ETV Bharat / briefs

ನರಭಕ್ಷಕ ಹುಲಿ ನಾಪತ್ತೆ: ಚಿರತೆಗಳು ಕ್ಯಾಮರಾಗೆ ಪದೇ ಪದೆ ಸೆರೆ! - Gopalaswamy hills forest zone

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆಬ್ಬೇಪುರದಲ್ಲಿ ವ್ಯಕ್ತಿಯೊಬ್ಬರನ್ನು ತಿಂದು ಹಾಕಿದ ಹುಲಿರಾಯ ಪತ್ತೆಯಾಗಿಲ್ಲ. ಆದ್ರೆ, ಚಿರತೆಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗುತ್ತಲೇ ಇವೆ.

The Tiger missing: appear in the leopard
author img

By

Published : Sep 6, 2019, 8:58 PM IST

Updated : Sep 7, 2019, 10:29 PM IST

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆಬ್ಬೇಪುರದಲ್ಲಿ ವ್ಯಕ್ತಿಯೊಬ್ಬರನ್ನು ತಿಂದು ಕೊಂದು ಹಾಕಿದ ಹುಲಿರಾಯ ಪತ್ತೆಯಾಗಿಲ್ಲ. ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿದರೂ ಅದರ ಸುಳಿವು ಸಿಗಲಿಲ್ಲ. ಆದರೆ, ಚಿರತೆಗಳು ಪತ್ತೆಯಾಗುತ್ತಿವೆ.

ಚೌಡಹಳ್ಳಿ ಗ್ರಾಮದ ಶಿವಮಾದಯ್ಯ (65) ಎಂಬುವರನ್ನು ಹುಲಿ ಕೊಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಕೆರೆ ಅರಣ್ಯ ವಲಯ ಹಾಗೂ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದಲ್ಲಿ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿದ್ದರು. ಕುಂದಕೆರೆ ಅರಣ್ಯದಲ್ಲಿ ಅಳವಡಿಸಿದ್ದ ಕ್ಯಾಮರಾಗಳಲ್ಲಿ 3-4 ಚಿರತೆಗಳು ಪದೇ ಪದೆ ಸೆರೆ ಸಿಕ್ಕಿವೆ. ಆದರೆ, ಹುಲಿ ಮಾತ್ರ ಪತ್ತೆಯಾಗಿಲ್ಲ ಎಂದು ಅರಣ್ಯಾಧಿಕಾರಿ ಮಂಜುನಾಥ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.

The Tiger missing: appear in the leopard
ಕ್ಯಾಮರಾದಲ್ಲಿ ಸೆರೆಯಾದ ಚಿರತೆ

ಕೊಂದಿರುವುದು ಚಿರತೆ ಎಂಬ ಶಂಕೆ: ಕೊಂದಿದ್ದು ಹುಲಿಯಲ್ಲ ಚಿರತೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಕುರಿತು ಗಂಭೀರ ತನಿಖೆ ಕೈಗೊಂಡಿದ್ದಾರೆ. ಹುಂಡಿಪುರ, ಕೆಬ್ಬೇಪುರದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹುಲಿಯೇ ಕೊಂದಿರಬಹುದು ಎನ್ನಲಾಗಿತ್ತು. ಈಗ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಚಿರತೆಗಳು ಮಾತ್ರ ಕ್ಯಾಮರಾಗೆ ಸೆರೆಯಾಗಿದೆ. ಹುಲಿಯ ಸುಳಿವಿಲ್ಲದ ಕಾರಣ ಮೇಲ್ನೋಟಕ್ಕೆ ಚಿರತೆಯೇ ಕೊಂದಿರಬಹುದು ಎಂದು ಬಂಡೀಪುರ ಸಿಎಫ್​ಒ ಬಾಲಚಂದ್ರ ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯರ ಪ್ರಕಾರ ಹುಲಿಯೇ ವ್ಯಕ್ತಿಯನ್ನು ಕೊಂದಿದ್ದು ದಪ್ಪ ಉಗುರುಗಳು- ಹಲ್ಲುಗಳೇ ಸಾಕ್ಷಿ ಎಂದು ವಾದಿಸುತ್ತಿದ್ದಾರೆ. ಅರಣ್ಯ ಇಲಾಖೆ ಹುಲಿ ಬದಲಿಗೆ ಚಿರತೆಯೇ ಕೊಂದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಹುಂಡಿಪುರದ ಹುಲಿರಾಯ ಮತ್ತಷ್ಟು ನಿಗೂಢನಾಗುತ್ತಿದ್ದು, ಅರಣ್ಯ ಇಲಾಖೆ ಶೀಘ್ರವೇ ಇದಕ್ಕೆ ಇತಿಶ್ರೀ ಹಾಡಬೇಕಿದೆ.

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆಬ್ಬೇಪುರದಲ್ಲಿ ವ್ಯಕ್ತಿಯೊಬ್ಬರನ್ನು ತಿಂದು ಕೊಂದು ಹಾಕಿದ ಹುಲಿರಾಯ ಪತ್ತೆಯಾಗಿಲ್ಲ. ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿದರೂ ಅದರ ಸುಳಿವು ಸಿಗಲಿಲ್ಲ. ಆದರೆ, ಚಿರತೆಗಳು ಪತ್ತೆಯಾಗುತ್ತಿವೆ.

ಚೌಡಹಳ್ಳಿ ಗ್ರಾಮದ ಶಿವಮಾದಯ್ಯ (65) ಎಂಬುವರನ್ನು ಹುಲಿ ಕೊಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಕೆರೆ ಅರಣ್ಯ ವಲಯ ಹಾಗೂ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದಲ್ಲಿ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿದ್ದರು. ಕುಂದಕೆರೆ ಅರಣ್ಯದಲ್ಲಿ ಅಳವಡಿಸಿದ್ದ ಕ್ಯಾಮರಾಗಳಲ್ಲಿ 3-4 ಚಿರತೆಗಳು ಪದೇ ಪದೆ ಸೆರೆ ಸಿಕ್ಕಿವೆ. ಆದರೆ, ಹುಲಿ ಮಾತ್ರ ಪತ್ತೆಯಾಗಿಲ್ಲ ಎಂದು ಅರಣ್ಯಾಧಿಕಾರಿ ಮಂಜುನಾಥ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.

The Tiger missing: appear in the leopard
ಕ್ಯಾಮರಾದಲ್ಲಿ ಸೆರೆಯಾದ ಚಿರತೆ

ಕೊಂದಿರುವುದು ಚಿರತೆ ಎಂಬ ಶಂಕೆ: ಕೊಂದಿದ್ದು ಹುಲಿಯಲ್ಲ ಚಿರತೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಕುರಿತು ಗಂಭೀರ ತನಿಖೆ ಕೈಗೊಂಡಿದ್ದಾರೆ. ಹುಂಡಿಪುರ, ಕೆಬ್ಬೇಪುರದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹುಲಿಯೇ ಕೊಂದಿರಬಹುದು ಎನ್ನಲಾಗಿತ್ತು. ಈಗ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಚಿರತೆಗಳು ಮಾತ್ರ ಕ್ಯಾಮರಾಗೆ ಸೆರೆಯಾಗಿದೆ. ಹುಲಿಯ ಸುಳಿವಿಲ್ಲದ ಕಾರಣ ಮೇಲ್ನೋಟಕ್ಕೆ ಚಿರತೆಯೇ ಕೊಂದಿರಬಹುದು ಎಂದು ಬಂಡೀಪುರ ಸಿಎಫ್​ಒ ಬಾಲಚಂದ್ರ ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯರ ಪ್ರಕಾರ ಹುಲಿಯೇ ವ್ಯಕ್ತಿಯನ್ನು ಕೊಂದಿದ್ದು ದಪ್ಪ ಉಗುರುಗಳು- ಹಲ್ಲುಗಳೇ ಸಾಕ್ಷಿ ಎಂದು ವಾದಿಸುತ್ತಿದ್ದಾರೆ. ಅರಣ್ಯ ಇಲಾಖೆ ಹುಲಿ ಬದಲಿಗೆ ಚಿರತೆಯೇ ಕೊಂದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಹುಂಡಿಪುರದ ಹುಲಿರಾಯ ಮತ್ತಷ್ಟು ನಿಗೂಢನಾಗುತ್ತಿದ್ದು, ಅರಣ್ಯ ಇಲಾಖೆ ಶೀಘ್ರವೇ ಇದಕ್ಕೆ ಇತಿಶ್ರೀ ಹಾಡಬೇಕಿದೆ.

Intro:ನರಭಕ್ಷಕ ಹುಲಿ ನಾಪತ್ತೆ: ಚಿರತೆಗಳು ಕ್ಯಾಮರಾಗೆ ಪದೇಪದೇ ಸೆರೆ!


ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆಬ್ಬೇಪುರ ಎಲ್ಲೆಯಲ್ಲಿ ವ್ಯಕ್ತಿಯನ್ನು ಹುಲಿ ತಿಂದು ಹಾಕಿದ ಪ್ರಕರಣಕ್ಕೆ ಸಂಬಂಧ ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿದರೂ ಹುಲಿರಾಯ ಪತ್ತೆಯಾಗಿಲ್ಲ.

Body:ಚೌಡಹಳ್ಳಿ ಗ್ರಾಮದ ಶಿವಮಾದಯ್ಯ(೬೫) ಎಂಬವರನ್ನು ಹುಲಿಯೊಂದು ಕೊಂದು ತಿಂದು ಪರಾರಿಯಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕುಂದಕೆರೆ ಅರಣ್ಯ ವಲಯ ಹಾಗೂ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿದರೂ ಘಟನೆ ನಡೆದ ಜಾಗದಲ್ಲಿ ಹುಲಿ ಸುಳಿವಿಲ್ಲ.

ಕುಂದಕರೆ ಅರಣ್ಯ ವಲಯಕ್ಕೂ ಮತ್ತು ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯಕ್ಕೂ ಕೆಲವೇ ಮೀ. ಅಂತರದಲ್ಲಿ ಘಟನೆ ನಡೆದಿತ್ತು. ಕುಂದಕೆರೆ ಅರಣ್ಯ ವಲಯದಲ್ಲಿ ಅಳವಡಿಸಿದ್ದ ಕ್ಯಾಮರಾಗಳಲ್ಲಿ ೩-೪ ಚಿರತೆಗಳು ಪದೇ ಪದೇ ಸೆರೆ ಸಿಕ್ಕಿವೆ ಎಂದು ಕುಂದಕೆರೆ ವಲಯ ಅರಣ್ಯಾಧಿಕಾರಿ ಮಂಜುನಾಥ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಕೊಂದಿರುವುದು ಚಿರತೆ ಎಂಬ ಶಂಕೆ:
ಕೊಂದಿದ್ದು ಹುಲಿಯಲ್ಲ ಚಿರತೆ ಎಂದು ಅರಣ್ಯ ಇಲಾಖೆ ಶಂಕಿಸಿದ್ದು ಈ ಕುರಿತು ಗಂಭೀರ ತನಿಖೆ ಕೈಗೊಂಡಿದೆ. ಹುಂಡಿಪುರ, ಕೆಬ್ಬೇಪುರದಲ್ಲಿ
ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹುಲಿಯೇ ಕೊಂದಿರಬಹುದು ಎನ್ನಲಾಗಿತ್ತು. ಈಗ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಚಿರತೆ ಮಾತ್ರ ಕ್ಯಾಮರಾಗೆ ಸೆರೆಯಾಗುತ್ತಿದ್ದು ಹುಲಿಯ ಸುಳಿವಿಲ್ಲದಿರುವುದರಿಂದ ಮೇಲ್ನೋಟಕ್ಕೆ ಚಿರತೆಯೇ ಕೊಂದಿರಬಹುದು ಎಂದು ಇಲಾಖೆ ಶಂಕಿಸಿದೆ ಎಂದು ಬಂಡೀಪುರ ಸಿಎಫ್ ಒ ಬಾಲಚಂದ್ರ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯರ ಪ್ರಕಾರ ಹುಲಿಯೇ ವ್ಯಕ್ತಿಯನ್ನು ಕೊಂದಿದ್ದು ದಪ್ಪ ಉಗುರುಗಳು- ಹಲ್ಲುಗಳೇ ಸಾಕ್ಷಿ ಎಂಬ ವಾದವಾದರೇ ಅರಣ್ಯ ಇಲಾಖೆ ಹುಲಿ ಬದಲಿಗೆ ಚಿರತೆಯೇ ಕೊಂದಿರಬಹುದು ಎಂದು ಶಂಕಿಸಿದ್ದಾರೆ.

Conclusion:ಒಟ್ಟಿನಲ್ಲಿ ಹುಂಡಿಪುರದ ಹುಲಿರಾಯ ಮತ್ತಷ್ಟು ನಿಗೂಢನಾಗುತ್ತಿದ್ದು ಅರಣ್ಯ ಇಲಾಖೆ ಶೀಘ್ರವೇ ಇದಕ್ಕೆ ಇತಿಶ್ರೀ ಹಾಡಬೇಕಿದೆ.
Last Updated : Sep 7, 2019, 10:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.