ವಿಶಾಖಪಟ್ಟಣ : ಜಿಲ್ಲೆಯ ತಿಗಲವಲಸ ಗ್ರಾಮದ ಬಳಿಯ ಗುಡ್ಡಿಗುಮ್ಮಿ ಜಲಾಶಯದಲ್ಲಿ ಬಿದ್ದು ಮೂವರು ಮೃತಪಟ್ಟಿರುವ ಘಟನೆ ನಿನ್ನೆ ನಡೆದಿದೆ.
ನಿನ್ನೆ ಮಧ್ಯಾಹ್ನ ಹತ್ತು ಯುವಕರು ಗುಡ್ಡಿಗುಮ್ಮಿ ಜಲಪಾತಕ್ಕೆ ತೆರಳಿದ್ದರು. ಈ ವೇಳೆ ಫೋಟೋ ತೆಗೆಯುವಾಗ ಒಬ್ಬ ಕಾಲುಜಾರಿ ಜಲಪಾತಕ್ಕೆ ಬಿದ್ದಿದ್ದಾನೆ. ಅವನನ್ನು ಉಳಿಸಲು ಮತ್ತಿಬ್ಬರು ಮುಂದಾಗಿ ಅವರೂ ಕೂಡ ಕೊಚ್ಚಿಹೋಗಿದ್ದಾರೆ. ನೀರು ಪಾಲಾದ ಈ ಮೂವರ ಶವಗಳನ್ನು ಹೊರತೆಗೆಯಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ ಧಾವಿಸಿ ಶವ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಬೆಳಗ್ಗೆ ಎರಡು ಶವಗಳು ಪತ್ತೆಯಾಗಿದ್ದು, ಕೆಲ ಸಮಯದ ನಂತರ ಮತ್ತೊಂದು ಶವವನ್ನು ಪತ್ತೆಹಚ್ಚಿ ಹೊರತರಲಾಗಿದೆ