ETV Bharat / briefs

'ಈಟಿವಿ ಭಾರತ' ಇಂಪ್ಯಾಕ್ಟ್: ಪರದಾಡುತ್ತಿದ್ದ ಜನರಿಗೆ ಕೊನೆಗೂ ಸಿಕ್ತು ನೀರು! - undefined

ಆ ಭಾಗದ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರು. ಸದ್ಯ ಅವರ ನೀರಿನ ಬವಣೆಗೆ ಬ್ರೇಕ್​ ಬಿದ್ದಿದೆ. ಅದಕ್ಕೆ ಬ್ರೇಕ್​ ಹಾಕಿದ್ದು 'ಈಟಿವಿ ಭಾರತ' ಎಂದು ಆ ಪಟ್ಟಣದ ಜನತೆ ಈಗ ಸಂತಸ ವ್ಯಕ್ತಪಡಿಸಿದ್ದಾರೆ.

ಇದು 'ಈಟಿವಿ ಭಾರತ' ಇಂಪ್ಯಾಕ್ಟ್
author img

By

Published : May 4, 2019, 5:21 PM IST

ಬೀದರ್: ಅಂತರ್ಜಲ ಮಟ್ಟ ಕುಸಿತ ಕಂಡು ತಿಂಗಳಿಂದ ಹನಿ ನೀರಿಗಾಗಿ ನರಕಯಾತನೆ ಅನುಭವಿಸುತ್ತಿದ್ದ ಔರಾದ್ ಪಟ್ಟಣದ ನಿವಾಸಿಗರ ನೋವಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಹೌದು, ಇದು 'ಈಟಿವಿ ಭಾರತ' ವರದಿ ಇಂಪ್ಯಾಕ್ಟ್.

ಜಲಕ್ಷಾಮದಿಂದ ನರಳುತ್ತಿದ್ದ ಔರಾದ್ ಪಟ್ಟಣದ ನೀರಿನ ಬವಣೆಯ ಕುರಿತು 'ಈಟಿವಿ ಭಾರತ' ವಿಸ್ತೃತವಾದ ಸರಣಿ ವರದಿಗಳ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿದೆ. ಹೀಗಾಗಿ ಸಹಾಯಕ ಆಯುಕ್ತ ಶಂಕರ ವಣಿಕ್ಯಾಳ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಔರಾದ್ ಪಟ್ಟಣದ 20 ವಾರ್ಡ್​ಗಳಲ್ಲಿ ಪರಿಶಿಲನೆ ನಡೆಸಿ, ನೀರಿನ ಸಮಸ್ಯೆಯ ಭೀಕರತೆಯನ್ನು ತಿಳಿದುಕೊಂಡು ತಕ್ಷಣ ತಹಶೀಲ್ದಾರರ ಕಚೇರಿಯಲ್ಲಿ ತುರ್ತು ಸಭೆ ಕರೆದು, ತಾಲೂಕು ಮಟ್ಟದ ಅಧಿಕಾರಿಗಳ ಮೈ ಚಳಿ ಬಿಡಿಸಿದೆ.

ಇದು 'ಈಟಿವಿ ಭಾರತ' ಇಂಪ್ಯಾಕ್ಟ್

ಸದ್ಯ ಪಟ್ಟಣದಲ್ಲಿರುವ ಜನರಿಗೆ 10ಕ್ಕೂ ಅಧಿಕ ಟ್ಯಾಂಕರ್​ಗಳ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಅಲ್ಲಲ್ಲಿ ಇರುವ ಪುರಾತನ ಬಾವಿಗಳಲ್ಲಿ ತುಂಬಿರುವ ಹೂಳನ್ನು ಎತ್ತುವ ಮೂಲಕ ಜಲಮೂಲ ವೃದ್ಧಿಸಲಾಗಿದ್ದು, ಖಾಸಗಿಯಾಗಿ ಎರಡು ಬಾವಿ ಹಾಗೂ ಬೋರ್​ವೆಲ್​ಗಳನ್ನು ಕೂಡಾ ಬಾಡಿಗೆ ಮೂಲಕ ತೆಗೆದುಕೊಂಡು ಸಾರ್ವಜನಿಕರಿಗೆ ನೀರು ಪೂರೈಸಲಾಗ್ತಿದೆ. ಅಲ್ಲದೆ ತೆಗಂಪೂರ ಕೆರೆ ಕೆಳಭಾಗದಲ್ಲಿ ಹೊಸ ಬೋರ್​ವೆಲ್​ ಕೊರೆದು ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗ್ತಿದೆ. ಅಗತ್ಯ ಬಿದ್ದರೆ ಜಲಮೂಲ ಇರುವ ದೂರದ ಗ್ರಾಮಗಳಿಂದಲೂ ನೀರು ತಂದು ನಿವಾಸಿಗರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಶಂಕರ ವಣಿಕ್ಯಾಳ 'ಈಟಿವಿ ಭಾರತ'ಕ್ಕೆ ಭರವಸೆ ನೀಡಿದ್ದಾರೆ.

ಇನ್ನು ಈಟಿವಿ ಭಾರತ ವರದಿಯಿಂದ ನಮ್ಮ ಬಡಾವಣೆಗಳಲ್ಲಿ ಇಂದು ನೀರು ಹರಿಯಲು ಕಾರಣವಾಗಿದೆ ಎಂದು ಸ್ಥಳೀಯ ನಿವಾಸಿಗರಲ್ಲಿ ಸಂತಸಕ್ಕೆ ಪಾರವೇ ಇಲ್ಲ. ಈ ವೇಳೆ ತಹಶೀಲ್ದಾರ್ ಚಂದ್ರಶೇಖರ್, ಪಟ್ಟಣ ಪಂಚಾಯತ್​ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಬೀದರ್: ಅಂತರ್ಜಲ ಮಟ್ಟ ಕುಸಿತ ಕಂಡು ತಿಂಗಳಿಂದ ಹನಿ ನೀರಿಗಾಗಿ ನರಕಯಾತನೆ ಅನುಭವಿಸುತ್ತಿದ್ದ ಔರಾದ್ ಪಟ್ಟಣದ ನಿವಾಸಿಗರ ನೋವಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಹೌದು, ಇದು 'ಈಟಿವಿ ಭಾರತ' ವರದಿ ಇಂಪ್ಯಾಕ್ಟ್.

ಜಲಕ್ಷಾಮದಿಂದ ನರಳುತ್ತಿದ್ದ ಔರಾದ್ ಪಟ್ಟಣದ ನೀರಿನ ಬವಣೆಯ ಕುರಿತು 'ಈಟಿವಿ ಭಾರತ' ವಿಸ್ತೃತವಾದ ಸರಣಿ ವರದಿಗಳ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿದೆ. ಹೀಗಾಗಿ ಸಹಾಯಕ ಆಯುಕ್ತ ಶಂಕರ ವಣಿಕ್ಯಾಳ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಔರಾದ್ ಪಟ್ಟಣದ 20 ವಾರ್ಡ್​ಗಳಲ್ಲಿ ಪರಿಶಿಲನೆ ನಡೆಸಿ, ನೀರಿನ ಸಮಸ್ಯೆಯ ಭೀಕರತೆಯನ್ನು ತಿಳಿದುಕೊಂಡು ತಕ್ಷಣ ತಹಶೀಲ್ದಾರರ ಕಚೇರಿಯಲ್ಲಿ ತುರ್ತು ಸಭೆ ಕರೆದು, ತಾಲೂಕು ಮಟ್ಟದ ಅಧಿಕಾರಿಗಳ ಮೈ ಚಳಿ ಬಿಡಿಸಿದೆ.

ಇದು 'ಈಟಿವಿ ಭಾರತ' ಇಂಪ್ಯಾಕ್ಟ್

ಸದ್ಯ ಪಟ್ಟಣದಲ್ಲಿರುವ ಜನರಿಗೆ 10ಕ್ಕೂ ಅಧಿಕ ಟ್ಯಾಂಕರ್​ಗಳ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಅಲ್ಲಲ್ಲಿ ಇರುವ ಪುರಾತನ ಬಾವಿಗಳಲ್ಲಿ ತುಂಬಿರುವ ಹೂಳನ್ನು ಎತ್ತುವ ಮೂಲಕ ಜಲಮೂಲ ವೃದ್ಧಿಸಲಾಗಿದ್ದು, ಖಾಸಗಿಯಾಗಿ ಎರಡು ಬಾವಿ ಹಾಗೂ ಬೋರ್​ವೆಲ್​ಗಳನ್ನು ಕೂಡಾ ಬಾಡಿಗೆ ಮೂಲಕ ತೆಗೆದುಕೊಂಡು ಸಾರ್ವಜನಿಕರಿಗೆ ನೀರು ಪೂರೈಸಲಾಗ್ತಿದೆ. ಅಲ್ಲದೆ ತೆಗಂಪೂರ ಕೆರೆ ಕೆಳಭಾಗದಲ್ಲಿ ಹೊಸ ಬೋರ್​ವೆಲ್​ ಕೊರೆದು ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗ್ತಿದೆ. ಅಗತ್ಯ ಬಿದ್ದರೆ ಜಲಮೂಲ ಇರುವ ದೂರದ ಗ್ರಾಮಗಳಿಂದಲೂ ನೀರು ತಂದು ನಿವಾಸಿಗರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಶಂಕರ ವಣಿಕ್ಯಾಳ 'ಈಟಿವಿ ಭಾರತ'ಕ್ಕೆ ಭರವಸೆ ನೀಡಿದ್ದಾರೆ.

ಇನ್ನು ಈಟಿವಿ ಭಾರತ ವರದಿಯಿಂದ ನಮ್ಮ ಬಡಾವಣೆಗಳಲ್ಲಿ ಇಂದು ನೀರು ಹರಿಯಲು ಕಾರಣವಾಗಿದೆ ಎಂದು ಸ್ಥಳೀಯ ನಿವಾಸಿಗರಲ್ಲಿ ಸಂತಸಕ್ಕೆ ಪಾರವೇ ಇಲ್ಲ. ಈ ವೇಳೆ ತಹಶೀಲ್ದಾರ್ ಚಂದ್ರಶೇಖರ್, ಪಟ್ಟಣ ಪಂಚಾಯತ್​ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Intro:ಈಟಿವಿ ಭಾರತ ಇಂಪ್ಯಾಕ್ಟ್:

ತಿಂಗಳಿಂದ ನೀರಿನ ನರಕದಲ್ಲಿದ್ದ ನಿವಾಸಿಗರಿಗೆ ಮುಕ್ತಿ- 'ಈಟಿವಿ ಭಾರತ' ಇಂಪ್ಯಾಕ್ಟ್...!

ಬೀದರ್:
ಅಂತರ್ಜಲ ಮಟ್ಟ ಕುಸಿತ ಕಂಡು ತಿಂಗಳಿಂದ ಹನಿ ನೀರಿಗಾಗಿ ನರಕಯಾತನೆ ಅನುಭವಿಸುತ್ತಿದ್ದ ಔರಾದ್ ಪಟ್ಟಣದ ನಿವಾಸಿಗರ ನೋವಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಇದು ಈಟಿವಿ ಭಾರತ ಇಂಪ್ಯಾಕ್ಟ್.


Body:ಜಲಕ್ಷಾಮದಿಂದ ನರಳುತ್ತಿದ್ದ ಔರಾದ್ ಪಟ್ಟಣದ ನೀರಿನ ಬವಣೆಯ ಕುರಿತು 'ಈಟಿವಿ ಭಾರತ' ವಿಸ್ತೃತ ವಾದ ಸರಣಿ ವರದಿಗಳ ಮೂಲಕ ಜಿಲ್ಲಾಡಳಿತದ ಗಮನ ಸೇಳೆದಿದೆ. ಸಹಾಯಕ ಆಯುಕ್ತ ಶಂಕರ ವಣಿಕ್ಯಾಳ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಔರಾದ್ ಪಟ್ಟಣದ ೨೦ ವಾರ್ಡಗಳಲ್ಲಿ ಪರಿಶಿಲನೆ ನಡೆಸಿ ನೀರಿನ ಸಮಸ್ಯೆಯ ಬೀಕರತೆಯನ್ನು ತಿಳಿದುಕೊಂಡು ತಕ್ಷಣ ತಹಸೀಲ ಕಚೇರಿಯಲ್ಲಿ ತುರ್ತು ಸಭೆ ಕರೆದು ತಾಲೂಕು ಮಟ್ಟದ ಅಧಿಕಾರಿಗಳ ಮೈ ಚಳಿ ಬಿಡಿಸಿದರು.

ಸಧ್ಯ ಪಟ್ಟಣದಲ್ಲಿರುವ ಜನರಿಗೆ ೧೦ ಕ್ಕೂ ಅಧಿಕ ಟ್ಯಾಂಕರ್ ಮೂಲಕ ನೀರು ಪೋರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಅಲಲ್ಲಿ ಇರುವ ಪುರಾತನ ಬಾವಿಗಳಲ್ಲಿ ತುಂಬಿರುವ ಹೊಳನ್ನು ಎತ್ತುವ ಮೂಲಕ ಜಲಮೂಲ ವೃದ್ಧಿಸಲಾಗಿದ್ದು, ಖಾಸಗಿಯಾಗಿ ಎತಡು ಬಾವಿಗಳು ಬೋರವೇಲ್ ಗಳು ಕೂಡ ಬಾಡಿಗೆ ಮೂಲಕ ತೆಗೆದುಕೊಂಡು ಸಾರ್ವಜನಿರಿಗೆ ನೀರು ಪೋರೈಸಲಾಗ್ತಿದೆ. ಅಲ್ಲದೆ ತೆಗಂಪೂರ ಕೆರೆ ಕೆಳಭಾಗದಲ್ಲಿ ಹೊಸ ಬೊರವೇಲ್ ಕೊರೆದು ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗ್ತಿದೆ. ಅಗತ್ಯ ಬಿದ್ದರೆ ಜಲಮೂಲ ಇರುವ ದೂರದ ಗ್ರಾಮಗಳಿಂದಲೂ ನೀರು ತಂದು ನಿವಾಸಿಗರಿಗೆ ಸಮಸ್ಯೆ ಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಶಂಕರ ವಣಿಕ್ಯಾಳ 'ಈಟಿವಿ ಭಾರತ'ಗೆ ಭರವಸೆ ನೀಡಿದರು.

ಅಲ್ಲದೆ ಔರಾದ್ ಪಟ್ಟಣಕ್ಕೆ ಸಾರ್ವಜನಿಕ ನೀರು ಸರಬರಾಜು ಮಾಡುವ ಮಾಂಜ್ರಾ ನದಿಯಿಂದ ಪೈಪಲೈನ್ ಅಳವಡಿಕೆಯ ಮಹತ್ವಕಾಂಕ್ಷಿ ಯೋಜನೆ ಅಡಿಯಲ್ಲಿ ೪೦ ಕೋಟಿ ಖರ್ಚಾದ್ರು ಜನರಿಗೆ ಹನಿ ನೀರು ಕೊಡದ ಕಂಪನಿ ವಿರುದ್ದ ಸರ್ಕಾರ ಮಟ್ಟದಲ್ಲಿ ಚುನಾವಣೆ ನಂತರ ಕ್ರಮಕ್ಕೆ ಸಿಫಾರಸ್ಸು ಮಾಡಬಹುದು ಎಂದರು.

ಈಟಿವಿ ಭಾರತ ವರದಿಯಿಂದ ನಮ್ಮ ಬಡಾವಣೆಗಳಲ್ಲಿ ಇಂದು ನೀರು ಹರಿಯಲು ಕಾರಣವಾಗಿದೆ ಎಂದು ಸ್ಥಳೀಯ ನಿವಾಸಿಗರಲ್ಲಿ ಸಂತಸಕ್ಕೆ ಪಾರವೆ ಇರಲಿಲ್ಲ.


Conclusion:ಈ ವೇಳೆಯಲ್ಲಿ ತಹಸೀಲ್ದಾರ್ ಚಂದ್ರಶೇಖರ್, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.