ETV Bharat / briefs

ಕಸ ಗುಡಿಸುವಾಗ ಸಿಕ್ಕ ಚಿನ್ನದ ಸರ: ಮಾಲೀಕನಿಗೆ ಹಿಂತಿರುಗಿಸಿ ಪೌರಕಾರ್ಮಿಕೆ ಪ್ರಾಮಾಣಿಕತೆ

author img

By

Published : Jun 15, 2019, 8:11 PM IST

ದಾರಿಯಲ್ಲಿ ದುಡ್ಡು, ಚಿನ್ನ ಸಿಕ್ಕರೆ ಜನ ಸಹಜವಾಗಿ ಏನ್ಮಾಡ್ತಾರೆ ಹೇಳಿ? ಜೇಬಲ್ಲಿ ಹಾಕಿಕೊಂಡು ಸುಮ್ಮನೆ ಮನೆಗೆ ಹೋಗ್ತಾರೆ. ಆದರೆ ಇಲ್ಲೊಬ್ಬ ಮಹಿಳೆ, ದಾರಿಯಲ್ಲಿ ಸಿಕ್ಕ ಚಿನ್ನದ ಸರವನ್ನು ಅದರ ಮಾಲೀಕನಿಗೆ ಸುರಕ್ಷಿತವಾಗಿ ತಲುಪಿಸಿ ಪ್ರಾಮಾಣಿಕತೆ ತೋರಿದ್ದಾರೆ. ದಾರಿಯಲ್ಲಿ ಚಿನ್ನದ ಸರ ಹಾಕ್ಕೊಂಡು ಹೋಗ್ತಿದ್ರೆ, ಎಗರಿಸೋ ಈ ಕಾಲದಲ್ಲಿ, ಒಳ್ಳೆಯವರಿಗೂ ಕೊರತೆ ಇಲ್ಲ ಅನ್ನೋದನ್ನು ಸಾಬೀತುಪಡಿಸುತ್ತಿದೆ ಈ ಸ್ಟೋರಿ.

ಸಿಕ್ಕ ಚಿನ್ನದ ಸರವನ್ನು ಮಾಲೀಕನಿಗೆ ಹಿಂದಿರುಗಿಸಿದ ಪೌರ ಕಾರ್ಮಿಕೆ

ಶಿವಮೊಗ್ಗ: ಈಗಿನ ಕಾಲದಲ್ಲಿ ಚಿನ್ನದ ಸರ ಹಾಕ್ಕೊಂಡು ಓಡಾಡೋದೇ ಕಷ್ಟ. ಚಿನ್ನಾಭರಣ ಧರಿಸಿ ದಾರಿಯಲ್ಲಿ ಮಹಿಳೆಯರು ಬರ್ತಾ ಇದ್ದರೆ, ಕತ್ತಿಗೆ ಕೈ ಹಾಕಿ ಸರ ಎಗರಿಸಿ ಎಸ್ಕೇಪ್‌ ಆಗೋ ಸರಗಳ್ಳರಿದ್ದಾರೆ. ಅಂಥದ್ರಲ್ಲಿ ಇಲ್ಲೊಬ್ಬ ಮಹಿಳೆ, ತನಗೆ ದಾರಿಯಲ್ಲಿ ಸಿಕ್ಕ ಚಿನ್ನದ ಸರವನ್ನು, ಸುರಕ್ಷಿತವಾಗಿ ಅದರ ಮಾಲೀಕನಿಗೆ ತಲುಪಿಸಿದ್ದಾರೆ.

ಪ್ರಾಮಾಣಿಕೆ ಮರೆದ ಈ ಮಹಿಳೆ ಹೆಸರು ಶಾಂತಮ್ಮ. ಇವರು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕೆಯಾಗಿ ದುಡಿಯುತ್ತಿದ್ದಾರೆ. ಶಾಂತಮ್ಮನವರಿಗೆ ಹಳೆತೀರ್ಥಹಳ್ಳಿ ರಸ್ತೆ ಗುಡಿಸುವಾಗ ಚಿನ್ನದ ಸರ ಸಿಕ್ಕಿದೆ. ಸರ ಸಿಕ್ಕಿದ್ರೂ ಖುಷಿಯಾಗದ ಶಾಂತಮ್ಮ, ಅಲ್ಲೇ ಅಕ್ಕಪಕ್ಕದ ಅಂಗಡಿಯವರಿಗೆ ನಿಮ್ದೇನಾ ಈ ಸರ ಅಂತಾ ಎಲ್ಲರನ್ನೂ ವಿಚಾರಿಸಿದ್ದಾರೆ. ಅಷ್ಟೊತ್ತಿಗೆ ಸರ ಕಳೆದುಕೊಂಡವರ ಸಂಬಂಧಿಯೊಬ್ಬರು, ಇದು ನಮ್ಮದೇ ಸರ ಎಂದಿದ್ದಾರೆ. ಇದರಿಂದ ಅನುಮಾನಗೊಂಡ ಶಾಂತಮ್ಮ, ನಿಮ್ಮದೇ ಸರ ಅನ್ನೋದಕ್ಕೆ ಏನು ಸಾಕ್ಷಿ ಅಂತಾ ಕೇಳಿದ್ದಾರೆ. ಬಳಿಕ ಫೋಟೋ ನೋಡಿ ಅಕ್ಕ ಪಕ್ಕದವರನ್ನ ವಿಚಾರಿಸಿದ ಮೇಲೆ ಸರ ಇವರದ್ದೇ ಎಂದು ಖಚಿತಪಡಿಸಿಕೊಂಡು, ಚಿನ್ನದ ಸರವನ್ನ ಮಾಲೀಕರಿಗೆ ಹಸ್ತಾಂತರಿಸಿ, ಎಲ್ಲರಿಂದಲೂ ಭೇಷ್ ಅನಿಸಿಕೊಂಡಿದ್ದಾರೆ.

ಸಿಕ್ಕ ಚಿನ್ನದ ಸರವನ್ನು ಮಾಲಿಕನಿಗೆ ಹಿಂದಿರುಗಿಸಿದ ಪೌರ ಕಾರ್ಮಿಕೆ

ಅಷ್ಟಕ್ಕೂ, ಯಾರಿಗಾದರೂ ಇಂತಹ ದುಬಾರಿ ವಸ್ತುಗಳು ಸಿಕ್ಕಾಗ, ವಾಪಾಸ್ ಕೋಡೋ ಮಂದಿ ವಿರಳ. ಮನೆ ಬೀಗ ಹಾಕಿದ್ರೂ ಕೂಡ, ಕಳ್ಳತನ ನಡೆಯುತ್ತಿದೆ. ಇಂಥ ಕಾಲದಲ್ಲಿ, ಪ್ರಾಮಾಣಿಕತೆಯಿಂದ ಪೌರ ಕಾರ್ಮಿಕೆ ಶಾಂತಮ್ಮ, ಚಿನ್ನದ ಸರವನ್ನ ವಾಪಾಸ್ ಮರಳಿಸಿರುವುದಕ್ಕೆ ಸ್ಥಳೀಯರು ಕೊಂಡಾಡುತ್ತಿದ್ದಾರೆ.

ಈ ಕಾಲದಲ್ಲಿ ತೆಗೆದುಕೊಂಡಿರೋ ಸಾಲವನ್ನೇ ವಾಪಸ್ ಕೊಡೋಕೆ ಕಿರಿಕ್ ಮಾಡೋ ಜನರ ನಡುವೆ, ರಸ್ತೆಯಲ್ಲಿ ಸಿಕ್ಕ ಚಿನ್ನದ ಸರವನ್ನ ಮಾಲೀಕರಿಗೆ ವಾಪಸ್ ಕೊಟ್ಟ ಶಾಂತಮ್ಮ ಕಾರ್ಯಕ್ಕೆ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳಲೇ ಬೇಕು.

ಶಿವಮೊಗ್ಗ: ಈಗಿನ ಕಾಲದಲ್ಲಿ ಚಿನ್ನದ ಸರ ಹಾಕ್ಕೊಂಡು ಓಡಾಡೋದೇ ಕಷ್ಟ. ಚಿನ್ನಾಭರಣ ಧರಿಸಿ ದಾರಿಯಲ್ಲಿ ಮಹಿಳೆಯರು ಬರ್ತಾ ಇದ್ದರೆ, ಕತ್ತಿಗೆ ಕೈ ಹಾಕಿ ಸರ ಎಗರಿಸಿ ಎಸ್ಕೇಪ್‌ ಆಗೋ ಸರಗಳ್ಳರಿದ್ದಾರೆ. ಅಂಥದ್ರಲ್ಲಿ ಇಲ್ಲೊಬ್ಬ ಮಹಿಳೆ, ತನಗೆ ದಾರಿಯಲ್ಲಿ ಸಿಕ್ಕ ಚಿನ್ನದ ಸರವನ್ನು, ಸುರಕ್ಷಿತವಾಗಿ ಅದರ ಮಾಲೀಕನಿಗೆ ತಲುಪಿಸಿದ್ದಾರೆ.

ಪ್ರಾಮಾಣಿಕೆ ಮರೆದ ಈ ಮಹಿಳೆ ಹೆಸರು ಶಾಂತಮ್ಮ. ಇವರು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕೆಯಾಗಿ ದುಡಿಯುತ್ತಿದ್ದಾರೆ. ಶಾಂತಮ್ಮನವರಿಗೆ ಹಳೆತೀರ್ಥಹಳ್ಳಿ ರಸ್ತೆ ಗುಡಿಸುವಾಗ ಚಿನ್ನದ ಸರ ಸಿಕ್ಕಿದೆ. ಸರ ಸಿಕ್ಕಿದ್ರೂ ಖುಷಿಯಾಗದ ಶಾಂತಮ್ಮ, ಅಲ್ಲೇ ಅಕ್ಕಪಕ್ಕದ ಅಂಗಡಿಯವರಿಗೆ ನಿಮ್ದೇನಾ ಈ ಸರ ಅಂತಾ ಎಲ್ಲರನ್ನೂ ವಿಚಾರಿಸಿದ್ದಾರೆ. ಅಷ್ಟೊತ್ತಿಗೆ ಸರ ಕಳೆದುಕೊಂಡವರ ಸಂಬಂಧಿಯೊಬ್ಬರು, ಇದು ನಮ್ಮದೇ ಸರ ಎಂದಿದ್ದಾರೆ. ಇದರಿಂದ ಅನುಮಾನಗೊಂಡ ಶಾಂತಮ್ಮ, ನಿಮ್ಮದೇ ಸರ ಅನ್ನೋದಕ್ಕೆ ಏನು ಸಾಕ್ಷಿ ಅಂತಾ ಕೇಳಿದ್ದಾರೆ. ಬಳಿಕ ಫೋಟೋ ನೋಡಿ ಅಕ್ಕ ಪಕ್ಕದವರನ್ನ ವಿಚಾರಿಸಿದ ಮೇಲೆ ಸರ ಇವರದ್ದೇ ಎಂದು ಖಚಿತಪಡಿಸಿಕೊಂಡು, ಚಿನ್ನದ ಸರವನ್ನ ಮಾಲೀಕರಿಗೆ ಹಸ್ತಾಂತರಿಸಿ, ಎಲ್ಲರಿಂದಲೂ ಭೇಷ್ ಅನಿಸಿಕೊಂಡಿದ್ದಾರೆ.

ಸಿಕ್ಕ ಚಿನ್ನದ ಸರವನ್ನು ಮಾಲಿಕನಿಗೆ ಹಿಂದಿರುಗಿಸಿದ ಪೌರ ಕಾರ್ಮಿಕೆ

ಅಷ್ಟಕ್ಕೂ, ಯಾರಿಗಾದರೂ ಇಂತಹ ದುಬಾರಿ ವಸ್ತುಗಳು ಸಿಕ್ಕಾಗ, ವಾಪಾಸ್ ಕೋಡೋ ಮಂದಿ ವಿರಳ. ಮನೆ ಬೀಗ ಹಾಕಿದ್ರೂ ಕೂಡ, ಕಳ್ಳತನ ನಡೆಯುತ್ತಿದೆ. ಇಂಥ ಕಾಲದಲ್ಲಿ, ಪ್ರಾಮಾಣಿಕತೆಯಿಂದ ಪೌರ ಕಾರ್ಮಿಕೆ ಶಾಂತಮ್ಮ, ಚಿನ್ನದ ಸರವನ್ನ ವಾಪಾಸ್ ಮರಳಿಸಿರುವುದಕ್ಕೆ ಸ್ಥಳೀಯರು ಕೊಂಡಾಡುತ್ತಿದ್ದಾರೆ.

ಈ ಕಾಲದಲ್ಲಿ ತೆಗೆದುಕೊಂಡಿರೋ ಸಾಲವನ್ನೇ ವಾಪಸ್ ಕೊಡೋಕೆ ಕಿರಿಕ್ ಮಾಡೋ ಜನರ ನಡುವೆ, ರಸ್ತೆಯಲ್ಲಿ ಸಿಕ್ಕ ಚಿನ್ನದ ಸರವನ್ನ ಮಾಲೀಕರಿಗೆ ವಾಪಸ್ ಕೊಟ್ಟ ಶಾಂತಮ್ಮ ಕಾರ್ಯಕ್ಕೆ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳಲೇ ಬೇಕು.

Intro:ದಿನಾಂಕ :- 15-06-2018.

ಸ್ಥಳ :- ಶಿವಮೊಗ್ಗ.

ಸ್ಲಗ್ :- ಸಿಕ್ಕ ಚಿನ್ನದ ಸರ ಮರಳಿಸಿದ ಪೌರ ಕಾರ್ಮಿಕೆ – ಪ್ರಾಮಾಣಿಕತೆಗೆ ಮನಸೋತ ಸ್ಥಳಿಯರು.

ಫಾರ್ಮೆಟ್ :- ಪ್ಯಾಕೇಜ್.


ANCHOR.........

ದಾರಿಯಲ್ಲಿ ದುಡ್ಡು, ಚಿನ್ನ ಸಿಕ್ರೇ ಸಾಕಷ್ಟು ಜನ ಸಹಜವಾಗಿ ಏನ್ಮಾಡ್ತಾರೆ......!?  ಜೇಬಲ್ಲಿ ಹಾಕೋಂಡು ಮನೆಗೆ ಹೋಗ್ತಾರೆ ಅಲ್ವಾ....! ಆದ್ರೆ, ಇಲ್ಲೊಬ್ಬ ಮಹಿಳೆ, ದಾರಿಯಲ್ಲಿ ಸಿಕ್ಕ ಚಿನ್ನದ ಸರನಾ, ಅದರ ಮಾಲಿಕನಿಗೆ ಸುರಕ್ಷಿತವಾಗಿ ತಲುಪಿಸಿ, ಸೈ ಎನಿಸಿಕೊಂಡಿದ್ದಾಳೆ.  ದಾರಿಯಲ್ಲಿ ಚಿನ್ನದ ಸರ ಹಾಕ್ಕೊಂಡು ಹೋಗ್ತಾ ಇದ್ರೆ, ಎಗರಿಸೋ ಕಾಲದಲ್ಲಿ, ಇಂತವ್ರು ಇರ್ತಾರಾ ಅಂತಾ ನೀವು ಅನ್ಕೊಂಡಿರಬಹುದು....ಹ್ಯಾವ್ ಎ ಲುಕ್....!


V.O. - 1.........

ಈಗಿನ ಕಾಲದಲ್ಲಿ ಚಿನ್ನದ ಸರ ಹಾಕೊಂಡು ಓಡಾಡೋದೆ ಕಷ್ಟ.....ಚಿನ್ನದ ಸರ ಹಾಕ್ಕೊಂಡು ದಾರಿಯಲ್ಲಿ ಮಹಿಳೆಯರು ಬರ್ತಾ ಇದ್ರೆ, ಕಳ್ಳಕಾಕರು ಚಿನ್ನದ ಸರನ ಎಗರಿಸಿ, ಎಸ್ಕೇಪ್ ಆಗೋ ಕಾಲ ಇದು.  ಅಂತಹದ್ರಲ್ಲಿ, ಇಲ್ಲೊಬ್ಬ ಮಹಿಳೆ, ತನಗೆ ದಾರಿಯಲ್ಲಿ ಸಿಕ್ಕ ಚಿನ್ನದ ಸರವನ್ನ, ಚಿನ್ನದಾಸೆಗೆ, ತಾನು ಇಟ್ಟುಕೊಳ್ಳದೇ, ಸುರಕ್ಷಿತವಾಗಿ, ಅದರ ಮಾಲಿಕನಿಗೆ ತಲುಪಿಸಿದ್ದಾರೆ.  ಅಂದಹಾಗೆ, ಇವರೇ ಆ ಮಹಿಳೆ.  ಹೆಸರು ಶಾಂತಮ್ಮ.  ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕೆಯಾಗಿ ದುಡಿಯುತ್ತಿರುವ ಮಹಿಳೆ.   ಅಷ್ಟಕ್ಕೂ, ಶಿವಮೊಗ್ಗದ ಹಳೇ ತೀರ್ಥಹಳ್ಳಿ ರಸ್ತೆಯಲ್ಲಿ, ಪೌರ ಕಾರ್ಮಿಕೆ ಶಾಂತಮ್ಮ, ರಸ್ತೆಯಲ್ಲಿ, ಕಸ ಗುಡಿಸುವಾಗ ಚಿನ್ನದ ಸರ ಸಿಕ್ಕಿದೆ.  ಹೇಳಿಕೇಳಿ ಚಿನ್ನದ ಸರ ಬೇರೆ.  ಕಾಸ್ಟ್ಲೀ ಬೇರೆ.  ಇಟ್ಟುಕೊಂಡ್ರೆ, ನಾಲ್ಕ್ ಕಾಸ್ ಆಗುತ್ತೆ.  ಇಲ್ಲವಾದ್ರೆ, ನನಗೊಂದು ಬಂಗಾರದ ಸರವಾಗತ್ತೆ ಅಂತಾ ಯೋಚಿಸದ ಈ ಶಾಂತಮ್ಮ, ಸರದ ಮಾಲಿಕರಿಗೆ ಅದನ್ನ ತಲುಪಿಸಿ, ಪ್ರಾಮಾಣಿಕತೆ ಮೆರೆದಿದ್ದಾರೆ.  ಚಿನ್ನದ ಸರ ಸಿಕ್ಕಿದ್ರೂ ಖುಷಿಯಾಗದ ಶಾಂತಮ್ಮ, ಅಲ್ಲೇ ಅಕ್ಕ ಪಕ್ಕದ ಅಂಗಡಿಯವರಿಗೆ ನಿಮ್ಮದೇನಾ ಈ ಸರ ಅಂತಾ ಎಲ್ಲರನ್ನೂ ವಿಚಾರಿಸಿದ್ದಾರೆ.  ಅಷ್ಟೋತ್ತಿಗೆ ಸರ ಕಳೆದುಕೊಂಡವರ ಸಂಬಂಧಿಯೊಬ್ಬರು, ಇದು ನಮ್ಮದೇ ಸರ ಅಂದಿದ್ದಾರೆ.  ಇದರಿಂದ ಅನುಮಾನಗೊಂಡ ಶಾಂತಮ್ಮ.  ನಿಮ್ಮದೇ ಸರ ಅನ್ನೋದಕ್ಕೆ ಏನು ಸಾಕ್ಷಿ ಅಂತಾ ಕೇಳಿದ್ದಾರೆ.  ಬಳಿಕ ಫೋಟೋ ನೋಡಿ ಅಕ್ಕ ಪಕ್ಕದವರನ್ನ ವಿಚಾರಿಸಿದ ಮೇಲೆ ಸರ ಇವರದ್ದೇ ಎಂದು ಖಚಿತ ಪಡಿಸಿಕೊಂಡು ಚಿನ್ನದ ಸರ ಮಾಲೀಕರಿಗೆ ಅದನ್ನ ವಾಪಾಸ್ ನೀಡಿ ಎಲ್ಲರಿಂದಲೂ ಭೇಷ್ ಅನಿಸಿಕೊಂಡಿದ್ದಾರೆ.


ಬೈಟ್ - 1 :- ಶಾಂತಮ್ಮ, ಪೌರ ಕಾರ್ಮಿಕರು






Body:V.O. - 2.........

ಅಷ್ಟಕ್ಕೂ, ಯಾರಿಗಾದ್ರೂ ಇಂತಹ ಕಾಸ್ಟ್ಲಿ ವಸ್ತುಗಳು ಸಿಕ್ಕಾಗ, ವಾಪಾಸ್ ಕೋಡೋದು, ವಿರಳ.  ಅದರಲ್ಲೂ ಮಹಿಳೆಯರ ಕತ್ತಲ್ಲಿ ಇರುವ ಚಿನ್ನದ ಸರವನ್ನೇ ಬಿಡದ ಕಾಲ ಇದು.  ಮನೆ ಬೀಗ ಹಾಕಿದ್ದರೂ ಕೂಡ, ಕಳ್ಳತನ ನಡೆಯುತ್ತೆ.  ಇಂತಹ ಕಾಲದಲ್ಲಿ, ಪ್ರಾಮಾಣಿಕತೆಯಿಂದ ಪೌರ ಕಾರ್ಮಿಕ ಶಾಂತಮ್ಮ ಚಿನ್ನದ ಸರವನ್ನ ವಾಪಾಸ್ ಮರಳಿಸಿರುವುದಕ್ಕೆ, ಅದರಲ್ಲೂ ಶಾಂತಮ್ಮಳ ನಿಯತ್ತಿಗೆ ಸ್ಥಳಿಯರು, ಕೊಂಡಾಡುತ್ತಿದ್ದಾರೆ.   ಸರ ಸಿಕ್ಕಿದ್ದಕ್ಕಿಂತ, ಶಾಂತಮ್ಮಳ ಪ್ರಾಮಾಣಿಕತೆಗೆ ಇಲ್ಲಿನ ಸ್ಥಳಿಯರು, ಮನಸೋತಿದ್ದಾರೆ.


ಬೈಟ್ – 2 :- ಸುನೀಲ್ ರಾಜ್ ಜೈನ್, ಚಿನ್ನದ ಸರ ಮಾಲೀಕರು.

ಬೈಟ್ – 3 :- ಸುನೀತಾ ಅಣ್ಣಪ್ಪ, ಸ್ಥಳಿಯ ಕಾರ್ಪೋರೇಟರ್.


V.O. - 3.........

ಒಟ್ಟಿನಲ್ಲಿ, ಇಂತಹ ಈ ಕಾಲದಲ್ಲಿ ತಗೊಂಡಿರೋ ಸಾಲವನ್ನೇ ವಾಪಸ್ ಕೊಡೋಕೆ ಕಿರಿಕ್ ಮಾಡೋ ಜನರ ನಡುವೆ, ರಸ್ತೆಯಲ್ಲಿ ಸಿಕ್ಕ ಚಿನ್ನದ ಸರವನ್ನ ಮಾಲೀಕರಿಗೆ ವಾಪಸ್ ಕೊಟ್ಟ ಶಾಂತಮ್ಮ ಕಾರ್ಯಕ್ಕೆ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳಲೇ ಬೇಕು.
ಭೀಮಾನಾಯ್ಕ ಎಸ್ ಶಿವಮೊಗ್ಗ



Conclusion:ಭೀಮಾನಾಯ್ಕ ಎಸ್ ಶಿವಮೊಗ್ಗ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.