ಲಖನೌ (ಉತ್ತರ ಪ್ರದೇಶ): ಇಲ್ಲಿನ ಮೂವರು ಐಪಿಎಸ್ ಅಧಿಕಾರಿಗಳಾದ ಐಜಿ ಅಮಿತಾಬ್ ಠಾಕೂರ್, ರಾಜೇಶ್ ಕೃಷ್ಣ (ಕಮಾಂಡೆಂಟ್ 10 ನೇ ಬೆಟಾಲಿಯನ್ ಬಾರಾಬಂಕಿ) ಮತ್ತು ಡಿಐಜಿ ರಾಕೇಶ್ ಶಂಕರ್ ಅವರಿಂದ ನಿವೃತ್ತಿಗೂ ಮೊದಲೇ ಸರ್ಕಾರ ರಾಜೀನಾಮೆ ಪಡೆದುಕೊಂಡಿದೆ.
ಈ ಮೂವರು ಅಧಿಕಾರಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಆರೋಪಗಳಿರುವ ಹಿನ್ನೆಲೆ ಗೃಹ ಸಚಿವಾಲಯ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗ್ತಿದೆ. ಅಮಿತಾಬ್ ಠಾಕೂರ್ ತನ್ನೆಲ್ಲಾ ಪ್ರಕರಣ ಬಾಕಿ ಉಳಿಸಿಕೊಂಡಿದ್ದಾರೆ. ರಾಜೇಶ್ ಕೃಷ್ಣ ಮೇಲೆ ಪೊಲೀಸ್ ನೇಮಕಾತಿಯಲ್ಲಿ ಹಗರಣ ನಡೆಸಿದ ಆರೋಪವಿದೆ. ಇದಲ್ಲದೆ ರಾಕೇಶ್ ಶಂಕರ್ ಡಿಯೋರಿಯಾ ಶೆಲ್ಟರ್ ಹೋಮ್ ಪ್ರಕರಣದ ಶಂಕಿತ ಆರೋಪಿ ಎಂಬ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ.
ಈ ಹಿಂದೆ ಅಖಿಲೇಶ್ ಯಾದವ್ ಸರ್ಕಾರದಲ್ಲಿ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಜೊತೆ ಅನುರಾಗ್ ಠಾಕೂರ್ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೋ ಒಂದು ವೈರಲ್ ಆಗಿತ್ತು. ಬಳಿಕ ಅವರನ್ನು ಅಮಾನತು ಮಾಡಿ, ಪ್ರಕರಣ ಸಂಬಂದ ತನಿಖೆಯೂ ಆರಂಭಗೊಂಡಿತ್ತು. ಈ ಹಿನ್ನೆಲೆ ಅವರು ಸರ್ಕಾರಿ ಉದ್ಯೋಗದಲ್ಲಿ ಮುಂದುವರಿಯಲು ಅಸಮರ್ಥರು ಎಂದು ಪರಿಗಣಿಸಿ ನಿವೃತ್ತಿಗೂ ಮೊದಲೇ ರಾಜೀನಾಮೆ ಪಡೆದುಕೊಳ್ಳಲಾಗಿದೆ.