ETV Bharat / briefs

ಮೋಜು ತಂದ ಆಪತ್ತು: ಕೆರೆಯಲ್ಲಿ ಮುಳುಗಿ ಬಾಲಕ ಸಾವು

ಈಜಲು ಹೋದ 10 ವರ್ಷದ ಬಾಲಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರಂತ ವರದಿಯಾಗಿದೆ.

author img

By

Published : Jun 4, 2019, 6:46 PM IST

ಮೃತ ಬಾಲಕ

ಮೈಸೂರು: ತಮ್ಮನೊಂದಿಗೆ ಈಜಲು ಹೋಗಿದ್ದ ಬಾಲಕನೊಬ್ಬ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ‌ ಪಡುಕೋಟೆ ಗ್ರಾಮದಲ್ಲಿ ಜರುಗಿದೆ.

ಆದಿತ್ಯ ತನ್ನ ತಮ್ಮನೊಂದಿಗೆ ಸಮೀಪವಿದ್ದ ಕೆರೆಗೆ ಈಜಲು ಹೋಗಿದ್ದಾನೆ. ತನ್ನ ಅಣ್ಣ ನೀರಿನಲ್ಲಿ ಮುಳುಗಡೆಯಾಗಿದ್ದನ್ನು ಕಂಡು, ಅಣ್ಣನನ್ನು ಕಾಪಾಡುವಂತೆ ತಮ್ಮ ಜೋರಾಗಿ ಕಿರುಚಿದ್ದಾನೆ. ಆದರೆ, ನೆರೆಯವರು ಬರುವಷ್ಟರಲ್ಲಿ ಆದಿತ್ಯನ ಪ್ರಾಣಪಕ್ಷಿ ಹಾರಿಹೋಗಿತ್ತು.

ಘಟನೆ ನಡೆಯುವಾಗ ಬಾಲಕನ ಪೋಷಕರು ಪಡುಕೋಟೆ ಗ್ರಾಮದ ತೋಟವೊಂದರಲ್ಲಿ‌ ಕೆಲಸ‌ ಮಾಡಲು ಹೋಗಿದ್ದರು ಎನ್ನಲಾಗಿದೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮೈಸೂರು: ತಮ್ಮನೊಂದಿಗೆ ಈಜಲು ಹೋಗಿದ್ದ ಬಾಲಕನೊಬ್ಬ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ‌ ಪಡುಕೋಟೆ ಗ್ರಾಮದಲ್ಲಿ ಜರುಗಿದೆ.

ಆದಿತ್ಯ ತನ್ನ ತಮ್ಮನೊಂದಿಗೆ ಸಮೀಪವಿದ್ದ ಕೆರೆಗೆ ಈಜಲು ಹೋಗಿದ್ದಾನೆ. ತನ್ನ ಅಣ್ಣ ನೀರಿನಲ್ಲಿ ಮುಳುಗಡೆಯಾಗಿದ್ದನ್ನು ಕಂಡು, ಅಣ್ಣನನ್ನು ಕಾಪಾಡುವಂತೆ ತಮ್ಮ ಜೋರಾಗಿ ಕಿರುಚಿದ್ದಾನೆ. ಆದರೆ, ನೆರೆಯವರು ಬರುವಷ್ಟರಲ್ಲಿ ಆದಿತ್ಯನ ಪ್ರಾಣಪಕ್ಷಿ ಹಾರಿಹೋಗಿತ್ತು.

ಘಟನೆ ನಡೆಯುವಾಗ ಬಾಲಕನ ಪೋಷಕರು ಪಡುಕೋಟೆ ಗ್ರಾಮದ ತೋಟವೊಂದರಲ್ಲಿ‌ ಕೆಲಸ‌ ಮಾಡಲು ಹೋಗಿದ್ದರು ಎನ್ನಲಾಗಿದೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Intro:ಬಾಲಕ ಸಾವುBody:ಈಜಲು ಹೋದ ಜಾರ್ಖಂಡ್ ಮೂಲದ  ವಿದ್ಯಾರ್ಥಿ ಸಾವು
ಮೈಸೂರು: ರಜೆಯಲ್ಲಿ ಪೋಷಕರೊಂದಿಗೆ ಬಂದಿದ್ದ ಬಾಲಕ‌ ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ‌ ಪಡುಕೋಟೆ ಗ್ರಾಮದಲ್ಲಿ ನಡೆದಿದೆ.


ಜಾರ್ಖಾಂಡ್ ಮೂಲದ 4ನೇ ತರಗತಿ ವಿದ್ಯಾರ್ಥಿ ಆದಿತ್ಯ ಕುಮಾರ್  (10) ಕೆರೆ ನೀರಿನಲ್ಲಿ ಮುಳುಗಿ‌ ಮೃತಪಟ್ಟವ.  ಬಾಲಕ.ತಂದೆ ತಾಯಿ ಎಚ್.ಡಿ.ಕೋಟೆ ತಾಲ್ಲೂಕಿನ ಪಡುಕೋಟೆ ಗ್ರಾಮದ ತೋಟದಲ್ಲಿ‌ ಕೆಲಸ‌ ಮಾಡುತ್ತಿದ್ದರು. ಜಾರ್ಖಂಡ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆದಿತ್ಯ ಶಾಲೆ ರಜೆ ಅಂಗವಾಗಿ ಪೋಷಕರೊಂದಿಗೆ ಆಗಮಿಸಿದ್ದ.
ತನ್ನ ತಮ್ಮನೊಂದಿಗೆ  ಈಜಲು ಹೋದಾಗ, ಕಾಲು ಜಾರಿ ಕೆರೆಯಲ್ಲಿ ಮುಳುಗಿದ್ದಾನೆ.ಅಣ್ಣನ ಸ್ಥಿತಿ ನೋಡಿ ತಮ್ಮ ಜೋರಾಗಿ ಕಿರುಚಾಡಿದ್ದಾನೆ. ಆದರೆ ಅಕ್ಕಪಕ್ಕದವರು ಬರುವ ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.ಈ ಸಂಬಂಧ  ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ಬಾಲಕ ಸಾವು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.