ETV Bharat / bharat

ಕಾರು ಹಳ್ಳಕ್ಕೆ ಬಿದ್ದು ಮೂವರು ವಿದ್ಯಾರ್ಥಿಗಳು ಸಾವು: ಇಬ್ಬರಿಗೆ ಗಂಭೀರ ಗಾಯ

ಮಲಯತೂರು ಯಾತ್ರೆಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಕಾರು ಅಪಘಾತ ಸಭಂವಿಸಿದೆ.

author img

By

Published : Apr 24, 2023, 3:31 PM IST

Three students die as car falls into ditch
ಕಾರು ಹಳ್ಳಕ್ಕೆ ಬಿದ್ದು ಮೂವರು ವಿದ್ಯಾರ್ಥಿಗಳು ಸಾವು

ಕಲ್ಪೆಟ್ಟ (ಕೇರಳ): ಕಾರೊಂದು 10 ಅಡಿ ಆಳದ ಕಂದಕಕ್ಕೆ ಬಿದ್ದು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಕಲ್ಪೆಟ್ಟಾದಲ್ಲಿ ನಡೆದಿದೆ. ಮೂವರು ವಿದ್ಯಾರ್ಥಿಗಳು ಮಲಯತೂರು​ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದು, ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ವಯನಾಡಿನ ಕಲ್ಪೆಟ್ಟ-ಪಡಿಂಜರೆತ್ತರ ರಸ್ತೆಯ ಬಳಿ ಅಪಘಾತ ಸಂಭವಿಸಿದೆ.

ಮೃತರನ್ನು ಕಣ್ಣೂರಿನ ಇರಿಟ್ಟಿ ಅಂಗಟಿಕಡವಿನ ಜಿಸ್ನಾ ಮೇರಿ ಜೋಸೆಫ್, ಕಾಸರಗೋಡು ವೆಳ್ಳರಿಕುಂಡ್ ಮೂಲದ ಪುತನಪುರಕಲ್ ಸ್ನೇಹ ಜೋಸೆಫ್ ಮತ್ತು ಇರಿಟ್ಟಿಯ ಅಡೋನ್ ಬೆಸ್ತಿ ಎಂದು ಗುರುತಿಸಲಾಗಿದೆ. ಇವರು ಇರಿಟ್ಟಿ ಡಾನ್ ಬಾಸ್ಕೋ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಡಿಯೋನಾ ಅವರನ್ನು ಮೆಪ್ಪಾಡಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಟರ್ ಸಪೋರ್ಟ್​ನಲ್ಲಿದ್ದಾರೆ. ಡಿಯೋನಾ ಅಪಘಾತದಲ್ಲಿ ಸಾವನ್ನಪ್ಪಿದ ಅಡಾನ್ ಬೆಸ್ತಿ ಅವರ ಸಹೋದರಿ. ಕಣ್ಣೂರು ಪೂಲಕ್ಕುಟ್ಟಿ ಸ್ಥಳೀಯರಾದ ಸಂಜಿಯೋ ಜೋಸ್ ಮತ್ತು ಸ್ನೇಹಾ ಅವರ ಸಹೋದರಿ ಸೋನಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಕಲ್ಪೆಟ್ಟ ಫಾತಿಮಾ ಮಾತಾ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಬ ಹಾಗೂ ಮರಕ್ಕೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದಿದೆ. ಎಲ್ಲರೂ ಮಲಯತೂರು ತೀರ್ಥಯಾತ್ರೆಗೆ ತೆರಳಿದ್ದು, ಅಲ್ಲಿಂದ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮೃತರ ಶವಗಳನ್ನು ಫಾತಿಮಾ ಮಾತಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: ಪಂಜಾಬ್‌ನ ಒಕಾರಾದಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ 7 ಮಂದಿ ದುರ್ಮರಣ

ಕಲ್ಪೆಟ್ಟ (ಕೇರಳ): ಕಾರೊಂದು 10 ಅಡಿ ಆಳದ ಕಂದಕಕ್ಕೆ ಬಿದ್ದು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಕಲ್ಪೆಟ್ಟಾದಲ್ಲಿ ನಡೆದಿದೆ. ಮೂವರು ವಿದ್ಯಾರ್ಥಿಗಳು ಮಲಯತೂರು​ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದು, ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ವಯನಾಡಿನ ಕಲ್ಪೆಟ್ಟ-ಪಡಿಂಜರೆತ್ತರ ರಸ್ತೆಯ ಬಳಿ ಅಪಘಾತ ಸಂಭವಿಸಿದೆ.

ಮೃತರನ್ನು ಕಣ್ಣೂರಿನ ಇರಿಟ್ಟಿ ಅಂಗಟಿಕಡವಿನ ಜಿಸ್ನಾ ಮೇರಿ ಜೋಸೆಫ್, ಕಾಸರಗೋಡು ವೆಳ್ಳರಿಕುಂಡ್ ಮೂಲದ ಪುತನಪುರಕಲ್ ಸ್ನೇಹ ಜೋಸೆಫ್ ಮತ್ತು ಇರಿಟ್ಟಿಯ ಅಡೋನ್ ಬೆಸ್ತಿ ಎಂದು ಗುರುತಿಸಲಾಗಿದೆ. ಇವರು ಇರಿಟ್ಟಿ ಡಾನ್ ಬಾಸ್ಕೋ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಡಿಯೋನಾ ಅವರನ್ನು ಮೆಪ್ಪಾಡಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಟರ್ ಸಪೋರ್ಟ್​ನಲ್ಲಿದ್ದಾರೆ. ಡಿಯೋನಾ ಅಪಘಾತದಲ್ಲಿ ಸಾವನ್ನಪ್ಪಿದ ಅಡಾನ್ ಬೆಸ್ತಿ ಅವರ ಸಹೋದರಿ. ಕಣ್ಣೂರು ಪೂಲಕ್ಕುಟ್ಟಿ ಸ್ಥಳೀಯರಾದ ಸಂಜಿಯೋ ಜೋಸ್ ಮತ್ತು ಸ್ನೇಹಾ ಅವರ ಸಹೋದರಿ ಸೋನಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಕಲ್ಪೆಟ್ಟ ಫಾತಿಮಾ ಮಾತಾ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಬ ಹಾಗೂ ಮರಕ್ಕೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದಿದೆ. ಎಲ್ಲರೂ ಮಲಯತೂರು ತೀರ್ಥಯಾತ್ರೆಗೆ ತೆರಳಿದ್ದು, ಅಲ್ಲಿಂದ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮೃತರ ಶವಗಳನ್ನು ಫಾತಿಮಾ ಮಾತಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: ಪಂಜಾಬ್‌ನ ಒಕಾರಾದಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ 7 ಮಂದಿ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.