ETV Bharat / bharat

ಆರೆಸ್ಸೆಸ್ ವಿಚಾರಗಳು ತಮಿಳು ಸಂಸ್ಕೃತಿಗೆ ವಿರುದ್ಧವಾಗಿವೆ; ರಾಹುಲ್ ಗಾಂಧಿ - Will respect Tamil people and culture Till last breath

ತಮಿಳುನಾಡಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ರಾಹುಲ್​ ಗಾಂಧಿ, ತಮ್ಮ ಜೀವನದ ಕೊನೆ ಉಸಿರು ಇರೋವರೆಗೂ ತಾವು ಇಲ್ಲಿನ ಸಂಸ್ಕೃತಿ ಗೌರವಿಸುವುದಾಗಿ ಹೇಳಿದ್ದಾರೆ.

Rahul Gandhi
Rahul Gandhi
author img

By

Published : Jan 25, 2021, 6:31 PM IST

ಚೆನ್ನೈ: ಮೂರು ದಿನಗಳ ತಮಿಳುನಾಡು ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ ಇಂದು ಕರೂರ್​ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು. ಆರೆಸ್ಸೆಸ್ ವಿಚಾರಗಳು ತಮಿಳುನಾಡಿನ ಸಂಸ್ಕೃತಿಗೆ ವಿರುದ್ಧವಾಗಿವೆ ಎಂದು ಆರೋಪಿಸಿದ ರಾಹುಲ್, ತಮ್ಮ ಜೀವನದ ಕೊನೆ ಉಸಿರು ಇರುವವರೆಗೂ ತಮಿಳುನಾಡಿನ ಸಂಸ್ಕೃತಿ ಗೌರವಿಸುವುದಾಗಿ ತಿಳಿಸಿದರು.

ತಮಿಳುನಾಡಿನಲ್ಲಿ ರಾಹುಲ್ ಗಾಂಧಿ ಭಾಷಣ

ಓದಿ: ಅಂಗವೈಫಲ್ಯ ಮೆಟ್ಟಿ ನಿಂತ ಛಲಗಾತಿ.. ನೃತ್ಯ ಕ್ಷೇತ್ರದಲ್ಲಿ ಮಿಂಚಿದ ಯಾಮಿನಿ

ಪ್ರಧಾನಿ ನರೇಂದ್ರ ಮೋದಿ ಕೇವಲ ಐವರು ಶ್ರೀಮಂತರಿಗೋಸ್ಕರ ಕೆಲಸ ಮಾಡ್ತಿದ್ದು, ಕಾರ್ಪೊರೇಟ್ ಕಂಪನಿಗಳಿಗೆ ಎಲ್ಲ ಸೌಲಭ್ಯ ಒದಗಿಸುತ್ತಿದ್ದಾರೆ. ಜತೆಗೆ ಅವರ ಕೋಟ್ಯಾಂತರ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ಬಡವರು, ರೈತರಿಗೋಸ್ಕರ ಯಾವುದೇ ಯೋಜನೆ ಜಾರಿಗೊಳಿಸುತ್ತಿಲ್ಲ ಎಂದರು.

ಇದೇ ವೇಳೆ ಎಐಎಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಇಲ್ಲಿ ಇರುವುದು ಮೋದಿ ನೇತೃತ್ವದ ರಿಮೋಟ್ ಸರ್ಕಾರ. ಪ್ರಧಾನಿ ತೆಗೆದುಕೊಳ್ಳುತ್ತಿರುವ ಯಾವುದೇ ನಿರ್ಧಾರದ ವಿರುದ್ಧ ಪ್ರಶ್ನೆ ಮಾಡುವ ಧೈರ್ಯ ಇವರಿಗೆ ಇಲ್ಲ ಎಂದಿದ್ದಾರೆ.

ಆರ್​ಎಸ್​ಎಸ್​ ಯೋಚನೆಗಳು ತಮಿಳುನಾಡು ಸಂಸ್ಕೃತಿಗೆ ವಿರುದ್ಧವಾಗಿವೆ. ನನ್ನ ಅಜ್ಜಿ ಕಾಲದಿಂದಲೂ ತಮಿಳುನಾಡಿನ ಮೇಲೆ ನಮಗೆ ವಿಶೇಷ ಪ್ರೀತಿ. ತಮಿಳುನಾಡು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.

ಚೆನ್ನೈ: ಮೂರು ದಿನಗಳ ತಮಿಳುನಾಡು ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ ಇಂದು ಕರೂರ್​ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು. ಆರೆಸ್ಸೆಸ್ ವಿಚಾರಗಳು ತಮಿಳುನಾಡಿನ ಸಂಸ್ಕೃತಿಗೆ ವಿರುದ್ಧವಾಗಿವೆ ಎಂದು ಆರೋಪಿಸಿದ ರಾಹುಲ್, ತಮ್ಮ ಜೀವನದ ಕೊನೆ ಉಸಿರು ಇರುವವರೆಗೂ ತಮಿಳುನಾಡಿನ ಸಂಸ್ಕೃತಿ ಗೌರವಿಸುವುದಾಗಿ ತಿಳಿಸಿದರು.

ತಮಿಳುನಾಡಿನಲ್ಲಿ ರಾಹುಲ್ ಗಾಂಧಿ ಭಾಷಣ

ಓದಿ: ಅಂಗವೈಫಲ್ಯ ಮೆಟ್ಟಿ ನಿಂತ ಛಲಗಾತಿ.. ನೃತ್ಯ ಕ್ಷೇತ್ರದಲ್ಲಿ ಮಿಂಚಿದ ಯಾಮಿನಿ

ಪ್ರಧಾನಿ ನರೇಂದ್ರ ಮೋದಿ ಕೇವಲ ಐವರು ಶ್ರೀಮಂತರಿಗೋಸ್ಕರ ಕೆಲಸ ಮಾಡ್ತಿದ್ದು, ಕಾರ್ಪೊರೇಟ್ ಕಂಪನಿಗಳಿಗೆ ಎಲ್ಲ ಸೌಲಭ್ಯ ಒದಗಿಸುತ್ತಿದ್ದಾರೆ. ಜತೆಗೆ ಅವರ ಕೋಟ್ಯಾಂತರ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ಬಡವರು, ರೈತರಿಗೋಸ್ಕರ ಯಾವುದೇ ಯೋಜನೆ ಜಾರಿಗೊಳಿಸುತ್ತಿಲ್ಲ ಎಂದರು.

ಇದೇ ವೇಳೆ ಎಐಎಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಇಲ್ಲಿ ಇರುವುದು ಮೋದಿ ನೇತೃತ್ವದ ರಿಮೋಟ್ ಸರ್ಕಾರ. ಪ್ರಧಾನಿ ತೆಗೆದುಕೊಳ್ಳುತ್ತಿರುವ ಯಾವುದೇ ನಿರ್ಧಾರದ ವಿರುದ್ಧ ಪ್ರಶ್ನೆ ಮಾಡುವ ಧೈರ್ಯ ಇವರಿಗೆ ಇಲ್ಲ ಎಂದಿದ್ದಾರೆ.

ಆರ್​ಎಸ್​ಎಸ್​ ಯೋಚನೆಗಳು ತಮಿಳುನಾಡು ಸಂಸ್ಕೃತಿಗೆ ವಿರುದ್ಧವಾಗಿವೆ. ನನ್ನ ಅಜ್ಜಿ ಕಾಲದಿಂದಲೂ ತಮಿಳುನಾಡಿನ ಮೇಲೆ ನಮಗೆ ವಿಶೇಷ ಪ್ರೀತಿ. ತಮಿಳುನಾಡು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.