ETV Bharat / bharat

Video: ಕರ್ನಾಟಕ, ಗುಜರಾತ್, ತೆಲಂಗಾಣದಲ್ಲಿ ವರುಣಾರ್ಭಟ, ಜನ ಜೀವನ ಅಸ್ತವ್ಯಸ್ತ!

ದೇಶದ ಹಲವಡೆ ಭಾರಿ ಮಳೆಯಾಗುತ್ತಿದ್ದು, ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಹಲವೆಡೆ ಪ್ರವಾಹ ಭೀತಿಯುಂಟಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

author img

By

Published : Jul 15, 2021, 8:38 AM IST

Updated : Jul 15, 2021, 9:03 AM IST

ಜನ ಜೀವನ ಅಸ್ತವ್ಯಸ್ತ!
ಜನ ಜೀವನ ಅಸ್ತವ್ಯಸ್ತ!

ದ್ವಾರಕಾ (ಗುಜರಾತ್): ದೇಶದ ಹಲವಡೆ ಧಾರಾಕಾರ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕರ್ನಾಟಕ, ಗುಜರಾತ್, ಹರಿಯಾಣ, ತೆಲಂಗಾಣ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ವರುಣನ ಆರ್ಭಟ ಜೋರಾಗಿದೆ.

ಗುಜರಾತ್, ತೆಲಂಗಾಣ, ಕರ್ನಾಟಕದಲ್ಲಿ ವರುಣಾರ್ಭಟ, ಜನ ಜೀವನ ಅಸ್ತವ್ಯಸ್ತ

ಗುಜರಾತ್​ನ ದ್ವಾರಕಾನಗರದ ಕಲ್ಯಾಣಪುರ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದ, ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಮನೆ, ಹೊಲ - ಗದ್ದೆಗಳೆಲ್ಲ ಜಲಾವೃತವಾಗಿದ್ದು, ಪ್ರವಾಹ ಭೀತಿ ಉಂಟಾಗಿದೆ. ರಸ್ತೆಗಳೆಲ್ಲ ನದಿಗಳಂತಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

ಇತ್ತ ಹೈದರಾಬಾದ್ - ಸಿಕಂದರಾಬಾದ್​ನಲ್ಲೂ ವರುಣಾರ್ಭಟ ಮುಂದುವರೆದಿದ್ದು, ನದಿ - ಕೆರೆಗಳೆಲ್ಲ ಉಕ್ಕಿ ಹರಿಯುತ್ತಿವೆ. ನಾಗೋಲ್​ ಶ್ರೇಣಿಯ ಅಯ್ಯಪ್ಪ ಕಾಲೋನಿ ಮುಳುಗಿದ್ದು, ಸ್ಥಳೀಯರೆಲ್ಲ ಮನೆ ಖಾಲಿ ಮಾಡಿದ್ದಾರೆ. ಭೀಕರ ಪ್ರವಾಹದಲ್ಲಿ ಸುಮಾರು 200 ಕ್ಕೂ ಹೆಚ್ಚು ಮನೆಯ ಜನರು ಸ್ಥಳಾಂತರಗೊಂಡಿದ್ದಾರೆ.

ಇದನ್ನೂ ಓದಿ:ಧಾರಾಕಾರ ಮಳೆ: ಹಾರಂಗಿ ಜಲಾಶಯ ಭರ್ತಿ; 6 ಸಾವಿರ ಕ್ಯೂಸೆಕ್​ ನೀರು ಹೊರಕ್ಕೆ!

ಇಷ್ಟೆಲ್ಲಾ ಅವಾಂತರ ಸಂಭವಿಸಿದರೂ, ಕ್ರಮ ಕೈಗೊಳ್ಳದ ಜಿಹೆಚ್​ಎಂಸಿ ಅಧಿಕಾರಿಗಳ ವಿರುದ್ಧ ಜನಾಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಶ್ವತ ಪರಿಹಾರವಿಲ್ಲದ ಕಾರಣ ಪ್ರತಿ ಮಳೆಗಾಲದಲ್ಲಿಯೂ ಇಲ್ಲಿನ ಜನರು ಮನೆಗಳನ್ನು ಖಾಲಿ ಮಾಡುವುದು ರೂಢಿಗತವಾಗಿದೆ. ಅಂಬರ್​ಪೇಟೆ, ವನಸ್ಥಲಿಪುರಂ, ಸಿಸಾಲ ಬಸ್ತಿ, ವಿವಿ ನಗರ, ಕಮಲಾನಗರ ಪ್ರದೇಶಗಳಿಗೂ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಕರ್ನಾಟಕದ ಕೊಡಗು, ಬೆಂಗಳೂರು, ಚಿಕ್ಕಮಗಳೂರು, ಉತ್ತರಕನ್ನಡ, ಶಿವಮೊಗ್ಗ, ದಕ್ಷಿಣಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹಲವಡೆ ಪ್ರವಾಹ ಭೀತಿ ತಲೆದೋರಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

ದ್ವಾರಕಾ (ಗುಜರಾತ್): ದೇಶದ ಹಲವಡೆ ಧಾರಾಕಾರ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕರ್ನಾಟಕ, ಗುಜರಾತ್, ಹರಿಯಾಣ, ತೆಲಂಗಾಣ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ವರುಣನ ಆರ್ಭಟ ಜೋರಾಗಿದೆ.

ಗುಜರಾತ್, ತೆಲಂಗಾಣ, ಕರ್ನಾಟಕದಲ್ಲಿ ವರುಣಾರ್ಭಟ, ಜನ ಜೀವನ ಅಸ್ತವ್ಯಸ್ತ

ಗುಜರಾತ್​ನ ದ್ವಾರಕಾನಗರದ ಕಲ್ಯಾಣಪುರ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದ, ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಮನೆ, ಹೊಲ - ಗದ್ದೆಗಳೆಲ್ಲ ಜಲಾವೃತವಾಗಿದ್ದು, ಪ್ರವಾಹ ಭೀತಿ ಉಂಟಾಗಿದೆ. ರಸ್ತೆಗಳೆಲ್ಲ ನದಿಗಳಂತಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

ಇತ್ತ ಹೈದರಾಬಾದ್ - ಸಿಕಂದರಾಬಾದ್​ನಲ್ಲೂ ವರುಣಾರ್ಭಟ ಮುಂದುವರೆದಿದ್ದು, ನದಿ - ಕೆರೆಗಳೆಲ್ಲ ಉಕ್ಕಿ ಹರಿಯುತ್ತಿವೆ. ನಾಗೋಲ್​ ಶ್ರೇಣಿಯ ಅಯ್ಯಪ್ಪ ಕಾಲೋನಿ ಮುಳುಗಿದ್ದು, ಸ್ಥಳೀಯರೆಲ್ಲ ಮನೆ ಖಾಲಿ ಮಾಡಿದ್ದಾರೆ. ಭೀಕರ ಪ್ರವಾಹದಲ್ಲಿ ಸುಮಾರು 200 ಕ್ಕೂ ಹೆಚ್ಚು ಮನೆಯ ಜನರು ಸ್ಥಳಾಂತರಗೊಂಡಿದ್ದಾರೆ.

ಇದನ್ನೂ ಓದಿ:ಧಾರಾಕಾರ ಮಳೆ: ಹಾರಂಗಿ ಜಲಾಶಯ ಭರ್ತಿ; 6 ಸಾವಿರ ಕ್ಯೂಸೆಕ್​ ನೀರು ಹೊರಕ್ಕೆ!

ಇಷ್ಟೆಲ್ಲಾ ಅವಾಂತರ ಸಂಭವಿಸಿದರೂ, ಕ್ರಮ ಕೈಗೊಳ್ಳದ ಜಿಹೆಚ್​ಎಂಸಿ ಅಧಿಕಾರಿಗಳ ವಿರುದ್ಧ ಜನಾಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಶ್ವತ ಪರಿಹಾರವಿಲ್ಲದ ಕಾರಣ ಪ್ರತಿ ಮಳೆಗಾಲದಲ್ಲಿಯೂ ಇಲ್ಲಿನ ಜನರು ಮನೆಗಳನ್ನು ಖಾಲಿ ಮಾಡುವುದು ರೂಢಿಗತವಾಗಿದೆ. ಅಂಬರ್​ಪೇಟೆ, ವನಸ್ಥಲಿಪುರಂ, ಸಿಸಾಲ ಬಸ್ತಿ, ವಿವಿ ನಗರ, ಕಮಲಾನಗರ ಪ್ರದೇಶಗಳಿಗೂ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಕರ್ನಾಟಕದ ಕೊಡಗು, ಬೆಂಗಳೂರು, ಚಿಕ್ಕಮಗಳೂರು, ಉತ್ತರಕನ್ನಡ, ಶಿವಮೊಗ್ಗ, ದಕ್ಷಿಣಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹಲವಡೆ ಪ್ರವಾಹ ಭೀತಿ ತಲೆದೋರಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

Last Updated : Jul 15, 2021, 9:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.