ETV Bharat / bharat

ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ : ಮೂವರು ಸಾವು,7 ಮಂದಿ ಗಾಯ - ವಿರುಧುನಗರ ಪಟಾಕಿ ಕಾರ್ಖಾನೆ ಸ್ಫೋಟ

ಪಟಾಕಿ ಫ್ಯಾಕ್ಟರಿಯಲ್ಲಿ ಕೆಮಿಕಲ್ಸ್ ಮಿಶ್ರಣ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಮಾಲೀಕ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ ನಡೆದಿದೆ..

ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ
ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ
author img

By

Published : Jan 5, 2022, 12:47 PM IST

ವಿರುಧುನಗರ : ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಸತ್ತೂರು ಸಮೀಪದ ಮಂಜಲ್ ಒಡೆಯಪಟ್ಟಿಯಲ್ಲಿ ನಡೆದಿದೆ.

ಕರುಪ್ಪಸ್ವಾಮಿ ಎಂಬುವರಿಗೆ ಸೇರಿದ ಪಟಾಕಿ ಕಾರ್ಖಾನೆ ಇದಾಗಿದೆ. ಇದರಲ್ಲಿ 50ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಕಾರ್ಖಾನೆಯ ಮಾಲೀಕ ಕರುಪ್ಪಸ್ವಾಮಿ ಮತ್ತು ಆತನ ಸಂಬಂಧಿ ಸೆಂಥಿಲ್ ಕುಮಾರ್ ಎಂಬುವರು ಪಟಾಕಿ ತಯಾರಿಸಲು ಕೆಮಿಕಲ್ಸ್ ಮಿಶ್ರಣ ಮಾಡುತ್ತಿದ್ದರು. ಈ ವೇಳೆ ಸ್ಫೋಟ ಸಂಭವಿಸಿದೆ.

ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ

ಘಟನೆಯಲ್ಲಿ ಸೆಂಥಿಲ್ ಕುಮಾರ್ ಮತ್ತು ಅವರ ಸೋದರ ಸಂಬಂಧಿ ಕಾಸಿ ಹಾಗೂ ಪಟಾಕಿ ಫ್ಯಾಕ್ಟರಿ ಮಾಲೀಕ ಕರುಪ್ಪಸ್ವಾಮಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕೋವಿಲಪಟ್ಟಿ ಹಾಗೂ ಸತ್ತೂರು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಕುರಿತು ವೆಂಪಕ್ಕೊಟ್ಟಾಲ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿರುಧುನಗರ : ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಸತ್ತೂರು ಸಮೀಪದ ಮಂಜಲ್ ಒಡೆಯಪಟ್ಟಿಯಲ್ಲಿ ನಡೆದಿದೆ.

ಕರುಪ್ಪಸ್ವಾಮಿ ಎಂಬುವರಿಗೆ ಸೇರಿದ ಪಟಾಕಿ ಕಾರ್ಖಾನೆ ಇದಾಗಿದೆ. ಇದರಲ್ಲಿ 50ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಕಾರ್ಖಾನೆಯ ಮಾಲೀಕ ಕರುಪ್ಪಸ್ವಾಮಿ ಮತ್ತು ಆತನ ಸಂಬಂಧಿ ಸೆಂಥಿಲ್ ಕುಮಾರ್ ಎಂಬುವರು ಪಟಾಕಿ ತಯಾರಿಸಲು ಕೆಮಿಕಲ್ಸ್ ಮಿಶ್ರಣ ಮಾಡುತ್ತಿದ್ದರು. ಈ ವೇಳೆ ಸ್ಫೋಟ ಸಂಭವಿಸಿದೆ.

ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ

ಘಟನೆಯಲ್ಲಿ ಸೆಂಥಿಲ್ ಕುಮಾರ್ ಮತ್ತು ಅವರ ಸೋದರ ಸಂಬಂಧಿ ಕಾಸಿ ಹಾಗೂ ಪಟಾಕಿ ಫ್ಯಾಕ್ಟರಿ ಮಾಲೀಕ ಕರುಪ್ಪಸ್ವಾಮಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕೋವಿಲಪಟ್ಟಿ ಹಾಗೂ ಸತ್ತೂರು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಕುರಿತು ವೆಂಪಕ್ಕೊಟ್ಟಾಲ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.