ETV Bharat / bharat

ಅನ್ನದಾತನ ಕೈಹಿಡಿದ ಕೇಂದ್ರ: ರೈತರ ಕಲ್ಯಾಣಾಭಿವೃದ್ಧಿಗೆ ₹75 ಸಾವಿರ ಕೋಟಿ ರೂ. ಅನುದಾನ

author img

By

Published : Feb 1, 2021, 1:00 PM IST

Updated : Feb 1, 2021, 1:26 PM IST

ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಕೃಷಿಗೆ ಸಂಬಂಧಿಸಿದ ಬಜೆಟ್​ ಮಂಡಿಸಿದರು. ಈ ಬಾರಿ ರೈತರ ಕಲ್ಯಾಣಾಭಿವೃದ್ಧಿಗೆ ₹75 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದಾಗಿ ಘೋಷಿಸಿದರು.

Govt committed to welfare of farmers
ಕೃಷಿ ಬಜೆಟ್​

ನವದೆಹಲಿ: ಕೇಂದ್ರ ಸರ್ಕಾರ ಇಂದು ಮಂಡಿಸುತ್ತಿರುವ ಆಯವ್ಯಯದಲ್ಲಿ ಕೃಷಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ದೇಶದ ಕೃಷಿ ಮತ್ತು ರೈತರ ಅಭಿವೃದ್ಧಿಗಾಗಿ ₹75 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿದೆ.

43.36 ಲಕ್ಷ ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳಲಿದ್ದಾರೆ. ಅಲ್ಲದೆ, ಕನಿಷ್ಠ ಬೆಂಬಲ ಬೆಲೆ ನಿಲ್ಲಿಸಿಲ್ಲ, ಖರೀದಿ ಪ್ರಕ್ರಿಯೆ ಮುಂದುವರಿದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಹೇಳಿದರು.

ಪ್ರಮುಖ ಅಂಶಗಳು

  • ಕನಿಷ್ಠ ಬೆಂಬಲ ಬೆಲೆ ನೀತಿಯಲ್ಲಿ ಈ ಬಾರಿ ಗಮನಾರ್ಹ ಬದಲಾವಣೆಯಾಗಿದ್ದು, ಬೆಳೆ ಉತ್ಪಾದನಾ ವೆಚ್ಚದ ಶೇ.150ರಷ್ಟಕ್ಕೆ ಹೆಚ್ಚಿಸಲಾಗಿದೆ.
  • ಕೃಷಿಗೆ 2013ರ ಸಾಲಿನ ಬಜೆಟ್​​ನಲ್ಲಿ ₹33,874 ಕೋಟಿ ಅನುದಾನ, 2019-20ರಲ್ಲಿ 62,802 ಕೋಟಿ ಅನುದಾನ ನೀಡಲಾಗಿತ್ತು. ಈ ಬಾರಿ ಕೃಷಿಯ ಸಮಗ್ರ ಬದಲಾವಣೆಗೆ ಹೆಚ್ಚು ಒತ್ತು ಕೊಟ್ಟಿರುವ ಕೇಂದ್ರ, ಈ ಹಿಂದಿಗಿಂತಲೂ ಹೆಚ್ಚು (75,060 ಕೋಟಿ) ಅನುದಾನ ಘೋಷಿಸುವ ಮೂಲಕ ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಮುಂದಾಗಿದೆ.
  • 2019-20ರ ಬಜೆಟ್​​ನಲ್ಲಿ 35.57 ಲಕ್ಷ ರೈತ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದರು. ಈ ಬಾರಿ ಫಲಾನುಭವಿಗಳ ಸಂಖ್ಯೆಯಲ್ಲೂ ಹೆಚ್ಚಾಗಿದ್ದು, 43.36 ರೈತರು ಈ ಅನುದಾನದ ಸದುಪಯೋಗಕ್ಕೆ ಒಳಗಾಗಿದ್ದಾರೆ.

ಕೃಷಿ ಸಾಲ ಗುರಿ 16.5 ಲಕ್ಷ ಕೋಟಿಗೆ ಹೆಚ್ಚಳ: ಸಚಿವೆ

ಕೃಷಿ ಸಾಲದ ಗುರಿಯನ್ನು ₹16.5 ಲಕ್ಷ ಕೋಟಿಗೆ ಹೆಚ್ಚಿಸಲು ಬಜೆಟ್​ ಮಂಡನೆಯ ಸಂದರ್ಭದಲ್ಲಿ ಹಣಕಾಸು ಸಚಿವೆ ಸೀತಾರಾಮನ್ ಅವರು ಪ್ರಸ್ತಾಪಿಸಿದರು. ಕನಿಷ್ಠ ಬೆಂಬಲ ಬೆಲೆ ನೀತಿಯು ಎಲ್ಲಾ ಸರುಕುಗಳ ಉತ್ಪದನಾ ವೆಚ್ಚಕ್ಕಿಂತ ಕನಿಷ್ಠ ಶೇ.1.5 ಪಟ್ಟು ಬೆಲೆಯಲ್ಲಿ ಬದಲಾವಣೆ ತರಲು ಮುಂದಾಗಿದೆ. ಅಲ್ಲದೆ, ಭತ್ತ ಬೆಳೆಯುವ ರೈತರಿಗೆ 2020-21ರಲ್ಲಿ ₹1.72 ಲಕ್ಷ ಕೋಟಿ ಪಾವತಿಸಲಾಗಿದೆ ಎಂದು ಈ ವೇಳೆ ಹೇಳಿದರು.

ನವದೆಹಲಿ: ಕೇಂದ್ರ ಸರ್ಕಾರ ಇಂದು ಮಂಡಿಸುತ್ತಿರುವ ಆಯವ್ಯಯದಲ್ಲಿ ಕೃಷಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ದೇಶದ ಕೃಷಿ ಮತ್ತು ರೈತರ ಅಭಿವೃದ್ಧಿಗಾಗಿ ₹75 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿದೆ.

43.36 ಲಕ್ಷ ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳಲಿದ್ದಾರೆ. ಅಲ್ಲದೆ, ಕನಿಷ್ಠ ಬೆಂಬಲ ಬೆಲೆ ನಿಲ್ಲಿಸಿಲ್ಲ, ಖರೀದಿ ಪ್ರಕ್ರಿಯೆ ಮುಂದುವರಿದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಹೇಳಿದರು.

ಪ್ರಮುಖ ಅಂಶಗಳು

  • ಕನಿಷ್ಠ ಬೆಂಬಲ ಬೆಲೆ ನೀತಿಯಲ್ಲಿ ಈ ಬಾರಿ ಗಮನಾರ್ಹ ಬದಲಾವಣೆಯಾಗಿದ್ದು, ಬೆಳೆ ಉತ್ಪಾದನಾ ವೆಚ್ಚದ ಶೇ.150ರಷ್ಟಕ್ಕೆ ಹೆಚ್ಚಿಸಲಾಗಿದೆ.
  • ಕೃಷಿಗೆ 2013ರ ಸಾಲಿನ ಬಜೆಟ್​​ನಲ್ಲಿ ₹33,874 ಕೋಟಿ ಅನುದಾನ, 2019-20ರಲ್ಲಿ 62,802 ಕೋಟಿ ಅನುದಾನ ನೀಡಲಾಗಿತ್ತು. ಈ ಬಾರಿ ಕೃಷಿಯ ಸಮಗ್ರ ಬದಲಾವಣೆಗೆ ಹೆಚ್ಚು ಒತ್ತು ಕೊಟ್ಟಿರುವ ಕೇಂದ್ರ, ಈ ಹಿಂದಿಗಿಂತಲೂ ಹೆಚ್ಚು (75,060 ಕೋಟಿ) ಅನುದಾನ ಘೋಷಿಸುವ ಮೂಲಕ ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಮುಂದಾಗಿದೆ.
  • 2019-20ರ ಬಜೆಟ್​​ನಲ್ಲಿ 35.57 ಲಕ್ಷ ರೈತ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದರು. ಈ ಬಾರಿ ಫಲಾನುಭವಿಗಳ ಸಂಖ್ಯೆಯಲ್ಲೂ ಹೆಚ್ಚಾಗಿದ್ದು, 43.36 ರೈತರು ಈ ಅನುದಾನದ ಸದುಪಯೋಗಕ್ಕೆ ಒಳಗಾಗಿದ್ದಾರೆ.

ಕೃಷಿ ಸಾಲ ಗುರಿ 16.5 ಲಕ್ಷ ಕೋಟಿಗೆ ಹೆಚ್ಚಳ: ಸಚಿವೆ

ಕೃಷಿ ಸಾಲದ ಗುರಿಯನ್ನು ₹16.5 ಲಕ್ಷ ಕೋಟಿಗೆ ಹೆಚ್ಚಿಸಲು ಬಜೆಟ್​ ಮಂಡನೆಯ ಸಂದರ್ಭದಲ್ಲಿ ಹಣಕಾಸು ಸಚಿವೆ ಸೀತಾರಾಮನ್ ಅವರು ಪ್ರಸ್ತಾಪಿಸಿದರು. ಕನಿಷ್ಠ ಬೆಂಬಲ ಬೆಲೆ ನೀತಿಯು ಎಲ್ಲಾ ಸರುಕುಗಳ ಉತ್ಪದನಾ ವೆಚ್ಚಕ್ಕಿಂತ ಕನಿಷ್ಠ ಶೇ.1.5 ಪಟ್ಟು ಬೆಲೆಯಲ್ಲಿ ಬದಲಾವಣೆ ತರಲು ಮುಂದಾಗಿದೆ. ಅಲ್ಲದೆ, ಭತ್ತ ಬೆಳೆಯುವ ರೈತರಿಗೆ 2020-21ರಲ್ಲಿ ₹1.72 ಲಕ್ಷ ಕೋಟಿ ಪಾವತಿಸಲಾಗಿದೆ ಎಂದು ಈ ವೇಳೆ ಹೇಳಿದರು.

Last Updated : Feb 1, 2021, 1:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.