ETV Bharat / briefs

ಅಯ್ಯೋ ದುರ್ವಿಧಿಯೇ.. COVIDಗೆ ಕುರುಗೋಡಲ್ಲಿ ಒಂದೇ ಕುಟುಂಬದ ಮೂವರು ಬಲಿ!

author img

By

Published : May 26, 2021, 4:20 PM IST

Updated : May 26, 2021, 4:33 PM IST

ಮಹಾಮಾರಿ COVID ಸೋಂಕು ತಗುಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಕುರುಗೋಡು ತಾಲೂಕಿನಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.

ಕುಟುಂಬದ ಮೂವರು ಸಾವು
ಕುಟುಂಬದ ಮೂವರು ಸಾವು

ಬಳ್ಳಾರಿ: ಜಿಲ್ಲೆಯ ‌ಕುರುಗೋಡು ತಾಲೂಕಿನ ಮದಿರೆ ಗ್ರಾಮದ ಒಂದೇ ಕುಟುಂಬದ ಗಂಡ-ಹೆಂಡತಿ ಮತ್ತು ಮಗಳು ಮಹಾಮಾರಿ COVID ಸೋಂಕಿಗೆ ಬಲಿಯಾಗಿದ್ದಾರೆ.

ಮದಿರೆ ಗ್ರಾಮದ ಸುನೀತಮ್ಮ (45), ರುದ್ರಪ್ಪ (56) ಹಾಗೂ ನಂದಿನಿ (18) ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮೊದಲು ಈ ಮಹಾಮಾರಿ ಕೊರೊನಾ ಸೋಂಕಿಗೆ ಒಳಗಾಗಿದ್ದ ದುದ್ರಪ್ಪ ಅವರ ಮಗ ತಿಪ್ಪೇಸ್ವಾಮಿ (22) ಗುಣಮುಖ‌ರಾಗಿದ್ದಾರೆ.

ಘಟನೆಯ ವಿವರ: ಹೈದರಾಬಾದ್​ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ತಿಪ್ಪೇಸ್ವಾಮಿ (22) ಎರಡನೇ ಅಲೆಯ ಲಾಕ್ ಡೌನ್ ಘೋಷಣೆಯಾದ ಆರಂಭದಲ್ಲೇ ಮದಿರೆ ಗ್ರಾಮಕ್ಕೆ ಆಗಮಿಸಿದ್ದರು. ರೈತಾಪಿ ಕುಟುಂಬದ ಹಿನ್ನೆಲೆ ಹೊಂದಿದ್ದ ತಿಪ್ಪೇಸ್ವಾಮಿ ಅವರಿಗೆ COVID ಸೋಂಕು ತಗುಲಿತ್ತು. ಹೋಂ ಐಸೋಲೇಷನ್​ನಲ್ಲಿದ್ದ ತಿಪ್ಪೇಸ್ವಾಮಿ ಅವರಿಂದ ಅತನ ತಾಯಿಯಾದ ಸುನೀತಮ್ಮಗೆ ಈ ಸೋಂಕು ಆವರಿಸಿತ್ತು. ಬಳಿಕ, ಆತನ ಸಹೋದರಿ‌ ನಂದಿನಿ (18) ಅವರಿಗೆ COVID ಹಬ್ಬಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್​ಗೆ ಸ್ಥಳಾಂತರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರಿಬ್ಬರು ಸಾವನ್ನಪ್ಪಿದ್ದಾರೆ.

ಪತ್ನಿ ಹಾಗೂ ಮಗಳ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ತಿಪ್ಪೇಸ್ವಾಮಿಯವರ ತಂದೆ ರುದ್ರಪ್ಪ ಅವರಿಗೂ Corona ವಕ್ಕರಿಸಿತ್ತು. ಜಿಲ್ಲೆಯ ಕಂಪ್ಲಿಯ ಖಾಸಗಿ ಕೋವಿಡ್ ಕೇರ್ ಸೆಂಟರ್​ನಲ್ಲಿ ದಾಖಲಾಗಿದ್ದ ರುದ್ರಪ್ಪ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇದೀಗ‌ ಮನೆಯಲ್ಲಿ ಸೂತಕ ಆವರಿಸಿದೆ. ಒಂದೇ ಕುಟುಂಬದಲ್ಲಿ ಮೂವರು ಸಾವನ್ನಪ್ಪಿದ್ದನ್ನು ಕಂಡು ಜನರು ಮಮ್ಮಲ ಮರುಗಿದ್ದಾರೆ.

ಬಳ್ಳಾರಿ: ಜಿಲ್ಲೆಯ ‌ಕುರುಗೋಡು ತಾಲೂಕಿನ ಮದಿರೆ ಗ್ರಾಮದ ಒಂದೇ ಕುಟುಂಬದ ಗಂಡ-ಹೆಂಡತಿ ಮತ್ತು ಮಗಳು ಮಹಾಮಾರಿ COVID ಸೋಂಕಿಗೆ ಬಲಿಯಾಗಿದ್ದಾರೆ.

ಮದಿರೆ ಗ್ರಾಮದ ಸುನೀತಮ್ಮ (45), ರುದ್ರಪ್ಪ (56) ಹಾಗೂ ನಂದಿನಿ (18) ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮೊದಲು ಈ ಮಹಾಮಾರಿ ಕೊರೊನಾ ಸೋಂಕಿಗೆ ಒಳಗಾಗಿದ್ದ ದುದ್ರಪ್ಪ ಅವರ ಮಗ ತಿಪ್ಪೇಸ್ವಾಮಿ (22) ಗುಣಮುಖ‌ರಾಗಿದ್ದಾರೆ.

ಘಟನೆಯ ವಿವರ: ಹೈದರಾಬಾದ್​ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ತಿಪ್ಪೇಸ್ವಾಮಿ (22) ಎರಡನೇ ಅಲೆಯ ಲಾಕ್ ಡೌನ್ ಘೋಷಣೆಯಾದ ಆರಂಭದಲ್ಲೇ ಮದಿರೆ ಗ್ರಾಮಕ್ಕೆ ಆಗಮಿಸಿದ್ದರು. ರೈತಾಪಿ ಕುಟುಂಬದ ಹಿನ್ನೆಲೆ ಹೊಂದಿದ್ದ ತಿಪ್ಪೇಸ್ವಾಮಿ ಅವರಿಗೆ COVID ಸೋಂಕು ತಗುಲಿತ್ತು. ಹೋಂ ಐಸೋಲೇಷನ್​ನಲ್ಲಿದ್ದ ತಿಪ್ಪೇಸ್ವಾಮಿ ಅವರಿಂದ ಅತನ ತಾಯಿಯಾದ ಸುನೀತಮ್ಮಗೆ ಈ ಸೋಂಕು ಆವರಿಸಿತ್ತು. ಬಳಿಕ, ಆತನ ಸಹೋದರಿ‌ ನಂದಿನಿ (18) ಅವರಿಗೆ COVID ಹಬ್ಬಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್​ಗೆ ಸ್ಥಳಾಂತರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರಿಬ್ಬರು ಸಾವನ್ನಪ್ಪಿದ್ದಾರೆ.

ಪತ್ನಿ ಹಾಗೂ ಮಗಳ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ತಿಪ್ಪೇಸ್ವಾಮಿಯವರ ತಂದೆ ರುದ್ರಪ್ಪ ಅವರಿಗೂ Corona ವಕ್ಕರಿಸಿತ್ತು. ಜಿಲ್ಲೆಯ ಕಂಪ್ಲಿಯ ಖಾಸಗಿ ಕೋವಿಡ್ ಕೇರ್ ಸೆಂಟರ್​ನಲ್ಲಿ ದಾಖಲಾಗಿದ್ದ ರುದ್ರಪ್ಪ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇದೀಗ‌ ಮನೆಯಲ್ಲಿ ಸೂತಕ ಆವರಿಸಿದೆ. ಒಂದೇ ಕುಟುಂಬದಲ್ಲಿ ಮೂವರು ಸಾವನ್ನಪ್ಪಿದ್ದನ್ನು ಕಂಡು ಜನರು ಮಮ್ಮಲ ಮರುಗಿದ್ದಾರೆ.

Last Updated : May 26, 2021, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.