ಲಂಡನ್: ಈ ಸಲದ ಐಸಿಸಿ ವಿಶ್ವಕಪ್ನಲ್ಲಿ ವರುಣನ ಅಬ್ಬರ ಜೋರಾಗಿದೆ. ಈಗಾಗಲೇ ಕೆಲ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದ್ದು, ಇಂದು ನಡೆಯಬೇಕಾಗಿದ್ದ ನ್ಯೂಜಿಲ್ಯಾಂಡ್-ಭಾರತ ಪಂದ್ಯಕ್ಕೂ ತೊಡಕಾಗಿದೆ. ಇದರ ಮಧ್ಯೆ ತಂಡದ ಆಟಗಾರ ಕೇದಾರ್ ಜಾಧವ್ ಮಳೆರಾಯನ ಬಳಿ ಮನವಿ ಮಾಡಿಕೊಂಡು ಗಮನ ಸೆಳೆದಿದ್ದಾರೆ.
ನಿನ್ನೆ ಅಭ್ಯಾಸ ನಡೆಸುತ್ತಿದ್ದ ವೇಳೆ ಕೇದಾರ್ ಜಾಧವ್, ಹೋಗು ಮಳೆರಾಯ ಹೋಗು, ಮಹಾರಾಷ್ಟ್ರಕ್ಕೆ ಹೋಗು.ಇಲ್ಲಿ ನಿನ್ನ ಅವಶ್ಯಕತೆ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಸುಮಾರು 8 ಸೆಕೆಂಡ್ಗಳ ಈ ವಿಡಿಯೋದಲ್ಲಿ ಕೇದಾರ್ ಜಾಧವ್ ಕೇಳಿಕೊಂಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.
ವಿಶ್ವಕಪ್ನಲ್ಲಿ ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಗೆಲುವು ದಾಖಲು ಮಾಡಿರುವ ಕೊಹ್ಲಿ ಪಡೆ ಇಂದು ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಾಟ ನಡೆಸಲಿದ್ದು, ಅದಕ್ಕೂ ಮಳೆ ಅಡ್ಡಿಪಡಿಸಿದೆ.