ETV Bharat / bharat

'ಗೆಲುವು ಅಥವಾ ಸೋಲು, ನಾವು ನಿಮ್ಮನ್ನು ಪ್ರೀತಿಸುತ್ತೇವೆ': ಟೀಂ ಇಂಡಿಯಾ ಸೋಲಿಗೆ ರಾಹುಲ್​ ಗಾಂಧಿ ಪ್ರತಿಕ್ರಿಯೆ

author img

By ANI

Published : Nov 20, 2023, 9:05 AM IST

Rahul Gandhi on World Cup loss: ಭಾನುವಾರ ನಡೆದ ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಸೋಲು ಕಂಡಿರುವ ಭಾರತ ಕ್ರಿಕೆಟ್​​ ತಂಡಕ್ಕೆ ರಾಜಕೀಯ ನಾಯಕರುಗಳು ಧೈರ್ಯ ತಂಬಿದ್ದಾರೆ.

rahul ghandi
ರಾಹುಲ್​ ಗಾಂಧಿ

ನವದೆಹಲಿ: ಭಾನುವಾರ ಅಹಮದಾಬಾದ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ನಿರಾಶಾದಾಯಕ ಸೋಲು ಕಂಡಿತು. ಈ ಸೋಲಿನ ಬಳಿಕ ಬ್ಲೂ ಬಾಯ್ಸ್​ಗೆ ಭಾರತೀಯರ ಪ್ರೀತಿ, ಪ್ರೋತ್ಸಾಹ ಕಡಿಮೆಯಾಗಿಲ್ಲ. ಎಲ್ಲೆಡೆ ಭಾರತದ ಸೋಲಿಗಿಂತಲೂ ಇಲ್ಲಿವರೆಗಿನ ತಂಡದ ಶ್ರಮ, ಉತ್ತಮ ಪ್ರದರ್ಶನ ಬಗ್ಗೆ ಗುಣಗಾನ, ಅಭಿನಂದನೆಗಳು ಹರಿದುಬರುತ್ತಿವೆ. ಇದರಂತೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟೀಂ ಇಂಡಿಯಾ ಸದಸ್ಯರಿಗೆ ಧೈರ್ಯ ಹೇಳಿದ್ದಾರೆ.

  • Team INDIA, you played solidly well through the tournament!

    Win or lose - we love you either way and we will win the next one.

    Congratulations to Australia for a well deserved World Cup victory.

    — Rahul Gandhi (@RahulGandhi) November 19, 2023 " class="align-text-top noRightClick twitterSection" data=" ">

'​ಗೆಲುವು ಅಥವಾ ಸೋಲು. ನಾವು ನಿಮ್ಮನ್ನು ಒಂದೇ ರೀತಿ ಪ್ರೀತಿಸುತ್ತೇವೆ. ನಾವು ಮುಂದಿನ ಸಲ ಗೆಲ್ಲುತ್ತೇವೆ. ನೀವು ಪಂದ್ಯಾವಳಿಯಲ್ಲಿ ಉತ್ತಮವಾಗಿ ಆಡಿದ್ದೀರಿ' ಎಂದು ಸೋಲಿನ ನೋವಲ್ಲಿರುವ ಭಾರತ ತಂಡದೊಂದಿಗೆ ನಾವಿದ್ದೇವೆ ಎಂದು ರಾಹುಲ್ ಗಾಂಧಿ ಧೈರ್ಯ ತುಂಬಿದ್ದಾರೆ.

ಇದೇ ವೇಳೆ, ವಿಶ್ವಕಪ್ ಜಯಿಸಿದ ಆಸ್ಟ್ರೇಲಿಯಾ ತಂಡವನ್ನು ರಾಹುಲ್ ಅಭಿನಂದಿಸಿದ್ದಾರೆ. ಅರ್ಹ ವಿಶ್ವಕಪ್ ಗೆಲುವಿಗಾಗಿ ಅಭಿನಂದನೆಗಳು ಎಂದಿದ್ದಾರೆ.

  • Congratulations Team Australia.

    India played well and won hearts.
    Your talent and sportsman’s spirit was visible in the game.

    Every single Indian is proud of your remarkable performance throughout the World Cup.

    We will always cheer for you and cherish your accomplishments.…

    — Mallikarjun Kharge (@kharge) November 19, 2023 " class="align-text-top noRightClick twitterSection" data=" ">

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳನ್ನು ಎಕ್ಸ್​ ಪೋಸ್ಟ್​ನ ಮೂಲಕ ತಿಳಿಸಿದ್ದಾರೆ. ಭಾರತ ತಂಡ ಉತ್ತಮವಾಗಿ ಆಡಿದ್ದು, ಹೃದಯಗಳನ್ನು ಗೆದ್ದಿದೆ. ನಿಮ್ಮ ಪ್ರತಿಭೆ ಆಟದಲ್ಲಿ ಗೋಚರಿಸಿದೆ. ವಿಶ್ವಕಪ್‌ನುದ್ದಕ್ಕೂ ಗಮನಾರ್ಹ ಪ್ರದರ್ಶನದ ಬಗ್ಗೆ ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡುತ್ತಾರೆ. ನಾವು ಯಾವಾಗಲೂ ನಿಮ್ಮನ್ನು ಹುರಿದುಂಬಿಸುತ್ತೇವೆ ಮತ್ತು ನಿಮ್ಮ ಸಾಧನೆಗಳನ್ನು ಗೌರವಿಸುತ್ತೇವೆ' ಎಂದಿದ್ದಾರೆ.

  • ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಭಾರತ ತೋರಿದ ಸಂಘಟಿತ ಪ್ರದರ್ಶನ, ಫೈನಲ್ ಪಂದ್ಯದ ವರೆಗಿನ ಅಜೇಯ ಅಭಿಯಾನ ಬಹುಕಾಲ ನೆನಪಲ್ಲುಳಿಯಲಿದೆ.
    ಸೋಲು - ಗೆಲುವು ಆಟದ ಅವಿಭಾಜ್ಯ ಅಂಗ. ಸೋಲಿನ ದುಃಖದಲ್ಲಿರುವ ನಮ್ಮ ತಂಡದ ಜೊತೆ ನಿಲ್ಲೋಣ.#WorldcupFinal #WorldCup #INDvsAUS pic.twitter.com/3319TOszAk

    — Siddaramaiah (@siddaramaiah) November 19, 2023 " class="align-text-top noRightClick twitterSection" data=" ">

ನಮ್ಮ ತಂಡದ ಜೊತೆ ನಿಲ್ಲೋಣ -ಸಿಎಂ: ಸಿಎಂ ಸಿದ್ದರಾಮಯ್ಯ ಅವರು, ನಮ್ಮ ತಂಡದೊಂದಿಗೆ ಇರೋಣ ಎಂಬ ಸಂದೇಶ ನೀಡಿದ್ದಾರೆ. ಇದೇ ವೇಳೆ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇಡೀ ಪಂದ್ಯಾವಳಿಯಲ್ಲಿ ಭಾರತ ತೋರಿದ ಸಂಘಟಿತ ಪ್ರದರ್ಶನ, ಫೈನಲ್ ಪಂದ್ಯದವರೆಗಿನ ಅಜೇಯ ಅಭಿಯಾನ ಬಹುಕಾಲ ನೆನಪಲ್ಲಿ ಉಳಿಯಲಿದೆ ಎಂದಿದ್ದಾರೆ. ಸೋಲು - ಗೆಲುವು ಆಟದ ಅವಿಭಾಜ್ಯ ಅಂಗ. ಸೋಲಿನ ದುಃಖದಲ್ಲಿರುವ ನಮ್ಮ ತಂಡದ ಜೊತೆ ನಿಲ್ಲೋಣ ಎಂದು ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ: 'ನಾವು ಯಾವಾಗಲೂ ನಿಮ್ಮೊಂದಿಗಿರುತ್ತೇವೆ': ವಿಶ್ವಕಪ್‌ ಸೋಲಿನ ಬಳಿಕ ಭಾರತ ಕ್ರಿಕೆಟ್‌ ತಂಡಕ್ಕೆ ಮೋದಿ ಸಂದೇಶ

ನವದೆಹಲಿ: ಭಾನುವಾರ ಅಹಮದಾಬಾದ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ನಿರಾಶಾದಾಯಕ ಸೋಲು ಕಂಡಿತು. ಈ ಸೋಲಿನ ಬಳಿಕ ಬ್ಲೂ ಬಾಯ್ಸ್​ಗೆ ಭಾರತೀಯರ ಪ್ರೀತಿ, ಪ್ರೋತ್ಸಾಹ ಕಡಿಮೆಯಾಗಿಲ್ಲ. ಎಲ್ಲೆಡೆ ಭಾರತದ ಸೋಲಿಗಿಂತಲೂ ಇಲ್ಲಿವರೆಗಿನ ತಂಡದ ಶ್ರಮ, ಉತ್ತಮ ಪ್ರದರ್ಶನ ಬಗ್ಗೆ ಗುಣಗಾನ, ಅಭಿನಂದನೆಗಳು ಹರಿದುಬರುತ್ತಿವೆ. ಇದರಂತೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟೀಂ ಇಂಡಿಯಾ ಸದಸ್ಯರಿಗೆ ಧೈರ್ಯ ಹೇಳಿದ್ದಾರೆ.

  • Team INDIA, you played solidly well through the tournament!

    Win or lose - we love you either way and we will win the next one.

    Congratulations to Australia for a well deserved World Cup victory.

    — Rahul Gandhi (@RahulGandhi) November 19, 2023 " class="align-text-top noRightClick twitterSection" data=" ">

'​ಗೆಲುವು ಅಥವಾ ಸೋಲು. ನಾವು ನಿಮ್ಮನ್ನು ಒಂದೇ ರೀತಿ ಪ್ರೀತಿಸುತ್ತೇವೆ. ನಾವು ಮುಂದಿನ ಸಲ ಗೆಲ್ಲುತ್ತೇವೆ. ನೀವು ಪಂದ್ಯಾವಳಿಯಲ್ಲಿ ಉತ್ತಮವಾಗಿ ಆಡಿದ್ದೀರಿ' ಎಂದು ಸೋಲಿನ ನೋವಲ್ಲಿರುವ ಭಾರತ ತಂಡದೊಂದಿಗೆ ನಾವಿದ್ದೇವೆ ಎಂದು ರಾಹುಲ್ ಗಾಂಧಿ ಧೈರ್ಯ ತುಂಬಿದ್ದಾರೆ.

ಇದೇ ವೇಳೆ, ವಿಶ್ವಕಪ್ ಜಯಿಸಿದ ಆಸ್ಟ್ರೇಲಿಯಾ ತಂಡವನ್ನು ರಾಹುಲ್ ಅಭಿನಂದಿಸಿದ್ದಾರೆ. ಅರ್ಹ ವಿಶ್ವಕಪ್ ಗೆಲುವಿಗಾಗಿ ಅಭಿನಂದನೆಗಳು ಎಂದಿದ್ದಾರೆ.

  • Congratulations Team Australia.

    India played well and won hearts.
    Your talent and sportsman’s spirit was visible in the game.

    Every single Indian is proud of your remarkable performance throughout the World Cup.

    We will always cheer for you and cherish your accomplishments.…

    — Mallikarjun Kharge (@kharge) November 19, 2023 " class="align-text-top noRightClick twitterSection" data=" ">

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳನ್ನು ಎಕ್ಸ್​ ಪೋಸ್ಟ್​ನ ಮೂಲಕ ತಿಳಿಸಿದ್ದಾರೆ. ಭಾರತ ತಂಡ ಉತ್ತಮವಾಗಿ ಆಡಿದ್ದು, ಹೃದಯಗಳನ್ನು ಗೆದ್ದಿದೆ. ನಿಮ್ಮ ಪ್ರತಿಭೆ ಆಟದಲ್ಲಿ ಗೋಚರಿಸಿದೆ. ವಿಶ್ವಕಪ್‌ನುದ್ದಕ್ಕೂ ಗಮನಾರ್ಹ ಪ್ರದರ್ಶನದ ಬಗ್ಗೆ ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡುತ್ತಾರೆ. ನಾವು ಯಾವಾಗಲೂ ನಿಮ್ಮನ್ನು ಹುರಿದುಂಬಿಸುತ್ತೇವೆ ಮತ್ತು ನಿಮ್ಮ ಸಾಧನೆಗಳನ್ನು ಗೌರವಿಸುತ್ತೇವೆ' ಎಂದಿದ್ದಾರೆ.

  • ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಭಾರತ ತೋರಿದ ಸಂಘಟಿತ ಪ್ರದರ್ಶನ, ಫೈನಲ್ ಪಂದ್ಯದ ವರೆಗಿನ ಅಜೇಯ ಅಭಿಯಾನ ಬಹುಕಾಲ ನೆನಪಲ್ಲುಳಿಯಲಿದೆ.
    ಸೋಲು - ಗೆಲುವು ಆಟದ ಅವಿಭಾಜ್ಯ ಅಂಗ. ಸೋಲಿನ ದುಃಖದಲ್ಲಿರುವ ನಮ್ಮ ತಂಡದ ಜೊತೆ ನಿಲ್ಲೋಣ.#WorldcupFinal #WorldCup #INDvsAUS pic.twitter.com/3319TOszAk

    — Siddaramaiah (@siddaramaiah) November 19, 2023 " class="align-text-top noRightClick twitterSection" data=" ">

ನಮ್ಮ ತಂಡದ ಜೊತೆ ನಿಲ್ಲೋಣ -ಸಿಎಂ: ಸಿಎಂ ಸಿದ್ದರಾಮಯ್ಯ ಅವರು, ನಮ್ಮ ತಂಡದೊಂದಿಗೆ ಇರೋಣ ಎಂಬ ಸಂದೇಶ ನೀಡಿದ್ದಾರೆ. ಇದೇ ವೇಳೆ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇಡೀ ಪಂದ್ಯಾವಳಿಯಲ್ಲಿ ಭಾರತ ತೋರಿದ ಸಂಘಟಿತ ಪ್ರದರ್ಶನ, ಫೈನಲ್ ಪಂದ್ಯದವರೆಗಿನ ಅಜೇಯ ಅಭಿಯಾನ ಬಹುಕಾಲ ನೆನಪಲ್ಲಿ ಉಳಿಯಲಿದೆ ಎಂದಿದ್ದಾರೆ. ಸೋಲು - ಗೆಲುವು ಆಟದ ಅವಿಭಾಜ್ಯ ಅಂಗ. ಸೋಲಿನ ದುಃಖದಲ್ಲಿರುವ ನಮ್ಮ ತಂಡದ ಜೊತೆ ನಿಲ್ಲೋಣ ಎಂದು ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ: 'ನಾವು ಯಾವಾಗಲೂ ನಿಮ್ಮೊಂದಿಗಿರುತ್ತೇವೆ': ವಿಶ್ವಕಪ್‌ ಸೋಲಿನ ಬಳಿಕ ಭಾರತ ಕ್ರಿಕೆಟ್‌ ತಂಡಕ್ಕೆ ಮೋದಿ ಸಂದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.