ETV Bharat / bharat

ಪಂಜಾಬ್‌ನ ಆಪ್‌ ಸರ್ಕಾರಕ್ಕೆ ಕೇಂದ್ರ ಶಾಕ್‌ ; ಗ್ರಾಮೀಣಾಭಿವೃದ್ಧಿ ನಿಧಿಯ 1,100 ಕೋಟಿ ರೂ.ಗೆ ತಡೆ

author img

By

Published : Mar 30, 2022, 12:47 PM IST

ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ರೈತರ ಸಾಲ ಮನ್ನಾಗೆ ಹಂಚಿಕೆ ಮಾಡಿದ್ದರು. ಇದೇ ಕಾರಣದಿಂದಾಗಿ ಕೇಂದ್ರದಿಂದ ಹಣ ಬಿಡುಗಡೆ ಮಾಡುವ ಮೊದಲು ನಿರ್ದಿಷ್ಟ ಯೋಜನೆಗೆ ಹಣ ವಿನಿಯೋಗಿಸಬೇಕೆಂದು ನಿಗದಿಪಡಿಸಲಾಗಿದೆ..

union government withheld rs  1100 crore rural development fund of punjab
ಪಂಜಾಬ್‌ನ ಆಪ್‌ ಸರ್ಕಾರಕ್ಕೆ ಕೇಂದ್ರ ಶಾಕ್‌; ಗ್ರಾಮೀಣಾಭಿವೃದ್ಧಿ ನಿಧಿಯ 1,100 ಕೋಟಿ ರೂ.ಗೆ ತಡೆ

ಚಂಡೀಗಢ : ಪಂಜಾಬ್‌ನಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಸರ್ಕಾರಕ್ಕೆ ಹೊಸ ಸಂಕಷ್ಟ ಎದುರಾಗಿದೆ. ಪಂಜಾಬ್‌ನ ಗ್ರಾಮೀಣಾಭಿವೃದ್ಧಿ ನಿಧಿಯ 1,100 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದೆ. ಕೇಂದ್ರದ ಈ ನಿರ್ಧಾರದಿಂದ ಎಎಪಿ ಸರ್ಕಾರ ದೊಡ್ಡ ಸಮಸ್ಯೆ ಎದುರಿಸಬೇಕಾದ ಸಾಧ್ಯತೆ ಇದೆ.

ಮೊದಲು ಪಂಜಾಬ್ ಗ್ರಾಮೀಣಾಭಿವೃದ್ಧಿ ಕಾಯಿದೆ-1987 ತಿದ್ದುಪಡಿ ಮಾಡಿ ಗ್ರಾಮೀಣಾಭಿವೃದ್ಧಿ ನಿಧಿಯನ್ನು ತಡೆಹಿಡಿಯಲಾಗಿದೆ. ಗ್ರಾಮೀಣಾಭಿವೃದ್ಧಿ ನಿಧಿಯ ಹಣವನ್ನು ಖರೀದಿ ಕೇಂದ್ರಗಳ ಅಭಿವೃದ್ಧಿಗೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಹಿಂದೆ 1,200 ಕೋಟಿ ರೂ.ಗೆ ತಡೆ : ಈ ಹಿಂದೆಯೂ ಕೇಂದ್ರ ಸರ್ಕಾರ ಪಂಜಾಬ್ ಸರ್ಕಾರದ 1,200 ಕೋಟಿ ರೂಪಾಯಿಗಳನ್ನು ತಡೆ ಹಿಡಿದಿತ್ತು. ಆ ಸಮಯದಲ್ಲಿ ಪಂಜಾಬ್ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಭರವಸೆ ನೀಡಿತ್ತು. ಆದರೆ, ತಿದ್ದುಪಡಿ ಮಾಡಲಿಲ್ಲ. ರೈತರ ಸಾಲ ಮನ್ನಾಗೆ ಹಣವನ್ನು ವಿತರಿಸಲಾಯಿತು. ಹೀಗಾಗಿ, ಕೇಂದ್ರ ಕಾಯಿದೆಗೆ ತಿದ್ದುಪಡಿ ತರುವ ಬಗ್ಗೆ ಚರ್ಚೆಗಳು ಶುರುವಾಗಿವೆ.

ಸಾಲ ಮನ್ನಾಗೆ ಕೇಂದ್ರ ಆಕ್ಷೇಪ : ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ರೈತರ ಸಾಲ ಮನ್ನಾಗೆ ಹಂಚಿಕೆ ಮಾಡಿದ್ದರು. ಇದೇ ಕಾರಣದಿಂದಾಗಿ ಕೇಂದ್ರದಿಂದ ಹಣ ಬಿಡುಗಡೆ ಮಾಡುವ ಮೊದಲು ನಿರ್ದಿಷ್ಟ ಯೋಜನೆಗೆ ಹಣ ವಿನಿಯೋಗಿಸಬೇಕೆಂದು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಪಂಜಾಬ್‌ನಲ್ಲಿ ಜನರ ಮನೆ ಬಾಗಿಲಿಗೆ ಪಡಿತರ ವಿತರಿಸಲು ಆಪ್ ಸರ್ಕಾರ ನಿರ್ಧಾರ

ಚಂಡೀಗಢ : ಪಂಜಾಬ್‌ನಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಸರ್ಕಾರಕ್ಕೆ ಹೊಸ ಸಂಕಷ್ಟ ಎದುರಾಗಿದೆ. ಪಂಜಾಬ್‌ನ ಗ್ರಾಮೀಣಾಭಿವೃದ್ಧಿ ನಿಧಿಯ 1,100 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದೆ. ಕೇಂದ್ರದ ಈ ನಿರ್ಧಾರದಿಂದ ಎಎಪಿ ಸರ್ಕಾರ ದೊಡ್ಡ ಸಮಸ್ಯೆ ಎದುರಿಸಬೇಕಾದ ಸಾಧ್ಯತೆ ಇದೆ.

ಮೊದಲು ಪಂಜಾಬ್ ಗ್ರಾಮೀಣಾಭಿವೃದ್ಧಿ ಕಾಯಿದೆ-1987 ತಿದ್ದುಪಡಿ ಮಾಡಿ ಗ್ರಾಮೀಣಾಭಿವೃದ್ಧಿ ನಿಧಿಯನ್ನು ತಡೆಹಿಡಿಯಲಾಗಿದೆ. ಗ್ರಾಮೀಣಾಭಿವೃದ್ಧಿ ನಿಧಿಯ ಹಣವನ್ನು ಖರೀದಿ ಕೇಂದ್ರಗಳ ಅಭಿವೃದ್ಧಿಗೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಹಿಂದೆ 1,200 ಕೋಟಿ ರೂ.ಗೆ ತಡೆ : ಈ ಹಿಂದೆಯೂ ಕೇಂದ್ರ ಸರ್ಕಾರ ಪಂಜಾಬ್ ಸರ್ಕಾರದ 1,200 ಕೋಟಿ ರೂಪಾಯಿಗಳನ್ನು ತಡೆ ಹಿಡಿದಿತ್ತು. ಆ ಸಮಯದಲ್ಲಿ ಪಂಜಾಬ್ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಭರವಸೆ ನೀಡಿತ್ತು. ಆದರೆ, ತಿದ್ದುಪಡಿ ಮಾಡಲಿಲ್ಲ. ರೈತರ ಸಾಲ ಮನ್ನಾಗೆ ಹಣವನ್ನು ವಿತರಿಸಲಾಯಿತು. ಹೀಗಾಗಿ, ಕೇಂದ್ರ ಕಾಯಿದೆಗೆ ತಿದ್ದುಪಡಿ ತರುವ ಬಗ್ಗೆ ಚರ್ಚೆಗಳು ಶುರುವಾಗಿವೆ.

ಸಾಲ ಮನ್ನಾಗೆ ಕೇಂದ್ರ ಆಕ್ಷೇಪ : ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ರೈತರ ಸಾಲ ಮನ್ನಾಗೆ ಹಂಚಿಕೆ ಮಾಡಿದ್ದರು. ಇದೇ ಕಾರಣದಿಂದಾಗಿ ಕೇಂದ್ರದಿಂದ ಹಣ ಬಿಡುಗಡೆ ಮಾಡುವ ಮೊದಲು ನಿರ್ದಿಷ್ಟ ಯೋಜನೆಗೆ ಹಣ ವಿನಿಯೋಗಿಸಬೇಕೆಂದು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಪಂಜಾಬ್‌ನಲ್ಲಿ ಜನರ ಮನೆ ಬಾಗಿಲಿಗೆ ಪಡಿತರ ವಿತರಿಸಲು ಆಪ್ ಸರ್ಕಾರ ನಿರ್ಧಾರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.