ಅಗರ್ತಲಾ(ತ್ರಿಪುರ): ಇಲ್ಲಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಿ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಮುಖ್ಯಮಂತ್ರಿ ಮತ್ತು ಬಿಜೆಪಿ ಅಭ್ಯರ್ಥಿ ಮಾಣಿಕ್ ಸಾಹಾ ಜಯಭೇರಿ ಬಾರಿಸಿದ್ದಾರೆ.
ಅಗರ್ತಲಾ, ಟೌನ್ ಬೋರ್ಡೋವಾಲಿ, ಸುರ್ಮಾ ಮತ್ತು ಜುಬರಾಜನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಯಿಂದ ನಡೆಯುತ್ತಿದೆ.
ಇನ್ನೊಂದೆಡೆ, ಅಗರ್ತಲಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಸುದೀಪ್ ರಾಯ್ ಬರ್ಮನ್ ಬಿಜೆಪಿಗಿಂತ 1,512 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಉಪಚುನಾವಣೆಯಲ್ಲಿ 1,89,032 ಮತದಾರರ ಪೈಕಿ ಶೇ 78.58 ರಷ್ಟು ಮತದಾರರು ಹಿಂಸಾಚಾರ ಘಟನೆಗಳ ನಡುವೆಯೂ ಮತ ಚಲಾಯಿಸಿದ್ದರು.
-
Tripura CM & BJP leader Manik Saha wins from Town Bardowali Assembly constituency in the recently held by-polls. pic.twitter.com/5bWElc9sfA
— ANI (@ANI) June 26, 2022 " class="align-text-top noRightClick twitterSection" data="
">Tripura CM & BJP leader Manik Saha wins from Town Bardowali Assembly constituency in the recently held by-polls. pic.twitter.com/5bWElc9sfA
— ANI (@ANI) June 26, 2022Tripura CM & BJP leader Manik Saha wins from Town Bardowali Assembly constituency in the recently held by-polls. pic.twitter.com/5bWElc9sfA
— ANI (@ANI) June 26, 2022
ವಿಪ್ಲವ್ ದೇವ್ ಅವರು ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ ಕಾರಣ ಕಳೆದ ತಿಂಗಳು ರಾಜ್ಯಸಭಾ ಸದಸ್ಯರಾಗಿದ್ದ ಮಾಣಿಕ್ ಸಾಹಾ ಅವರು ಸಿಎಂ ಅಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸಾಹಾ ಮುಖ್ಯಮಂತ್ರಿಯಾಗಿ ಮುಂದುವರಿಯಲು ಈ ಗೆಲುವು ಅನಿವಾರ್ಯವಾಗಿತ್ತು.
ಚುನಾವಣೆಯಲ್ಲಿ ಗೆದ್ದಿರುವ ಡಾ.ಮಾಣಿಕ್ ಸಾಹಾ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತ, ತಮ್ಮ ಗೆಲುವಿನ ಬಗ್ಗೆ ಸಾಕಷ್ಟು ವಿಶ್ವಾಸವಿತ್ತು. ಜನರು ಬಿಜೆಪಿಯಲ್ಲಿ ವಿಶ್ವಾಸವಿಡುವಂತೆ ಮನವಿ ಮಾಡಿದ್ದೆವು. ಜನರಿಗಾಗಿ ನನ್ನ ಕೈಲಾದಷ್ಟು ಕೆಲಸ ಮಾಡುತ್ತೇನೆ. ಮನೆ-ಮನೆ ಪ್ರಚಾರದ ಸಮಯದಲ್ಲಿ ಜನರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ನಾನು ನೋಡಿದ್ದೇನೆ. ಅದನ್ನು ಪರಿಹರಿಸುತ್ತೇನೆ ಎಂದು ಅಭಯ ನೀಡಿದರು.
ಇದನ್ನೂ ಓದಿ: ವಾರಾಣಸಿಯಲ್ಲಿ ಸಿಎಂ ಯೋಗಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ