ನವದೆಹಲಿ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಪ್ರಧಾನಿ ನರೇಂದ್ರ ಮೋದಿ ಇಂದು ಮಹತ್ವದ ವರ್ಚುವಲ್ ಸಭೆ ನಡೆಸಿದರು. ಈ ವೇಳೆ ಮಾತನಾಡಿರುವ ಪ್ರಧಾನಿ, ಉಕ್ರೇನ್ನಲ್ಲಿನ ಪರಿಸ್ಥಿತಿ ತೀರಾ ಕಳವಳಕಾರಿಯಾಗಿದ್ದು,ರಷ್ಯಾ-ಉಕ್ರೇನ್ ಅಧ್ಯಕ್ಷರೊಂದಿಗೆ ನಾವು ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು. ಮಾತುಕತೆ ಮೂಲಕ ಉಭಯ ದೇಶಗಳ ನಡುವೆ ಉಂಟಾಗಿರುವ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲು ನಾವು ಮನವಿ ಮಾಡಿದ್ದು, ಉಕ್ರೇನ್ ಅಧ್ಯಕ್ಷರೊಂದಿಗೆ ನೇರವಾಗಿ ಮಾತುಕತೆ ನಡೆಸುವಂತೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ಗೆ ತಿಳಿಸಿದ್ದೇವೆ ಎಂದರು.
-
#WATCH | PM says, "I spoke with Presidents of Ukraine & Russia over phone several times; appealed to them for peace & suggested Pres Putin for direct talks with Ukrainian Pres. Killing of innocent citizens in Bucha very concerning, we condemned & also demanded an impartial probe" pic.twitter.com/tPsvQg4DCc
— ANI (@ANI) April 11, 2022 " class="align-text-top noRightClick twitterSection" data="
">#WATCH | PM says, "I spoke with Presidents of Ukraine & Russia over phone several times; appealed to them for peace & suggested Pres Putin for direct talks with Ukrainian Pres. Killing of innocent citizens in Bucha very concerning, we condemned & also demanded an impartial probe" pic.twitter.com/tPsvQg4DCc
— ANI (@ANI) April 11, 2022#WATCH | PM says, "I spoke with Presidents of Ukraine & Russia over phone several times; appealed to them for peace & suggested Pres Putin for direct talks with Ukrainian Pres. Killing of innocent citizens in Bucha very concerning, we condemned & also demanded an impartial probe" pic.twitter.com/tPsvQg4DCc
— ANI (@ANI) April 11, 2022
ಈ ವೇಳೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಭಾರತ ಮತ್ತು ನಮ್ಮ ನಡುವಿನ ನಿಕಟ ಸಮಾಲೋಚನೆ ಮುಂದುವರೆಯಲಿದ್ದು, ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಲವಾಗಿ ಬೆಳೆಯಲಿದೆ ಎಂದರು. ರಕ್ಷಣಾ ವಲಯದಲ್ಲಿ ನಮ್ಮ ಪಾಲುದಾರಿಗೆ ಮತ್ತಷ್ಟು ಗಟ್ಟಿಯಾಗಲಿದ್ದು, ನಮ್ಮ ಸ್ನೇಹ ಮತ್ತು ಮಾನವೀಯ ಮೌಲ್ಯ ಆಳವಾಗಿ ಬೇರು ಉರಲಿವೆ. ಉಕ್ರೇನ್ ಜನರಿಗೆ ಮಾನವೀಯ ರೀತಿಯಲ್ಲಿ ಸಹಾಯ ಮಾಡಿರುವ ಭಾರತದ ನಿರ್ಧಾವನ್ನ ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: 'ಭಾರತದೊಂದಿಗೆ ಉತ್ತಮ ಸಂಬಂಧ ಬೆಳೆಸಲು ಕಾಶ್ಮೀರ ವಿವಾದ ಇತ್ಯರ್ಥವಾಗ್ಬೇಕು': ಪಾಕ್ ನಿಯೋಜಿತ ಪ್ರಧಾನಿ
ಕೋವಿಡ್ ಸಂದರ್ಭದಲ್ಲಿ ನಾವು ಅನೇಕ ರೀತಿಯ ಜಾಗತಿಕ ಸವಾಲು, ಆರೋಗ್ಯ, ಆರ್ಥಿಕ ಬಿಕ್ಕಟ್ಟು ಎದುರಿಸಿದ್ದು, ಇದೀಗ ಅದರಿಂದ ಹೊರಬಂದಿದ್ದೇವೆ. ಈ ಸಂದರ್ಭದಲ್ಲಿ ಭಾರತದೊಂದಿಗೆ ಮಾತನಾಡುವ ಅವಕಾಶ ಸಿಕ್ಕಿರುವುದು ನಿಜಕ್ಕೂ ಸಂತಸ ಮೂಡಿಸಿದೆ ಎಂದರು.ಉಭಯ ನಾಯಕರ ಮಧ್ಯೆ ದ್ವಿಪಕ್ಷೀಯ ಸಹಕಾರ, ದಕ್ಷಿಣ ಏಷ್ಯಾ, ಇಂಡೋ ಪೆಸಿಫಿಕ್ ಬೆಳವಣಿಗೆ ಹಾಗೂ ಜಾಗತಿಕ ಬೆಳವಣಿಗೆಗಳ ಕುರಿತು ಮಹತ್ವದ ಚರ್ಚೆ ನಡೆಯಿತು.