ETV Bharat / bharat

ಹುಟ್ಟಿನಿಂದಲೇ ಸ್ನಾಯುಕ್ಷಯದಿಂದ ಬಳಲುತ್ತಿರುವ ಮಕ್ಕಳು.. ಸಹೃದಯಿಗಳ ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ

author img

By

Published : Dec 5, 2022, 12:48 PM IST

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ದುರ್ಗಯ್ಯ ಮತ್ತು ಲಕ್ಷ್ಮಿ ಎಂಬುವವರ ಮಕ್ಕಳು ಹುಟ್ಟಿನಿಂದಲೇ ಸ್ನಾಯುಕ್ಷಯದಿಂದ ಬಳಲುತ್ತಿದ್ದಾರೆ. ಅವರಿಗೆ ಸಿಗುತ್ತಿದ್ದ ಪಿಂಚಣಿ ಸಹ ಈಗ ನಿಂತು ಹೋಗಿದ್ದು, ದಂಪತಿ ಕಷ್ಟದಲ್ಲಿದ್ದಾರೆ. ಯಾರಾದ್ರೂ ಅವರಿಗೆ ಸಹಾಯ ಮಾಡಿದ್ರೆ, ಮಕ್ಕಳ ಚಿಕಿತ್ಸೆಗೆ ಅನುಕೂಲವಾಗಲಿದೆ.

Critically ill children receive no support
ಹುಟ್ಟಿನಿಂದಲೇ ಸ್ನಾಯುಕ್ಷಯದಿಂದ ಬಳಲುತ್ತಿರುವ ಮಕ್ಕಳು

ಸಂಗಾರೆಡ್ಡಿ (ತೆಲಂಗಾಣ): ಆ ಇಬ್ಬರು ಮಕ್ಕಳಿಗೆ ಮತ್ತೊಬ್ಬರ ಸಹಾಯವಿಲ್ಲದೆ ನಡೆಯಲು ಮತ್ತು ಏನನ್ನೂ ತಿನ್ನಲು ಸಹ ಸಾಧ್ಯವಿಲ್ಲ. ಹುಟ್ಟಿನಿಂದಲೇ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಮಕ್ಕಳು ಎಲ್ಲಿ ಕುಳಿತುಕೊಳ್ಳುತ್ತಾರೋ, ಅಲ್ಲಿಯೇ ಇರುತ್ತಾರೆ. ಅಷ್ಟೇ ಅಲ್ಲದೇ ಅವರು ಎಷ್ಟು ದಿನ ಬದುಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲವೆಂದು ವೈದ್ಯರು ಹೇಳಿದ್ದಾರೆ. ಇಂತಹ ಮಕ್ಕಳನ್ನು ಪೋಷಿಸಲು ಬಡ ಪೋಷಕರು ಹೆಣಗಾಡುತ್ತಿದ್ದಾರೆ.

ಸಂಗಾರೆಡ್ಡಿ ಜಿಲ್ಲೆಯ ನಿಜಾಂಪೇಟ್ ಮಂಡಲದ ರಾಮಿರೆಡ್ಡಿಪೇಟೆಯ ಜಿ.ದುರ್ಗಯ್ಯ ಮತ್ತು ಲಕ್ಷ್ಮಿ ಎಂಬುವರ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ದುರ್ಗಯ್ಯ ಮೀನು ಹಿಡಿದು ಜೀವನ ನಡೆಸುತ್ತಿದ್ದು, ಅವರ ಇಬ್ಬರು ಮಕ್ಕಳಾದ ಪೋಚಯ್ಯ (10) ಮತ್ತು ಮಲ್ಲೇಶಂ (8) ಹುಟ್ಟಿನಿಂದಲೇ ಸ್ನಾಯುಕ್ಷಯದಿಂದ ಬಳಲುತ್ತಿದ್ದಾರೆ. 2015ರಲ್ಲಿ ಪ್ರಮಾಣಪತ್ರದ ಸ್ವೀಕೃತಿಯೊಂದಿಗೆ, ಅಂದಿನಿಂದ ಅವರಿಗೆ ಪಿಂಚಣಿ ನೀಡಲು ಪ್ರಾರಂಭಿಸಲಾಯಿತು. ಈ ದಾಖಲೆ ಐದು ವರ್ಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.

ಇದನ್ನೂ ಓದಿ: ತಮಾಷೆ ತಂದ ಆಪತ್ತು.. ಬಾಯಿಗೆ ಖುರ್ಪಿ ತುರುಕಿ ಪೇಚಿಗೆ ಸಿಲುಕಿದ ಯುವಕ

ಎರಡು ವರ್ಷಗಳ ಹಿಂದೆ ಇದರ ಅವಧಿ ಮುಗಿದಿದ್ದರಿಂದ ಪಿಂಚಣಿ ನಿಲ್ಲಿಸಲಾಗಿದೆ. ಅವರು ಮತ್ತೊಮ್ಮೆ ''ಮೀ ಸೇವಾ''ಯಲ್ಲಿ ಸ್ಲಾಟ್ ಅನ್ನು ನೋಂದಾಯಿಸಿಕೊಳ್ಳಬೇಕು. ಅದರ ಆಧಾರದ ಮೇಲೆ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಬಂದು ಎಲ್ಲ ನವೀಕರಣಗಳನ್ನು ಮಾಡಿಕೊಳ್ಳಬೇಕು. ಈ ಪ್ರಕ್ರಿಯೆ ಮುಗಿದ ನಂತರವೇ ಅವರಿಗೆ ಪಿಂಚಣಿ ವಾಪಸ್ ಸಿಗುತ್ತದೆ. ಪ್ರತಿ ತಿಂಗಳು ಸ್ಲಾಟ್ ನೋಂದಣಿಗಾಗಿ ಮೀ ಸೇವಾ ಕೇಂದ್ರಕ್ಕೆ ಅಲೆದಾಡಲು ಸಾಧ್ಯವಾಗದ ಮಕ್ಕಳನ್ನು ಹೊತ್ತ ದಂಪತಿ ಸ್ಲಾಟ್ ಸಿಗದೇ ಹತಾಶರಾಗಿ ಮನೆಗೆ ತೆರಳಬೇಕಾಗಿದೆ.

ಈ ದಂಪತಿಗೆ ಭವಾನಿ (5) ಎಂಬ ಮಗಳು ಮತ್ತು ಮೂರು ವರ್ಷದ ಮಗ ಶಿವಕುಮಾರ್ ಇದ್ದಾರೆ. ಶಿವಕುಮಾರ್ ಕೂಡ ಇದೇ ಕಾಯಿಲೆಗೆ ತುತ್ತಾಗಿರುವ ಕಾರಣ ತೀವ್ರ ನೊಂದಿದ್ದಾರೆ. ಕನಿಷ್ಠ ಪಕ್ಷ ಪೋಚಯ್ಯ ಮತ್ತು ಮಲ್ಲೇಶಂಗೆ ಯಾರಾದರೂ ಸಹಾಯ ಮಾಡಿದ್ರೆ, ಸಹಾಯವಾಗಲಿದೆ.

ಸಂಗಾರೆಡ್ಡಿ (ತೆಲಂಗಾಣ): ಆ ಇಬ್ಬರು ಮಕ್ಕಳಿಗೆ ಮತ್ತೊಬ್ಬರ ಸಹಾಯವಿಲ್ಲದೆ ನಡೆಯಲು ಮತ್ತು ಏನನ್ನೂ ತಿನ್ನಲು ಸಹ ಸಾಧ್ಯವಿಲ್ಲ. ಹುಟ್ಟಿನಿಂದಲೇ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಮಕ್ಕಳು ಎಲ್ಲಿ ಕುಳಿತುಕೊಳ್ಳುತ್ತಾರೋ, ಅಲ್ಲಿಯೇ ಇರುತ್ತಾರೆ. ಅಷ್ಟೇ ಅಲ್ಲದೇ ಅವರು ಎಷ್ಟು ದಿನ ಬದುಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲವೆಂದು ವೈದ್ಯರು ಹೇಳಿದ್ದಾರೆ. ಇಂತಹ ಮಕ್ಕಳನ್ನು ಪೋಷಿಸಲು ಬಡ ಪೋಷಕರು ಹೆಣಗಾಡುತ್ತಿದ್ದಾರೆ.

ಸಂಗಾರೆಡ್ಡಿ ಜಿಲ್ಲೆಯ ನಿಜಾಂಪೇಟ್ ಮಂಡಲದ ರಾಮಿರೆಡ್ಡಿಪೇಟೆಯ ಜಿ.ದುರ್ಗಯ್ಯ ಮತ್ತು ಲಕ್ಷ್ಮಿ ಎಂಬುವರ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ದುರ್ಗಯ್ಯ ಮೀನು ಹಿಡಿದು ಜೀವನ ನಡೆಸುತ್ತಿದ್ದು, ಅವರ ಇಬ್ಬರು ಮಕ್ಕಳಾದ ಪೋಚಯ್ಯ (10) ಮತ್ತು ಮಲ್ಲೇಶಂ (8) ಹುಟ್ಟಿನಿಂದಲೇ ಸ್ನಾಯುಕ್ಷಯದಿಂದ ಬಳಲುತ್ತಿದ್ದಾರೆ. 2015ರಲ್ಲಿ ಪ್ರಮಾಣಪತ್ರದ ಸ್ವೀಕೃತಿಯೊಂದಿಗೆ, ಅಂದಿನಿಂದ ಅವರಿಗೆ ಪಿಂಚಣಿ ನೀಡಲು ಪ್ರಾರಂಭಿಸಲಾಯಿತು. ಈ ದಾಖಲೆ ಐದು ವರ್ಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.

ಇದನ್ನೂ ಓದಿ: ತಮಾಷೆ ತಂದ ಆಪತ್ತು.. ಬಾಯಿಗೆ ಖುರ್ಪಿ ತುರುಕಿ ಪೇಚಿಗೆ ಸಿಲುಕಿದ ಯುವಕ

ಎರಡು ವರ್ಷಗಳ ಹಿಂದೆ ಇದರ ಅವಧಿ ಮುಗಿದಿದ್ದರಿಂದ ಪಿಂಚಣಿ ನಿಲ್ಲಿಸಲಾಗಿದೆ. ಅವರು ಮತ್ತೊಮ್ಮೆ ''ಮೀ ಸೇವಾ''ಯಲ್ಲಿ ಸ್ಲಾಟ್ ಅನ್ನು ನೋಂದಾಯಿಸಿಕೊಳ್ಳಬೇಕು. ಅದರ ಆಧಾರದ ಮೇಲೆ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಬಂದು ಎಲ್ಲ ನವೀಕರಣಗಳನ್ನು ಮಾಡಿಕೊಳ್ಳಬೇಕು. ಈ ಪ್ರಕ್ರಿಯೆ ಮುಗಿದ ನಂತರವೇ ಅವರಿಗೆ ಪಿಂಚಣಿ ವಾಪಸ್ ಸಿಗುತ್ತದೆ. ಪ್ರತಿ ತಿಂಗಳು ಸ್ಲಾಟ್ ನೋಂದಣಿಗಾಗಿ ಮೀ ಸೇವಾ ಕೇಂದ್ರಕ್ಕೆ ಅಲೆದಾಡಲು ಸಾಧ್ಯವಾಗದ ಮಕ್ಕಳನ್ನು ಹೊತ್ತ ದಂಪತಿ ಸ್ಲಾಟ್ ಸಿಗದೇ ಹತಾಶರಾಗಿ ಮನೆಗೆ ತೆರಳಬೇಕಾಗಿದೆ.

ಈ ದಂಪತಿಗೆ ಭವಾನಿ (5) ಎಂಬ ಮಗಳು ಮತ್ತು ಮೂರು ವರ್ಷದ ಮಗ ಶಿವಕುಮಾರ್ ಇದ್ದಾರೆ. ಶಿವಕುಮಾರ್ ಕೂಡ ಇದೇ ಕಾಯಿಲೆಗೆ ತುತ್ತಾಗಿರುವ ಕಾರಣ ತೀವ್ರ ನೊಂದಿದ್ದಾರೆ. ಕನಿಷ್ಠ ಪಕ್ಷ ಪೋಚಯ್ಯ ಮತ್ತು ಮಲ್ಲೇಶಂಗೆ ಯಾರಾದರೂ ಸಹಾಯ ಮಾಡಿದ್ರೆ, ಸಹಾಯವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.