ಬರೇಲಿ (ಉತ್ತರ ಪ್ರದೇಶ): ತ್ರಿವಳಿ ತಲಾಖ್ ಸಂತ್ರಸ್ತರ ಹೋರಾಟದಲ್ಲಿ ನಿರತರಾಗಿರುವ ಅಲಹಜರತ್ ಕುಟುಂಬದ ಸೊಸೆ ನಿದಾ ಖಾನ್ ಅವರು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಬೆಂಬಲಿಸಿ ಪ್ರಧಾನಿಗೆ ಧನ್ಯವಾದ ಪತ್ರ ಬರೆದಿದ್ದಾರೆ. ತ್ರಿವಳಿ ತಲಾಖ್ ಕಾನೂನು ಜಾರಿಗೊಳಿಸುವ ಮೂಲಕ ಮುಸ್ಲಿಂ ಮಹಿಳೆಯರ ಹಿತಾಸಕ್ತಿಗಳನ್ನು ರಕ್ಷಿಸಲಾಗಿದೆ. ಜೊತೆಗೆ ಏಕರೂಪ ನಾಗರಿಕ ಸಂಹಿತೆಯು ಮುಸ್ಲಿಂ ಮಹಿಳೆಯರ ಹಿತಾಸಕ್ತಿಯನ್ನು ರಕ್ಷಣೆ ಮಾಡುತ್ತದೆ ಎಂದು ನಿದಾ ಖಾನ್ ಹೇಳಿದ್ದಾರೆ.
ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ; ಕಾನೂನು ಆಯೋಗಕ್ಕೆ 15 ದಿನದಲ್ಲಿ 8.5 ಲಕ್ಷ ಸಲಹೆ, ಜನರಿಂದ ಭಾರಿ ಸ್ಪಂದನೆ
ನಿದಾ ಖಾನ್ ಪತ್ರದಲ್ಲಿದ್ದೇನಿದೆ?: ನಿದಾ ಖಾನ್ ಅವರ ತಮ್ಮ ಪತಿಯೊಂದಿಗೆ ತ್ರಿವಳಿ ತಲಾಖ್ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದಾರೆ. ನಿದಾ ಖಾನ್ ತ್ರಿವಳಿ ತಲಾಖ್ ಸಂತ್ರಸ್ತರಾಗಿದ್ದು, ಜೊತೆಗೆ ತ್ರಿವಳಿ ತಲಾಖ್ ಸಂತ್ರಸ್ತರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದಾರೆ. ತ್ರಿವಳಿ ತಲಾಖ್ ಸಂತ್ರಸ್ತೆ ನಿದಾ ಖಾನ್ ಅವರು ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ಬೆಂಬಲಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ತ್ರಿವಳಿ ತಲಾಖ್ ಎಂಬ ಕತ್ತಿ ಮುಸ್ಲಿಂ ಮಹಿಳೆಯರ ಮೇಲೆ ತೂಗಾಡಿದೆ. ಕೆಲವೊಮ್ಮೆ ಪತಿ ಅಕ್ರಮವಾಗಿ ಮದುವೆಯಾಗಿದ್ದಾನೆ ಎಂದು ನಿದಾ ಖಾನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.