ETV Bharat / briefs

ಹೂಳೆತ್ತಲು ಸರ್ಕಾರ ಅನುದಾನ ನೀಡಬೇಕು: ಗದುಗಿನ ಸ್ವಾಮೀಜಿ ಒತ್ತಾಯ

ಬಳ್ಳಾರಿಯ ರೈತ ಸಂಘದ ವತಿಯಿಂದ ತುಂಗಭದ್ರ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಜೆಸಿಬಿ ಬಳಸಿ ಹೂಳನ್ನು ತೆಗಯಲಾಗುತ್ತಿದೆ. ಸರ್ಕಾರಗಳು ಇಂಥ ಕಾರ್ಯಗಳಿಗೆ ಅನುದಾನ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಗದುಗಿನ ವಿರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷ ಕಲ್ಲಯ್ಯಜ್ಜನವರು ಒತ್ತಾಯಿಸಿದರು.

author img

By

Published : Jun 1, 2019, 12:19 AM IST

ಹೂಳೆತ್ತುವ ಜಾತ್ರೆಯಲ್ಲಿ ಪಾಲ್ಗೊಂಡ ಗದುಗಿನ ವಿರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷರು

ಬಳ್ಳಾರಿ: ಇಲ್ಲಿನ ರೈತ ಸಂಘದ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿರುವ 3ನೇ ವರ್ಷದ ಹೂಳಿನ ಜಾತ್ರೆಯು ಎರಡನೇ ದಿನಕ್ಕೆ ಕಾಲಿರಿಸಿದೆ.

ಹೂಳೆತ್ತುವ ಜಾತ್ರೆಯಲ್ಲಿ ಪಾಲ್ಗೊಂಡ ಗದುಗಿನ ವಿರೇಶ್ವರ ಪೀಠಾಧ್ಯಕ್ಷ ಕಲ್ಲಯ್ಯಜ್ಜನವರು

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷ ಕಲ್ಲಯ್ಯಜ್ಜನವರು ಹೂಳೆತ್ತುವ ಜಾತ್ರೆಯ ಭಾಗಿವಾಗಿ ಹೂಳೆತ್ತುವ ಕಾರ್ಯದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ಗುರುವಾರದಿಂದ ಸುಮಾರು 25ಕ್ಕೂ ಅಧಿಕ ಟ್ರ್ಯಾಕ್ಟರ್​ಗಳಲ್ಲಿ ಹೂಳೆತ್ತುವ ಕೆಲಸ ನಡೆದಿದೆ. ಜಿಲ್ಲೆಯ ನೂರಾರು ರೈತರು ಇದರಲ್ಲಿ ಪಾಲ್ಗೊಂಡಿದ್ದಾರೆ. ತುಂಗಭದ್ರ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ (ಗೋಂಡಾರಣ್ಯ) 2 ಜೆಸಿಬಿ ಸ್ಥಳದಲ್ಲೇ ಬೀಡು ಬಿಟ್ಟಿವೆ. ಜಲಾಶಯದ ಒಂದು ಮೂಲೆಯಲ್ಲಿ ಹೂಳೆತ್ತುವ ಕಾರ್ಯ ನಡೆದಿದೆ. ‌ನೂರಾರು ರೈತರು ಹಗಲು, ರಾತ್ರಿ ಎನ್ನದೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರೈತ ಸಂಘದ ದರೂರು ಪುರುಷೋತ್ತಮ ಗೌಡ ಹೇಳಿದರು.

ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಹೂಳಿನ ಕಂಟಕ ಶುರುವಾಗಿದೆ.‌ ಸಮರ್ಪಕ ನೀರು ಜಲಾಶಯದಲ್ಲಿ ಭರ್ತಿಯಾದರೆ ರೈತಾಪಿ ವರ್ಗ ಸಂವೃದ್ಧಿಯಾಗಲಿದೆ. ಹೀಗಾಗಿ, ಹೂಳಿನ ಜಾತ್ರೆಯನ್ನ ಸತತ ಮೂರು ವರ್ಷಗಳಿಂದ ತುಂಗಭದ್ರಾ ರೈತ ಸಂಘದಿಂದ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದು ರೈತರನ್ನು ಉದ್ದೇಶಿಸಿ ಕಲ್ಲಯ್ಯಜ್ಜನವರು ಮಾತನಾಡಿದರು.

ರೈತರ ಹೂಳಿನ ಜಾತ್ರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಜೋಡಿಸಬೇಕು. ಅಗತ್ಯ ಅನುದಾನವನ್ನು ಬಜೆಟ್​ನಲ್ಲಿ ಮೀಸಲಿರಿಸಬೇಕು. ಈ ಜಲಾಶಯದಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಬೇಕು ಎಂದರು.

ಬಳ್ಳಾರಿ: ಇಲ್ಲಿನ ರೈತ ಸಂಘದ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿರುವ 3ನೇ ವರ್ಷದ ಹೂಳಿನ ಜಾತ್ರೆಯು ಎರಡನೇ ದಿನಕ್ಕೆ ಕಾಲಿರಿಸಿದೆ.

ಹೂಳೆತ್ತುವ ಜಾತ್ರೆಯಲ್ಲಿ ಪಾಲ್ಗೊಂಡ ಗದುಗಿನ ವಿರೇಶ್ವರ ಪೀಠಾಧ್ಯಕ್ಷ ಕಲ್ಲಯ್ಯಜ್ಜನವರು

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷ ಕಲ್ಲಯ್ಯಜ್ಜನವರು ಹೂಳೆತ್ತುವ ಜಾತ್ರೆಯ ಭಾಗಿವಾಗಿ ಹೂಳೆತ್ತುವ ಕಾರ್ಯದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ಗುರುವಾರದಿಂದ ಸುಮಾರು 25ಕ್ಕೂ ಅಧಿಕ ಟ್ರ್ಯಾಕ್ಟರ್​ಗಳಲ್ಲಿ ಹೂಳೆತ್ತುವ ಕೆಲಸ ನಡೆದಿದೆ. ಜಿಲ್ಲೆಯ ನೂರಾರು ರೈತರು ಇದರಲ್ಲಿ ಪಾಲ್ಗೊಂಡಿದ್ದಾರೆ. ತುಂಗಭದ್ರ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ (ಗೋಂಡಾರಣ್ಯ) 2 ಜೆಸಿಬಿ ಸ್ಥಳದಲ್ಲೇ ಬೀಡು ಬಿಟ್ಟಿವೆ. ಜಲಾಶಯದ ಒಂದು ಮೂಲೆಯಲ್ಲಿ ಹೂಳೆತ್ತುವ ಕಾರ್ಯ ನಡೆದಿದೆ. ‌ನೂರಾರು ರೈತರು ಹಗಲು, ರಾತ್ರಿ ಎನ್ನದೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರೈತ ಸಂಘದ ದರೂರು ಪುರುಷೋತ್ತಮ ಗೌಡ ಹೇಳಿದರು.

ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಹೂಳಿನ ಕಂಟಕ ಶುರುವಾಗಿದೆ.‌ ಸಮರ್ಪಕ ನೀರು ಜಲಾಶಯದಲ್ಲಿ ಭರ್ತಿಯಾದರೆ ರೈತಾಪಿ ವರ್ಗ ಸಂವೃದ್ಧಿಯಾಗಲಿದೆ. ಹೀಗಾಗಿ, ಹೂಳಿನ ಜಾತ್ರೆಯನ್ನ ಸತತ ಮೂರು ವರ್ಷಗಳಿಂದ ತುಂಗಭದ್ರಾ ರೈತ ಸಂಘದಿಂದ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದು ರೈತರನ್ನು ಉದ್ದೇಶಿಸಿ ಕಲ್ಲಯ್ಯಜ್ಜನವರು ಮಾತನಾಡಿದರು.

ರೈತರ ಹೂಳಿನ ಜಾತ್ರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಜೋಡಿಸಬೇಕು. ಅಗತ್ಯ ಅನುದಾನವನ್ನು ಬಜೆಟ್​ನಲ್ಲಿ ಮೀಸಲಿರಿಸಬೇಕು. ಈ ಜಲಾಶಯದಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಬೇಕು ಎಂದರು.

Intro:ಎರಡನೇ ದಿನಕ್ಕೆ ಕಾಲಿಟ್ಟ ತುಂಗಭದ್ರಾ ಹೂಳಿನ ಜಾತ್ರೆ
ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷ ಕಲ್ಲಯ್ಯಜ್ಜ ಭೇಟಿ!
ಬಳ್ಳಾರಿ: ತುಂಗಭದ್ರಾ ರೈತ ಸಂಘದ ಜಿಲ್ಲಾ ಘಟಕದಿಂದ ಮೂರನೇ ವರ್ಷದ ಹೂಳಿನ ಜಾತ್ರೆಯು ಎರಡನೇ ದಿನಕ್ಕೆ ಕಾಲಿರಿಸಿದೆ.
ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷ ಕಲ್ಲಯ್ಯಜ್ಜನವರು ಹೂಳಿನ ಜಾತ್ರೆಯಲ್ಲಿ ಭಾಗಿಯಾಗಿ ಹೂಳೆತ್ತುವಕಾರ್ಯದ ಕುರಿತು ಪ್ರಶಂಸೆನೀಯ ಮಾತುಗಳನ್ನಾಡಿದರು.
ನಿನ್ನೆಯ ದಿನದಿಂದ ಸರಿಸುಮಾರು 25 ಕ್ಕೂ ಅಧಿಕ ಟ್ರ್ಯಾಕ್ಟರ್ ಗಳಲ್ಲಿ ಹೂಳನ್ನು ಎತ್ತುವಕಾರ್ಯದಲ್ಲಿ ಜಿಲ್ಲೆಯ ನೂರಾರು ರೈತರು ತೊಡಗಿಕೊಂಡಿದ್ದಾರೆ. ಈ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ (ಗುಂಡಾರಣ್ಯ) ಎರಡು ಜೆಸಿಬಿ ಯಂತ್ರೋಪ
ಕರಣಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಜಲಾಶಯದ ಒಂದು ಮೂಲೆಯಲ್ಲಿ ಹೂಳೆತ್ತುವಕಾರ್ಯ ನಡೆದಿದೆ.‌ನೂರಾರು ರೈತರು ಹಗಲು, ರಾತ್ರಿ ಎನ್ನದೇ ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ರೈತ ಸಂಘದ ದರೂರು ಪುರುಷೋತ್ತಮಗೌಡ ತಿಳಿಸಿ ದ್ದಾರೆ.


Body:ಬಳಿಕ, ರೈತರನ್ನುದ್ದೇಶಿಸಿ ಮಾತನಾಡಿದ ಕಲ್ಲಯ್ಯಜ್ಜನವರು, ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಹೂಳಿನ ಕಂಟಕ ಶುರುವಾಗಿದೆ.‌ ಸಮರ್ಪಕ ನೀರು ಜಲಾಶಯದಲ್ಲಿ ಭರ್ತಿಯಾದ್ರೆ, ರೈತಾಪಿ ವರ್ಗ ಸಂವೃದ್ಧಿಯಾಗಲಿದೆ. ಹೀಗಾಗಿ, ಹೂಳಿನ ಜಾತ್ರೆಯನ್ನ ಸತತ ಮೂರು ವರ್ಷಗಳಿಂದ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿ ರುವುದು ನಿಜಕ್ಕೂ ಸ್ವಾಗತಾರ್ಹ ಎಂದರು.
ರೈತರ ಹೂಳಿನ ಜಾತ್ರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಜೋಡಿಸಬೇಕಿದೆ. ಅಗತ್ಯ ಅನುದಾನವನ್ನು ಬಜೆಟ್ ನಲ್ಲಿ ಮೀಸಲಿರಿಸಬೇಕು. ಹಾಗೂ ಪ್ರತಿವರ್ಷವೂ ಕೂಡ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಈ ಜಲಾಶಯದಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಬೇಕು ಎಂದರು.
ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳ ರೈತರ ಹೊಲಗಳಿಗೆ ಈ ಜಲಾಶಯದ ನೀರು ಬಳಕೆ ಆಗುತ್ತಿದೆ. ಹೀಗಾಗಿ, ಆ ರಾಜ್ಯಗಳ ರೈತರ ಪರವಾಗಿ ಕೂಡ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರಾಜಕೀಯ ಮುಖಂಡರು ಹೂಳಿನ ಜಾತ್ರೆಯ ಕುರಿತು ವಿಶೇಷ ಕಾಳಜಿ ವಹಿಸಬೇಕು.
ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರಮೋದಿ, ಆಂಧ್ರಪ್ರದೇಶ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ವೈ.ಎಸ್.ಜಗನ್ ಮೋಹನರೆಡ್ಡಿ, ತೆಲಂಗಾಣ ಹಾಗೂ ಕರುನಾಡಿನ ಮುಖ್ಯಮಂತ್ರಿಗಳು ಈ ಜಲಾ ಶಯದ ಹೂಳೆತ್ತುವಕಾರ್ಯದಲ್ಲಿನ ಕುರಿತು ಗಂಭೀರವಾಗಿ ಚಿಂತನೆ ನಡೆಸಬೇಕು ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.


Conclusion:KN_BLY_02_31_THUNGA_BHADRA_HULINA_JATRE_7203310

KN_BLY_02h_31_THUNGA_BHADRA_HULINA_JATRE_7203310

KN_BLY_02i_31_THUNGA_BHADRA_HULINA_JATRE_7203310

KN_BLY_02j_31_THUNGA_BHADRA_HULINA_JATRE_7203310

KN_BLY_02k_31_THUNGA_BHADRA_HULINA_JATRE_7203310

KN_BLY_02l_31_THUNGA_BHADRA_HULINA_JATRE_7203310

KN_BLY_02m_31_THUNGA_BHADRA_HULINA_JATRE_7203310

KN_BLY_02n_31_THUNGA_BHADRA_HULINA_JATRE_7203310

KN_BLY_02o_31_THUNGA_BHADRA_HULINA_JATRE_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.