ನವದೆಹಲಿ: 16ನೇ ರಾಷ್ಟ್ರಪತಿ ಆಯ್ಕೆಗೆ ಮತದಾನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಗಣ್ಯರು ಸಂಸತ್ತಿನಲ್ಲಿ ಮತದಾನ ಮಾಡಿದರು.
![ಮತದಾನ ಮಾಡಿದ ಗೃಹ ಸಚಿವ ಅಮಿತ್ ಶಾ](https://etvbharatimages.akamaized.net/etvbharat/prod-images/15854098_bng1.jpg)
ಎನ್ಡಿಎ ಅಭ್ಯರ್ಥಿಯಾಗಿ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಕಣದಲ್ಲಿದ್ದರೆ, ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಸ್ಪರ್ಧಿಸಿದ್ದಾರೆ. ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಹೆಚ್ಚಿನ ಬೆಂಬಲ ಇರುವ ಕಾರಣ ಅವರು ಶೇ.65 ರಷ್ಟು ಮತ ಪಡೆದು ಜಯಗಳಿಸುವ ಸಾಧ್ಯತೆ ಇದೆ. ದೇಶಾದ್ಯಂತ ರಾಷ್ಟ್ರಪತಿ ಚುನಾವಣೆಗಾಗಿ ಆಯಾ ರಾಜ್ಯಗಳ ವಿಧಾನಸಭೆಯಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 10 ರಿಂದ ಆರಂಭವಾಗಿರುವ ಮತದಾನ ಸಂಜೆ 5 ಗಂಟೆಯವರೆಗೂ ನಡೆಯಲಿದೆ.
![ಮತದಾನಕ್ಕೆ ವ್ಹೀಲ್ಚೇರ್ನಲ್ಲಿ ಬಂದ ಮಾಜಿ ಪ್ರಧಾನಿ ಸಿಂಗ್](https://etvbharatimages.akamaized.net/etvbharat/prod-images/15854098_bng.jpg)
2 ಗಂಟೆಗೆ ಲೋಕಸಭೆ ಮುಂದೂಡಿಕೆ: ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡುವ ಸಲುವಾಗಿ ಲೋಕಸಭೆಯನ್ನು 2 ಗಂಟೆಗೆ ಮುಂದೂಡಲಾಗಿದೆ. ಅಧಿವೇಶನ ಆರಂಭದಲ್ಲಿ ಗುಂಡೇಟಿನಿಂದ ನಿಧನರಾದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
![ವೋಟ್ ಮಾಡಿದ ನಟಿ, ಸಂಸದೆ ಹೇಮಾಮಾಲಿನಿ](https://etvbharatimages.akamaized.net/etvbharat/prod-images/15854098_bng3.jpg)
ರಾಜ್ಯಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರು ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರ ನೇತೃತ್ವದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇದನ್ನೂ ಓದಿ: ಅಧಿವೇಶನದಲ್ಲಿ ಫಲಪ್ರದ ಸಂವಾದ, ಚರ್ಚೆ ನಡೆಸಿ: ಸಂಸದರಿಗೆ ಪ್ರಧಾನಿ ಮೋದಿ ಸಲಹೆ