ETV Bharat / briefs

ಆಲೂಗಡ್ಡೆಯಲ್ಲಿ ಚಿನ್ನ ತೆಗೆಯೋದು ಅಸಾಧ್ಯ: ರಾಹುಲ್​ ಕುರಿತು ಬಿಜೆಪಿ ಶಾಸಕ ವ್ಯಂಗ್ಯ - undefined

ಕಾಂಗ್ರೆಸ್​ ಮತ್ತು ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯಲಹಂಕ ಶಾಸಕ ವಿಶ್ವನಾಥ್. ನಿಖಿಲ್ ಚಿತ್ರದ ಧ್ವನಿಸುರಳಿಯ ಸಂದರ್ಭದಲ್ಲಿ ಕುಮಾರಸ್ವಾಮಿ ಮಧ್ಯೆ ನಡೆದ ಸಂಭಾಷಣೆಗೆ ಲೇವಡಿ.

ರಾಹುಲ್​ ಕುರಿತು ಬಿಜೆಪಿ ಶಾಸಕ ವ್ಯಂಗ್ಯ
author img

By

Published : Mar 25, 2019, 9:58 AM IST

ಚಿಕ್ಕಬಳ್ಳಾಪುರ: ಆಲೂಗಡ್ಡೆಯಲ್ಲಿ ಚಿಪ್ಸ್ ಹಾಗೂ ಪಲ್ಯವನ್ನು ಬಿಟ್ಟರೆ ಚಿನ್ನವನ್ನು ತಗೆಯಲು ಸಾಧ್ಯವಿಲ್ಲವೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕುರಿತು ಯಲಹಂಕ ಶಾಸಕ ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

ರಾಹುಲ್​ ಕುರಿತು ಬಿಜೆಪಿ ಶಾಸಕ ವ್ಯಂಗ್ಯ

ಜಿಲ್ಲೆಯ ಗೌರಿಬಿದನೂರಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಮತ್ತು ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೂ ರಾಹುಲ್​​ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಗಾಂಧಿ ಹೆಸರನ್ನು ಇಟ್ಟುಕೊಂಡು ಕಾಂಗ್ರೆಸ್​​ನವರು ದೇಶವನ್ನು ನಿರ್ನಾಮ ಮಾಡುತ್ತಿದ್ದಾರೆ ಎಂದು ದೂರಿದರು.

ಇನ್ನು ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೂ ಯಾವುದೇ ಉಪಯೋಗ ಆಗಲಿಲ್ಲ. ಒಲಂಪಿಕ್​ನಲ್ಲಿ ಪದಕಗಳನ್ನು ನೀಡುವಾಗ ಮೊದಲನೇ ಸ್ಥಾನ ಪಡೆದವರಿಗೆ ಚಿನ್ನ, ಎರಡನೇ ಸ್ಥಾನ ಪಡೆದವರಿಗೆ ಬೆಳ್ಳಿ, ಮೂರನೇ ಸ್ಥಾನ ಪಡೆದವರಿಗೆ ಕಂಚು ಕೊಡುತ್ತಾರೆ. ಆದರೆ ಕರ್ನಾಟಕದ ರಾಜಕೀಯದಲ್ಲಿ ಎಲ್ಲ ಉಲ್ಟಾ ಆಗಿದೆ. ಮೂರನೇ ಸ್ಥಾನ ಪಡೆದವರಿಗೆ ಸಿಎಂ ಹುದ್ದೆ, ಎರಡನೇ ಸ್ಥಾನದವರಿಗೆ ಡಿಸಿಎಂ ಹುದ್ದೆ, ಮೊದಲನೇ ಸ್ಥಾನಕ್ಕೆ ಪ್ರತಿಪಕ್ಷ ಸ್ಥಾನವನ್ನು ನೀಡಿರುವುದು ವಿಪರ್ಯಾಸ ಅಂತಾ ಬಿಜೆಪಿ ಶಾಸಕ ವಿಶ್ವನಾಥ್​ ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ವಿಶ್ವನಾಥ್ ಅವರು ನಿಖಿಲ್ ಚಿತ್ರದ ಧ್ವನಿಸುರಳಿಯ ಸಂದರ್ಭದಲ್ಲಿ ಕುಮಾರಸ್ವಾಮಿ ಮಧ್ಯೆ ನಡೆದ ಸಂಭಾಷಣೆಯನ್ನು ಲೇವಡಿ ಮಾಡಿದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವನಾಥ್​ ಭವಿಷ್ಯ ನುಡಿದರು.

ಚಿಕ್ಕಬಳ್ಳಾಪುರ: ಆಲೂಗಡ್ಡೆಯಲ್ಲಿ ಚಿಪ್ಸ್ ಹಾಗೂ ಪಲ್ಯವನ್ನು ಬಿಟ್ಟರೆ ಚಿನ್ನವನ್ನು ತಗೆಯಲು ಸಾಧ್ಯವಿಲ್ಲವೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕುರಿತು ಯಲಹಂಕ ಶಾಸಕ ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

ರಾಹುಲ್​ ಕುರಿತು ಬಿಜೆಪಿ ಶಾಸಕ ವ್ಯಂಗ್ಯ

ಜಿಲ್ಲೆಯ ಗೌರಿಬಿದನೂರಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಮತ್ತು ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೂ ರಾಹುಲ್​​ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಗಾಂಧಿ ಹೆಸರನ್ನು ಇಟ್ಟುಕೊಂಡು ಕಾಂಗ್ರೆಸ್​​ನವರು ದೇಶವನ್ನು ನಿರ್ನಾಮ ಮಾಡುತ್ತಿದ್ದಾರೆ ಎಂದು ದೂರಿದರು.

ಇನ್ನು ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೂ ಯಾವುದೇ ಉಪಯೋಗ ಆಗಲಿಲ್ಲ. ಒಲಂಪಿಕ್​ನಲ್ಲಿ ಪದಕಗಳನ್ನು ನೀಡುವಾಗ ಮೊದಲನೇ ಸ್ಥಾನ ಪಡೆದವರಿಗೆ ಚಿನ್ನ, ಎರಡನೇ ಸ್ಥಾನ ಪಡೆದವರಿಗೆ ಬೆಳ್ಳಿ, ಮೂರನೇ ಸ್ಥಾನ ಪಡೆದವರಿಗೆ ಕಂಚು ಕೊಡುತ್ತಾರೆ. ಆದರೆ ಕರ್ನಾಟಕದ ರಾಜಕೀಯದಲ್ಲಿ ಎಲ್ಲ ಉಲ್ಟಾ ಆಗಿದೆ. ಮೂರನೇ ಸ್ಥಾನ ಪಡೆದವರಿಗೆ ಸಿಎಂ ಹುದ್ದೆ, ಎರಡನೇ ಸ್ಥಾನದವರಿಗೆ ಡಿಸಿಎಂ ಹುದ್ದೆ, ಮೊದಲನೇ ಸ್ಥಾನಕ್ಕೆ ಪ್ರತಿಪಕ್ಷ ಸ್ಥಾನವನ್ನು ನೀಡಿರುವುದು ವಿಪರ್ಯಾಸ ಅಂತಾ ಬಿಜೆಪಿ ಶಾಸಕ ವಿಶ್ವನಾಥ್​ ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ವಿಶ್ವನಾಥ್ ಅವರು ನಿಖಿಲ್ ಚಿತ್ರದ ಧ್ವನಿಸುರಳಿಯ ಸಂದರ್ಭದಲ್ಲಿ ಕುಮಾರಸ್ವಾಮಿ ಮಧ್ಯೆ ನಡೆದ ಸಂಭಾಷಣೆಯನ್ನು ಲೇವಡಿ ಮಾಡಿದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವನಾಥ್​ ಭವಿಷ್ಯ ನುಡಿದರು.

Intro:ನಿಖಿಲ್ ಎಲ್ಲಿದ್ಧಿಯಾಪ್ಪ? ಓ ಆಗಲೇ ಜನರ ಮಧ್ಯೆ ಸೇರಿಕೊಂಡಿದ್ದೀಯಾ ಈ ಹೇಳಿಕೆ ಯಾರಿಗೆ ಗೋತ್ತಿಲ್ಲಾ ಹೇಳಿ. ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಪಟ್ಟೇ ವೈರಲ್ ಹಾಗುತ್ತಿರು ನಿಖಿಲ್ ಹಾಗೂ ಕುಮಾರಸ್ವಾಮಿ ಯವರ ಸಂಭಾಷಣೆ ಮತ್ತೇ ಈಗ ಟ್ರೋಲ್ ಆಗಿದೆ.


Body:ಭಾರತಿಯ ಜನತಪಾರ್ಟಿಯು ಯುವ ಮೋರ್ಚಾ ಸಮವೇಶವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಲ್ಲಿ ಹಮ್ಮಿಕೊಂಡಿದ್ದು ಪ್ರಚಾರದ ಸಲುವಾಗಿ ಸಮ್ಮಿಶ್ರ ಸರ್ಕಾರದ ಬಗ್ಗೆ ಟೀಕೆ ಪ್ರಹಾರವನ್ನು ಶುರು ಮಾಡಿದ್ದ ಯಲಹಂಕ ಶಾಸಕ ವೀಶ್ವನಾಥ್ ನಿಖಿಲ್ ಚಿತ್ರದ ಧ್ವನಿಸುರಳಿಯ ಸಂದರ್ಭದಲ್ಲಿ ಕುಮಾರಸ್ವಾಮಿಯವರ ಮಧ್ಯೆ ನಡೆದ ಸಂಭಾಷಣೆಯನ್ನು ಲೇವಡಿ ಮಾಡಿದ್ದಾರೆ.

ಇನ್ನೂ ರಾಹಲ್ ಗಾಂಧಿಯ ಬಗ್ಗೆ ಮಾತಾನಾಡಿದ ಶಾಸಕ ವಿಶ್ವನಾಥ್ ಆಲೂಗಡ್ಡೆ ಯಲ್ಲಿ ಚಿಪ್ಸ್ ಹಾಗೂ ಪಲ್ಯವನ್ನು ಬಿಟ್ಟರೆ ಚಿನ್ನವನ್ನು ತಗೆಯಲು ಸಧ್ಯವಿಲ್ಲಾ ಎಂದು ಟೀಕೆಯನ್ನು ಮಾಡಿದ್ದಾರೆ.ಇನ್ನೂ ಮಹಾತ್ಮ ಗಾಂಧಿಯವರಿಗೂ ಇವರ ಕುಟುಂಬಕ್ಕೂ ಯಾವುದೇ ಸಂಭಂಧವಿಲ್ಲ ಆದರೆ ಹೆಸರನ್ನು ಇಟ್ಟುಕೊಂಡು ದೇಶವನ್ನು ನಿರ್ಣಾಮ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗೆದ್ದರು ಯಾವುದೇ ಉಪಯೋಗವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಒಲಂಪಿಕ್ ನಲ್ಲಿ ಚಿನ್ನದ ಪದಕಗಳನ್ನು ನೀಡುವಾಗ ಮೊದಲನೇ ಸ್ಥಾನ,ಎರಡನೇ ಸ್ಥಾನ,ಮೂರನೇ ಸ್ಥಾನಗಳನ್ನು ಕೊಡುತ್ತಾರೆ ಆದರೆ ಕರ್ನಾಟಕದ ರಾಜಕೀಯದಲ್ಲಿ ಮೂರನೇ ಸ್ಥಾನವನ್ನು ಪಡೆದವರಿಗೆ ಮುಖ್ಯವಾಗಿ ಹುದ್ದೆಯನ್ನು,ಎರಡನೇ ಸ್ಥಾನದವರಿಗೆ ಉಪಮುಖ್ಯಮಂತ್ರಿ ಪದವಿಯನ್ನು ನೀಡಿ ಮೊದಲನೇ ಸ್ಥಾನಕ್ಕೆ ವಿರೋಧಪಕ್ಷ ಸ್ಥಾನವನ್ನು ನೀಡಿದ್ದಾರೆಂದು ಸಮ್ಮಿಶ್ರ ಸರ್ಕಾರದ ಬಗ್ಗೆ ಟೀಕೆ ಮಾಡಿದರು.ಇನ್ನೂ ಈ ಬಾರೀ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆದ್ದ ನಂತರ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆಂದು ತಿಳಸಿದರು.




Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.