ETV Bharat / briefs

ಬೆಂಗಳೂರಿನಲ್ಲಿ ಮಿನಿ ಫಾರೆಸ್ಟ್ ನಿರ್ಮಾಣಕ್ಕೆ ಪಿ.ಸಿ ಮೋಹನ್ ಚಾಲನೆ - undefined

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸರ್ಕಾರಿ ಖಾಲಿ ಜಾಗ ಇರುತ್ತದೆಯೋ ಅಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆಯವರು ಸೇರಿ ಗಿಡಗಳನ್ನು ನೆಡುವ ಮೂಲಕ ಬೆಂಗಳೂರು ನಗರವನ್ನು ಹಸಿರು ನಗರವನ್ನಾಗಿ ರೂಪಿಸಬೇಕು ಸಂಸದ ಪಿ.ಸಿ. ಮೋಹನ್ ಹೇಳಿದರು.

ಬೆಂಗಳೂರಿನಲ್ಲಿ ಮಿನಿ ಫಾರೆಸ್ಟ್ ನಿರ್ಮಾಣಕ್ಕೆ ಪಿ.ಸಿ ಮೋಹನ್ ಚಾಲನೆ ನೀಡಿದರು.
author img

By

Published : Jun 17, 2019, 6:09 AM IST

ಬೆಂಗಳೂರು: ನಗರ ಇತ್ತೀಚೆಗೆ ಕಾಂಕ್ರೀಟ್ ಕಾಡಾಗಿದ್ದು, ಮತ್ತೆ ಬೆಂಗಳೂರಿನಲ್ಲಿ ಅರಣ್ಯ ನಿರ್ಮಿಸಲು ಇಲ್ಲೊಂದು ಏರಿಯಾ ಜನರು ಮುಂದಾಗಿದ್ದಾರೆ.

ಬೆಂಗಳೂರಿನ ದೊಡ್ಡನೆಕ್ಕುಂದಿ ವಾರ್ಡ್ ಗ್ರೀನ್ ಡೊಮೈನ್ ಬಡಾವಣೆಯಲ್ಲಿನ ರೆಸಿಡೆನ್ಸಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಮಿನಿ ಅರಣ್ಯ ನಿರ್ಮಾಣ ಕಾರ್ಯಕ್ಕೆ ಸಂಸದ ಪಿ.ಸಿ. ಮೋಹನ್ ಆಗಮಿಸಿ ನೆಲವನ್ನು ಅಗೆದು ಒಂದು ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೆಂಗಳೂರಿನಲ್ಲಿ ಮಿನಿ ಫಾರೆಸ್ಟ್ ನಿರ್ಮಾಣಕ್ಕೆ ಪಿ.ಸಿ ಮೋಹನ್ ಚಾಲನೆ ನೀಡಿದರು.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸರ್ಕಾರಿ ಖಾಲಿ ಜಾಗ ಇರುತ್ತದೆಯೋ ಅಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆಯವರು ಸೇರಿ ಗಿಡಗಳನ್ನು ನೆಡುವ ಮೂಲಕ ಬೆಂಗಳೂರು ನಗರವನ್ನು ಹಸಿರು ನಗರವನ್ನಾಗಿ ರೂಪಿಸಬೇಕು ಎಂದು ಅವರು ಹೇಳಿದರು. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಇನ್ನೂ ಬೇರೆ ಬೇರೆ ಸ್ಥಳಗಳಲ್ಲಿ ಇದೆ ರೀತಿಯಲ್ಲಿ ಪರಿಸರ ಕಾಳಜಿ ಬೆಳೆಯುವ ಹಾಗೆ ಮಾಡುತ್ತೇನೆ ಎಂದು‌ ತಿಳಿಸಿದರು.

ಇನ್ನು ಈ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಶ್ವೇತಾ ವಿಜಯ್ ಕುಮಾರ್ ಭಾಗವಹಿಸಿದ್ದು ಜಿಡಿಎಲ್ ವತಿಯಿಂದ ಪರಿಸರ ಕಾಳಜಿ ವಹಿಸುವ ಉದ್ದೇಶದಿಂದ ಈ ಮಿನಿ ಅರಣ್ಯ ನಿರ್ಮಾಣ ಕಾರ್ಯಕ್ರಮ ಮಾಡಲಾಗುತ್ತಿದೆ. ಪ್ರತಿ ಮಕ್ಕಳ ಕೈನಲ್ಲೂ ಒಂದೊಂದು ಸಸಿನೆಟ್ಟು ಮಕ್ಕಳಂತೆಯೇ ಗಿಡಗಳನ್ನು ಪೋಷಿಸಬೇಕು ಎಂದು ಮನವಿ ಮಾಡಿದ ಅವರು, 250 ಸಸಿಗಳನ್ನು ಇಂದು ನೆಡಲಾಗಿದ್ದು, ಪಕ್ಷಿಗಳಿಗೆ ಗಿಡಗಳಲ್ಲಿಯೇ ವಾಟರ್ ಪಾಟ್ ಇಡುವ ಮೂಲಕ ಪಕ್ಷಿಗಳಿಗೆ ಸಹ ನೀರು ನೀಡಿ ದಾಹ ನೀಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಬೆಂಗಳೂರು: ನಗರ ಇತ್ತೀಚೆಗೆ ಕಾಂಕ್ರೀಟ್ ಕಾಡಾಗಿದ್ದು, ಮತ್ತೆ ಬೆಂಗಳೂರಿನಲ್ಲಿ ಅರಣ್ಯ ನಿರ್ಮಿಸಲು ಇಲ್ಲೊಂದು ಏರಿಯಾ ಜನರು ಮುಂದಾಗಿದ್ದಾರೆ.

ಬೆಂಗಳೂರಿನ ದೊಡ್ಡನೆಕ್ಕುಂದಿ ವಾರ್ಡ್ ಗ್ರೀನ್ ಡೊಮೈನ್ ಬಡಾವಣೆಯಲ್ಲಿನ ರೆಸಿಡೆನ್ಸಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಮಿನಿ ಅರಣ್ಯ ನಿರ್ಮಾಣ ಕಾರ್ಯಕ್ಕೆ ಸಂಸದ ಪಿ.ಸಿ. ಮೋಹನ್ ಆಗಮಿಸಿ ನೆಲವನ್ನು ಅಗೆದು ಒಂದು ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೆಂಗಳೂರಿನಲ್ಲಿ ಮಿನಿ ಫಾರೆಸ್ಟ್ ನಿರ್ಮಾಣಕ್ಕೆ ಪಿ.ಸಿ ಮೋಹನ್ ಚಾಲನೆ ನೀಡಿದರು.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸರ್ಕಾರಿ ಖಾಲಿ ಜಾಗ ಇರುತ್ತದೆಯೋ ಅಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆಯವರು ಸೇರಿ ಗಿಡಗಳನ್ನು ನೆಡುವ ಮೂಲಕ ಬೆಂಗಳೂರು ನಗರವನ್ನು ಹಸಿರು ನಗರವನ್ನಾಗಿ ರೂಪಿಸಬೇಕು ಎಂದು ಅವರು ಹೇಳಿದರು. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಇನ್ನೂ ಬೇರೆ ಬೇರೆ ಸ್ಥಳಗಳಲ್ಲಿ ಇದೆ ರೀತಿಯಲ್ಲಿ ಪರಿಸರ ಕಾಳಜಿ ಬೆಳೆಯುವ ಹಾಗೆ ಮಾಡುತ್ತೇನೆ ಎಂದು‌ ತಿಳಿಸಿದರು.

ಇನ್ನು ಈ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಶ್ವೇತಾ ವಿಜಯ್ ಕುಮಾರ್ ಭಾಗವಹಿಸಿದ್ದು ಜಿಡಿಎಲ್ ವತಿಯಿಂದ ಪರಿಸರ ಕಾಳಜಿ ವಹಿಸುವ ಉದ್ದೇಶದಿಂದ ಈ ಮಿನಿ ಅರಣ್ಯ ನಿರ್ಮಾಣ ಕಾರ್ಯಕ್ರಮ ಮಾಡಲಾಗುತ್ತಿದೆ. ಪ್ರತಿ ಮಕ್ಕಳ ಕೈನಲ್ಲೂ ಒಂದೊಂದು ಸಸಿನೆಟ್ಟು ಮಕ್ಕಳಂತೆಯೇ ಗಿಡಗಳನ್ನು ಪೋಷಿಸಬೇಕು ಎಂದು ಮನವಿ ಮಾಡಿದ ಅವರು, 250 ಸಸಿಗಳನ್ನು ಇಂದು ನೆಡಲಾಗಿದ್ದು, ಪಕ್ಷಿಗಳಿಗೆ ಗಿಡಗಳಲ್ಲಿಯೇ ವಾಟರ್ ಪಾಟ್ ಇಡುವ ಮೂಲಕ ಪಕ್ಷಿಗಳಿಗೆ ಸಹ ನೀರು ನೀಡಿ ದಾಹ ನೀಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.

Intro:ಬೆಂಗಳೂರಿನಲ್ಲಿ ಮಿನಿ ಪಾರೆಸ್ಟ್ ನಿರ್ಮಾಣಕ್ಮೆ ಪಿ.ಸಿ ಮೋಹನ್ ಚಾಲನೆ


ಒಂದು ಕಾಲದಲ್ಲಿ ಮರಗಿಡಗಳಿಂದ ಕೂಡಿಕೊಂಡು ಅರಣ್ಯದಂತಿದ್ದ ಬೆಂಗಳೂರು ನಗರ ಇತ್ತೀಚೆಗೆ ಕಾಂಕ್ರೀಟ್ ಕಾಡಾಗಿದ್ದು, ಮತ್ತೆ ಬೆಂಗಳೂರಿನಲ್ಲಿ ಅರಣ್ಯ ನಿರ್ಮಿಸಲು ಇಲ್ಲೊಂದು ಏರಿಯಾ ಜನರು ಮುಂದಾಗಿದ್ದಾರೆ.

ಹೀಗೆ ನೂರಾರು ಮಕ್ಕಳು ಹಾಗೂ ಪೋಷಕರು ಸರ್ಕಾರಿ ಜಾಗದಲ್ಲಿ ಮಿನಿ ಪಾರೆಸ್ಟ್ ನಿರ್ಮಿಸಲು ಸಸಿಗಳನ್ನು ನಿರ್ಮಿಸುತ್ತಿರುವ ದೃಶ್ಯಗಳು ಕಂಡು ಬಂದದ್ದಯ ಬೆಂಗಳೂರಿನ
ದೊಡ್ಡನೆಕ್ಕುಂದಿ ವಾರ್ಡ್ ಗ್ರೀನ್ ಡೊಮೈನ್ ಬಡಾವಣೆಯಲ್ಲಿ. ಇಲ್ಲಿನ ರೆಸಿಡೆನ್ಸಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಮಿನಿ ಅರಣ್ಯ ನಿರ್ಮಾಣ ಕಾರ್ಯಕ್ಕೆ ಸಂಸದ ಪಿ.ಸಿ. ಮೋಹನ್ ಬಂದು ತಾನು ಕೈಯಲ್ಲಿ ಗುದ್ದಲಿ, ಗಡಾರಿ, ಚನಿಕೆಯನ್ನು ಹಿಡಿದು ನೆಲವನ್ನು ಅಗೆದು ಒಂದು ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸರ್ಕಾರಿ ಖಾಲಿ ಜಾಗ ಇರುತ್ತವೆ ಅಲ್ಲಿ ಸರ್ವಜನಿಕರು ಅರಣ್ಯ ಇಲಾಖೆಯವರು ಸೇರಿ ಗಿಡಗಳನ್ನು ನೆಡುವ ಮೂಲಕ ಬೆಂಗಳೂರು ನಗರವನ್ನು ಹಸಿರು ನಗರವನ್ನಾಗಿ ರೂಪಿಸಬೇಕು ಇಲ್ಲಿ‌ ಮಕ್ಕಳು ಸಮೇತ ಗಿಡಗಳನ್ನು ನೆಟ್ಟಲು ಬಂದಿದ್ದು ತುಂಬಾ ಸಂತೋಷದ ವಿಷಯ ಮಕ್ಕಳಿಗೆ ಇಗಿಂದಲೇ ಪರಿಸರದ ಅರಿವು ಮೂಡಿಸುವ ಸಲುವಾಗಿ ಅವ್ರನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದು ಒಳ್ಳೆಯ ಕೆಲಸ ಎಂದು ಹೇಳಿದರು.ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಇನ್ನೂ ಬೇರೆ ಬೇರೆ ಸ್ಥಳಗಳಲ್ಲಿ ಇದೆ ರೀತಿಯಲ್ಲಿ ಪರಿಸರ ಕಾಳಜಿ ಬೆಳೆಯುವ ಹಾಗೆ ಮಾಡುತ್ತೆನೆ ಎಂದು‌ ತಿಳಿಸಿದರು.



Body:ಇನ್ನು ಈ ಕಾರ್ಯಕ್ರಮದಲ್ಲಿ ಸ್ಥಳಿಯ ಪಾಲಿಕೆ ಸದಸ್ಯೆ ಶ್ವೇತಾ ವಿಜಯ್ ಕುಮಾರ್ ಭಾಗವಹಿಸಿದ್ದು ಜಿಡಿಎಲ್ ವತಿಯಿಂದ ಪರಿಸರ ಕಾಳಜಿ ವಹಿಸುವ ಉದ್ದೇಶದಿಂದ ಈ ಮಿನಿ ಅರಣ್ಯ ನಿರ್ಮಾಣ ಕಾರ್ಯಕ್ರಮ ಮಾಡಲಾಗುತ್ತಿದೆ. ಪ್ರತಿ ಮಕ್ಕಳ ಕೈನಲ್ಲೂ ಒಂದೊಂದು ಸಸಿನೆಟ್ಟು ಮಕ್ಕಳಂತೆಯೇ ಗಿಡಗಳನ್ನು ಪೋಷಿಸಬೇಕು ಎಂದು ಮನವಿ ಮಾಡಿ ಅವರು 250 ಸಸಿಗಳನ್ನು ಇಂದು ನೆಡಲಾಗಿದ್ದು, ಪಕ್ಷಿಗಳಿಗೆ ಗಿಡಗಳಲ್ಲಿಯೇ ವಾಟರ್ ಪಾಟ್ ಇಡುವ ಮೂಲಕ ಪಕ್ಷಿಗಳಿಗೆ ಸಹ ನೀರು ದಾಹ ನೀಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.



Conclusion:ಒಟ್ಟಾರೆ ಒಂದು ಕಾಲದಲ್ಲಿ ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ಇತ್ತೀಚಿನಿನ ದಿನಗಳಲ್ಲಿ ಕಾಂಕ್ರೀಟ್ ಸಿಟಿಯಾಗಿ ಮಾರ್ಪಟ್ಟು ಇದೀಗ ಪಾರೆಸ್ಟ್ ಸಿಟಿಯಾಗಲು ಹೊರೆಟಿರುವುದು ಸಂತಸ ತಂದಿದೆ.

ಧರ್ಮರಾಜು ಎಂ ಕೆಆರ್ ಪುರ.


ಬೈಟ್: ಪಿ.ಸಿ. ಮೋಹನ್, ಸಂಸದ

ಬೈಟ್: ಶ್ವೇತಾ ವಿಜಯ್ ಕುಮಾರ್, ಪಾಲಿಕೆ ಸದಸ್ಯೆ

ನಾಗರಾಜ್ ರೆಡ್ಡಿ, ಸ್ಥಳೀಯರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.