೆದಿರಿಸಿದ್ದಾರೆ. ರಾಜ್ಯ ನಿಧಿ ಬೆಂಬಲಿತ ಒಮ್ಮುಖ ಮಾದರಿ, ವಾಣಿಜ್ಯ ಉದ್ದೇಶಗಳ ಕಾರ್ಪೊರೇಟ್ ಹಾಗೂ ದೇವಾಲಯ ಮತ್ತು ಅವುಗಳಿಗೆ ಸಂಬಂಧಿಸಿದ ಭೂಮಿ ಒಳಗೊಂಡಂತೆ ಈ ಮೂರು ಮಾದರಿಯಲ್ಲಿ ಗೋಶಾಲೆ ನಿರ್ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸರ್ಕಾರದಡಿ ನೋಂದಾಯಿತ ದೇವಾಲಯಗಳಲ್ಲಿ ಕೆಲಸ ಮಾಡುವ ಪುರೋಹಿತರ ಗೌರವ ಧನವನ್ನು ಮೂರು ಪಟ್ಟು ಹೆಚ್ಚಿಸಲು ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ.

ಶ್ರೀರಾಮ​ ಮಾರ್ಗ ಹಾದಿಯನ್ನು ಅಭಿವೃದ್ಧಿಪಡಿಸಲು ಬಜೆಟ್​ನಲ್ಲಿ ಆದ್ಯತೆ ನೀಡಲಾಗಿದೆ. ಮಧ್ಯಪ್ರದೇಶದ ಕಾಡುಗಳಲ್ಲಿ ಶ್ರೀರಾಮ ವನವಾಸ ಸಾಗಿದ ಪೌರಾಣಿಕ ಮಾರ್ಗಗಳನ್ನು ಪತ್ತೆಹಚ್ಚಿ ಅವುಗಳನ್ನು ಅಭಿವೃದ್ಧಿಪಡಿಸುವುದು ತನ್ನ ಚುನಾವಣೆಯ ಪ್ರಣಾಳಿಕೆ ಆಗಿತ್ತು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.