ಬಾಗೇಶ್ವರ(ಹಿಮಾಚಲ ಪ್ರದೇಶ) : ರಸ್ತೆ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯದಂತೆ ಆಗ್ರಹಿಸಿ ನೂರಾರು ಮಹಿಳಾ ಪ್ರತಿಭಟನಾಕಾರರು ಮರಗಳನ್ನು ತಬ್ಬಿಕೊಂಡರು. ಡೆಹ್ರಾಡೂನ್ನ ಕಾಮೆದಿ ದೇವಿ-ರಂಗ್ಥರಾ-ಮಜ್ಗಾಂವ್-ಚೌನಾಲಾ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗಿದೆ.
ಉತ್ತರಾಖಂಡ್ನ ಬೆಟ್ಟಗಳಲ್ಲಿನ ಅರಣ್ಯವು ನ್ಯಾಯದೇವತೆ 'ಕೋಟ್ಗರಿ ದೇವಿ'ಗೆ ಸೇರಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಮರಗಳನ್ನು ಕಡಿಯಲು ಅವಕಾಶ ನೀಡುವುದಿಲ್ಲ ಎಂದು ಬಾಗೇಶ್ವರದ ಜಖಾನಿ ಗ್ರಾಮದ ಮಹಿಳೆಯರು ಒಂದೇ ಧ್ವನಿಯಲ್ಲಿ ಹೇಳಿದ್ದಾರೆ.
ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಸರ್ಪಂಚ್ ಕಮಲಾ ಮೆಹ್ತಾ ಅವರ ನೇತೃತ್ವದಲ್ಲಿ ಮಹಿಳೆಯರು ಸಭೆ ನಡೆಸಿದ್ದಾರೆ. ಸಭೆಯ ನಂತರ ಹಳ್ಳಿಯ ಪ್ರತಿಯೊಬ್ಬ ಮಹಿಳೆಯೂ ಮರವನ್ನು ಹಿಡಿದು ತಬ್ಬಿಕೊಂಡರು. ಮಹಿಳೆಯರು ತಮ್ಮ ಮಕ್ಕಳಂತೆ ಮರಗಳನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದರು.
ಓದಿ : ಆಧಾರ್ ಲಿಂಕ್ ಇಲ್ಲದ 3 ಕೋಟಿ ಪಡಿತರ ಚೀಟಿ ರದ್ದು: ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್
'ಚೌನಾಲಾ ಗ್ರಾಮಕ್ಕೆ ರಸ್ತೆ ಇದೆ ಮತ್ತು ಮತ್ತೊಂದು ರಸ್ತೆ ನಿರ್ಮಿಸುವ ಮತ್ತು ಅದಕ್ಕಾಗಿ ಮರಗಳನ್ನು ಕಡಿಯುವ ಅವಶ್ಯಕತೆ ಏನಿದೆ? ನಮ್ಮ ಮರಗಳನ್ನು ಕಡಿಯಲು ನಾವು ಅವಕಾಶ ನೀಡುವುದಿಲ್ಲ.
ಮರಗಳನ್ನು ಕಡಿಯುವುದರಿಂದ ಪರಿಸರ ಮಾತ್ರವಲ್ಲದೆ, ನಮ್ಮ ಪ್ರದೇಶದ ನೈಸರ್ಗಿಕ ಜಲ ಸಂಪನ್ಮೂಲವೂ ನಾಶವಾಗುತ್ತದೆ' ಎಂದು ಪ್ರತಿಭಟನಾಕಾರರೊಬ್ಬರು ಹೇಳಿದರು. ಅಲ್ಲದೆ ನಾವು ಕಾಡಿನಿಂದ ಮೇವು ಕೂಡ ತರುವುದಿಲ್ಲ ಎಂದಿದ್ದಾರೆ.
ಇದೇ ರೀತಿ ಅರಣ್ಯ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ 1973ರಲ್ಲಿ ಚಿಪ್ಕೊ ಚಳವಳಿ ಅಥವಾ ಚಿಪ್ಕೊ ಆಂದೋಲನ್ ಉತ್ತರಾಖಂಡ್ನಲ್ಲಿ ಪ್ರಾರಂಭವಾಗಿತ್ತು. ಈ ಆಂದೋಲನವು ಪ್ರಪಂಚದಾದ್ಯಂತದ ಅನೇಕ ಪರಿಸರ ಚಳವಳಿಗಳಿಗೆ ಸ್ಫೂರ್ತಿಯಾಯಿತು.