ETV Bharat / bharat

ನದಿಯಲ್ಲಿ ಕಾರು ಕೊಚ್ಚಿ ಹೋಗಿ ಸೇರಿ 9 ಜನ ಸಾವು, ಪವಾಡದಂತೆ ಬದುಕುಳಿದ ಮಗು

author img

By

Published : Jul 8, 2022, 9:55 AM IST

Updated : Jul 8, 2022, 10:53 AM IST

ಉತ್ತರಾಖಂಡ್ ರಾಜ್ಯದ ನೈನಿತಾಲ್‌ನಲ್ಲಿ ಸಂಭವಿಸಿದ ದುರಂತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ಪ್ರವಾಸಿಗರಿಂದ ತುಂಬಿದ್ದ ಎರ್ಟಿಗಾ ಕಾರೊಂದು ಧೇಲಾ ನದಿಯಲ್ಲಿ ಕೊಚ್ಚಿ ಹೋಗಿತ್ತು.

tourist car washed away in dhela river, tourist car washed away in river of Uttarakhand, Uttarakhand tourist car washed out news, Uttarakhand crime news, ಧೇಲಾ ನದಿಯಲ್ಲಿ ಕೊಚ್ಚಿಹೋದ ಪ್ರವಾಸಿಗರ ಕಾರು, ಉತ್ತರಾಖಂಡದ ನದಿಯಲ್ಲಿ ಕೊಚ್ಚಿಹೋದ ಪ್ರವಾಸಿಗರ ಕಾರು, ಉತ್ತರಾಖಂಡದ ಪ್ರವಾಸಿ ಕಾರು ಕೊಚ್ಚಿಕೊಂಡು ಹೋದ ಸುದ್ದಿ, ಉತ್ತರಾಖಂಡ ಅಪರಾಧ ಸುದ್ದಿ,
ಅಪಘಾತ

ರಾಮನಗರ(ಉತ್ತರಾಖಂಡ್)​: ಪ್ರವಾಸಿಗರಿಂದ ತುಂಬಿದ್ದ ಕಾರೊಂದು ನೈನಿತಾಲ್‌ ರಾಮನಗರದಲ್ಲಿ ಹರಿಯುವ ಧೇಲಾ ನದಿಯಲ್ಲಿ ಕೊಚ್ಚಿ ಹೋಗಿ 9 ಜನರು ಸಾವನ್ನಪ್ಪಿದ್ದಾರೆ. ಪವಾಡವೆಂಬಂತೆ ಹೆಣ್ಣುಮಗುವೊಂದು ಬದುಕುಳಿದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಎರ್ಟಿಗಾ ಕಾರಿನಲ್ಲಿ ಒಟ್ಟು 10 ಮಂದಿ ಪ್ರಯಾಣಿಸುತ್ತಿದ್ದರು.


ಮುಂಜಾನೆ 5ರ ಸುಮಾರಿಗೆ ಅಡ್ಡರಸ್ತೆಯೊಂದರ ಮೇಲೆ ನೀರು ಹರಿಯುತ್ತಿತ್ತು. ಇದನ್ನು ಲೆಕ್ಕಿಸದೆ ಚಾಲಕ ನದಿ ದಾಟಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪ್ರವಾಹ ಹೆಚ್ಚಾಗಿದ್ದು, ಕಾರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ​ ತಿಳಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದರು.

ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಬಸ್​ ಅಪಘಾತ: ಇಬ್ಬರು ಸಾವು, 48 ಮಂದಿಗೆ ಗಾಯ

ಸ್ಥಳೀಯರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಹೆಣ್ಣು ಮಗುವೊಂದನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾಡಳಿತ ಸಿಬ್ಬಂದಿ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಇದುವರೆಗೆ 6 ಮೃತದೇಹಗಳನ್ನು ಹೊರತೆಗೆಗಿದೆ. ಕಾರಿನಿಂದ ಇತರ ಮೂರು ದೇಹಗಳನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ.

ರಾಮನಗರ(ಉತ್ತರಾಖಂಡ್)​: ಪ್ರವಾಸಿಗರಿಂದ ತುಂಬಿದ್ದ ಕಾರೊಂದು ನೈನಿತಾಲ್‌ ರಾಮನಗರದಲ್ಲಿ ಹರಿಯುವ ಧೇಲಾ ನದಿಯಲ್ಲಿ ಕೊಚ್ಚಿ ಹೋಗಿ 9 ಜನರು ಸಾವನ್ನಪ್ಪಿದ್ದಾರೆ. ಪವಾಡವೆಂಬಂತೆ ಹೆಣ್ಣುಮಗುವೊಂದು ಬದುಕುಳಿದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಎರ್ಟಿಗಾ ಕಾರಿನಲ್ಲಿ ಒಟ್ಟು 10 ಮಂದಿ ಪ್ರಯಾಣಿಸುತ್ತಿದ್ದರು.


ಮುಂಜಾನೆ 5ರ ಸುಮಾರಿಗೆ ಅಡ್ಡರಸ್ತೆಯೊಂದರ ಮೇಲೆ ನೀರು ಹರಿಯುತ್ತಿತ್ತು. ಇದನ್ನು ಲೆಕ್ಕಿಸದೆ ಚಾಲಕ ನದಿ ದಾಟಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪ್ರವಾಹ ಹೆಚ್ಚಾಗಿದ್ದು, ಕಾರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ​ ತಿಳಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದರು.

ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಬಸ್​ ಅಪಘಾತ: ಇಬ್ಬರು ಸಾವು, 48 ಮಂದಿಗೆ ಗಾಯ

ಸ್ಥಳೀಯರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಹೆಣ್ಣು ಮಗುವೊಂದನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾಡಳಿತ ಸಿಬ್ಬಂದಿ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಇದುವರೆಗೆ 6 ಮೃತದೇಹಗಳನ್ನು ಹೊರತೆಗೆಗಿದೆ. ಕಾರಿನಿಂದ ಇತರ ಮೂರು ದೇಹಗಳನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ.

Last Updated : Jul 8, 2022, 10:53 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.