ETV Bharat / bharat

ಬದರಿನಾಥ ಹೆದ್ದಾರಿಯಲ್ಲಿ ಭೂಕುಸಿತ, ಸಂಚಾರ ಬಂದ್​

author img

By

Published : Sep 11, 2021, 5:26 PM IST

ರಿಷಿಕೇಶ್ - ಬದರಿನಾಥ ಹೆದ್ದಾರಿಯಲ್ಲಿ ರಸ್ತೆಯ ಕೆಲಸದಿಂದ, ಭೂಕುಸಿತದ ಅಪಾಯವು ಹೆಚ್ಚಾಗಿದೆ. ಅಲ್ಲದೇ ಸ್ವಲ್ಪ ಮಳೆ ಬಂದರೂ ಈ ಪ್ರದೇಶದಲ್ಲು ಭೂ ಕುಸಿತ ಸಂಭವಿಸುತ್ತದೆ. ವಿಪರೀತ ಮಳೆ ಹಿನ್ನೆಲೆ ರುದ್ರಪ್ರಯಾಗ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ರಸ್ತೆಗಳನ್ನು ನಿರ್ಬಂಧಿಸಲಾಗಿದೆ..

highway
ಸಂಚಾರ ಬಂದ್​

ಡೆಹರಾಡೂನ್(ಉತ್ತರಾಖಂಡ್​): ಕಳೆದ 4 ದಿನಗಳಿಂದ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಭೂಕುಸಿತದ ಅವಶೇಷಗಳು ಬದರೀನಾಥ ಮತ್ತು ಕೇದಾರನಾಥ ಹೆದ್ದಾರಿಗಳಲ್ಲೇ ಬಿದ್ದಿವೆ. ಉತ್ತರಾಖಂಡದ ಸಿರೋಬಗಡದಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.

ಭೂಕುಸಿತದಿಂದಾಗಿ ಖಂಖ್ರಾ-ಖೇಡಾಖಾಲ್-ಖಿರ್ಸುವಿನ ಸಂಪರ್ಕ ರಸ್ತೆಯನ್ನು ಕೂಡ ನಿರ್ಬಂಧಿಸಲಾಗಿದೆ. ಭೂಕುಸಿತದ ಹಿನ್ನೆಲೆ ವಿವಿಧ ಸಂಪರ್ಕ ರಸ್ತೆಗಳು ಕಡಿತಗೊಂಡಿವೆ. ನಿರಂತರ ಮಳೆಯು ಉತ್ತರಾಖಂಡದ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹೆದ್ದಾರಿ ಮತ್ತು ಸಂಪರ್ಕ ರಸ್ತೆಯ ನಿರ್ಬಂಧ ಹಿನ್ನೆಲೆ, ರುದ್ರಪ್ರಯಾಗ್ ಮತ್ತು ಚಮೋಲಿ ಜಿಲ್ಲೆಗಳ ಜನರು ಅಗತ್ಯ ವಸ್ತುಗಳನ್ನು ಪಡೆಯಲೂ ಸಹ ಸಾಧ್ಯವಾಗುತ್ತಿಲ್ಲ.

ರಿಷಿಕೇಶ್-ಬದರಿನಾಥ ಹೆದ್ದಾರಿಯಲ್ಲಿ ರಸ್ತೆಯ ಕೆಲಸದಿಂದ, ಭೂಕುಸಿತದ ಅಪಾಯವು ಹೆಚ್ಚಾಗಿದೆ. ಅಲ್ಲದೇ ಸ್ವಲ್ಪ ಮಳೆ ಬಂದರೂ ಈ ಪ್ರದೇಶದಲ್ಲು ಭೂ ಕುಸಿತ ಸಂಭವಿಸುತ್ತಿದೆ. ವಿಪರೀತ ಮಳೆ ಹಿನ್ನೆಲೆ ರುದ್ರಪ್ರಯಾಗ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ರಸ್ತೆಗಳನ್ನು ನಿರ್ಬಂಧಿಸಲಾಗಿದೆ.

ಇನ್ನು, ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಆರೇಂಜ್​​ ಅಲರ್ಟ್​ ಘೋಷಿಸಿದೆ.

ಡೆಹರಾಡೂನ್(ಉತ್ತರಾಖಂಡ್​): ಕಳೆದ 4 ದಿನಗಳಿಂದ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಭೂಕುಸಿತದ ಅವಶೇಷಗಳು ಬದರೀನಾಥ ಮತ್ತು ಕೇದಾರನಾಥ ಹೆದ್ದಾರಿಗಳಲ್ಲೇ ಬಿದ್ದಿವೆ. ಉತ್ತರಾಖಂಡದ ಸಿರೋಬಗಡದಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.

ಭೂಕುಸಿತದಿಂದಾಗಿ ಖಂಖ್ರಾ-ಖೇಡಾಖಾಲ್-ಖಿರ್ಸುವಿನ ಸಂಪರ್ಕ ರಸ್ತೆಯನ್ನು ಕೂಡ ನಿರ್ಬಂಧಿಸಲಾಗಿದೆ. ಭೂಕುಸಿತದ ಹಿನ್ನೆಲೆ ವಿವಿಧ ಸಂಪರ್ಕ ರಸ್ತೆಗಳು ಕಡಿತಗೊಂಡಿವೆ. ನಿರಂತರ ಮಳೆಯು ಉತ್ತರಾಖಂಡದ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹೆದ್ದಾರಿ ಮತ್ತು ಸಂಪರ್ಕ ರಸ್ತೆಯ ನಿರ್ಬಂಧ ಹಿನ್ನೆಲೆ, ರುದ್ರಪ್ರಯಾಗ್ ಮತ್ತು ಚಮೋಲಿ ಜಿಲ್ಲೆಗಳ ಜನರು ಅಗತ್ಯ ವಸ್ತುಗಳನ್ನು ಪಡೆಯಲೂ ಸಹ ಸಾಧ್ಯವಾಗುತ್ತಿಲ್ಲ.

ರಿಷಿಕೇಶ್-ಬದರಿನಾಥ ಹೆದ್ದಾರಿಯಲ್ಲಿ ರಸ್ತೆಯ ಕೆಲಸದಿಂದ, ಭೂಕುಸಿತದ ಅಪಾಯವು ಹೆಚ್ಚಾಗಿದೆ. ಅಲ್ಲದೇ ಸ್ವಲ್ಪ ಮಳೆ ಬಂದರೂ ಈ ಪ್ರದೇಶದಲ್ಲು ಭೂ ಕುಸಿತ ಸಂಭವಿಸುತ್ತಿದೆ. ವಿಪರೀತ ಮಳೆ ಹಿನ್ನೆಲೆ ರುದ್ರಪ್ರಯಾಗ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ರಸ್ತೆಗಳನ್ನು ನಿರ್ಬಂಧಿಸಲಾಗಿದೆ.

ಇನ್ನು, ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಆರೇಂಜ್​​ ಅಲರ್ಟ್​ ಘೋಷಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.